Author: UllalaVani

Kannada News From Coastal Karnataka

ಒಮಾನ್ : ಇಲ್ಲಿನ ಕರಾವಳಿಯಲ್ಲಿ ವ್ಯಾಪಾರಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಮೂವರು ಭಾರತೀಯರು ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಮಸ್ಕತ್ ಕರಾವಳಿಯಿಂದ 52 ನಾಟಿಕಲ್ ಮೈಲು ದೂರದಲ್ಲಿ ಮಾರ್ಷಲ್ ಐಲಂಡ್ಸ್ ಧ್ವಜವನ್ನು ಹೊತ್ತಿದ್ದ `ಎಂವಿ ಎಂಕೆಡಿ ವ್ಯೋಮ್’ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದೆ. ಈ ಘಟನೆಯಲ್ಲಿ ಮುಂಬೈ ಮೂಲದ ದೀಕ್ಷಿತ್ ಸೋಲಂಕಿ (25) ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನಾ ದಿನ ಹಾರ್ಮುಜ್ ಜಲಸಂಧಿಯಲ್ಲಿ `ಎಂವಿ ಸ್ಕೈಲೈಟ್’ ಹೆಸರಿನ ಇನ್ನೊಂದು ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಬಿಹಾರದ ಆಶಿಷ್ ಕುಮಾರ್ ಮತ್ತು ರಾಜಸ್ಥಾನದ ದುಲೀಪ್ ಸಿಂಗ್ ನಾಪತ್ತೆಯಾಗಿದ್ದರು. ತೀವ್ರ ಶೋಧ ಕಾರ್ಯಾಚರಣೆಯ ಬಳಿಕವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪರಿಗಣಿಸಲಾಗಿದೆ. ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ `ಎಂಕೆಡಿ ವ್ಯೋಮ್ ಹಡಗಿನಲ್ಲಿದ್ದ ಭಾರತೀಯ ಪ್ರಜೆಯ ದುರಂತ ಸಾವು’ ಎಂದು ದೃಢಪಡಿಸಿದೆ. ‘ಹಡಗಿನಲ್ಲಿರುವ ನಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಮತ್ತು ಬೇಗನೆ ವಾಪಸ್…

Read More

ಉಳ್ಳಾಲ: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ನಡೆಸಿದ 2025- 26ನೇ ಸಾಲಿನ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷಯಲ್ಲಿ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತುಲ್ ಇಸ್ಲಾಂ ಆಲಡ್ಕ ಮತ್ತು ತೋಕರಬೆಟ್ಟು ಮದ್ರಸವು ಶೇ.100 ಫಲಿತಾಂಶ ದಾಖಲಿಸಿದೆ. ಆಲಡ್ಕ ಮದ್ರಸದ 5ನೇ ತರಗತಿಯ ಎಂಟು ವಿದ್ಯಾರ್ಥಿಗಳು, 7ನೇ ತರಗತಿಯ ಐವರು ವಿದ್ಯಾರ್ಥಿಗಳು ಮತ್ತು 10ನೇ ತರಗತಿಯ ಏಳು ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತೀರ್ಣರಾಗಿರುತ್ತಾರೆ. 10ನೇ ತರಗತಿಯಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿರುತ್ತಾರೆ. ತೋಕರಬೆಟ್ಟು ಮದ್ರಸದ 12ನೇ ತರಗತಿಯಲ್ಲಿ ಒಬ್ಬರು ವಿದ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾಳೆ ಎಂದು ಮಸೀದಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಾಳೆಪುಣಿ; ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿ ಅದೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಬದ್ರಿಯತುಲ್ ತಿಬಿಯಾನ್ ಪ್ರೀ ಸ್ಕೂಲ್ 2026 – 27ನೇ ಸಾಲಿನ ದಾಖಲಾತಿ ಆರಂಭಗೊoಡಿದೆ. ಇದೇ ಮಾರ್ಚ್ ತಿಂಗಳ ಕೊನೆಗೆ ದಾಖಲಾತಿ ಪೂರ್ಣಗೊಳ್ಳಲಿದೆ. ಸೀಮಿತ ಅವಕಾಶವಿರುವುದರಿಂದ ಆದಷ್ಟು ಬೇಗ ಸೀಟ್ ಕಾಯ್ದಿರಿಸುವಂತೆ ಪ್ರಕಟನೆಯಲ್ಲಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ. ದಾಖಲಾತಿಗೆ ಬೇಕಾದ ದಾಖಲೆಗಳು ಮಗುವಿನ ಜನನ ಸರ್ಟಿಫಿಕೇಟ್ಮಗುವಿನ ಆಧಾರ್ ಕಾರ್ಡ್ಮಗುವಿನ 3 ಫೋಟೊ ಹೆಚ್ಚಿನ ವಿವರಣೆಗೆ ಸಂಪರ್ಕಿಸಿ:8494818321 /9845130193 ಅಥವಾ 9008220110

Read More

ಪುತ್ತೂರು, ಮಾ. 05;  ಬಜತ್ತೂರು ಗ್ರಾಮದ ಮಾಣಿಕ್ಕಳದಲ್ಲಿ ಅಕ್ರಮ ಕೋಳಿ ಅಂಕದ ಮೇಲೆ ಉಪ್ಪಿನಂಗಡಿ ಪೊಲೀಸರು ಮಂಗಳವಾರ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು ಐದು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಕೊಯಿಲ ಗ್ರಾಮದ ಸಬಲೂರು ನಿವಾಸಿ ಸತೀಶ್ (38) ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಮುರಳಿ (30), ಮತ್ತು ವಳಲು ಕುಡತ್ತಡ್ಕ ನಿವಾಸಿ ಮೋನಪ್ಪ ಕೆ (36) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುತೇಶ್ ಕೆ.ಪಿ ಮತ್ತು ಅವರ ತಂಡ ಮಾಣಿಕ್ಕಳ ಬಳಿ ಗಸ್ತು ತಿರುಗುತ್ತಿದ್ದಾಗ ಈ ಕಾರ್ಯಾಚರಣೆ ನಡೆಸಲಾಗಿದೆ. ಕೋಳಿಗಳ ವಿಶಿಷ್ಟ ಶಬ್ದ ಕೇಳಿದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ನೋಡಿದಾಗ ರಸ್ತೆಬದಿಯಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವುದು ಕಂಡುಬಂದಿದೆ.ಪೊಲೀಸರು ದಾಳಿ ನಡೆಸಲು ಮುಂದಾಗುತ್ತಿದ್ದಂತೆ, ಸ್ಥಳದಲ್ಲಿ ಜಮಾಯಿಸಿದ್ದ ದೊಡ್ಡ ಜನಸಮೂಹ ಪರಾರಿಯಾಗಿದ್ದಾರೆ. ಅಧಿಕಾರಿಗಳು ಮೂವರು ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಂಕಕ್ಕೆ ಬಳಸಿದ ಐದು ಕೋಳಿಗಳು, ಎರಡು ಸೆಟ್ ಹರಿತವಾದ ಬ್ಲೇಡ್‌ಗಳು (ಬಾಲು) ಮತ್ತು ಬೆಟ್ಟಿಂಗ್‌ಗೆ ಬಳಸಿದ…

Read More

ಮಂಗಳೂರು: ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಆಕ್ಷೇಪಣೆ ಸಲ್ಲಿಕೆ ಹಾಗೂ ಪ್ರತಿಭಟನೆ ಮಂಗಳೂರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ನಡೆಯಿತು. ದ.ಕ.ಜಿಲ್ಲೆಯಲ್ಲಿ ನೊಂದಾವಣೆಗೊAಡ ಯೂನಿಯನ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರತ್ಯೇಕ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದರು. ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿರುವ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್‌ರವರು, ಕಾರ್ಪೊರೇಟ್‌ಗಳ ಹಿತಾಸಕ್ತಿಗಳನ್ನು ಕಾಪಾಡಲು ಉತ್ಸುಕರಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲ. ಬದಲಾಗಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಮಿಕ ವರ್ಗದ ಬದುಕನ್ನು ಸಂಕಷ್ಟಗೊಳಪಡಿಸಿದೆ. ಇಂತಹ ಅಪಾಯಕಾರಿ ಸಂಹಿತೆಗಳನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಸರಕಾರವೂ ಕೂಡ ಮುಂದಡಿ ಇಟ್ಟಿರುವುದು ಕಾರ್ಮಿಕ ವರ್ಗವನ್ನು ಶೋಷಣೆ ಮಾಡುವುದರಲ್ಲಿ ತಾನೇನು ಕಮ್ಮಿ ಇಲ್ಲ…

Read More

ಮಂಗಳೂರು ನಗರದ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆಯಿಷತ್ ಲುತ್‌ಫಾ ನಜಾ ಕೆ.ಎ. ರವರು ಬಿ.ಎಸ್‌.ಸಿ. ಪದವಿ ಕೋರ್ಸ್ ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಇವರು ಒಟ್ಟು 4550 ಅಂಕಗಳಲ್ಲಿ 4220 ಅಂಕಗಳನ್ನು ಪಡೆದು ಶೇಕಡ 92.75 ಸಾಧನೆ ಮಾಡಿದ್ದು, 9.56 ಸಿಜಿಪಿಎ (CGPA) ಗಳಿಸುವ ಮೂಲಕ ತಮ್ಮ ಉತ್ತಮ ಶೈಕ್ಷಣಿಕ ಮಟ್ಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಕುಮಾರಿ ಆಯಿಷತ್ ಲುತ್‌ಫಾ ನಜಾ ಕೆ.ಎ. ಅವರ ಈ ವಿಶಿಷ್ಟ ಸಾಧನೆಗಾಗಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ . ಇವರ ಈ ಅತ್ಯುತ್ತಮ ಸಾಧನೆಯಿಂದ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕುಮಾರಿ ಲುತ್‌ಫಾ ಅವರು ಕಾಸರಗೋಡು ಜಿಲ್ಲೆಯ ತೆಕ್ಕಿಲ್ ನಿವಾಸಿಗಳಾದ ಅಬ್ದುಲ್ಲ ಕೆ ಮತ್ತು ಆಯಿಶತ್ ಫರೀದಾ ಅವರ ಪುತ್ರಿ. ಅವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿಯಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಈ…

Read More

ಮಂಗಳೂರು: ಮಕ್ಕಳಿಗೆ ಪವಿತ್ರ ಬೈಬಲ್‌ನ ಶುಭಸಂದೇಶವನ್ನು ಆಕರ್ಷಕವಾಗಿ ತಲುಪಿಸುವ ನಿಟ್ಟಿನಲ್ಲಿ, “ಲೆಂಟನ್ ಗಾಸ್ಪೆಲ್ ಕಾಮಿಕ್ಸ್” ಎಂಬ ವಿಶಿಷ್ಟ ಪುಸ್ತಕವನ್ನು ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ವಿಭೂತಿ ಮರುದಿನವೇ ಈ ಕಾರ್ಯಕ್ರಮ ನಡೆದಿದ್ದು, ಇದು ಚಾತುರ್ಮಾಸದ ಆರಂಭವನ್ನು ಸ್ಮರಿಸಿತು. ಸರಳ ನಿರೂಪಣೆ ಮತ್ತು ಸೃಜನಶೀಲ ಚಿತ್ರಣಗಳ ಮೂಲಕ ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ಸಂತೋಷದಿಂದ ದೇವರ ವಾಕ್ಯವನ್ನು ಓದುವಂತೆ ಈ ಪುಸ್ತಕವನ್ನು ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪುಣ್ಯಕ್ಷೇತ್ರದ ನಿರ್ದೇಶಕರಾದ ವಂ| ಸ್ಟೀಫನ್ ಪೆರೇರಾ ಅವರು, ನವೀನ ಮತ್ತು ಮಕ್ಕಳಿಗೆ ಹತ್ತಿರವಾಗುವ ವಿಧಾನಗಳ ಮೂಲಕ ಅವರಲ್ಲಿ ನಂಬಿಕೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಈ ಪುಸ್ತಕವು ಮಕ್ಕಳು ಯೇಸುವಿನ ಹಾದಿಯಲ್ಲಿ ಸಾಗಲು ಮತ್ತು ಈಸ್ಟರ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಪುಸ್ತಕದ ಲೇಖಕರು ಹಾಗೂ ಧ್ಯಾನ ಸಾಧನ ಕೇಂದ್ರದ ನಿರ್ದೇಶಕರಾದ ವಂ| ರಿಚರ್ಡ್ ಮಿನೇಜಸ್ ಅವರು ಪರಿಕಲ್ಪನೆಯ ಬಗ್ಗೆ ವಿವರಿಸುತ್ತಾ, ಪ್ರತಿದಿನದ ಶುಭಸಂದೇಶವನ್ನು…

Read More

ಬೆಂಗಳೂರು, ಮಾ. 04: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಧಾರಿಗಳಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಅರ್ಹ ಕುಟುಂಬಗಳಿಗೆ ಮಾತ್ರ ರೇಷನ್ ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳು ತಲುಪುವಂತೆ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯಾಚರಣೆ ನಡೆಸಲಾಗಿದೆ. ಕೇಂದ್ರ ಸರ್ಕಾರವು 13 ಲಕ್ಷ ಕಾರ್ಡ್‌ಗಳ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಿದ್ದರೆ, ರಾಜ್ಯ ಸರ್ಕಾರ 8 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲು ಪ್ರತ್ಯೇಕ ಪಟ್ಟಿ ಮಾಡಿತ್ತು. ಇದೀಗ ಆಹಾರ ಇಲಾಖೆಯ ಮಾಹಿತಿ ಪ್ರಕಾರ, ಕಳೆದ ಎಂಟು ತಿಂಗಳಿನಲ್ಲಿ ಒಟ್ಟು 20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂಬ ಅಚ್ಚರಿ ಮಾಹಿತಿಯು ಬೆಳಕಿಗೆ ಬಂದಿದೆ.ಇದರೊಂದಿಗೆ 14.5 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ. ಅರ್ಹತೆ ಇಲ್ಲದ ಕುಟುಂಬಗಳನ್ನು ಗುರುತಿಸಿ ಪಟ್ಟಿ ಹೊರಗಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.ರದ್ದಾದ ಕಾರ್ಡ್‌ಗಳಲ್ಲಿ 9,826 ಕಾರ್ಡ್‌ಗಳು ಅಮಾನತು ಆಗಿದ್ದರೆ, 34,617 ಕಾರ್ಡ್‌ಗಳು ನೇರವಾಗಿ ರದ್ದುಪಡಿಸಲಾಗಿದೆ. ಮರು ಪರಿಶೀಲನೆ ಪ್ರಕ್ರಿಯೆಯಲ್ಲಿಯೂ ಸುಮಾರು 4…

Read More

ಮಂಗಳೂರು – ಮಂಗಳೂರಿನ ‘ಸುಶೆಗ್ ಜಿವಿತ್’ ಡಿಮೆನ್ಶಿಯಾ ಆರೈಕೆ ಕೇಂದ್ರಕ್ಕೆ ನೆರವು ನೀಡುವ ಉದ್ದೇಶದಿಂದ, ಮಂಗಳೂರಿನ ‘ಸಿಲ್ವರ್ ಸರ್ಕಲ್’ ಎಂಬ ಹಿರಿಯ ಸ್ವಯಂಸೇವಕರ ತಂಡವು ಸಂಗೀತದ ಚಿಕಿತ್ಸಕ ಶಕ್ತಿಯನ್ನು ಆಧರಿಸಿದ ವಿಶೇಷ ನಿಧಿ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ಸಂಗೀತವು ಸ್ಮರಣಶಕ್ತಿಯ ಮೇಲೆ ಬೀರಬಲ್ಲ ಆಳವಾದ ಪ್ರಭಾವವನ್ನು ಗುರುತಿಸಿರುವ ಈ ತಂಡವು, ಡಿಮೆನ್ಶಿಯಾದಿಂದ ಬಳಲುತ್ತಿರುವವರಿಗಾಗಿ “ಮ್ಯೂಸಿಕ್ ಅಂಡ್ ಮೆಮೊರಿ” ಎಂಬ ವೈಯಕ್ತಿಕ ಸಂಗೀತ ಕಾರ್ಯಕ್ರಮವನ್ನು ರೂಪಿಸಿದೆ. ಸರೆಗಮ ಪ್ಲೇಯರ್‌ಗಳ ಮೂಲಕ ಪರಿಚಿತ ಕೊಂಕಣಿ, ಕನ್ನಡ ಮತ್ತು ತುಳು ಹಾಡುಗಳನ್ನು ಕೇಳಿಸುವ ಈ ಯೋಜನೆಯು, ನೆನಪಿನ ಶಕ್ತಿಯ ಸಮಸ್ಯೆಯನ್ನು ಎದುರಿಸುತ್ತಿರುವ ಹಿರಿಯರಲ್ಲಿ ಭಾವನಾತ್ಮಕ ನೆಮ್ಮದಿಯನ್ನು ತರುವ ಗುರಿಯನ್ನು ಹೊಂದಿದೆ. ಈ “ಮ್ಯೂಸಿಕ್ ಆಸ್ ಮೆಡಿಸಿನ್” (ಸಂಗೀತವೇ ಔಷಧಿ) ಉಪಕ್ರಮವು ಹಿರಿಯರ ಆರೈಕೆಯಲ್ಲಿ ಒಂದು ಮಾನವೀಯ ಹೆಜ್ಜೆಯಾಗಿದ್ದು, ಪ್ರಾದೇಶಿಕ ಸಂಗೀತದ ಮೂಲಕ ಅವರ ಜೀವನದಲ್ಲಿ ಸಂತೋಷ ತುಂಬುವ ಪ್ರಯತ್ನವಾಗಿದೆ.‘ಸುಶೆಗ್ ಜಿವಿತ್’ ಕೇಂದ್ರವು ನೀಡುತ್ತಿರುವ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಅಗತ್ಯವಿರುವ ನಿಧಿಯನ್ನು ಸಂಗ್ರಹಿಸಲು, ಅಂತರಾಷ್ಟ್ರೀಯ…

Read More

ಮಂಗಳೂರು: ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜಿನ ಇ.ಎನ್.ಟಿ (ENT) ವಿಭಾಗದ ಪ್ರಾಧ್ಯಾಪಕರಾದ ಡಾ. ದೇವನ್ ಅವರು ಇತ್ತೀಚೆಗೆ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಅತ್ಯಂತ ಪ್ರತಿಷ್ಠಿತ ‘ಟೆಡ್ ಎಕ್ಸ್ ಸೇಂಟ್ ಅಲೋಶಿಯಸ್’ (TEDxStAloysius) ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು, ತಾವು ಎದುರಿಸುತ್ತಿದ್ದ ಮಧುಮೇಹ (Diabetes), ರಕ್ತದೊತ್ತಡ (Hypertension) ಮತ್ತು ಬೊಜ್ಜಿನ (Obesity) ಸಮಸ್ಯೆಯನ್ನು ಸ್ವತಃ ಹೇಗೆ ಗುಣಪಡಿಸಿಕೊಂಡರು ಎಂಬ ತಮ್ಮ ಮಹತ್ವದ ಸಂಶೋಧನಾತ್ಮಕ ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Read More