Author: UllalaVani

Kannada News From Coastal Karnataka

UN NETWORKS ಕೋಟೆಕಾರು : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಪನೀರಿನ 11ನೇ ಮತ್ತು 13 ಅವಾರ್ಡ್ ನ್ನು ಸಂಪರ್ಕಿಸುವ ರಸ್ತೆಯು ಕಳೆದ 50 ವರ್ಷಗಳಿಂದಲೂ ಕಾಲುದಾರಿಯಾಗಿತ್ತು ಮತ್ತು ಕಾಲುವೆ ಮುಖಾಂತರ ಸಂಪರ್ಕ ಸಾಧಿಸುತ್ತಿತ್ತು. ಯಾವುದೇ ವಾಹನಗಳಿಂದ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಇದೀಗ ಜಮೀನಿನ ಮಾಲಕರು ಸಾರ್ವಜನಿಕ ಸುಗಮ ಸಂಚಾರಕ್ಕೆ ಜಾಗವನ್ನು ದಾನ ಮಾಡಿದ್ದು ಊರ ಜನರು ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ. ಇವಾಗ ದ್ವಿಚಕ್ರ ,ರಿಕ್ಷಾ,ಕಾರುಗಳು ಸಂಚರಿಸುತ್ತಿದ್ದು ಆದಷ್ಟು ಬೇಗ ಈ ರಸ್ತೆಗೆ ಸರ್ಕಾರದಿಂದ ಅನುದಾನ ಒದಗಿಸಿ ರಸ್ತೆ ಕಾಂಕ್ರಿಟೀಕರಣ ಮತ್ತು ಅಗಲೀಕರಣ ಮಾಡಿ ಈ ಊರಿನ ಬಹಳ ವರ್ಷಗಳ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಬೇಕಾಗಿ ಜನತೆಯ ಪರವಾಗಿ ಸಹಿಗಳನ್ನು ಸಂಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪನೀರ್ ಬ್ರಾಂಚ್ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯ್ತು. ನಿಯೋಗದಲ್ಲಿ ಬ್ರಾಂಚಿನ ಪ್ರಧಾನ ಕಾರ್ಯದರ್ಶಿ ಪಿ.ಎ ಅಬುಸಾಲಿ ಪನೀರ್, ಕೋಶಾಧಿಕಾರಿ ಇಕ್ಬಾಲ್ ಪನೀರ್, ಸಮೀರ್ ಪಿ.ಬಿ ,ಮನ್ಸೂರ್…

Read More

UN NETWORKS ತೊಕ್ಕೊಟ್ಟು: ಪೆಟ್ರೋಲ್, ಅನಿಲ ಬೆಲೆ ಸೇರಿದಂತೆ ದಿನಬಳಕೆ ವಸ್ತುಗಳಿಗೆ ದುಬಾರಿಯಾಗಿರುವ ಸಮಯದಲ್ಲಿ 1,000 ಬೀಡಿಗೆ 180 ರೂ. ನೀಡುವ ಮೂಲಕ ಬೀಡಿ ಕಾರ್ಮಿಕರಿಗೆ ಬದುಕಲು ಅಸಾಧ್ಯವಾಗದ ವಾತಾವರಣ ನಿರ್ಮಿಸಲಾಗಿದೆ ಎಂದು ಎಂದು ಎಐಟಿಯುಸಿ ಮುಖಂಡ ಶೇಖರ್ ಹೇಳಿದ್ದಾರೆ. ಸಿಐಟಿಯು, ಎಐಟಿಯುಸಿ, ಬಿಎಂಎಸ್, ಹೆಚ್ ಎಂಎಸ್ ಜಂಟಿಯಾಗಿ ಅ.23 ರಂದು ಕದ್ರಿ ಭಾರತ್ ಬೀಡಿ ವರ್ಕ್ಸ್ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹದ ಅ.11,12,13 ಜಿಲ್ಲೆಯಾದ್ಯಂತ ಕೈಗೊಂಡಿರುವ ಪ್ರಚಾರ ಜಾಥಾದ ತೊಕ್ಕೊಟ್ಟುವಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೀಡಿ ಸೂಪುಗಳಿಲ್ಲದ ಮನೆಯಿಲ್ಲ. ವಿದ್ಯಾಭ್ಯಾಸ, ಜೀವನ ಸಾಗಿಸಲು ಇದರಿಂದಲೇ ಸಾಧ್ಯವಾಗಿದೆ ಅನ್ನುವ ಅರಿವು ಮಕ್ಕಳಲ್ಲಿ ಮೂಡಬೇಕಾಗಿದೆ. ಈ ಮೂಲಕ ಅವರು ಮುಷ್ಕರ ಮತ್ತು ಧರಣಿ ಸತ್ಯಾಗ್ರಹದಲ್ಲಿ ಕೈಜೋಡಿಸಬೇಕಾಗಿದೆ. ಕಾರ್ಮಿಕರನ್ನು ದುಡಿಸಿದ ಮಾಲೀಕರು ಹಣ ಸಂಪಾದಿಸಿ, ಅದನ್ನು ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಐಷಾರಾಮಿಯಾಗಿ ಬಾಳುತ್ತಿದ್ದಾರೆ. ಆದರೆ ಕಾರ್ಮಿಕರ ಬವಣೆ ಕೇಳುವವರಿಲ್ಲ. ರಾಜ್ಯ ಸರಕಾರ ಕನಿಷ್ಟ ಕೂಲಿ ಕಾಯಿದೆ ಸೆಕ್ಷನ್ 5(1)(ಎ)…

Read More

UN NETWORKS ಉಳ್ಳಾಲ: ಚಂಡಾಮಾರುತ ಹಿನ್ನೆಲೆಯಲ್ಲಿ ಉಳ್ಳಾಲ, ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಎರಡನೇ ದಿನಕ್ಕೆ ಮುಂದುವರಿದಿದೆ. ಹಿಲೆರಿಯಾನಗರದಲ್ಲಿರುವ ಮೂರು ಮನೆಗಳು ಭಾಗಶ: ಸಮುದ್ರಪಾಲಾಗಿವೆ. 41 ಮನೆಗಳು ಅಪಾಯದಂಚಿನಲ್ಲಿ ಸಿಲುಕಿವೆ. ಅ.9 ರಂದು ಮಂಗಳವಾರ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿತ್ತು. ನಿನ್ನೆ ತಡರಾತ್ರಿಯೂ ಅಲೆಗಳು ಮುಂದುವರಿದು ಇಂದು ಮೂರು ಮನೆಗಳು ಭಾಗಶ: ಸಮುದ್ರಪಾಲಾಗಿವೆ. ಹಿಲೆರಿಯಾನಗರದ ಐಸಮ್ಮ, ಜಮೀಲಾ, ಅನ್ವರ್ ತಸ್ಲೀಂ ಎಂಬವರ ಮನೆಗಳು ಭಾಗಶ: ಸಮುದ್ರದ ಪಾಲಾಗಿದ್ದು, ಮನೆಯಲ್ಲಿ ವಾಸಿಸಲು ಅಸಾಧ್ಯವಾಗಿದೆ. ಇಂದು ರಾತ್ರಿಯೂ ಅಲೆಗಳು ಅಪ್ಪಳಿಸಿದರೆ ಸಂಪೂರ್ಣ ಸಮುದ್ರಪಾಲಾಗುವ ಭೀತಿಯಲ್ಲಿ ಮನೆಮಂದಿಯಿದ್ದಾರೆ. ಹಿಲೆರಿಯಾನಗರ, ಕೈಕೋ, ಇಂದಿರಾನಗರ, ಸುಭಾಷನಗರ ಭಾಗದಲ್ಲಿ ಸಮುದ್ರದ ಅಲೆಗಳು ಗುರುವಾರ ಮಧ್ಯಾಹ್ನದದವರೆಗೂ ಅಪ್ಪಳಿಸುತ್ತಾ ಜನರನ್ನು ಆತಂಕಗೊಳಿಸಿದೆ. ಈವರೆಗೂ ಇಷ್ಟು ಮುಂದೆ ಸಮುದ್ರ ಬಂದಿಲ್ಲ ಅನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಉಚ್ಚಿಲ ಪೆರಿಬೈಲು ಸಮೀಪವೂ ಅಲೆಗಳು ಮಧ್ಯಾಹ್ನ ವೇಳೆ ರಸ್ತೆಯನ್ನು ದಾಟಿ ಅಪ್ಪಳಿಸಿದರಿಂದಾಗಿ ರಸ್ತೆಯಿಡೀ ಮರಳಿನಿಂದ ಮುಚ್ಚಿಹೋಗಿದೆ. ಜನವಸತಿ ಪ್ರದೇಶದಲ್ಲಿ ಉಪ್ಪು ನೀರು ನಿಂತಿರುವುದರಿಂದ ಜನರಿಗೆ…

Read More

UN NETWORKS ತೊಕ್ಕೊಟ್ಟು: ಮಂಜನಾಡಿ ಅಲ್ ಮದೀನಾ ಶಾಲೆಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವಕ್ಫ್ ಸಚಿವ ಝಮೀರ್ ಅಹಮ್ಮದ್ ಖಾನ್ ಅವರು ಪ್ರತಿಭಟನಾ ಸಭೆ ಎದುರಿನಲ್ಲೇ ಮಂಗಳೂರಿಗೆ ವಾಪಸ್ಸಾದರು. ಈ ವೇಳೆ ಪ್ರತಿಭಟನಾಕಾರರಿಗೆ ಕಾರಿನ ಒಳಗಡೆಯಿಂದಲೇ ಕೈ ತೋರಿಸಿದ ಸಚಿವರ ನಡೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ ಶ್ಲಾಘಿಸಿದರು. ಸಚಿವ ಖಾದರ್ ಅವರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ನೋಡಿ ಸಚಿವ ಝಮೀರ್ ಅವರಿಗೆ ಖುಷಿಯಾಗಿದೆ. ಅದಕ್ಕಾಗಿ ಅವರು ಕಾರು ನಿಲ್ಲಿಸಿ ಬಿಜೆಪಿಯವರಿಗೆ ಅಭಿನಂದನೆ ಸಲ್ಲಿಸಿದರು ಎಂದು ಭಾಷಣದಲ್ಲಿ ತಿಳಿಸಿದರು.

Read More

UN NETWORKS ಉಳ್ಳಾಲ: ವಸತಿ ಮತ್ತು ನಗರಾಭಿವೃದ್ದಿ ಸಚಿವರಾದ ಯು.ಟಿ ಖಾದರ್‍ರವರು ಕಾಲು ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಶೀಘ್ರ ಗುಣಮುಖರಾಗಲು ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ದುಆ ಮಾಡಲಾಯಿತು. ಈ ಸಂದರ್ಭದಲ್ಲಿ ಖತೀಬರಾದ ಅಬ್ದುಲ್ ಅಝೀಝ್ ಬಾಖವಿ, ಮುದರ್ರಿಸ್ ಸ್ವಾದಿಕ್ ಸಖಾಫಿ, ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷರುಗಳಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಸದಸ್ಯರಾದ ಪಾರೂಕ್ ಉಳ್ಳಾಲ್, ಹಮೀದ್ ಕೋಡಿ, ಮಹ್ಮೂದ್ ಅಳೇಕಲ, ಅಬೂಬಕ್ಕರ್ ಅಲಿನಗರ, ಅರಬಿಕ್ ಟಸ್ಟ್ ಪ್ರಧಾನ ಕಾರ್ಯದರ್ಶಿ, ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ ಮತ್ತು ಶರೀಅತ್, ದರ್ಸ್, ದಅವಾ ಹಿಫ್ಲ್ ವಿದ್ಯಾರ್ಥಿಗಳು ಹಾಜರಿದ್ದರು.

Read More

UN NETWORKS ಪುತ್ತೂರು: ಇದು ಒಂದು ತಾಯಿಯ ಕರುಣಾಜನಕ ಕಥೆ. ಪುತ್ತೂರು ತಾಲೂಕಿನ ಐತೂರು ಗ್ರಾಮದ ಮೂಜೂರು ಎಂಬಲ್ಲಿ ವಾಸಿಸುತ್ತಿರುವ ದಿವಂಗತ ಮೊಹಮ್ಮದ್ ಕಾಸಿಂ ರವರ ಪತ್ನಿ ಉಮೈಬಾ ಅವರ ಪರಿಸ್ಥಿತಿ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಚಿಮ್ಮದಿರದು. ಕಳೆದ ಹತ್ತು ವರ್ಷಗಳಿಂದ ಗಂಡನನ್ನು ಕಳೆದುಕೊಂಡ ಉಮೈಬಾ ಕಷ್ಟದಿಂದ ಜೀವನ ಸಾಗಿಸುತ್ತಿರುವ ನಿರ್ಗತಿಕ ಕುಟುಂಬ. ಎರಡು ವರ್ಷದ ಹಿಂದೆ ತನ್ನ ಮನೆಯ ಹೊರಗೆ ಬಟ್ಟೆ ಒಣ ಹಾಕಲು ಮನೆಯ ಅಂಗಳಕ್ಕೆ ಹೋದಾಗ ಬಿದ್ದು ಗಾಯಗೊಂಡ ಉಮೈಬಾ ರವರ ಕಾಲು ಮುರಿದ ಪರಿಣಾಮವಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ಹಾಕಲಾಯಿತು. ತದನಂತರ ಮೂರು ಶಸ್ತ್ರ ಚಿಕಿತ್ಸೆಯೂ ನಡೆಯಿತು. ಸೊಂಟದ ಎಲುಬು ತೆಗೆದು ಕಾಲಿಗೆ ಇಡುವಂತೆ ವೈದ್ಯರು ತಿಳಿಸಿದಾಗ ಅದಕ್ಕೂ ಒಪ್ಪಿಕೊಂಡು ಚಿಕಿತ್ಸೆ ನಡೆಸಿದರು. ಆದರೆ ಯಾವುದೇ ಚಿಕಿತ್ಸೆಯಿಂದಲೂ ಫಲ ದೊರೆಯಲಿಲ್ಲ. ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನೆಯಲ್ಲೇ ಉಳಿದುಕೊಂಡ ಉಮೈಬಾ ಅವರಿಗೆ ಊರವರು ಸೇರಿ ಸಣ್ಣ ಮನೆಯೊಂದನ್ನು ಕಟ್ಟಿಸಿ, ಧನಸಹಾಯ ಕೂಡಾ ಮಾಡಿದರು. ಆದರೆ…

Read More

UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಇದರ ಸಂಸ್ಥಾಪಕರು, ರಾಜ್ಯಾಧ್ಯಕ್ಷರಾದ ಜನಾಬ್ ಟಿಪ್ಪು ಖಾಸೀಂ ಅಲಿಯವರು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರನ್ನು ನೇಮಕ ಮಾಡಿರುತ್ತಾರೆ. ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ನಾಯಕರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದು ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಜಿಲ್ಲೆಯ ಕೆಲವು ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಕೆಲಸ ಮಾಡುವ ವ್ಯಕ್ತಿಗಳನ್ನು ಕರೆದು ಸಭೆಯನ್ನು ನಡೆಸಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ಎಲ್ಲರ ಸಹಾಯದೊಂದಿಗೆ ರಚಿಸಿ ಜನರ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಶಾಫಿ ಯವರು ಜಿಲ್ಲಾ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪಾಣೇಲ, ಕೋಶಾಧಿಕಾರಿಯಾಗಿ ನಝೀರ್ ಸಾಮಣಿಗೆ, ಜಿಲ್ಲಾ ಸಂಚಾಲಕರಾಗಿ ಹನೀಫ್ ಮಲಾರ್, ಮಾದ್ಯಮ ಪ್ರತಿನಿಧಿಯಾಗಿ ಸೋಶಿಯಲ್ ಫಾರೂಕ್ ಉಳ್ಳಾಲ್, ಹಿರಿಯ ಉಪಾಧ್ಯಕ್ಷರಾಗಿ ವಿಷ್ಣುಮೂರ್ತಿ ಬಟ್ಟ್ ಕೊಟ್ಟಾರ, ಉಪಾಧ್ಯಕ್ಷರಾಗಿ S ಹಸನಬ್ಬ ಪರಂಗಿಪೇಟೆ ಮತ್ತು ಅಬ್ಬಾಸ್ ತಾಲೀಮ್ ಬೋಳಾರ್, ಕಾರ್ಯದರ್ಶಿಯಾಗಿ K.S ಅಬೂಬಕ್ಕರ್…

Read More

UN NETWORKS ತೊಕ್ಕೊಟ್ಟು: ಸ್ಮಾರ್ಟ್  ಸಿಟಿ ಯೋಜನೆಯ ಅನುದಾನದಲ್ಲಿ ರೂ. 15 ಕೋಟಿಯನ್ನು ಕುದ್ರೋಳಿ ಕಸಾಯಿಖಾನೆಗೆ ಅನುದಾನ ಇಟ್ಟ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ವಿರುದ್ಧ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ತೊಕ್ಕೊಟ್ಟು ಫ್ಲೈಓವರ್ ನಡಿ ಪ್ರತಿಭಟನೆ ನಡೆಯಿತು. ಈ ವೇಳೆ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ , ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್ ಕುಂಪಲ, ಚಂದ್ರಶೇಖರ್ ಉಚ್ಚಿಲ್, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ರಾಜೀವಿ ಕೆಂಪುಮಣ್ಣು, ಲಲಿತಾ ಸುಂದರ್, ಮೋಹನದಾಸ್ ಶೆಟ್ಟಿ ಕಿನ್ಯಾ, ಹರಿಯಪ್ಪ ಸಾಲ್ಯಾನ್, ಜಯಶ್ರೀ ಕರ್ಕೇರ, ಪ್ರಕಾಶ್ ಸಿಂಫೋನಿ, ತಾ.ಪಂ ಸದಸ್ಯ ರವಿಶಂಕರ್ ಸೋಮೇಶ್ವರ, ತಲಪಾಡಿ ಗ್ರಾ. ಪಂ ಅಧ್ಯಕ್ಷ ಸುರೇಶ್ ಆಳ್ವ, ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸೊಳ್ಳೆಂಜೀರು, ಮುನ್ನೂರು ಗ್ರಾ.ಪಂ ಅಧ್ಯಕ್ಷೆ…

Read More

UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಸ್ನಾತಕೋತ್ತರ ವಿಭಾಗಗಳ ಶೈಕ್ಷಣಿಕ ಪ್ರಗತಿ, ವಿವಿ ಆಡಳಿತ, ಕೇಂದ್ರೀಯ ಸೌಲಭ್ಯಗಳು, ವಿವಿಧ ಸಂಶೋಧನಾ ಕೇಂದ್ರಗಳು , ಅಧ್ಯಯನ ಪೀಠಗಳು ಸೇರಿದಂತೆ ಸಮಗ್ರ ಪರಿಶೀಲನೆಗೆ ತಜ್ಞರ ಸಮಿತಿ ಭೇಟಿ ನೀಡಿದೆ. ಸಮಿತಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ, ತೆಲಂಗಾಣ ನಲಗೊಂಡ ಎಂ.ಜಿ. ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎನ್. ರೆಡ್ಡಿ, ತಮಿಳುನಾಡಿನ ಭಾರತೀದಾಸನ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಸಿ. ತಂಗಮುತ್ತು ಅವರನ್ನೊಳಗೊಂಡ ಸಮಿತಿ ಅ. 9ರಿಂದ 11ರವರೆಗೆ ಪರಿಶೀಲನೆ ನಡೆಸಿದೆ. ಕುಲಸಚಿವ ಪ್ರೊ. ಎ.ಎಂ. ಖಾನ್ ಸ್ವಾಗತಿಸಿದರು. ವಿವಿಯ ನ್ಯಾಕ್ ಸಮಿತಿಯ ಸಂಯೋಜಕ ಪ್ರೊ.ಕೆ.ಆರ್. ಚಂದ್ರಶೇಖರ್ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ. ವಿ. ರವೀಂದ್ರಾಚಾರಿ ಉಪಸ್ಥಿತರಿದ್ದರು.

Read More

UN NETWORKS ಹರೇಕಳ  : ಹರೇಕಳ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಾದ 8ನೇ ತರಗತಿಯ ಕುಮಾರಿ ಹರ್ಷಿತಾ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ 200 ಮೀ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 10ನೇ ತರಗತಿಯ ಸ್ಟಿಪನ್ ಜೋಸ್ಟನ್ ಡಿ’ ಸೋಜ 400 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Read More