Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇರಾ:ಉಳ್ಳಾಲ ಸಾಹಿತ್ಯ ಪ್ರಕಾರದಲ್ಲಿ ಚುಟುಕು ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. ಜೀವನ ಉಲ್ಲಾಸ ದೊರೆಯುವುದಕ್ಕೆ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಕಾಣಿಕೆ ನೀಡಿದೆ. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ಮತ್ತು ಇಜಂಗಳು ಕಂಡುಬರುತ್ತಿದ್ದು ಅದು ಸಾಹಿತ್ಯದ ಏಳಿಗೆಯ ದೃಷ್ಟಿಯಿಂದ ಶೋಭೆ ತರುವಂತದ್ದಲ್ಲ ಎಂದು ಮಂಗಳೂರಿನ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಇರಾ ಶ್ರೀ ಸೋಮನಾಥೇಶ್ವರ ಕಲಾಮಂಟಪದ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಸಾಹಿತಿಗಳ ಚುಟುಕು ಕವಿಗಳ ಸಮ್ಮಿಲನ ಉದ್ಘಾಟಿಸಿ ಅವರು ಮಾತನಾಡಿದರು. ಸಾಮರಸ್ಯದ ಬಾಳ್ವೆಗೆ ಸಾಹಿತ್ಯ ಮತ್ತು ಸಾಂಸ್ಕ ೃತಿಕ ಪ್ರಕಾರಗಳಿಂದಾಗಿ ಹೊಸ ವೇದಿಕೆ ದೊರೆಯುತ್ತದೆ. ಆ ದಿಸೆಯಲ್ಲಿ ಚುಟುಕು ಸಾಹಿತ್ಯ ಸಾಮರಸ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸುತ್ತದೆ ಎಂದು ಹೇಳಿದರು. ಹಿರಿಯ ಸಾಹಿತಿ ಏರ್ಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಚುನಾವಣೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ನಿನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ. ಕೈರಂಗಳ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಗೋಪಾಲ ಬಂಗೇರ ಹಾಗೂ ಶ್ರೀಧರ್ ಅಡಪ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ವಿವರ: ಕೈರಂಗಳ ಭಾಗದಲ್ಲಿ ಚುನಾವಣೆ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಇಂದು ಗಲಾಟೆ ನಡೆದಿದೆ. ಮುಡಿಪು ಹೊಟೇಲೊಂದರಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭ , ಹೊಟೇಲಿನ ಮೇಲಿರುವ ಬಿಜೆಪಿ ಕಚೇರಿಯಲ್ಲಿದ್ದ ಸುಮಾರು 50 ಕ್ಕೂ ಅಧಿಕ ಕಾರ್ಯಕರ್ತರು ಕುರ್ಚಿ ಹಾಗೂ ಮರದ ಸೋಂಟೆಗಳಿಂದ ಕಾಂಗ್ರೆಸ್ ಪರ ಕೆಲಸ ಮಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆಂದು ಶ್ರೀಧರ್ ಹಾಗೂ ಗೋಪಾಲ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಚೇರಿಯಲ್ಲಿದ್ದ ಸಂದರ್ಭ ಪೂರ್ವ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಗೋಪಾಲ ಬಂಗೇರ, ಶ್ರೀಧರ ಅಡಪ, ನಾಗೇಶ್,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 136 ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಶನಿವಾರ ಬೆಳಗ್ಗಿನಿಂದ ಶಾಂತಿಯುತವಾಗಿ ನಡೆದಿದ್ದು, ಕೊಣಾಜೆಯ ಅಡ್ಕರೆ ಮತಗಟ್ಟೆ ಹೊರತುಪಡಿಸಿ ಉಳಿದ ಮತಗಟ್ಟೆಗಳಲ್ಲಿ ಸರಾಸರಿ 200 ರಿಂದ 220 ಮತದಾರರು ಮಧ್ಯಾಹ್ನದ ವೇಳೆಗೆ ತಮ್ಮ ಹಕ್ಕು ಚಲಾಯಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ಜಾರದಗುಡ್ಡೆಯ ಮತಗಟ್ಟೆ ಸಂಖ್ಯೆ 280 ರಲ್ಲಿ ಮತ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಷೇತ್ರದ ಉದ್ದಗಲಕ್ಕೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಶಾಂತಿಯ ನೆಮ್ಮದಿ ಸ್ವಾಭಿಮಾನದ ಜೀವನ ನಡೆಸಲು ಜನ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯಾಡಳಿತ ಊರಿಗೆ ಯೋಜನೆಗಳನ್ನು ತರುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಹಕ್ಕನ್ನು ಚಲಾಯಿಸುವುದರೊಂದಿಗೆ ಊರಿನ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು ಎಂದರು. ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ನೀರುಮಾರ್ಗದಲ್ಲಿ 11, ಕುರ್ನಾಡು 26, ಕೊಣಾಜೆ 34, ಪುದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕಿನ್ಯ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ 46ನೆಯ ವಾರ್ಷಿಕೋತ್ಸವ ಕಿನ್ಯ ದುರ್ಗಾಪುರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಪನ್ ಡಿ. ಮಾಧವ ಶೆಟ್ಟಿ ಮಾತನಾಡಿ ಯಕ್ಷ ಅಂದರೆ ಪೂಜೆ. ಗಾನವೆಂದರೆ ಕುಣಿತ. ಅಂತಹ ಅದ್ಭುತ ಕಲೆಯನ್ನು ಪೂಜಿಸುವುದು ಯಕ್ಷಗಾನದ ತತ್ವ ಎಂದರು. ಕಾರ್ಯಕ್ರಮದಲ್ಲಿ ಪಡ್ರೆ ಚಂದ್ರು, ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಈಶ್ವರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ತೊಕ್ಕೊಟ್ಟು ಭಗವತೀ ಬ್ಯಾಂಕಿನ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಎಸ್. ರಾಮ್‍ದಾಸ್, ಕಿನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಪೂಜಾರಿ ಉಪಸ್ಥಿತರಿದ್ದರು. ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಮಹಾಬಲ ಪೂಂಜ, ಗೌರವಾಧ್ಯಕ್ಷ ರಾಮಯ್ಯಕಿಲ್ಲೆ ಉಪಸ್ಥಿತರಿದ್ದರು. ಯುವಕ ಮಂಡಲದ ಸಂಚಾಲಕ ಬಾಬು ಶ್ರೀ ಶಾಸ್ತಾ ಕಿನ್ಯ ಸ್ವಾಗತಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಹಿರಿಯ ವಿದ್ವಾಂಸ ಕೃಷ್ಣಾಪುರದಲ್ಲಿ ಹದಿನೈದು ವರ್ಷಗಳ ಕಾಲ ಮತ್ತು ಉಳ್ಳಾಲ ಪ್ರದೇಶದ ಕೆಲ ಮಸೀದಿಗಳಲ್ಲಿ ಖತೀಬರಾಗಿ ಕಾರ್ಯನಿರ್ವಸಿದ ಇಬ್ರಾಹೀಂ ಮದನಿ (62) ಗುರುವಾರ ಮಧ್ಯಾಹ್ನ ಮುಕಚ್ಚೇರಿಯ ಸ್ವಗೃಹದಲ್ಲಿ ನಿಧನರಾದರು. ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ ಕೆ. ರಾಮಚಂದ್ರ ತೊಕ್ಕೊಟ್ಟು ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳಾದ ರಾಜೀವ ಮೆಂಡನ್, ವಿಠಲ ಶ್ರೀಯಾನ್, ಸುಂದರ ಅಮೀನ್, ಮೋನಪ್ಪ ಶ್ರೀಯಾನ್, ಜಯಾನಂದ ಅಂಚನ್, ದೇವದಾಸ್ ಶ್ರೀಯಾನ್ ಇವರ ಉಪಸ್ಥಿತಿಯಲ್ಲಿ 2016ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ವಿಶ್ವನಾಥ ಮೆಂಡನ್, ಕಾರ್ಯದರ್ಶಿಯಾಗಿ ಸತೀಶ್ ಭಟ್ನಗರ, ಕೋಶಾಧಿಕಾರಿಯಾಗಿ ರೋಹಿದಾಸ್ ಭಟ್ನಗರ, ಜೊತೆ ಕಾರ್ಯದರ್ಶಿಯಾಗಿ ಧರ್ಮರಾಜ, ದಿನೇಶ್ ನಾೈಕ್ ತೊಕ್ಕೊಟ್ಟು, ಲೆಕ್ಕಪರಿಶೋಧಕರಾಗಿ ಶಿವರಾಮ ಟಿ., ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಕುಂಪಲ, ಜೊತೆ ಕ್ರೀಡಾ ಕಾರ್ಯರ್ಶಿಯಾಗಿ ಕಿಶೋರ್ ಗಾಂಧಿನಗರ, ಪ್ರವೀಣ್ ಕೊಲ್ಯ ಸದ್ಯರಾಗಿ ರಮೇಶ್ ಮೆಂಡನ್, ನಾಗೇಶ್ ಶೆಟ್ಟಿ, ಪ್ರಕಾಶ್ ಕುಂಪಲ, ತರುಣ್ ಶೆಟ್ಟಿ ಕುಂಪಲ, ಶರತ್ ತೊಕ್ಕೊಟ್ಟು, ಪ್ರದೀಪ್ ಕಾಪಿಕಾಡ್, ಚಂದ್ರ ಮೆಂಡನ್, ನಾಗೇಶ್ ಕುಂಪಲ, ಕೃಷ್ಣಪ್ಪ ಮೆಂಡನ್ ಲೋಕೇಶ್ ಕುತ್ತಾರ್ ಇವರು ಆಯ್ಕೆಯಾದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಉಪ್ಪಿನಂಗಡಿ ನೀರಕಟ್ಟೆಯಲ್ಲಿ ಪತ್ತೆಯಾದ ಅನಾಥ ಕಾರು ಮತ್ತು ಅದರೊಳಗೆ ರಕ್ತದ ಕಲೆಗಳು ಕಂಡ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಟೂರಿಸ್ಟ್ ಕಾರು ಚಾಲಕ ಹಾಗೂ ಮಾಲೀಕ ವಿ.ಎ.ಇಸ್ಮಾಯಿಲ್ ಕುರಿತು ಕೊಣಾಜೆ ಠಾಣೆಯಲ್ಲಿ ಅವರ ಪತ್ನಿ ನೆಬೀಸಾ ಅವರು ನಾಪತ್ತೆ ದೂರು ದಾಖಲಿಸಿದ್ದಾರೆ. ಘಟನೆ ವಿವರ: ಫೆ.16 ರಂದು ಪಾವೂರು ಇನೋಳಿಯ ದೆಡಿಂಜೆ ಮನೆಯಿಂದ ಇಸ್ಮಾಯಿಲ್ ಅವರು ಬೆಳಿಗ್ಗೆ 8.00 ಗಂಟೆಗೆ ಕೆ.ಎ.20.ಸಿ 3198 ಟೂರಿಸ್ಟ್ ಕಾರಿನಲ್ಲಿ ಮಂಗಳೂರು ಕಡೆಗೆ ಹೊರಟಿದ್ದರು. ಮತ್ತೆ 10.00 ಗಂಟೆ ಸುಮಾರಿಗೆ ಪತ್ನಿ ನೆಬೀಸಾ ಅವರಿಗೆ ಕರೆ ಮಾಡಿ ತಕ್ಷಣ ರೂ. 75,000 ಹಣದೊಂದಿಗೆ ಅಸೈಗೋಳಿಗೆ ಬರಲು ತಿಳಿಸಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಇಸ್ಮಾಯಿಲ್ ಅವರು ಕರಾವಳಿ ಸೊಸೈಟಿಯಿಂದ ರೂ.1,75,000 ಹಣವನ್ನು ಪಡೆದು ಬಳಿಕ ಪತ್ನಿ ನೆಬೀಸಾ ಅವರಿಂದ ರೂ.75,000 ಹಣ ಸಹಿತ ಒಟ್ಟು 2,50,000 ನಗದಿನೊಂದಿಗೆ ಫರಂಗಿಪೇಟೆಗೆ ಹೋಗಲು ಇದೆ ಎಂದು ತಿಳಿಸಿ ಹೊರಟಿದ್ದರು. ಮತ್ತೆ ಸಂಜೆ 4.00 ಗಂಟೆಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ :ಧರ್ಮದ ಮೇಲೆ ಪರಿಪೂರ್ಣ ವಿಶ್ವಾಸ ಇಟ್ಟುಕೊಂಡರೆ ಮಾತ್ರ ಪರಲೋಕದಲ್ಲಿ ರಕ್ಷಣೆ ಸಾಧ್ಯ. ವ್ಯಾಪಾರ, ಹಣ ಸಂಪಾದಣೆ, ವ್ಯವಹಾರ ಇಹಲೋಕಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಪರಲೋಕಕ್ಕೆ ಅಲ್ಲ. ಶಾಂತಿ ಸೌಹಾರ್ದತೆಯಿಂದ ಇದ್ದುಕೊಂಡು ಇಸ್ಲಾಂ ಬೋಧಿಸಿದ ಮಾರ್ಗವನ್ನು ಅನುಕರಣೆ ಮಾಡಿ ಅಲ್ಲಾಹನಲ್ಲಿ ವಿಶ್ವಾಸ ಇಟ್ಟುಕೊಂಡಲ್ಲಿ ರಕ್ಷಣೆ ಸಿಗಬಹುದು ಎಂದು ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಹೇಳಿದರು. ಅವರು ಉಚ್ಚಿಲದಲ್ಲಿ ಅಸ್ಸಯ್ಯಿದ್ ಶರೀಫ್ ಅಲ್ ಅರಬ್ಬಿ ವಲಿಯುಲ್ಲಾಹಿಯವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಸ್ವರ್ಗಕ್ಕೆ ಹೋಗಲು ಪರಿಶ್ರಮ ಬಹಳಷ್ಟು ಪಡೆಯಬೇಕು. ನರಕಕ್ಕೆ ಹೋಗಲು ಪರಿಶ್ರಮ ಬೇಡ. ಧಾರ್ಮಿಕ ಕ್ಷೇತ್ರದಲ್ಲಿ ಸಿಗುವ ವಿವಿಧ ಬಿರುದುಗಳು, ಎಸ್‍ಎಸ್‍ಎಫ್, ಎಸ್‍ಕೆ ಎಸ್‍ಎಸ್‍ಎಫ್, ವಿವಿಧ ಸಂಘಟನೆಗಳು ಇಹಲೋಕಕ್ಕೆ ಮಾತ್ರ ಸೀಮಿತ. ಪರಲೋಕದ ರಕ್ಷಣೆಗೆ ಈ ಸಂಘಟನೆ ನೆರವಿಗೆ ಬರುವುದಿಲ್ಲ ಎಂದರು. ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಮಾತು ತಪ್ಪಿದರೆ ಶಾಂತಿ ಹದಗೆಟ್ಟು ಹೋಗಬಹುದು. ಮಾತಿನಿಂದ ರಕ್ಷಣೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮೀನುಗಾರಿಕೆ ನಡೆಸುತ್ತಿರುವಾಗ ಬೋಟ್ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಮೊಗವೀರಪಟ್ಣ ನಿವಾಸಿ ರಾಜ್ಯ ಪ್ರಶಸ್ತಿ ಪುರಸ್ಕøತ ಜೀವರಕ್ಷಕ ಈಜುಗಾರ ಜಯಂತ ಸಾಲಿಯಾನ್(48) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಿಂಗಳ ಹಿಂದೆ ತನ್ನದೇ ಪಾಲುದಾರಿಕೆಯ ಬೋಟ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‍ನಲ್ಲಿದ್ದ ಕಂಬ ತುಂಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಉಸ್ತಾದ್ ದಿ.ವೀರಪ್ಪ ಪುತ್ರನ್ ಅವರ ಪುತ್ರರಾಗಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು. ಬ್ರದರ್ಸ್ ಸ್ಪೋರ್ಟ್ ಕ್ಲಬ್, ಶ್ರೀ ಮಾರುತಿ ವ್ಯಾಯಾಮ ಶಾಲೆಯ ಸಕ್ರೀಯರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಾದಿಯರಿಗೆ ಗುಣಾತ್ಮಾಕ ಮತ್ತು ವಿವೇಚನಾಯುಕ್ತ ಸಂಶೋಧನೆಗಳ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ಬೆಂಗಳೂರಿ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜ್ಯೂಕೇಶನ್ ಆಂಡ್ ರಿಸರ್ಚ್‍ನ ಪ್ರಾಂಶುಪಾಲೆ ಡಾ. ಜಾದವ್ ಸೊನಾಲಿ ತಾರಚಂದ್ ಅಭಿಪ್ರಾಯಪಟ್ಟರು. ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ವಿಂಶತಿ ಭವನದಲ್ಲಿ ಗುರವಾರ ಜರುಗಿದ ಸಂಶೋಧನೆಯ ಸಂಸ್ಕøತಿ ಹಾಗೂ ಆರೋಗ್ಯದ ಮಾಹಿತಿ ಮತ್ತು ಸಾಕ್ಷಿ ಪ್ರತಿಕ್ರಿಯೆ ಕುರಿತು ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ದಾದಿಯರು ವೈದ್ಯಶಾಸ್ತ್ರದ ಎಲ್ಲಾ ವಿಭಾಗಗಳ ಪರಿಣತಿಯನ್ನು ಹೊಂದಿರುತ್ತಾರೆ. ಆದುದರಿಂದಾಗಿ ತಮ್ಮ ಸ್ವಂತ ವೃತ್ತಿಯ ಜ್ಞಾನದಿಂದ ಹೊರಬಾಗುತ್ತಿದ್ದಾರೆ. ರೋಗಿಗಳ ಶುಶ್ರೂಷೆಯೇ ತಮ್ಮ ಕರ್ತವ್ಯದ ಉದ್ದೇಶವಾಗಿರುವುದರಿಂದ ಅದರ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುವುದರ ಅಗತ್ಯವಿದೆ. ದಾದಿಯರು ಅನ್ವೇಷಕರಲ್ಲ ಆದರೆ ಸಂಶೋಧನೆಯಲ್ಲಿ ಪ್ರವರ್ತಕರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಎ.ಬಿ ಶೆಟ್ಟಿ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಸ್.ಕೃಷ್ಣನಾಯಕ್…

Read More