Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: : ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಲು ನೀಡುವುದರ ಬದಲು ಗೇರುಹಣ್ಣಿನ ರಸ (ಜ್ಯೂಸ್) ವನ್ನು ನೀಡಿ . ಇದರಿಂದ ಗೇರುಹಣ್ಣಿಗೆ ಜಿಲ್ಲೆಯಲ್ಲೂ ಅಧಿಕ ಬೇಡಿಕೆ ದೊರೆಯುವುದಲ್ಲದೆ ಹಾಳಾಗುವ ಹಣ್ಣುಗಳ ಸದುಪಯೋಗವನ್ನು ಮಾಡಬಹುದು. ಸರಕಾರದ ಜತೆಗೆ ಚರ್ಚಿಸಿ ಇಂತಹ ಯೋಜನೆಯನ್ನು ಚಾಲನೆಗೆ ತರಲು ಪ್ರಯತ್ನಿಸಲಾಗುವುದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ ಅಭಿಪ್ರಾಯಪಟ್ಟರು. ಉಳ್ಳಾಲ ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಗೇರು ಕೃಷಿ ಮೇಳ-2016, ಗೇರು ಕೃಷಿ ತರಬೇತಿ ಹಾಗೂ ಗೇರು ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು. ಬಯಲು ಸೀಮೆ ಜನರಿಗೆ ನೀರು ಕೊಟ್ಟು ಉತ್ತಮ ಗೇರು ಬೆಳೆಗೆ ಪ್ರೋತ್ಸಾಹಿಸುವ ಕೆಲಸ ಸರಕಾರದಿಂದ ಆಗಿದೆ. ಆದರೆ ಕರಾವಳಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಬ್ಬುಕಟ್ಟೆ : ಕಾರೊಂದು ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ನಡೆದು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಬ್ಬುಕಟ್ಟೆ ಎಂಬಲ್ಲಿ ನಡೆದಿದೆ. ಸ್ಕೂಟರ್ ಸವಾರ ಕಾಪಿಕಾಡ್ ನಿವಾಸಿ ರಾಬಿನ್ (25)ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಪಿಪ್ಟ್ ಕಾರು ಎದುರಿನಿಂದ ಬರುತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ನಂತರ ಬದಿಯಲ್ಲಿ ಬರುತ್ತಿದ್ದ ಇನ್ನೊಂದು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಸ್ಕೂಟರ್ ಸವಾರ ರಾಬಿನ್ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣವೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಕಾರು ಚಾಲಕನ ಅತೀ ವೇಗದ ಚಾಲನೆಯೇ ಕಾರಣವಾಗಿದೆ. ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಾರಿನಲ್ಲಿ ಬಂದ ತಂಡವೊಂದು ಆಟವಾಡಿ ಮನೆಗೆ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿಗೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ-ಅಡ್ಕರೆ ತಿರುವು ರಸ್ತೆಯಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ. ಅಡ್ಕರೆಪಡ್ಪು ನಿವಾಸಿ ಇಬ್ರಾಹಿಂ(18) ಹಲ್ಲೆಗೊಳಗಾದ ವಿದ್ಯಾರ್ಥಿ. ದೇರಳಕಟ್ಟೆಯ ಗ್ರೀನ್ ವ್ಯೂ ಟ್ಯಟೋರಿಯಲ್ ನ ವಿದ್ಯಾರ್ಥಿಯಾಗಿರುವ ಇಬ್ರಾಹಿಂ ದೇರಳಕಟ್ಟೆಯ ಗ್ರೌಂಡಿನಲ್ಲಿ ಕ್ರಿಕೆಟ್ ಆಟವಾಡಿ ಮನೆಗೆ ವಾಪಸ್ಸಾಗಲೆಂದು ಅಡ್ಕರೆ ತಿರುವು ಬಳಿ ನಿಂತಿದ್ದಾಗ ಕಾರಿನಲ್ಲ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಇಬ್ರಾಹಿಂ ಕಾಲು ಮತ್ತು ಸೊಂಟದ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಿದೆ. ಇದೇ ಸಂದರ್ಭ ಇಬ್ರಾಹಿಂ ಜತೆಗೆ ಆಟವಾಡಿದ್ದ ಇಬ್ಬರು ಬಾಲಕರಿಗೂ , ಒಂದು ವಾರದ ಒಳಗೆ ನಿಮ್ಮನ್ನು ಮುಗಿಸದೇ ಬಿಡುವುದಿಲ್ಲ’ ಎಂದು ತಂಡ ಜೀವಬೆದರಿಕೆಯೊಡ್ಡಿದೆ ಎನ್ನಲಾಗಿದೆ. ಕಾರಿನಲ್ಲಿ ತಲವಾರು, ದೊಣ್ಣೆ ಸಹಿತ ಮಾರಕಾಸ್ತ್ರಗಳಿದ್ದು, ದುಷ್ಕøತ್ಯ ನಡೆಸಲೆಂದೇ ತಂಡ ಹೊಂಚು ಹಾಕಿ ಬಂದಿತ್ತೆನ್ನಲಾಗಿದೆ. ತಂಡ ಬಂದಿದ್ದ ಕಾರಿನ ನೋಂದಣಿ ಸಂಖ್ಯೆ ಕೆ.ಎ.19 ಎಂಬಿ 9403 ಎಂಬುದಾಗಿದ್ದು,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯೊಂದಿಗೆ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಕ್ರೀಡಾಕೂಟಗಳು ಸಹಕಾರಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಸಹ ಕುಲಾ„ಪತಿ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ನಿಟ್ಟೆ ವಿಶ್ವದ್ಯಾನಿಲಯ ಮತ್ತು ನಿಟ್ಟೆ ಎಜ್ಯಕೇಶನ್ ಟ್ರಸ್ಟ್‍ಗೆ ಒಳಪಟ್ಟ ಅ„ೀನ ಕಾಲೇಜುಗಳ `4ನೇ ನಿಟ್ಟೆ ಕ್ರೀಡೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರಿಡೋತ್ಸವವನ್ನು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸ್ಯುಟಿಕಲ್ ಸೈನ್ಸಸ್ ಕಾಲೇಜು ಆಯೋಜಿಸಿತ್ತು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಒತ್ತಡದಲ್ಲಿರುವುದು ಸಹಜ ಆದರೆ ಕ್ರೀಡಾಕೂಟಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಎಲ್ಲರು ಒಟ್ಟಿಗೆ ಸೇರಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಿಟ್ಟೆ ಕ್ರೀಡೋತ್ಸವ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ನೀಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಎಂ.ಎಸ್. ಮೂಡಿತ್ತಾಯ ವಹಿಸಿದ್ದರು. ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ| ಸತೀಶ್ ಭಂಡಾರಿ, ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವಿe್ಞÁನ ಮಹಾವಿದ್ಯಾಲಯದ ಡೀನ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ವೈಯಕ್ತಿಕ ವಿಚಾರದಲ್ಲಿ ಅರಾಫತ್ ಹನೀಫ್ ಎಂಬಾತನಿಗೆ ಮೂವರ ತಂಡ ಹಲ್ಲೆ ನಡೆಸಿದ ಘಟನೆ ಮುಡಿಪುವಿನಲ್ಲಿ ನಡೆದಿದ್ದು, ತಲೆಗೆ ಗಾಯವಾಗಿರುವ ಹನೀಫ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ನವಾಝ್, ಅಬ್ದುಲ್ ಖಾದರ್, ಮತ್ತು ಆತನ ಪುತ್ರ ಅಝೀನ್ ಎಂಬವರಾಗಿದ್ದು. ಚುನಾವಣೆ ಪಲಿತಾಂಶದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಡಿಪುವಿನಲ್ಲಿ ವಿಜಯೋತ್ಸವ ನಡೆಸಿದ್ದು ಈ ಸಂದರ್ಭದಲ್ಲಿ ಸಿಹಿತಿಂಡಿ ಹಂಚಿದ ತಂಡದಲ್ಲಿದ್ದ ಅಬ್ದುಲ್ ಖಾದರ್ ಲಾಡೊಂದನ್ನು ಹನೀಫ್‍ನಿಗೆ ನೀಡಿದ್ದು, ಆತ ನಿರಾಕರಿಸಿದಾಗ ವ್ಯಂಗ್ಯವಾಗಿ ಮಾತನಾಡಿದ ಖಾದರ್ ಮೇಲೆ ಹಲ್ಲೆ ನಡೆಸಲು ಬಂದಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಖಾದರ್ ಪುತ್ರ ಅಝೀನ್ ಮತ್ತು ಈ ಹಿಂದೆ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿಇರುವ ನವಾಝ್ ಹನೀಫ್ ಮೇಲೆ ಬಾಟ್ಲಿಯಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಹನೀಫ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಿಗಾಗಿ ಕೊಣಾಜೆ ಪೆÇಲೀಸರು ಹುಡುಕಾಟ ನಡೆಸಿದ್ದಾರೆ. ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದು, ವ್ಯಾಪ್ತಿಗೆ ಬರುವ ಐದು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಾಂಗ್ರೆಸ್ ಪಾಲಾದರೆ ಎರಡು ಕ್ಷೇತ್ರ ಬಿಜೆಪಿ ವಿಜಯಿಯಾಗಿದೆ. ಕ್ಷೇತ್ರದ 16 ತಾಲೂಕು ಪಂಚಾಯತ್‍ನಲ್ಲಿ 12 ತಾಲೂಕು ಪಂಚಾಯತ್ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡರೆ ಬಿಜೆಪಿ ನಾಲ್ಕು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರತಿಷ್ಠಿತ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಬಿಜೆಪಿಯಿಂದ `ಕೈ’ವಶ ಮಾಡಿಕೊಂಡಿದೆ. ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಒಳಪಡುವ ಮಂಗಳೂರು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಪುದು, ಸೋಮೇಶ್ವರ ಮತ್ತು ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಈ ಬಾರಿ ತನ್ನಲ್ಲೇ ಉಳಿಕೊಳ್ಳುವ ಕಾರ್ಯತಂತ್ರ ನಡೆಸಿದರೂ ಕುರ್ನಾಡು ಕ್ಷೇತ್ರವನ್ನು ಉಳಿಸುವಲ್ಲಿ ವಿಫಲವಾಗಿದೆ. ಈ ಹಿಂದೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಸೋಮೇಶ್ವರದಲ್ಲಿ ಧನಲಕ್ಷ್ಮೀ ಗಟ್ಟಿ 517 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಕುರ್ನಾಡಿನಲ್ಲಿ ಕಾಂಗ್ರೆಸ್‍ನ ಮಮತಾ ಗಟ್ಟಿ ಹಾಗೂ ಕೊಣಾಜೆಯಲ್ಲಿ ರಶೀದಾ ಭಾನು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ತಾಲೂಕು ಪಂಚಾಯಿತಿನಲ್ಲಿ ಸೋಮೇಶ್ವರ 1- ಬಿಜೆಪಿಯ ರಾಮಚಂದ್ರ ಕುಂಪಲ, ಸೋಮೇಶ್ವರ 2- ಬಿಜೆಪಿಯ ರವಿಶಂಕರ್ ಸೋಮೇಶ್ವರ , ಮುನ್ನೂರು- ವಿಲ್ಫ್ರೆಡ್ ವಿಲ್ಮಾ ಡಿಸೋಜಾ, ಅಂಬ್ಲಮೊಗರು-ಹರೇಕಳ ಕಾಂಗ್ರೆಸ್ ನ ಪ್ರಭಾ.ಡಿ.ಶೆಟ್ಟಿ ಕುರ್ನಾಡು- ಪಜೀರು : ಬಿಜೆಪಿಯ ನವೀನ್ ಪಾದಲ್ಪಾಡಿ 12 ಮತಗಳ ಅಂತರ, ಬಾಳೆಪುಣಿ- ಕೈರಂಗಳ : ಹೈದರ್ ಕೈರಂಗಳ 403 ಮತಗಳ ಅಂತರ, ಇರಾ -ನರಿಂಗಾನ: ಚಂದ್ರಹಾಸ್ ಕರ್ಕೇರ ಕೊಣಾಜೆ : ಕಾಂಗ್ರೆಸ್ ನ ಪದ್ಮಾವತಿ .ಯಸ್ , ಬೆಳ್ಮ-ನೂರ್ ಜಹಾನ್, ತಲಪಾಡಿ-ಕಿನ್ಯಾ: ಸಿದ್ಧೀಕ್ , ಮಂಜನಾಡಿ -ಸುರೇಖಾ ಚಂದ್ರಹಾಸ್ ಗೆಲುವು ಸಾಧಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಯುವಜನತೆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಉಪಯೋಗಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಪಜೀರು ಬೀಜಗುರಿಯ ಗೋವನಿತಾಶ್ರಯ ಟ್ರಸ್ಟಿನ 16 ನೇ ವರ್ಷಾಚರಣೆ ಜ್ಯೋತಿಷ್ಯಜ್ಞರ-ವೈದಿಕರ ಸಮಾವೇಶ ಹಾಗೂ ಚತುರ್ಥ ಗೋಶಾಲಾ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಹಿಂದು ಸಂಸ್ಕøತಿ ಉಳಿವಿಗಾಗಿ ಯುವಜನತೆ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಬೇಕಿದೆ. ಈ ಮೂಲಕ ಹಿಂದು ಸಮಾಜದ ಆಚಾರ ವಿಚಾರ ಹಾಗೂ ಸೊತ್ತುಗಳನ್ನು ಭದ್ರವಾಗಿಸಿಕೊಳ್ಳಬಹುದು ಎಂದರು. ವಿಶ್ವ ಹಿಂದು ಪರಿಷತ್ ಪ್ರಾಯೋಜಿತ ಸಂಸ್ಥೆ ಮಂಗಳೂರು ಗೋವನಿತಾಶ್ರಯ ಟ್ರಸ್ಟ್‍ನ ಪಜೀರು ಬೀಜಗುರಿ ಗೋಶಾಲಾ ವಠಾರದಲ್ಲಿ ಮಾ.5,6 ರಂದು 16 ನೇ ನಡೆಯಲಿರುವ ವರ್ಷಾಚರಣೆಯ ಮಾಹಿತಿ ನೀಡಿದರು. . ನಿವೃತ್ತ ಸೇನಾನಿ ಅಪ್ಪು ಶೆಟ್ಟಿ, ನಿವೃತ್ತ ಸೇನಾನಿ ಪ್ರವೀಣ್ ಶೆಟ್ಟಿ ಪಿಲಾರ್, ವಿಶ್ವ ಹಿಂದುಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷ ಹರಿದಾಸ್ ಮಾಡೂರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆ ರೋಟರಿ ಕ್ಲಬ್ ಮತ್ತು ಕೆಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವತಿಯಿಂದ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು. ರೋಟರಿಕ್ಲಬ್ ನಿರ್ದೇಶಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶದಲ್ಲಿ ಪೋಲಿಯೋ ನಿರ್ಮೂಲನಾ ಹಂತದಲ್ಲಿದ್ದರೂ ನೆರೆ ರಾಷ್ಟ್ರದಿಂದ ನಮ್ಮಲ್ಲಿಗೆ ಹರಡದಂತೆ ಮುನ್ನಚ್ಚೆರಿಕೆ ಕ್ರಮವಾಗಿ ನಮ್ಮಲ್ಲಿ ಲಸಿಕೆ ಹಾಕಲಾಗುವುದು. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ದೊಡ್ಡ ಬಸವ, ರೋಟರಿ ಕ್ಲಬ್ ದೇರಳಕಟ್ಟೆ ಅಧ್ಯಕ್ಷ ಡಿ.ಎನ್. ರಾಘವ, ನಿಯೋಜಿತ ಅಧ್ಯಕ್ಷ ಎನ್. ಟಿ. ರಾಮಕೃಷ್ಣ, ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ವಿದ್ಯಾರ್ಥಿ ಸಮೂಹ ನಮ್ಮ ಆಸ್ತಿಯಾಗಿದ್ದು ಅವರಿಂದಲೇ ನಡೆಯುವ ಜಾಗೃತಿ ಕಾರ್ಯಕ್ರಮಗಳು ಸಮಾಜವನ್ನು ಪರಿವರ್ತಿಸುವುದರಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಯೆನ್‍ಡ್ಯೂರೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸರ್ವೋ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಜಾಗತೀಕರಣದ ಪ್ರಭಾವದಿಂದ ತಂತ್ರe್ಞÁನ್ ಬಹಳಷ್ಟು ಮುಂದುವರಿದಿದ್ದರೂ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕ ೃತಿಕ ಹಾಗೂ ಬಹುಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಅಭದ್ರತೆ ಕಾಡುತ್ತಿದೆ. ಸುಭದ್ರ ಸ್ವಾಸ್ಥ ್ಯ ಸಮಾಜಕ್ಕೆ ಆರೋಗ್ಯವೂ ಮುಖ್ಯ. ಆ ನಿಟ್ಟಿನಲ್ಲಿ ಆರೋಗ್ಯದ ಕುರಿತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಯೇನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಮಹಮ್ಮದ್ ಕುಂಞ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…

Read More