Author: UllalaVani

Kannada News From Coastal Karnataka

ಉಳ್ಳಾಲ: ಕೋಟೆಕಾರ್ ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಮಾರ್ಚ್ 12 ಗುರುವಾರ ರಾತ್ರಿ ತರಾವೀಹ್ ನಮಾಝ್ ಬಳಿಕ ಧ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್ ಕೆ,ಪಿ ಹುಸ್ಸೈನ್ ಸಅದಿ ಕೆ ಸಿ ರೋಡ್ ಅವರ ನೇತೃತ್ವದಲ್ಲಿ ಜರಗಲಿದ್ದು ಮುನೀರ್ ಸಖಾಫಿ ಅಲ್ ಫುರ್ಖಾನಿ ಉಪಸ್ಥಿತರಿರುವರು ಎಂದು ಮಸೀದಿ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ,

Read More

ಉಳ್ಳಾಲ: ಭಾರತದಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಕೆಲವು ನರವಿಜ್ಞಾನ ರೋಗಗಳು ಇಂದಿನ ದಿನಗಳಲ್ಲಿ ಯುವಕರಲ್ಲಿಯೂ ಕಂಡುಬರುತ್ತಿವೆ. ಎಲ್ಲ ವಯೋಮಾನದವರಲ್ಲೂ ಈ ರೋಗಗಳ ಪರಿಣಾಮ ಕಾಣಿಸುತ್ತಿದ್ದು, ಜನ್ಯ ಕಾರಣಗಳು ಸಹಿತ ಬೇರೆ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ರೋಗದ ಸ್ವರೂಪವನ್ನು ಬದಲಿಸುವ ಚಿಕಿತ್ಸೆಯ ಕುರಿತು ಸಂಶೋಧನೆಗಳು ನಿರಂತರವಾಗಿದೆ ಎಂದು ಕೇರಳದ ಏಸ್ಟರ್‌ ಕ್ಲಸ್ಟರ್‌ ಇದರ ಪಾರ್ಕಿನ್ಸನ್ಸ್‌ ಆಂಡ್‌ ಮೂವ್‌ ಮೆಂಟ್‌ ಡಿಸಾರ್ಡರ್ಸ್‌ ಸೆಂಟರ್‌ ನಿರ್ದೇಶಕಿ ಡಾ. ಆಶಾ ಕಿಶೋರ್ ಅಭಿಪ್ರಾಯಪಟ್ಟರು. ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ಗೆ ಸೇರಿದ ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರವನ್ನು ದೇರಳಕಟ್ಟೆ ಎ.ಬಿ ಶೆಟ್ಟಿ ಮಹಾವಿದ್ಯಾಲಯದ ಆವಿಷ್ಕಾರ್‌ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನರವಿಜ್ಞಾನ ರೋಗಗಳನ್ನು ಗುರುತಿಸಲು ಈಗ ಕ್ಲಿನಿಕಲ್ ಪರೀಕ್ಷೆಗಳ ಜೊತೆಗೆ ಸಿ.ಟಿ. ಸ್ಕ್ಯಾನ್, ಬಯೋಗ್ರಾಂ ಸೇರಿದಂತೆ ಹಲವು ಆಧುನಿಕ ವಿಧಾನಗಳನ್ನು ಬಳಸಲಾಗುತ್ತಿದೆ. ಕೇವಲ ಸ್ಟಿರಾಯ್ಡ್ ಚಿಕಿತ್ಸೆಗಿಂತ ಮುಂದಾಗಿ ಹಲವು ಹೊಸ ಚಿಕಿತ್ಸೆ ವಿಧಾನಗಳು ಅಭಿವೃದ್ಧಿಯಾಗಿವೆ. ಇಂತಹ…

Read More

ತೊಕ್ಕೊಟ್ಟು: ಒಳಪೇಟೆಯ ಸುವರ್ಣ ಸಂಕೀರ್ಣದಲ್ಲಿರುವ ಅನ್ವಿತ್ ಎಲೆಕ್ಟ್ರಾನಿಕ್ಸ್ ತನ್ನ ಹಳೆಯ ಮಳಿಗೆಯನ್ನು ನವೀಕೃತ ವಿನ್ಯಾಸದೊಂದಿಗೆ ಗೃಹೋಪಯೋಗಿ ವಸ್ತುಗಳು, ಫರ್ನಿಚರ್ ಹಾಗೂ ಅಡಿಗೆಮನೆ ಉಪಕರಣಗಳೊಂದಿಗೆ ಪುನಃ ಶುಭಾರಂಭಗೊಳಿಸಲಾಯಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಉಡುಪಿ–ಚಿಕ್ಕಮಗಳೂರು ಸಂಸದ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನ್ವಿತ್ ಎಲೆಕ್ಟ್ರಾನಿಕ್ಸ್ ವಿಭಾಗವನ್ನು ಉದ್ಘಾಟಿಸಿದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅನ್ವಿತ್ ಫರ್ನಿಚರ್ ವಿಭಾಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಸಮಾಜಕ್ಕೆ ಸಮರ್ಪಣೆಯ ಮನೋಭಾವದಿಂದ ಉದ್ಯಮ ನಡೆಸಬೇಕು ಎಂದು ಹೇಳಿದರು. ಸುಮಾರು ಆರು ಅರೆ ಕೋಟಿ ಜನಸಂಖ್ಯೆ ಇರುವ ನಮ್ಮ ರಾಜ್ಯದಲ್ಲಿ ಕೇವಲ ಎರಡು ಶೇಕಡಾ ಮಂದಿ ಮಾತ್ರ ಉದ್ಯೋಗದಲ್ಲಿದ್ದು, ಉಳಿದ ತೊಂಬತ್ತೆಂಟು ಶೇಕಡಾ ಜನರು ಸ್ವಂತ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಉದ್ಯಮಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತವೆ ಎಂದು ಅವರು…

Read More

ಉಳ್ಳಾಲ: ಬೆಂಗಳೂರಿನ ಕಟ್ಟಡವೊಂದರಲ್ಲಿ ಎ.ಸಿ ಫಿಟಿಂಗ್ ಕಾರ್ಯನಿರ್ವಹಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆಬಿದ್ದು ಗಂಭೀರ ಗಾಯಗೊಂಡಿದ್ದ ತಲಪಾಡಿ ನಿವಾಸಿ 32ರ ಹರೆಯದ ಹರ್ಷಿತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಲಪಾಡಿ ನಿವಾಸಿ ವಿಶ್ವನಾಥ್ – ಮೀನಾಕ್ಷಿ ದಂಪತಿ ಪುತ್ರರಾದ ಹರ್ಷಿತ್ ವಿದೇಶದಲ್ಲಿ ಶಿಪಿಂಗ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳಿಗೊಮ್ಮೆ ರಜೆಯಲ್ಲಿ ಊರಿಗೆ ಬಂದಾಗಲೂ ಹಿಂದಿನ ಎಸಿ ಮೆಕ್ಯಾನಿಕ್ ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಅವರು ಸಂಬAಧಿಗೆ ಎಸಿ ಮೆಕ್ಯಾನಿಕ್ ತರಬೇತಿ ನೀಡುವ ಸಲುವಾಗಿ ಮಾ.4 ರಂದು ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬಹುಮಹಡಿ ಕಟ್ಟಡದಲ್ಲಿ ಫಿಟಿಂಗ್ ನಡೆಸುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎರಡು ದಿನಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಾ.7 ರಂದು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆತರಲಾಗಿತ್ತು. ಆದರೆ ದಾರಿಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತಲಪಾಡಿ ಭಾಗದಲ್ಲಿ ಹಲವು…

Read More

ಉಳ್ಳಾಲ: ಆಶ್ರಮದ ಹಿರಿಯರ ಜೊತೆಗೆ ಟೈಲರ್ಸ್‌ ವೃತ್ತಿಬಾಂಧವರು ಒಂದು ದಿನವನ್ನು ಕಳೆಯುವುದರಿಂದ ಅವರಲ್ಲಿರುವ ಅನಾಥ ಭಾವನೆ ದೂರವಾಗುತ್ತದೆ. ಸಂಘಟನೆಯ ಹಿರಿಯ ಸದಸ್ಯರಿಗೂ ಟೈಲರ್ಸ್‌ ಅಸೋಸಿಯೇಷನ್‌ ಸದಾ ಸಹಕಾರವನ್ನು ನೀಡುತ್ತಾ ಬರುತ್ತಿದೆ ಎಂದು ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್ನಿನ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್‌ ಬಜಾಲ್‌ ಹೇಳಿದ್ದಾರೆ. ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಷನ್‌ ಮಂಗಳಾದೇವಿ ವಲಯದ ವತಿಯಿಂದ ಟೈಲರ್ಸ್ ಡೇ ದಿನವನ್ನು ಬೆಲ್ಮ ಪೆಲತ್ತಡಿಯ ಸೇವಾಭಾವ ಚಾರಿಟೇಬಲ್‌ ಟ್ರಸ್ಟ್‌ ಅಧೀನದ ಸೇವಾಶ್ರಮದ ಹಿರಿಯರೊಂದಿಗೆ ಸೇರಿಕೊಂಡು ಆಚರಿಸಿದ ಸಂದರ್ಭ ಮಾತನಾಡಿದರು. ಮಂಗಳಾದೇವಿ ವಲಯ ಟೈಲರ್ಸ್‌ ಅಸೋಸಿಯೇಷನ್‌ 2೦೦೦ ರಲ್ಲಿ ಸ್ಥಾಪನೆಯಾಗಿತ್ತು. ಪ್ರತೀ ವರ್ಷದಲ್ಲಿಯೂ ನಿರಂತರ ಸಾಮಾಜಿಕ ಚಟುವಟಿಕೆಗಳು ನಡೆಸುತ್ತಾ ಬರಲಾಗಿದೆ. ಟೈಲರ್‌ ವೃತ್ತಿ ಬಾಂಧವರಲ್ಲಿ ಹಿರಿಯರಿಗೆ ಸಹಾಯಧನ ನೀಡಲಾಗುತ್ತಿದೆ. ಆಟೋಟ ಸ್ಪರ್ಧೆ, ಮಕ್ಕಳಿಗೆ ಸ್ಕಾಲರ್‌ ಶಿಪ್‌ ಕಾರ್ಯಕ್ರಮ , ಆರೋಗ್ಯ ಶಿಬಿರ, ವೃತ್ತಿ ಬಾಂಧವರಲ್ಲಿ ಕಣ್ಣಿನ ದೋಷ ಹೆಚ್ಚಾಗಿರುವುದರಿಂದ ಕಣ್ಣಿನ ಶಿಬಿರವನ್ನು ನಿರಂತರವಾಗಿ ವಲಯ ಸಂಘ ಆಯೋಜಿಸಿದೆ ಎಂದರು. ಆಶ್ರಮದ ಮೇಲ್ವಿಚಾರಕ ಜಿ.ಆರ್‌ ಶೆಟ್ಟಿ ಮಾತನಾಡಿ,…

Read More

ಉಳ್ಳಾಲವಾಣಿ ವಾರ್ತೆಮಂಗಳೂರು: ಇಡೀ ರಾಜ್ಯವನ್ನೇ ಗೊಂದಲಕಾರಿಯನ್ನಾಗಿಸಿದ ಜಿಲ್ಲೆಯ ಸೌಜನ್ಯಾ ಹತ್ಯೆ ಪ್ರಕರಣ, ತನ್ನ ಎರಡೂ ಮಕ್ಕಳನ್ನು, ಕಾಲುಗಳನ್ನು ಕಳೆದುಕೊಂಡು, ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಮಂಜನಾಡಿಯ ಅಶ್ವಿನಿ ಪ್ರಕರಣ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ಕಾಣದಾಯಿತೇ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಎಬ್ಬಿದೆ. ಎರಡು ಪ್ರಕರಣಗಳು ರಾಜಕೀಯ ಪಕ್ಷಗಳ ಒತ್ತಡಕ್ಕೆ ಬಲಿಯಾಯಿತೇ ಅನ್ನುವ ಪ್ರಶ್ನೆಯೂ ಸದ್ಯ ಜಿಲ್ಲೆಯಾದ್ಯಂತ ಮನೆಮಾಡಿದೆ.ಈ ರೀತಿಯ ಗಂಭೀರ ಮತ್ತು ಮಾನವೀಯತೆಗೂ ಸಂಬಂಧಿಸಿದ ಪ್ರಕರಣಗಳು ರಾಜ್ಯ ಮಹಿಳಾ ಆಯೋಗದ ಗಮನಕ್ಕೆ ಬಂದಿಲ್ಲವೇ? ಅಥವಾ ಬಂದಿದ್ದರೂ ಸೂಕ್ತ ಕ್ರಮಗಳು ಕೈಗೊಳ್ಳಲಾಗಿಲ್ಲವೇ? ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ಡಾ. ನಾಗಲಕ್ಷ್ಮೀ ಚೌಧರಿ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಈ ಪ್ರಕರಣಗಳ ಕುರಿತು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಸಾರ್ವಜನಿಕರಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.…

Read More

ಉಳ್ಳಾಲ: ಸಮನ್ವಯ ಎಂಬುದು ಯಶಸ್ಸಿನ ಪ್ರಮುಖ ಆಧಾರವಾಗಿದ್ದು, ಒಬ್ಬ ವ್ಯಕ್ತಿಯ ದೃಷ್ಟಿಕೋನ ಮತ್ತು ಕನಸು ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ಎಂದು ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ಜನರಲ್ ಎವ್ಲಿನ್ ಪಿ. ಕಣ್ಣನ್ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ವ್ಯಾಪ್ತಿಯ ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಇದರ “ಸಮನ್ವಯ 2K26” ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ನರ್ಸ್‌ಗಳು ಸಮಾಜದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದು ಮಾನವೀಯತೆಯ ಸಂಕೇತವಾಗಿದ್ದಾರೆ.ನರ್ಸ್‌ಗಳು ತಮ್ಮ ವೃತ್ತಿಯಲ್ಲಿ ಸದಾ ಪ್ರಾಮಾಣಿಕತೆ, ನಿಷ್ಠೆ ಮತ್ತು ವಿಶ್ವಾಸವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಬಹಳ ಅಗತ್ಯವಾಗಿದ್ದು, ನರ್ಸ್‌ಗಳು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅತ್ಯಂತ ಮುಖ್ಯ. 1908ರಲ್ಲಿ ಕೇವಲ 9 ಯುರೋಪಿಯನ್ ನರ್ಸ್‌ಗಳು ಸೇರಿ ಟ್ರೇಂಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ (TNAI) ಸ್ಥಾಪಿಸಿದ್ದು, ಅವರ ದೃಷ್ಟಿಕೋನ ಮತ್ತು ಸೇವಾ ಮನೋಭಾವದಿಂದ ಇಂದು ಭಾರತದಲ್ಲಿ ನರ್ಸಿಂಗ್ ಕ್ಷೇತ್ರವು ದೊಡ್ಡ…

Read More

ಉಳ್ಳಾಲ; ಇಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! ಹತ್ತಿಪ್ಪತ್ತು ಜನ ನಾಗರಿಕರು ಸೇರಿ ತಮಗೆ ಇರುವ ಆತಂಕ ತೋಡಿಕೊಂಡರೆ ಈ ಮಟ್ಟಿಗೆ ಪೊಲೀಸ್ ಬಲವನ್ನು ಪ್ರದರ್ಶಿಸಿ ಭಯ ಹುಟ್ಟಿಸುವ ಅಗತ್ಯ ಉಂಟೆ? ಉಳ್ಳಾಲದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇದರ ವೆಟ್ ವೆಲ್ ಅತ್ಯಂತ ದಟ್ಟ ಜನವಸತಿಯ ನಡುವೆ ಸಮ್ಮರ್ ಸ್ಯಾಂಡ್ ಬೀಚ್ ಸಮೀಪ ನಿರ್ಮಿಸಲಾಗುತ್ತಿದೆ. ಕೋಟೆಪುರದಲ್ಲಿ ಜನವಸತಿ ನಡುವೆ ಪ್ರಧಾನ ಶುದ್ದೀಕರಣ ಘಟಕವನ್ನು ಸಿಆರ್‌ಝಡ್ ಮತ್ತಿತರ ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಅದೂ ಸಹ ದಶಕದಷ್ಟು ಹಳೆಯ ಡಿಸೈನ್ ಅಡಿ ಅವೈಜ್ಞಾನಿಕವಾಗಿ, ಕಳಪೆಯಾಗಿ ನಿರ್ಮಾಣಗೊಳ್ಳುತ್ತಿದೆ. ಕಾರ್ಯಾಚರಣೆ ಆರಂಭಗೊಳ್ಳುವಾಗ ಸುರತ್ಕಲ್‌ನಲ್ಲಿ ನಡೆದಂತೆ ಅನಾಹುತಗಳು ಗ್ಯಾರಂಟಿ. ಸುತ್ತಲ ಜನತೆಗೆ ಈ ಕುರಿತಾಗಿ ದೊಡ್ಡ ಮಟ್ಟದ ಆತಂಕ ಇದೆ. ಆದರೆ, ಇವರ ಧ್ವನಿಯನ್ನು ಬಲವಂತವಾಗಿ ಹತ್ತಿಕ್ಕಲಾಗಿದೆ. ಸಣ್ಣಗೆ ಆಕ್ಷೇಪ ಎತ್ತಿದರೂ ಪೊಲೀಸರು ದಂಡು ದಂಡಾಗಿ ಸ್ಥಳಕ್ಕೆ ಆಗಮಿಸುತ್ತಾರೆ. ಇದಂತು ಅಚ್ಚರಿಯೇ ಸರಿ. ಸಮ್ಮರ್ ಸ್ಯಾಂಡ್ ಬೀಚ್ ಬಳಿ ನಡೆಯುತ್ತಿರುವ ವೆಟ್ ವೆಲ್ ನಿರ್ಮಾಣದ ಕಾಮಗಾರಿ ಸಂದರ್ಭ…

Read More

ಉಳ್ಳಾಲ; ಅರಣ್ಯಾಧಿಕಾರಿ ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಸೇರಿದಂತೆ ಬೈಕ್ ಕಳವುಗೈದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್,ಕಾಪಿಕಾಡು ಎಂಬಲ್ಲಿ ನಡೆದಿದೆ. ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅರಣ್ಯಾಧಿಕಾರಿ ಮೆಹಬೂಬ್ ಸಾಬ್(35) ಅವರು ತನ್ನ ಪತ್ನಿ ಫರ್ಝಾನ ಮೆಹಬೂಬ್ ಮತ್ತು ಪುಟ್ಟ ಮಗುವಿನೊಂದಿಗೆ ಕಾಪಿಕಾಡುವಿನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿAದ ವಾಸವಿದ್ದರು.ಕಳೆದ ಶುಕ್ರವಾರ ಮಧ್ಯಾಹ್ನದಂದು ಮೆಹಬೂಬ್ ಅವರು ಕುಟುಂಬದೊAದಿಗೆ ತನ್ನ ಊರು ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಿಗ್ಗೆ ಒಂಭತ್ತು ಗಂಟೆ ವೇಳೆಗೆ ಮೆಹಬೂಬ್ ಅವರು ತನ್ನ ಕುಟುಂಬ ಸಮೇತ ಕಾಪಿಕಾಡುವಿನ ಮನೆಗೆ ವಾಪಸಾದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಪಾಟು ಹುಡುಕಾಡಿ, ಲಾಕರ್ ಗಳಲ್ಲಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಮೆಹಬೂಬ್ ಅವರು ಬ್ಯಾಂಕಿAದ…

Read More

ಮಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ), ಚನ್ನರಾಯಪಟ್ಟಣ, ಹಾಸನ ಇದರ ರಾಜ್ಯ ಸಂಘಟನಾ ಕಾರ್ಯದರ್ಶಿ ಸಚಿನ್ ಎಸ್ ಎ ಶ್ರವಣಬೆಳಗೊಳ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ನಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾ ಘಟಕವನ್ನು ಪುನರ್ ಸಂಘಟಿಸಲು ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ನ್ಯಾಯವಾದಿ ಪರಿಮಳ ರಾವ್ ಕೆ ಅವರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಪುನರ್ ನೇಮಕ ಮಾಡಿ ಕಾರ್ಯ ಪ್ರವೃತ್ತರಾಗಲು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಅಧ್ಯಕ್ಷೆ ಸಿಹಾನ ಬಿ ಎಂ, ಉಪಾಧ್ಯಕ್ಷೆ ದಾಕ್ಷಾಯಿಣಿ ಎಸ್ ಜಿ, ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಸಂಘಟಕರಾದ ಅಶ್ವಿಜ ಶ್ರೀಧರ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ…

Read More