Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ ಇದರ ಜಂಟಿ ಆಶ್ರಯದಲ್ಲಿ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ ಉಳ್ಳಾಲ ದಸರಾ ಪ್ರಯುಕ್ತ ಶಾರದನಿಕೇತನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟದಲ್ಲಿ ರಾಕೇಶ್ ಪುತ್ರನ್ ಶಾರದ ಕೇಸರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ವಿಜಯ್ ಶಾರದಾ ಶ್ರೀ ಪ್ರಶಸ್ತಿ ಮತ್ತು ಮಂಜುನಾಥ್, ಶಾರದಾ ಕಿಶೋರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಕುಸ್ತಿ ಪಂದ್ಯಾಟದ 74 ಕೆ.ಜಿ.ವಿಭಾಗದಲ್ಲಿ ಅಂಜನೇಯ ಸಸಿಹಿತ್ಲುವಿನ ರಾಕೇಶ್ ಪುತ್ರನ್ ಅವರು ವೀರಭಾರತಿ ಬೆಂಗ್ರೆಯ ಸುಮಿತ್ ಅವರನ್ನು ಸೋಲಿಸಿ ಶಾರದಾ ಕೇಸರಿ ಪ್ರಶಸ್ತಿಯನ್ನು ಪಡೆದುಕೊಂಡರೆ 60 ಕೆ.ಜಿ.ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ವಿಜಯ್ ಅವರು ಕೆ.ಎಂ. ಚಿತ್ರಾಪುರದ ಹನುಮಂತ ಅವರನ್ನು ಸೋಲಿಸಿ ಶಾರದಾ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. 36 ಕೆ.ಜಿ.ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ನಾಗರಾಜ್ ಅವರನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಶಾರದಾನಗರದ ಸಪ್ತಸ್ವರ ಕಲಾತಂಡ ಕೊಣಾಜೆ ಮತ್ತು ಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆಯವ ಸಾರ್ವಜನಿಕ ಶಾರದೋತ್ಸವ ಅ. 19ಮತ್ತು 20ರಂದು ಕೊಣಾಜೆ ಶಾರದಾ ನಗರದಲ್ಲಿ ನಡೆಯಲಿದೆ. ಸುತ್ಕಲ್‍ನ ಜಗದೀಶ್ ಐತಾಳ್ ಅವರ ನೇತೃತ್ವದಲ್ಲಿ ರಾಘವೇಂದ್ರ ಹೊಳ್ಳ ಕುತ್ತಾರು ಅವರ ಪೌರೋಹಿತ್ಯದಲ್ಲಿ ಅ.19ರಂದು ಸಂಜೆ 4.58ಕ್ಕೆ ಶಾರದಾ ಪ್ರತಿಷ್ಠೆ ನಡೆಯಲಿದ್ದು, ಬೆಳಗ್ಗೆ 8ಗಂಟೆಗೆ ಧ್ವಜಾರೋಹಣವನ್ನುನಿವೃತ್ತ ಶಿಕ್ಷಕ ಶಂಕರ ಭಟ್ ಕೊಣಾಜೆ ನೆರವೇರಿಸಲಿದ್ದು, ಸಂಜೆ 7.00ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಮ ಗೌರವ, ಹಿರಿಯರಿಗೆ ಗೌರವ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 9.00ರಿಂದ ಗೆಜ್ಜೆದ ಪೂಜೆ ಯಕ್ಷಗಾನ ಬಯಲಾಟ ನಡೆಯಲಿದ್ದು, ಅ. 20ರಂದು ಮಂಗಳವಾರ ಬೆಳಗ್ಗೆ ಭಜನಾ ಸಂಕೀರ್ತನೆ ಉದ್ಘಾಟನೆ, ಅಕ್ಷರಾಭ್ಯಾಸ, ಸಂಜೆ 4.30ಕ್ಕೆ ಶೋಭಾಯಾತ್ರೆ ನಡೆಯಲಿದೆ ಎಂದು ಕಲಾತಂಡದ ಪ್ರಕಟನೆ ತಿಳಿಸಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ : ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ‘ಪ್ರತಿಭೋತ್ಸವ 2015’ ಇತ್ತೀಚೆಗೆ ಬದ್ಯಾರ್ ಫಾರೂಕ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಎಸ್‍ಜೆಎಂ ಅಧ್ಯಕ್ಷÀ ಇಸ್ಮಾಯಿಲ್ ಸಅದಿ ಉರುಮಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷರು ಮತ್ತು ಪ್ರತಿಭೋತ್ಸವದ ಅಧ್ಯಕ್ಷ ಸಿದ್ದೀಖ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಧ್ವಜಾರೋಹಣವನ್ನು ಫಾರೂಖ್ ಜುಮಾ ಮಸ್ಜಿದ್ ಅಧ್ಯಕ್ಷÀ ಅಬ್ದುಲ್ ಹಮೀದ್ ದೇರಳಕಟ್ಟೆ ನೆರವೇರಿಸಿದರು. ಎಸ್ಸೆಸ್ಸೆಫ್ ದೇರಳಕಟ್ಟೆÉ ಸೆಕ್ಟರ್ ವ್ಯಾಪ್ತಿಯ 17ಶಾಖೆಗಳ 285ಮಕ್ಕಳು ಭಾಗವಹಿಸಿ ಭಾಷಣ, ಹಾಡು, ಚಿತ್ರ ರಚನೆ ಸೇರಿದಂತೆ 4 ವಿಭಾಗಗಳ 61 ಸ್ಪರ್ಧೆ ಗಳಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಬೆಳ್ಮ ರೆಂಜಾಡಿ ಶಾಖೆಯು ಪ್ರಥಮ ಸ್ಥಾನವನ್ನು ಪಡಕೊಂಡಿತ್ತು. ದ್ವಿತೀಯ ಸ್ಥಾನವನ್ನು ಬೆಳರಿಂಗೆ ಶಾಖೆ ಪಡಕೊಂಡರೆ ತೃತೀಯ ಸ್ಥಾನವನ್ನು ಕುತುಬಿನಗರ ಪಡೆದುಕೊಂಡಿತು. ಇಬ್ರಾಹಿಂ ಮೋನು, ಹನೀಫ್ ಸಖಾಫಿ,ಹಿದಾಯತುಲ್ಲಾಹ್ ಝುಹ್ರಿ, ಬದ್ರುಲ್ ಮುನೀರ್ , ಹಸನ್ ಸಅದಿ, ಸ್ವಾಲಿಹ್ ರೆಂಜಾಡಿ ಸೇರಿದಂತೆ ಸೆಕ್ಟರ್ ಪದಾ„ಕಾರಿಗಳು, ಇಹ್ಸಾನ್ ಕರ್ನಾಟಕ ಕನ್ವೀನರ್ ಇಸ್ಹಾಖ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅನಸ್ತೀಶಿಯಾ ವಿಭಾಗದ ವತಿಯಿಂದ ಜಾಗತಿಕ ಅನಸ್ತೀಶಿಯಾ ದಿನಾಚರಣೆ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾ„ಪತಿ ಡಾ| ಶಾಂತಾರಾಮ ಶೆಟ್ಟಿ ಉದ್ಘಾಟಿಸಿ ಶಸ್ತ್ರಚಿಕಿತ್ಸೆಯ ಆಧುನಿಕ ಬೆಳವಣಿಗೆಯಲ್ಲಿ ಅನಸ್ತೀಶಿಯಾದ ಪಾತ್ರದ ಕುರಿತು ಮಾಹಿತಿ ನೀಡಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ| ಎಂ.ಎಸ್. ಮೂಡಿತ್ತಾಯ, `ಕ್ಷೇಮ’ದ ಸಹ ಪ್ರಾಚಾರ್ಯ ಡಾ| ಪಿ.ಎಸ್. ಪ್ರಕಾಶ್, ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅ„ೀಕ್ಷಕಿ ಡಾ| ಕರುಣಾ ರಮೇಶ್, ಕ್ಷೇಮದ ರಿಜಿಸ್ಟ್ರಾರ್ ಡಾ| ಜಯಪ್ರಕಾಶ್ ಶೆಟ್ಟಿ ಭಾಗವಹಿಸಿದ್ದರು. ಅನಸ್ತೀಶಿಯಾ ವಿಭಾಗದ ಪ್ರಾಧ್ಯಾಪಕ ಡಾ| ರವೀಂದ್ರ ಯು.ಎಸ್. ಅವರು `ನೋವು ಶಮನ’ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಂಗವಾಗಿ ನಡೆದ ರಸಪ್ರಶ್ನೆಯಲ್ಲಿ ವಿಜೇತರಾದ ಗೃಹವೈದ್ಯರಿಗೆ ಬಹುಮಾನ ವಿತರಿಸಲಾಯಿತು. ಡಾ| ಮುರಳಿ ಶಂಕರ್ ಭಟ್ ಹಾಗೂ ಡಾ| ಗೋವಿಂದರಾಜ್ ಭಟ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಕ್ಷೇಮ ಅನಸ್ತೀಶಿಯಾ ವಿಭಾಗದ ಮುಖ್ಯಸ್ಥ ಡಾ| ಆನಂದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ದೈಹಿಕ ಕಸರತ್ತಿಗೆ ಕ್ರೀಡೆ ಅತೀ ಮುಖ್ಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳನ್ನು ಇಂದಿನ ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತುಳುನಾಡು ಚಿಟ್ಸ್ ಪ್ರೈವೆಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಸಂದೇಶ ಶೆಟ್ಟಿ ಕೊಳ್ಕೆ ಅಭಿಪ್ರಾಯಪಟ್ಟರು. ಅವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಐದು ಗ್ರಾಮಗಳ ಪುರುಷರಿಗಾಗಿ ಮುಕ್ತ ವಾಲಿಬಾಲ್ ಪಂದ್ಯಾಟ ಚೈತನ್ಯ ಕಪ್ -2015 ಹಾಗೂ ಮೂರು ಗ್ರಾಮಗಳ ಪುರುಷರಿಗಾಗಿ ಮುಕ್ತ ಕಬಡ್ಡಿ ಪಂದ್ಯಾಟ ಸೌಜನ್ಯ ಕಪ್ -2015ಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್‍ದಾಸ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳೇಕಲ ಮದನಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಆನಂದ ಕೆ. ಅಸೈಗೋಳಿ, ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮುಸ್ತಾಫ, ರಾಷ್ಟ್ರೀಯ ಕ್ರೀಡಾಪಟು ಟಿ.ವಿ. ಅಂಬು, ಅತ್ತಾವರ ಶಾಖೆಯ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಎಂ. ಪರಮೇಶ್ವರ, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಸದಸ್ಯ ಸೋಮಶೇಖರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುನ್ನೂರು : ಸಂಘಟನೆಗಳು ಸ್ಥಾಪನೆಯಾದರೆ ಸಾಲದು ನಿರಂತರ ಚಟುವಟಿಕೆಯ ಮೂಲಕ ಜನಪರ ಕಾರ್ಯ ನಿರ್ವಹಿಸುವುದರೊಂದಿಗೆ ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿದಾಗ ಸಂಘಟನೆಗಳು ಯಶಸ್ವಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಗಾಳದ ಕೊಂಕಣಿ ಅಭ್ಯದಯ ಸಂಘ ಸಮಾಜಕ್ಕೆ ಮಾದರಿ ಎಂದು ಉಡುಪಿ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದಲ್ಲಿ ನಡೆದ `ಗಾಳದ ಕೊಂಕಣಿ ಅಭ್ಯುದಯ ಸಂಘ’ ಇದರ ಷಷ್ಠ್ಯಾಬ್ದಿ ಮಹೋತ್ಸವ ಸಂಭ್ರಮ-2015ರ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಘವು ಬೆಳೆದು ಬಂದ ಹಾದಿಯ “ನವಸೌರಭ”ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಸಂಘಗಳು ಹುಟ್ಟುವುದು ಸಾಮಾನ್ಯ ,ಆದರೆ ಅದನ್ನು ಪೋಷಿಸಿ ಬೆಳೆಸುವ ಪರಿ ಕಷ್ಟಸಾಧ್ಯ.ಸರಕಾರದ ಪ್ರತಿನಿಧಿಗಳಿಗೂ ತಮ್ಮ ಅಹವಾಲುಗಳನ್ನು ಮುಟ್ಟಿಸಲು ಸಂಘಟನೆಗಳೇ ಪ್ರಬಲ ಮಾಧ್ಯಮ. ಸಮಾಜದ ಪ್ರತಿಯೊಬ್ಬರಲ್ಲಿಯೂ ನಾಯಕತ್ವದ ಗುಣಗಳಿದ್ದು ಅದನ್ನು ಬೆಳಕಿಗೆ ತರುವ ಕಾರ್ಯ ಸಂಘಟನೆಗಳಿಂದ ನಡೆಯಬೇಕು ಎಂದ ಅವರು ಸೋಮನಾಥ ಉಳಿಯ ಕ್ಷೇತ್ರದಲ್ಲೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ಮೂವರು ಮಹಿಳೆಯರನ್ನು ಈಜುರಕ್ಷಕ ದಳದ ಯುವಕರು ರಕ್ಷಿಸಿದ ಘಟನೆ ಉಳ್ಳಾಲ ಮೋಗವೀರಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಸಾಂದರ್ಭಿಕ ಚಿತ್ರ ಬೆಂಗಳೂರು ಹಾಗೂ ಮಡಿಕೇರಿ ಮೂಲದ ಕುಟುಂಬವೊಂದರ ಹತ್ತು ಜನ ಸದಸ್ಯರು ಉಳ್ಳಾಲ ದರ್ಗಾಕ್ಕೆ ಬೇಟಿ ನೀಡಿದ್ದರು. ನಂತರ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಇವರು ಸಮುದ್ರಕ್ಕೆ ಇಳಿದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ನೀರು ಪಾಲಾಗುತ್ತಿದ್ದ ಇವರನ್ನು ಸ್ಥಳೀಯ ಈಜುಗಾರರ ತಂಡದ ಯುವಕರು ರಕ್ಷಿಸಿದ್ದಾರೆ. ಬೆಂಗಳೂರು ಮೂಲದ ನೂರ್ ಜಹಾನ್ (45) ನಾಫೀಯಾ (30) ಮಡಿಕೇರಿಯ ಖೈರುನ್ನೀಸಾ (28) ಸಮುದ್ರ ಪಾಲಾಗುತ್ತಿದ್ದವರು ಎಂದು ತಿಳಿದು ಬಂದಿದೆ. sಸ್ಥಳೀಯ ಮೊಗವೀರ ಪಟ್ಣದ ಈಜುಗಾರ ದೀಕ್ಷಿತ್ ಕರ್ಕೆರಾ ,ಶಿವನ್ ಬಂಗೇರ ,ಧನರಾಜ್ ಪುತ್ರನ್ ,ರೋಶನ್ ಸುವರ್ಣ , ಸುಧೀರ್ ,ಕಿಶೋರ್ ಸಮುದ್ರ ಪಾಲಾಗುತ್ತಿದ್ದ ಮಹಿಳೆಯರನ್ನು ರಕ್ಷಿಸಿದ ಯುವಕರು. ಘಟನೆಯಲ್ಲಿ ನಾಫಿಯಾ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರೆ, ನೂರ್ ಜಹಾನ್ ಮತ್ತು ಖೈರುನ್ನೀಸಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪಂಪ್‍ವೆಲ್ ಬಂದ್ ಯಶಸ್ವಿಯಾಗಿ ನೆರವೇರಿದೆ. ನಗರದ ಪಂಪ್ ವೆಲ್ ವೃತ್ತದ ಬಳಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ವಿಜಯ್ ಕುಮಾರ್ ಶೆಟ್ಟಿ ರಾಜ್ಯಸರಕಾರವು ಆದಷ್ಟು ಬೇಗ ಈ ಯೋಜನೆಯನ್ನು ಕೈಬಿಡಲಿ ಎಂದು ಒತ್ತಾಯಿಸಿದರು. ಈ ಯೋಜನೆಯ ನಿಲ್ಲಿಸುವಂತೆ ಮುಖ್ಯಮಂತ್ರಿಯ ಜೊತೆಗೆ ಹಲವು ಬಾರಿ ತಿಳಿಸಿದ್ದೇವೆ ಆದರೆ ಅವರು ನಮ್ಮ ಮಾತಿಗೆ ಬೆಲೆ ನೀಡಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ನೇತ್ರಾವತಿ ಉಳಿಸಿ ಎಂಬ ಘೋಷಣೆ ಎಲ್ಲ ಕಡೆಯಲ್ಲಿ ಕೇಳಿಬರುತ್ತಿದ್ದು, `ಸುದೆ ಮಾರುನ ಮಾರಿಲು'(ನದಿಯನ್ನು ಮಾರಾಟ ಮಾಡುವ ಮಾರಿಗಳು) ಎಂಬ ಘೋಷಣೆಗಳನ್ನು ಒತ್ತಿ ಒತ್ತಿ ಕೂಗುವ ಮೂಲಕ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೊಳ್ಳ, ನೇತ್ರಾವತಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಡಾ.ನಿರಂಜನ್ ರೈ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಒಕ್ಕೂಟ ನೀಡಿದ ಪಂಪ್‍ವೆಲ್ ಬಂದ್‍ಗೆ ಹಿಂದೂ ಯುವ ಸೇನೆ ಪೂರ್ಣ ಬೆಂಬಲ ನೀಡಿದೆ. ಸಾಂದರ್ಭಿಕ ಚಿತ್ರ ನಾಳೆ ನಡೆಯಲಿರುವ ಪಂಪ್ ವೆಲ್ ಬಂದ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಯುವ ಸೇನೆಯ ಎಲ್ಲಾ ಶಾಖೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಯುವ ಸೇನಾ ಕೇಂದ್ರ ಕಚೇರಿಯಿಂದ ಜಾಥಾದ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಲಿಕ್ಕಿದ್ದು, ನೇತ್ರಾವತಿ ಹೋರಾಟಕ್ಕೆ ಜಯ ಸಿಗುವವರೆಗೆ ನಮ್ಮ ಸಹಕಾರ ಇರುತ್ತದೆ ಎಂದು ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಕಾರ್ಯದರ್ಶಿ ಪದ್ಮನಾಭ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ 2015 ನೇ ಸಾಲಿನ ಪ್ರತಿಭೋತ್ಸವದ ತೊಕ್ಕೊಟ್ಟು ಸೆಕ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಎಸ್ಸೆಸ್ಸೆಫ್ ಅಳೇಕಲ ಶಾಖೆಯು ಚಾಂಪಿಯನ್ ಆಗಿ ಹೊರಹೊಮ್ಮಿತು. ಸಬ್ ಜೂನಿಯರ್ ವಿಭಾಗದಲ್ಲಿ ರಿನಾಝ್ ತಂಙಳ್ ಹಾಗೂ ಜನರಲ್ ವಿಭಾಗದಲ್ಲಿ ಜಂಶೀರ್ ಅಳೇಕಲ ವ್ಯಯಕ್ತಿಕ ಚಾಂಪಿಯನ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡರು. ಜವಾಹಿರ್ ತಂಙಳ್, ಹಾಫಿûಳ್ ಮುಹಮ್ಮದ್ ಇರ್ಷಾದ್, ಮುಹಮ್ಮದ್ ಆಶಿಕ್, ಮುಹಮ್ಮದ್ ಕೈಸ್, ರಹ್ಮತ್ ತಾಝಿಲ್, ಅಬೂಬಕ್ಕರ್ ನಾಝಿಮ್, ಮುಹಮ್ಮದ್ ಸುಫೈದ್, ಮುಹಮ್ಮದ್ ನೌಫನ್, ಮುಹಮ್ಮದ್ ಇಸ್ತಿಹಾಕ್, ಮುಹಮ್ಮದ್ ಹಫೀಪ್, ಅನ್ನಜಾತ್ ದಪ್ ತಂಡ, ಲದಲ್ ಹಬೀಬ್ ಬುರ್ದಾ ತಂಡ ಪ್ರಥಮ ಸ್ಥಾನ ಪಡೆದಿದೆ ಎಂದು ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಪ್ರತಿಭೋತ್ಸವ ಕನ್‍ವೀನರ್ ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

Read More