ಯೋಗದಲ್ಲಿ ಧ್ಯಾನವು ಪ್ರಮುಖ ಪಾತ್ರ ವಹಿಸುತ್ತದೆ ಧ್ಯಾನವು ಮನಸ್ಸನ್ನು ಶಾಂತಗೊಳಿಸಿ , ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ, ಏಕಾಗ್ರತೆ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ ಹಾಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಯೋಗದಿಂದ ಹೆಚ್ಚಿನ ಲಾಭ ಸಿಗುತ್ತದೆ. ಯೋಗವಾಗಲಿ, ಧ್ಯಾನವಾಗಲಿ ಆಸನಗಳ ಅಭ್ಯಾಸವಾಗಲಿ ಅವುಗಳನ್ನು ನಿರಂತರವಾಗಿ ಮಾಡುವುದರಿಂದ ಮಾತ್ರ ಯೋಗದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗದ ಉಪನ್ಯಾಸಕರಾದ ತಿರುಮಲೇಶ್ವರ ಪ್ರಸಾದ ಇವರು ಅಭಿಪ್ರಾಯಪಟ್ಟರು. ಇವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಮತ್ತು ಮಾನವ ಪ್ರಜ್ಞೆ ಹಾಗು ಯೋಗವಿಜ್ಞಾನ ವಿಭಾಗ ಹಾಗೂ ಧರ್ಮ ನಿಧಿ ಯೋಗಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇವುಗಳ ಸಹಯೋಗದಲ್ಲಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯೋಗಪಟುಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಾದ ಕುಮಾರಿ ಪ್ರಣಮ್ಯ ಮತ್ತು ಕಾರ್ತಿಕ್ ಹಾಗು ಯೋಗ ಶಿಕ್ಷಕ ಮೋಹನ್ ಇವರುಗಳು ಯೋಗ ಪ್ರದರ್ಶನವನ್ನು ಮತ್ತು ಯೋಗ ತರಬೇತಿಯನ್ನು ನಡೆಸಿಕೊಟ್ಟರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ…
Author: UllalaVani
ಉಳ್ಳಾಲ: ವ್ಯಕ್ತಿ ಶಿಕ್ಷಣ ಪಡೆದರೆ ಆರೋಗ್ಯವೂ ಚೆನ್ನಾಗಿರುತ್ತದೆ, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಆಧಾರಸ್ತಂಭ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಸ್ವಸಮೀಕ್ಷೆ ವಿಭಾಗಗಳ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.ಹರೇಕಳ ಅನುದಾನಿತ ಶ್ರೀ ರಾಮಕೃಷ್ಣ ಪ್ರೌಡಶಾಲೆಗೆ ನಿಟ್ಟೆ ಎಜುಕೇಶನ್ ಟ್ರಸ್ಟ್ ವತಿಯಿಂದ ನೀಡಲ್ಪಟ್ಟ ಉಚಿತ ಬಸ್ ಸೇವೆಗೆ ಸೋಮವಾರ ನಡೆದ ಚಾಲನೆ ನೀಡಿ ಮಾತನಾಡಿದರು.ನಿಟ್ಟೆ ವಿಶ್ವವಿದ್ಯಾಲಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದೆ. 22 ಗ್ರಾಮೀಣ ಆರೋಗ್ಯ ಕೇಂದ್ರಗಳು, 22 ಆರೋಗ್ಯ ಕೇಂದ್ರಗಳಲ್ಲಿ ಪ್ರತಿವರ್ಷ ಎರಡು ಲಕ್ಷ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. 20ರಿಂದ 25 ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ನೀಡಿ ಸಮಾಜಕ್ಕೆ ಸಮರ್ಪಿಸುತ್ತಿದೆ. ಏಳು ಬಸ್ಸುಗಳನ್ನು ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ ಮಾತನಾಡಿ, ಶಿಕ್ಷಣದ ವಿಚಾರ ಬಂದಾಗ ವಿನಯ್ ಹೆಗ್ಡೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಈ…
ಟೆಹರಾನ್ : ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಗೆ ಕುರಿತ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಇಸ್ರೇಲ್ ಆಡಳಿತವು ಇರಾನ್ ಜನರ ವಿರುದ್ಧ ತನ್ನ ಕಾನೂನುಬಾಹಿರ ಆಕ್ರಮಣವನ್ನು ಟೆಹ್ರಾನ್ ನ ಸ್ಥಳೀಯ ಸಮಯ ಬೆಳಿಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ನಮ್ಮ ಪ್ರತಿಕ್ರಿಯೆಯನ್ನು ಮುಂದುವರಿಸುವ ಉದ್ದೇಶ ನಮಗಿಲ್ಲ’ ಎಂದು ತಿಳಿಸಿದ್ದಾರೆ. ‘ಆ ಬಳಿಕವಷ್ಟೇ ನಮ್ಮ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಕುರಿತು ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು” ಎಂದು ಅವರು ಇಸ್ರೇಲ್ ಗೆ ಪರೋಕ್ಷ ಸಂದೇಶ ನೀಡಿದ್ದಾರೆ.
ಸೋಮೇಶ್ವರ : ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಜನಸಮಾನ್ಯರು ಹೇಗೆ ಬದುಕುವುದು ಎನ್ನುವ ನಿಟ್ಟಿನಲ್ಲಿ ಚಿಂತಿತರಾಗಿದ್ದಾರೆ, ಭ್ರಷ್ಟಾಚಾರ, ಬೆಲೆ ಏರಿಕೆ, ಹಗರಣಗಳ ಮೂಲಕ ರೈತ ವಿರೋಽಯಾಗಿರುವ ಈ ಸರಕಾರದ ಜನವಿರೋಽ ನೀತಿಗಳ ವಿರುದ್ಧ ಬಿಜೆಪಿ ಹೋರಾಟವನ್ನು ಸಂಘಟಿಸುತ್ತಿದ್ದು, ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮೇರೆಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಕರ್ಕೇರ ಮೇರೆಮಜಲು ಅಭಿಪ್ರಾಯಪಟ್ಟರು.ದ.ಕ.ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾದ ಜನವಿರೋಧ ನೀತಿಗಳ ವಿರುದ್ಧ ಸೋಮೇಶ್ವರ ಪುರಸಭಾ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.ಹಿರಿಯ ಮುಖಂಡ ಸೀತಾರಾಮ ಬಂಗೇರ, ದೇವದಾಸ ಕೊಲ್ಯ, ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು, ಸದಸ್ಯರಾದ ಹರೀಶ್ ಕುಂಪಲ, ಮೋಹನ್ ಶೆಟ್ಟಿ ಕುಂಪಲ, ಜಯ ಪೂಜಾರಿ, ಅನಿಲ್ ಕಾಸಿಂ ಬೆಟ್ಟು, ಯಶವಂತ್ ಪ್ರಕಾಶ್ನಗರ, ಸುಗಂಧಿ ಕನೀರುತೋಟ, ಮಾಲತಿ ನಾಯಕ್, ಸೋನಾ ಸುಭಾಷಿಣಿ, ಅಮಿತಾ ಸಾರಸ್ವತ ಕಾಲನಿ, ಶ್ರೀಲತಾ ಗಟ್ಟಿ, ಸಪ್ನಾ…
ಬಾಳೆಪುಣಿ : ಲಜ್ಜೆಗೆಟ್ಟ , ಹೊಣೆಗೇಡಿ, ಅಯೋಗ್ಯ ಕಾಂಗ್ರೆಸ್ ಸರ್ಕಾರ ತೊಲಗಬೇಕು. ಸರಕಾರದ ಖಜಾನೆಯಲ್ಲಿ ಹಣವಿಲ್ಲ. ವಾಲ್ಮೀಕಿ ಹಗರಣದ ಮೂಲಕ 197 ಕೋಟಿ ಬೇರೆ ರಾಜ್ಯ ಚುನಾವಣೆಗೆ ಉಪಯೋಗಿಸಿದರು. ಸಿದ್ಧರಾಮಯ್ಯ ಒಪ್ಪಿಕೊಂಡು 86 ಕೋಟಿ ಹಣವನ್ನು ನೇರ ಬ್ಯಾಂಕಿಗೆ ಜಮಾ ಮಾಡುವ ಮೂಲಕ ನಿಗಮದ ಹಣವನ್ನು ನುಂಗಿದ್ದಾರೆ ಎಂದು ಮಂಡಲದ ರೈತರ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರ್ ಹೇಳಿದ್ದಾರೆ.ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ದುರಾಡಳಿತ, ಸ್ವಜನ ತುಷ್ಟಿಕರಣ, ಓಲೈಕೆಯ ರಾಜಕಾರಣದ, ಜಾತಿ ರಾಜಕಾರಣದ, ದುಬಾರಿ ಆಡಳಿತದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಜನವಿರೋಧಿ ಸರ್ಕಾರದ ವಿರುದ್ಧ ಬಾಳೆಪುಣಿ ಪಂಚಾಯತ್ ಮುಂಭಾಗದಲ್ಲಿ ಬಿಜೆಪಿ ಕೈರಂಗಳ ಶಕ್ತಿ ಕೇಂದ್ರ ಮತ್ತು ಬಾಳೆಪುಣಿ ಶಕ್ತಿ ಕೇಂದ್ರದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಪತ್ನಿ ಹೆಸರಿನಲ್ಲಿ ಇದ್ದಂತಹ ಬೆಲೆಬಾಳುವ 14 ಸೈಟ್ ಮಾಡಿ ಬಳಿಕ ಭ್ರಷ್ಟಾಚಾರ ಆರೋಪ ಕೇಳಿಬಂದ ನಂತರ ವಾಪಸ್ಸು ಕೊಟ್ಟಿದ್ದಾರೆ. ಕಾನೂನು ಎಂಬುದನ್ನು ಅವರಿಗವರೇ ಮಾಡುವ ಸ್ಥಿತಿಯಿದೆ. ಬಿಜೆಪಿ ಸರಕಾರ ಸಕಾಲವನ್ನು…
ಉಳ್ಳಾಲ: ಪಂಚಾಯತ್ ಗಳಿಂದ ನಿವೇಶನ ರಹಿತರಿಗೆ ಆಶ್ರಯ ಮನೆಗಳು ಸಿಗುತ್ತಿಲ್ಲ.ಸರಕಾರದಿಂದ ಜನಪರ ಯೋಜನೆಗಳು ಯಾವುದೂ ಸಿಕ್ಕಿಲ್ಲ.ಇರುವ ಸವಲತ್ತುಗಳೂ ಜನರಿಗೆ ತಲುಪುತ್ತಿಲ್ಲ.ಜನಸಾಮಾನ್ಯರು ಕಷ್ಟ ಪಟ್ಟು ಒಂದು ಮನೆ ಕಟ್ಟಲು ಬೇಕಾದ ಕಲ್ಲು,ಮರಳು ಯಾವುದೂ ಸಿಗುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನ ಖಂಡಿಸಿ ಅಂಬ್ಲಮೊಗರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬಿಜೆಪಿ ಅಂಬ್ಲಮೊಗರು ಶಕ್ತಿ ಕೇಂದ್ರದ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರಕಾರದ ಎಲ್ಲಾ ಮುಖ್ಯಮಂತ್ರಿಗಳು ಅನೇಕ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರು ಜಾರಿಗೊಳಿಸಿದ್ದ ಭಾಗ್ಯ ಲಕ್ಷ್ಮೀ ಯೋಜನೆಯು ಬಹಳ ಜನಪ್ರಿಯತೆ ಪಡೆದಿತ್ತು.ಅಂತಹ ಜನಪ್ರಿಯ ಯೋಜನೆಯನ್ನೇ ಕಾಂಗ್ರೆಸ್ ಸರಕಾರ ಕೈ ಬಿಟ್ಟಿದೆ. ಅದೇ ರೀತಿ ಸಂಧ್ಯಾ ಸುರಕ್ಷ ಯೋಜನೆ ಫಲಾನುಭವಿಗಳಿಗೂ ಹಣ ನೀಡದೆ ಸತಾಯಿಸುತ್ತಿದ್ದು,ವೃದ್ದಾಪ್ಯ ವೇತನವನ್ನೂ ಕಡಿತಗೊಳಿಸಿದೆ. ಬಲು ಮುಖ್ಯವಾಗಿ 9/11 ನೀತಿಯನ್ನ ಸರಳೀಕರಣಗೊಳಿಸದ ಪರಿಣಾಮ ಜನರು ಬವಣೆ ಪಡುವಂತಾಗಿದೆ.…
ಕೋಟೆಕಾರುಕೋಟೆಕಾರು: ಬಡವರ್ಗ, ರೈತರು ಸಿದ್ಧರಾಮಯ್ಯ ಸರಕಾರವನ್ನು ತಿರಸ್ಕರಿಸಲೇ ಬೇಕಿದೆ. 9/11 ಗಾಗಿ ಇಡೀ ಬಡ ಜನತೆ ಮುಡಾ ಹೋಗಿ ಅಲೆದಾಡುವಂತಾಗಿದೆ. ಭ್ರಷ್ಟಾಚಾರದ ಕೂಪದಿಂದ ಕೂಡಿದ ಮುಡಾ ವ್ಯವಸ್ಥೆಗೆ ಸಾಮಾನ್ಯ ಜನ ತೆರಳಿ ನರಕಯಾತನೆ ಅನುಭವಿಸಬೇಕಾಗಿದೆ ಎಂದು ಮಂಗಳೂರು ಮಂಡಲ ಪ್ರಧಾನ ಕರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದರು.ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಮುಂದೆ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಭಟನೆಯಲ್ಲಿ ಕೋಟೆಕರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಎಸ್ ಶೆಟ್ಟಿ . ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಸುಳ್ಳೆಂಜಿರು , ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯಶವಂತ್ ಆಳ್ವ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ಗಳಾದ ರವಿ ಸೋವೂರ್, ಸಂಪತ್ ಕುಕ್ಯಾನ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಬಿಜೆಪಿ ಮಂಗಳೂರು ಮಂಡಲ ಕಚೇರಿ ಕಾರ್ಯದರ್ಶಿ ಸುಜಾತ ಬಿ ಶೆಟ್ಟಿ, ಬಿಜೆಪಿ ಕೋಟೆಕಾರು ಮಹಾ ಶಕ್ತಿ ಕೇಂದ್ರ…
ಉಳ್ಳಾಲ: ಪಾವೂರು ಗ್ರಾಮದ ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದ ಅಭಿವೃದ್ಧಿ ನಿಟ್ಟಿನಲ್ಲಿ ಅನುದಾನ ಒದಗಿಸುವಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.ಇನೋಳಿ ದೇವಂದಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದು ಅನ್ನಛತ್ರ ಇಲ್ಲದೆ ಅನ್ನಪ್ರಸಾದ ಸೇವೆಗೆ ತೊಂದರೆಯಾಗಿದೆ. ದೇವಸ್ಥಾನ ನೂರಂತಸ್ತಿನ ಛಾವಣೆ ಹೊಂದಿದ್ದು ಮಳೆಗಾಲದಲ್ಲಿ ಛಾವಣಿಯ ಹೆಂಚುಗಳು ಗಾಳಿಗೆ ಹಾರಿಹೋಗುತ್ತಿದೆ. ಎರಡು ಅಂತಸ್ತಿನ ಮೇಲ್ಛಾವಣಿಯ ತಾಮ್ರದ ಹೊದಿಕೆಯ ಕೆಲಸ ಬಾಕಿಯಿದೆ. ಅಲ್ಲದೆ ಧ್ವಜಸ್ತಂಭ, ರಾಜಗೋಪುರ ಹಾಗೂ ಅಂಗಳಕ್ಕೆ ಹಾಸುವ ಕಲ್ಲುಗಳ ಅವಶ್ಯಕತೆ ಇದ್ದು ಇದಕ್ಕೆ ಅನುದಾನ ಒದಗಿಸುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜಾ ಕಿಲ್ಲೂರುಗುತ್ತು, ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಚೇಂಬೂರು ಹಾಗೂ ಭಕ್ತರು ಮನವಿ ಮಾಡಿದ್ದಾರೆ.
ಮಂಜನಾಡಿ : ಕರ್ನಾಟಕ ರಾಜ್ಯ ಸರಕಾರ ಸಂಪೂರ್ಣ ವೈಫಲ್ಯ ವಾಗಿದೆ, ಗ್ರಾಮ ಪಂಚಾಯತ್ ಅಧಿಕಾರವನ್ನು ಮೊಟುಕು ಗೊಳಿಸಿ ಸಾಮಾನ್ಯವಾದ 9/11 ಪಡೆಯುವುದನ್ನು ಸಹಿತ ಕಠಿಣ ಗೊಳಿಸಿದೆ. ವಿಪರೀತ ತೆರಿಗೆ ಸಂಗ್ರಹ ಹೆಚ್ಚಳ, ಪಡಿತರ ಚೀಟಿ ಹಂಚಿಕೆ ಮಾಡದೆ ಬಡ ನಾಗರಿಕರ ನೆಮ್ಮದಿ ಹಾಳು ಮಾಡಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರಾದ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಹೇಳಿದ್ದಾರೆ. ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಮಂಜನಾಡಿ ಗ್ರಾಮ ಪಂಚಾಯತ್ ಮುಂದೆ ಬಿಜೆಪಿ ಮಂಜನಾಡಿ ಮಹಾ ಶಕ್ತಿ ಕೇಂದ್ರದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಭಟನೆಯಲ್ಲಿ ಮಂಗಳೂರು ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮಂಡಲ ಕಾರ್ಯದರ್ಶಿ ರಮೇಶ್ ಬೆದ್ರೊಳಿಕೆ. ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಜೀವನ್ ಪ್ರಕಾಶ್, ಶಕ್ತಿ ಕೇಂದ್ರ ಪ್ರಮುಖ ರಂಜಿತ್ ಸುಲಾಯ, ಬಾಲಕೃಷ್ಣ ಹರೀಶ್ ಪೂಜಾರಿ, ನವೀನ್ ಶೆಟ್ಟಿ, ಉದಯ್ ಶೆಟ್ಟಿ, ಪ್ರೇಮಾನಂದ ರೈ ಮತ್ತಿತರರು ಉಪಸ್ಥಿತರಿದ್ದರು.ಪ್ರತಿಭಟನೆ ನಂತರ ಮನವಿಯನ್ನು ಪಂಚಾಯತ್ ಕಾರ್ಯದರ್ಶಿಯವರಿಗೆ ಸಲ್ಲಿಸಲಾಯಿತು.
ಪಜೀರು : ಜಿಲ್ಲೆಯ ಜೀವನಾಡಿಯಾಗಿರುವ ಕೆಂಪುಕಲ್ಲು, ಮರಳು ಎಲ್ಲಾ ನಿಷೇಧವಾಗಿ, ಕಾರ್ಮಿಕರು ತುಂಬಾ ಕಷ್ಟದಲ್ಲಿದ್ದಾರೆ. ಆದಷ್ಟು ಬೇಗ ಕಾಂಗ್ರೆಸ್ ಸರಕಾರ ಅವೆಲ್ಲದನ್ನೂ ಸರಳೀಕರಣಗೊಳಿಸಿ, ಜನರಿಗೆ ತಲುಪಿಸಲು ಆದಷ್ಟು ಬೇಗ ಕ್ರಮ ವಹಿಸಬೇಕಿದೆ. ಇಲ್ಲದೇ ಹೋದಲ್ಲಿ ಕಾರ್ಮಿಕರು ರಸ್ತೆಗೆ ಬೀಳುವ ದಿನಗಳು ದೂರವಿಲ್ಲ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಹೇಳಿದ್ದಾರೆ.ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಜೀರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬಿ.ಜೆ.ಪಿ. ಪಾವೂರು ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಕೇಂದ್ರ ಸರಕಾರ ಹಾಗೂ ಹಿಂದಿನ ಬಿಜೆಪಿ ಸರಕಾರ ಕೃಷಿಕರಿಗೆ ನೀಡಿರುವ ಸವಲತ್ತುಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ಏಕಾಏಕಿ ಸ್ಥಗಿತಗೊಳಿಸಿದೆ. ಇದರಿಂದ ರೈತರಿಗೆ ಮಳೆಗಾಲದ ಸಮಯದಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಜಾಗದ ನೋಂದಾವಣೆಗೆ ಅಧಿಕ ಶುಲ್ಕ, 9/11 ತೆಗೆಯಬೇಕಾದಲ್ಲಿ ಮುಡಾಕ್ಕೆ ತಿಂಗಳಾನುಗಟ್ಟೆಲೆ ಅಲೆದಾಡಬೇಕು, ಬ್ರೋಕರ್ ಹಾವಳಿ ಹೀಗೆ ಅಡಚಣೆಗಳು ಸಾಲುಗಟ್ಟಲೆ ರಾಜ್ಯದಲ್ಲಿದೆ. ದಬ್ಬಾಳಿಕೆಯನ್ನು ಮಾಡಿ ಜನರ ಬಾಯಿ ಮುಚ್ಚಿಸುವ ಕಾರ್ಯಗಳಾಗುತ್ತಿದೆ. ದುರಾಡಳಿತ ಅಂತ್ಯಗೊಳಿಸದೇ…

