Author: UllalaVani

Kannada News From Coastal Karnataka

UN NETWORKS ವಾಮಂಜೂರು : ವಾಮಂಜೂರು ಸೈಂಟ್ ರೇಮಂಡ್ಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ನೆಟ್‍ಬಾಲ್ ಪಂದ್ಯಾಟಕ್ಕೆ ಅಂತಿಮ ತೆರೆ ಬಿದ್ದಿದೆ. ಹದಿನಾಲ್ಕು ವರ್ಷ ವಯೋಮಿತಿ ವಿಭಾಗದಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಹದಿನೇಳು ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಹಾಸನ ಜಿಲ್ಲೆಯು ಪ್ರಥಮ ಸ್ಥಾನ, ಬೆಂಗಳೂರು ಉತ್ತರ ಜಿಲ್ಲೆಯ ತಂಡ ದ್ವಿತೀಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ತೃತೀಯ ಸ್ಥಾನವನ್ನು ಪಡೆಯಿತು. ಬೆಂಗಳೂರು ಉತ್ತರ ತಂಡದ ಧನುಶ್ ಉತ್ತಮ ಸವ್ಯಸಾಚಿಯಾಗಿ, ಹಾಸನ ಜಿಲ್ಲೆಯ ಯೋಗೀಶ್ ರಕ್ಷಣಾತ್ಮಕ ಆಟಗಾರನಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಶಾನ್ ಉತ್ತಮ ಶೂಟರ್‍ಗಳಾಗಿ ಪ್ರಶಸ್ತಿ ಸ್ವೀಕರಿಸಿದರು. ಹದಿನೇಳು ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಪ್ರಥಮ, ಹಾಸನ ಜಿಲ್ಲೆ ದ್ವಿತೀಯ, ಮತ್ತು ದಕ್ಷಿಣ ಕನ್ನಡ ಜಿಲ್ಲೆ ತೃತೀಯ…

Read More

UN NETWORKS ಉಳ್ಳಾಲ: ಅಸ್ಸಾಂ, ಒರಿಸ್ಸಾ ಭಾಗದಲ್ಲಿ ಬೀಸಿದ ಚಂಡಾಮಾರುತದ ಪರಿಣಾಮ ಉಳ್ಳಾಲ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. 41 ಮನೆಗಳು ಅಪಾಯದಂಚಿನಲ್ಲಿವೆ . ಉಳ್ಳಾಲದ ಕಿಲಿರಿಯಾನಗರ, ಕೈಕೋ, ಸುಭಾಷನಗರ, ಮುಕ್ಕಚ್ಚೇರಿ ಹಾಗೂ ಸೋಮೇಶ್ವರದ ಉಚ್ಚಿಲ ಪೆರಿಬೈಲು ಪ್ರದೇಶದಲ್ಲಿ ಮೂರು ಮನೆಗಳಿಗೆ ಅಲೆಗಳು ಅಪ್ಪಳಿಸಿದೆ. ಮಂಗಳವಾರ ತಡರಾತ್ರಿಯಿಂದ ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ಅಪ್ಪಳಿಸಲು ಆರಂಭವಾಗಿದೆ. ಉಳ್ಳಾಲದ ಕೈಕೋ ಭಾಗದಲ್ಲಿರುವ ಎಂಟು ಮನೆಮಂದಿ ಮಳೆಗಾಲದ ಸಂದರ್ಭದಲ್ಲೇ ಬಾಡಿಗೆ ಮನೆಗಳಿಗೆ ತೆರಳಿದ್ದರೆ, ಅಲ್ಲೇ ಮನೆಗಳಲ್ಲಿರುವ ಮಂದಿಗೆ ತೊಂದರೆಯುಂಟಾಗಿದೆ. ಕಿಲಿರಿಯಾನಗರ, ಕೈಕೋ, ಸುಭಾಷನಗರ , ಮುಕ್ಕಚ್ಚೇರಿ ಭಾಗವನ್ನು ಹಿಂದಿನಿಂದಲೂ ಕಡೆಗಣಿಸಲಾಗುತ್ತಿದೆ. ಅತಿಹೆಚ್ಚು ಜನರಿರುವ ಪ್ರದೇಶ ಇದಾಗಿದ್ದರೂ ಯಾವುದೇ ರೀತಿಯ ಶಾಶ್ವತ ಪರಿಹಾರ ಯೋಜನೆಯನ್ನು ಕೈಗೊಂಡಿಲ್ಲ. ಸ್ಥಳೀಯ ಪ್ರದೇಶದಲ್ಲಿರುವ ರೆಸಾಟ್ ್, ಕಾರ್ಖಾನೆಗಳಿರುವ ಪ್ರದೇಶದಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಕೈಕೋ ಭಾಗದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಗರಸಭೆ ಚುನಾವಣೆಯಲ್ಲಿ ಜಯಗಳಿಸಿರುವುದರಿಂದ ಸಚಿವರು ಜನರ ಸುರಕ್ಷತೆಗೆ ಬೆಲೆ ನೀಡುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿ…

Read More

UN NETWORKS ಉಳ್ಳಾಲ: ಕೊಲ್ಯ ಶ್ರೀ ಶಾರದಾ ಸೇವಾ ಟ್ರಸ್ಟ್ ಇದರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ 37 ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.15 ರಂದು ಶ್ರೀ ಶಾರದಾ ಮಾತೆ ವಿಗ್ರಹ ಪ್ರತಿಷ್ಠೆಯೊಂದಿಗೆ ಆರಂಭಗೊಂಡು ಅ.20ರ ರಾತ್ರಿ 8 ಕ್ಕೆ ಶೋಭಾಯಾತ್ರೆಯೊಂದಿಗೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ಜಲಸ್ತಂಭನಗೊಳ್ಳಲಿದೆ ಎಂದು ಶ್ರೀ ಶಾರದಾ ಸೇವಾ ಟ್ರಸ್ಟ್ ಕೊಲ್ಯದ ಟ್ರಸ್ಟೀ ತೋನ್ಸೆ ಪುಷ್ಕಳ್ ಕುಮಾರ್ ಹೇಳಿದರು. ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಅ.15 ಬೆಳಿಗ್ಗೆ 11 ಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀ ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಾಮ ನಾಯ್ಕ್ ಕೋಟೆಕಾರು ಉದ್ಘಾಟಿಸಲಿದ್ದಾರೆ. ಕುಂಭೇಶ್ವರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಸಾಲಿಯಾನ್ ಕಣ್ವತೀರ್ಥ ಅಧ್ಯಕ್ಷತೆಯಲ್ಲಿ, ಹಿಂ.ಜಾ.ವೇ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ, ಉದ್ಯಮಿ ಮನೋಜ್ ಸರಿಪಳ್ಳ, ಸತೀಶ್ ಮುಚ್ಚೂರು, ಹರಿದಾಸ್.ಕೆ.ಮಾಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅ.17 ರಂದು ಶಾಲಾಮಕ್ಕಳಿಗೆ…

Read More

UN NETWORKS ಕೊಣಾಜೆ: ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯದ ಅನ್ವೈಯಿಕ ಪ್ರಾಣಿಶಾಸ್ತ್ರ ವಿಭಾಗದ `ನ್ಯಾಚುರಲ್ ಹಿಷ್ಟರಿ ಅಸೋಸಿಯೇಶನ್’ ಸಹಯೊಗದಲ್ಲಿವನ್ಯಜೀವಿ ಛಾಯಾ ಚಿತ್ರಗಳ ಪ್ರರ್ದಶನ ಮಂಗಳೂರು ವಿಶ್ವವಿದ್ಯಾಲಯದಲ್ಲಿನಡೆಯಿತು. ವನ್ಯಜೀವಿ ಛಾಯಾಚಿತ್ರ ಪ್ರರ್ದಶನಕ್ಕೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ ವನ್ಯಜೀವಿ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ. ಮಾನವನ ದುರಾಸೆಯಿಂದ ಕಾಡುನಾಶವಾಗುತ್ತಿದ್ದು, ವನ್ಯಜೀವಿಗಳ ಅವಾಸಕ್ಕೆ ಕುತ್ತು ಉಂಟಾಗಿದೆ. ವನ್ಯಜೀವಿ ಛಾಯಾಚಿತ್ರ ಪ್ರರ್ದಶನದಂತಹ ಕಾರ್ಯಕ್ರಮಗಳ ಆಯೋಜಯನೆಯು ಸಾರ್ವಜಿನಿಕರು ಮತ್ತು ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಬಹಳ ಸಹಕಾರಿ ಎಂದು ನುಡಿದರು. ಕಾರ್ಯಕ್ರಮದಲ್ಲಿ`ನ್ಯಾಚುರಲ್ ಹಿಸ್ಟರಿ ಅಸೋಸಿಯೇಶನ್’ನ ಕಾರ್ಯದರ್ಶಿ ಹಾಗೂ ಸಹಾಯಕ ಪ್ರಾಧ್ಯಾಪಕ ಎನ್. ನರಸಿಂಹಯ್ಯ, ವಿಭಾಗ ಅಧ್ಯಕ್ಷ ಪ್ರೊಫೆಸರ್ ಕೆ. ಭಾಸ್ಕರ್ ಶೆಣೈ, ಪ್ರೊಫೆಸರ್ ಶ್ರೀಪಾದ ಮತ್ತು ಎಮ್.ಎಸ್.ಮುಸ್ತಾಕ್, ಡಾ. ಶಾಮಪ್ರಾಸಾದ್ ಹಾಗೂ ಸಂಶೋಧನಾ ವಿಧ್ಯಾರ್ಥಿಗಳು ಹಾಗೂ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Read More

UN NETWORKS ಇರಾ: ಇರಾ ಬಾವಬೀಡು ಪಟೇಲ್ ಶಂಕರ್ ಆಳ್ವ(84) ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇರಾ ಬಾವಬೀಡು ಪಟೇಲ್ ಮನೆತನದವರಾದ ಇವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Read More

UN NETWORKS ಮಂಗಳೂರು:ದ‌.ಕ ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ‌ ಮತ್ತು ಸ್ತ್ರೀ ಜಾಗೃತಿ ಸಮಿತಿ‌ ಹಾಗೂ ಕುಂಜತ್ತ್ ಬೈಲ್ ಅಂಗನವಾಡಿ ಕಾರ್ಯಕತೆಯರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ ಕಾರ್ಯಕ್ರಮ ‌ನಡೆಯಿತು. ಸಮಾಜ ಸೇವಕಿ ನಂದಾ ಪಯಾಸ್ ಸ್ವಚ್ಚತಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಗಾಂಧಿ ಜಯಂತಿಯಂದು ಹುಟ್ಟಿದ ಹಿಸಾಂ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಕುಂಜತ್ತ್ ಬೈಲ್ ಪ್ರದೇಶವನ್ನು ಸ್ವಚ್ಚತೆಗೊಳಿಸಿದರು.ಮಹಿಳಾ ಕಾಂಗ್ರೆಸ್ ಸುರತ್ಕಲ್ ಘಟಕ ಅಧ್ಯಕ್ಷೆ ಶಕುಂತಳಾ ಕಾಮತ್, ಸ್ತ್ರೀ ಜಾಗೃತಿ ಸಮಿತಿ ಸಂಚಾಲಕಿ ಸಂಶಾದ್, ರತನ್ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಯಾಗ ಹಲವು ಆಗಿದ್ದರೂ ಶಾಸ್ತ್ರೀಯವಾಗಿ ಮಾಡಲು ಎಲ್ಲವೂ ಸಾಧ್ಯವಾಗಿಲ್ಲ. ಆದರೆ ಕೊಂಡೆವೂರುನಲ್ಲಿ ನಡೆಯಲಿರುವ ವಿಶ್ವ ಜೀತ್ ಅವಿರಾತ್ರ ಸೋಮಯಾಗ ಬಹಳಷ್ಟು ಪ್ರಾಮುಖ್ಯತೆ ಪಡದಿದೆ. ಇದು ಸ್ಮೃತಿಗೆ ಸಂಬಂಧಪಟ್ಟ ಯಾಗವಾಗಿದ್ದು ಅನ್ನಾಹಾರ ಇಲ್ಲದೇ ಎಲ್ಲರೂ ಯಾಗದಲ್ಲಿ ಭಾಗವಹಿಸಬೇಕು ಎಂದು ಶ್ರೀ ಶ್ರೀ ಈ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಜಗದ್ಗುರು ಶ್ರೀನಿತ್ಯಾನಂದ ಮಹಾಪೀಠಂ ಕೊಂಡೆವೂರು ಇಲ್ಲಿ ಫೆ.18-25ರವರೆಗೆ ನಡೆಯಲಿರುವ ವಿಶ್ವಜೀತ್ ಅವಿರಾತ್ರ ಸೋಮಯಾಗದ ಉಳ್ಳಾಲ ವಲಯ ಸಮಿತಿಯ ವತಿಯಿಂದ ತೊಕ್ಕೊಟ್ಟುವಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ರವೀಂದ್ರಶೆಟ್ಟಿ ಉಳಿದೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಕೊಂಡೆವೂರಿನಲ್ಲಿ ನಡೆಯಲಿರುವ ಯಾಗವನ್ನು ಎಲ್ಲರೂ ಸೇರಿ ಭಾಗವಹಿಸುವ ಮೂಲಕ ಯಶಸ್ಸುಗೊಳಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಉಳ್ಳಾಲ ವಲಯ ಸಮಿತಿಯ ಜಿತೇಂದ್ರ ಕೊಟ್ಟಾರಿ, ಮೋನಪ್ಪ ಭಂಡಾರಿ, ಭಾಸ್ಕರ ರೈ, ಕೆ.ಟಿ. ಸುವರ್ಣ, ರವೀಂದ್ರ ರೈ ಹರೇಕಳ, ಚಂದ್ರಹಾಸ್ ಅಡ್ಯಂತಾಯ, ಜಿ.ಪಂ. ಸದಸ್ಯೆ ಧನಲಕ್ಷ್ಮೀಗಟ್ಟಿ, ಸಂತೋಷ್ ಬೋಳಿಯಾರ್, ಚಂದ್ರಶೇಖರ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್. ಆಡಳಿತ ಮೊಕ್ತೇಸರ…

Read More

UN NETWORKS ಉಳ್ಳಾಲ: ನಿರ್ಮಾಣ ಹಂತದ ಕಟ್ಟಡದ ನೋಂದಾವಣಿ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಗೆ, ಸೈಟ್ ಮೆನೇಜರ್ ಓರ್ವ ಲೈಂಗಿಕ ಕಿರುಕುಳ ನೀಡಿ ಪೊಲೀಸರ ವಶಕ್ಕೆ ಬಿದ್ದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಸಮೀಪ ಸೋಮವಾರ ಸಂಜೆ ಸಂಭವಿಸಿದೆ. ಉಪ್ಪಳ ನಿವಾಸಿ ಅಬ್ದುಲ್ ಲತೀಫ್ ( 30) ಬಂಧಿತ. ಕೋಟೆಕಾರು ಹಿಂದೂಸ್ಥಾನ್ ಬಾವಾ ಬಿಲ್ಡರ್ಸ್ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಯುವತಿ ಓರ್ವಳೇ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಬ್ದುಲ್ ಲತೀಫ್ ಒಳಪ್ರವೇಶಿಸಿ ಬಾಗಿಲಿನ ಕೀಯನ್ನು ನೀಡುವ ನೆಪ ಮಾಡಿ ಲತೀಫ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೆ ವಿಚಾರ ಹೊರಗೆ ಹೇಳಿದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ. ಈ ಕುರಿತು ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಖಂಡಿಸಿರುವ ಹಿಂದು ಸಂಘಟನೆಗಳು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

Read More

UN NETWORKS ತೊಕ್ಕೊಟ್ಟು: ಇತಿಹಾಸ ಪ್ರಸಿದ್ಧ ಸಂತ ಸಬೆಸ್ಟಿಯನ್ ಧರ್ಮ ಕೇಂದ್ರಕ್ಕೆ ಸೌಹಾರ್ದ ಭೇಟಿ ನೀಡಿ ರೆವರೆಂಡ್ ಫಾದರ್ ಜೆ.ಬಿ. ಸಲ್ದಾನ ಅವರು ಔತಣ ಕೂಟವೊಂದನ್ನು ಏರ್ಪಡಿಸಿ ನಮ್ಮ ಜತೆ ಚರ್ಚೆ ಮಾಡಿ ಸ್ವಚ್ಚತೆ ಮತ್ತು ಮಾಧಕ ದ್ರವ್ಯ ಮುಕ್ತ ಮಾಡುವ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸಂಘ ಸಂಸ್ಥೆಗಳು ಜತೆಗೂಡಿ ಈ ಕೆಲಸ ಮಾಡಬಹುದು ಎಂಬ ಬಗ್ಗೆ ಕೂಡಾ ಚರ್ಚೆಯಾಗಿದೆ. ಸ್ವಚ್ಛತೆ ಕಾಪಾಡುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದು ಸಚಿವ ಖಾದರ್ ಹೇಳಿದರು. ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದರು.ಈ ಸಂದರ್ಭ ನಿತ್ಯಾಧರ್ ಸಹಾಯ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಎಲಿಯಾಸ್‍ಡಿ ಸೋಜ, ಉಳ್ಳಾಲ ನಗರ ಸಭೆ ಸದಸ್ಯರಾದ ಬಾಜಿಲ್‍ಡಿ ಸೋಜ, ವೀಣಾಡಿ ಸೋಜ, ಯು.ಎ. ಇಸ್ಮಾಯಿಲ್, ಅಯ್ಯೂಬ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್‍ಡಿ…

Read More

UN NETWORKS ಉಳ್ಳಾಲ: ಉಳ್ಳಾಲ ನಗರಸಭೆಯ 14ನೇ ವಾರ್ಡ್‍ನಿಂದ ಚುನಾಯಿತರಾದ ಯು.ಪಿ. ಅಯ್ಯೂಬ್ ಅವರಿಗೆ ಉಳ್ಳಾಲ ಮಾರ್ಗತಲೆ ಕಟ್ಟತ್ತಲ ನಾಗರಿಕರಿಂದ ಸನ್ಮಾನ ಕಾರ್ಯಕ್ರಮವು ಕಟ್ಟತ್ತಿಲ ಜಂಕ್ಷನ್‍ನಲ್ಲಿ ನಡೆಯಿತು. ಈ ಸಂದರ್ಭ ಸನ್ಮಾನಿತಗೊಂಡು ಮಾತನಾಡಿದ ಅಯ್ಯೂಬ್‍ರವರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನನಗೆ ಬಿ ಫಾರಂ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಇದರಿಂದ ನನಗೆ ನಗರ ಸಭಾ ಕೌನ್ಸಿಲರಾಗಿ ಆಯ್ಕೆಯಾಗಲು ಅವಕಾಶ ಸಿಕ್ಕಿದೆ. ಯು.ಟಿ. ಖಾದರ್ ಅವರ ಪ್ರೀತಿ ವಿಶ್ವಾಸ ಗಳಿಸಿ ಕಾರ್ಯಕರ್ತರ ಜತೆಗೂಡಿ ನನ್ನ ಅವಧಿಯಲ್ಲಿ ಈ ವಾರ್ಡ್‍ನ ಕೆಲಸವನ್ನು ಉತ್ತಮವಾಗಿ ಮಾಡಿ ಕೊಡುವುದಾಗಿ ಹೇಳಿದರು. ಈ ಸಂದರ್ಭ ಉಳ್ಳಾಲ ನಗರ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪಿ.ಎಂ. ಮೊಹಮ್ಮದ್, ಗುತ್ತಿಗೆದಾರರಾದ ಸಾದಿಕ್, ಪಕ್ವಾನ್ ಅಹ್ಮದ್, ಕರೀಂ ಅಳೇಕಲ, ಅಬ್ದುಲ್ ಲತೀಫ್, ಉಸ್ಮಾನ್ ಮಾರ್ಗತಲೆ, ಹನೀಫ್ ಪರಪ್ಪು , ಆಸೀಫ್ ಕಟ್ಟತ್ತಲೆ, ಅಶ್ಫಾಕ್ ಕಟ್ಟತ್ತೆಲ, ಮಿಸ್ಬಾಹ್ ಮಾರ್ಗತಲೆ, ಬಾದ್‍ಶ ಮಂಚಿಲ ಉಪಸ್ಥಿತರಿದ್ದರು. ರಿಯಾಝ್…

Read More