Author: UllalaVani

Kannada News From Coastal Karnataka

ಮಂಗಳೂರು : ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಒಂದು ಕೋಟಿ ಆದಾಯ ಗಳಿಸಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ 125 ಕೋಟಿಗೂ ಅಧಿಕ ರೂಪಾಯಿ ಠೇವಣಿ ಸಂಗ್ರಹಿಸಲಾಗಿದೆ. 100 ಕೋಟಿ ರೂ.ಗೂ ಅಧಿಕ ಸಾಲ ನೀಡಲಾಗಿದೆ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ, ಸೊಸೈಟಿ ಅಧ್ಯಕ್ಷರಾಗಿರುವ ಪಿ ಪಿ ಹೆಗ್ಡೆ ಹೇಳಿದ್ದಾರೆ. ಅವರು ನಗರದ ಬಲ್ಲಾಲ್‌ ಬಾಗ್ ತಕ್ಷಿಲಾ ಕಟ್ಟಡದ  ಪ್ರಧಾನ ಕಚೇರಿಯಲ್ಲಿ ಜರಗಿದ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.25 ವರ್ಷಗಳ ಹಿಂದೆ ಆರಂಭಗೊಂಡಿರುವ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉತ್ತಮವಾಗಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ. ಈಗಾಗಲೇ ಹನ್ನೊಂದು ಶಾಖೆಯನ್ನು ನಮ್ಮ ಸಂಸ್ಥೆ ಹೊಂದಿದೆ. ಬಜ್ಪೆ, ಕಾರ್ಕಳ, ಮೂಡಬಿದ್ರೆ, ಉಜಿರೆ, ಪುತ್ತೂರು, ಬಿ.ಸಿ.ರೋಡ್, ಸುರತ್ಕಲ್, ತೊಕ್ಕೊಟ್ಟು, ಮಂಗಳೂರು ರಥಬೀದಿ, ಬಳ್ಳಾಲ್ ಬಾಗ್ ಹಾಗೂ ಎಂ.ಜಿ. ರೋಡಿನಲ್ಲಿರುವ ಶಾಖೆಗಳ ಮೂಲಕ  ಸಂಸ್ಥೆ ಏಳು ಸಾವಿರ ಸದಸ್ಯರನ್ನು ಹೊಂದಿದೆ.…

Read More

ಮಂಗಳೂರು : ನಗರದ ಸ್ಟೇಟ್‌ಬ್ಯಾಂಕ್ ಬಳಿ ವ್ಯಕ್ತಿಯೊಬ್ಬ ಟ್ರಾಫಿಕ್‌ನಲ್ಲಿ ಕರ್ತವ್ಯನಿರತ ಹೆಡ್‌ಕಾನ್‌ ಸ್ಟೇಬಲ್‌ರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಟೇಟ್‌ಬ್ಯಾಂಕ್ ವೃತ್ತದ ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಟ್ರಾಫಿಕ್ ಎಚ್‌ಸಿ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಸ್ಕೂಟರ್ ಸವಾರ ನಾಟೆಕಲ್‌ನ ಆಸಿಫ್ ಬಾವ ಎಂಬಾತ ಅದನ್ನು ಲೆಕ್ಕಿಸದೆ ಸ್ಕೂಟರ್ ಚಲಾಯಿಸಿದ್ದು, ಈ ಸಂದರ್ಭ ಎಚ್‌ಸಿ ಸ್ಕೂಟರ್ ಸವಾರನಿಗೆ ಏಯ್ ಅಂತ ಹೇಳಿ ಕೈಯಿಂದ ಸವರಿದ್ದಾರೆ. ಇದರಿಂದ ಆಕ್ರೋಶಗೊಂಡ ಆಸಿಫ್ ಬಾವ ಟ್ರಾಫಿಕ್ ಎಚ್‌ಸಿ ಜೊತೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸ್ ಜೊತೆ ವಾಗ್ವಾದ ನಡೆಸುತ್ತಿರುವುದನ್ನು ಸಾರ್ವಜನಿಕರೊಬ್ಬರು ವೀಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಈ ವೀಡಿಯೋವನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಕೂಟರ್ ಸವಾರನು ಟ್ರಾಫಿಕ್ ಪೊಲೀಸ್‌ ರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸ್ಪಷ್ಟವಾಗಿದೆ. ಆ ಹಿನ್ನಲೆಯಲ್ಲಿ ಸ್ಕೂಟರ್ ಸವಾರನ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ನಿಂದನೆ ಪ್ರಕರಣ…

Read More

ಕೊಣಾಜೆ : ಕೊಲೆ, ಸುಲಿಗೆ, ದಾಳಿ, ಎನ್‌ ಡಿಪಿಎಸ್‌ ಸೇರಿದಂತೆ ಎಂಟು ಪ್ರಕರಣಗಳ ಆರೋಪಿ ಕೊಣಾಜೆ ಠಾಣೆಯ ರೌಡಿಶೀಟರ್‌ ನಜೀಮ್‌ ಯಾನೆ ನಜ್ಜು (30) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ನರಿಂಗಾನದ ಪೊಟ್ಟೊಳಿಕೆ ನಿವಾಸಿ ನಜೀಮ್‌ ಯಾನೆ ನಜ್ಜು(30) ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಬೇಗೂರು, ಬೆಂಗಳೂರು ನಗರ, ಭಟ್ಕಳ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳಿವೆ.  ಆರೋಪಿ ವಿರುದ್ಧ ಹೊರಡಿಸಲಾದ ವಾರಂಟ್‌ ಹಾಗೂ ಪ್ರೊಕ್ಷಮೇಷನ್‌ ಬಾಕಿಯಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊಣಾಜೆ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕ ವಿರೂಪಾಕ್ಷ ಸ್ವಾಮಿ ಮಾರ್ಗದರ್ಶನದಲ್ಲಿ ಪಿಎಸ್‌ ಐ ಪುನೀತ್‌ ಗಾಂವ್ಕರ್‌ ಹಾಗೂ ನಾಗರಾಜ ಅವರ ನೇತೃತ್ವದಲ್ಲಿ ಹೆಡ್‌ ಕಾನ್ಸ್‌ ಸ್ಟೇಬಲ್ ಗಳಾದ ದಿನೇಶ್‌, ಮೊಹಮ್ಮದ್‌ ಶರೀಫ್‌, ರಮೇಶ್‌ ಸಹಕರಿಸಿದ್ದಾರೆ. 

Read More

ಬಂಟ್ವಾಳ : ದುಬಾರಿ ಬೆಲೆಯ ಸಾಕು ನಾಯಿಯನ್ನು ನೆರೆಯ ವ್ಯಕ್ತಿಗಳಿಬ್ಬರು ಬಡಿದು ಕೊಂದು ಹಾಕಿದ್ದಾರೆ ಎಂಬ ಹೊಸದಾದ ದೂರು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಳ್ಳಿಗೆ ಗ್ರಾಮದ ನೆತ್ತರಕೆರೆ ನಿವಾಸಿ ಡೋಲ್ಪಿ ಡಿ.ಸೋಜ ಎಂಬವರು ದೂರು ನೀಡಿರುವ ವ್ಯಕ್ತಿಯಾಗಿದ್ದಾರೆ. ಅದೇ ಗ್ರಾಮದ ಮತ್ತು ದೂರುದಾರರ ನೆರೆಯವರಾದ ಯತಿನ್ ಪೂಜಾರಿ ಹಾಗೂ ಯಶಿನ್ ಪೂಜಾರಿ ಎಂಬವರು ಬಡಿದು ಕೊಂದಿರುವ ಬಗ್ಗೆ ಇವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ದೂರಿನಲ್ಲೇನಿದೆ?ನಮ್ಮ ಮನೆಯಲ್ಲಿ ನಾವು ಸಾಕುತ್ತಿದ್ದ ಸಾಕು ನಾಯಿ ದಾರಿ ತಪ್ಪಿ ಹೋಗಿದ್ದು ನಮ್ಮ ಮನೆಯ ನೆರೆಯವರಾದ (ಎದ್ರಿದಾರರು) ಮೊನ್ನೆ ದಿನ ಅಂದರೆ ಸೆ. 17 ರಂದು ಬೆಳಿಗ್ಗೆ ಸಾರ್ವಜನಿಕ ಸ್ಥಳದಲ್ಲಿ ನಾಯಿಗೆ “ದೊಣ್ಣೆಯಿಂದ ಬಡಿದು (ಓಡೆದು) ಸಾಯಿಸಿ ಅಲ್ಲಿಯೇ ಗುಂಡಿ ಅಗೆದು ಹೂತು ಹಾಕಿರುತ್ತಾರೆ.” ಇದು ನಮ್ಮ ಗಮನಕ್ಕೆ ಬಾರದೆ ಸೆ. 18ರಂದು ಬೆಳಿಗ್ಗೆ ನಾಯಿಯನ್ನು ಹುಡುಕಿಕೊಂಡು ಹೋದಾಗ ಪಕ್ಕದ ಮನೆಯವರು ನಮಗೆ ಎದ್ರಿದಾರರು ನಾಯಿಯನ್ನು ಒಡೆದು ಸಾಯಿಸಿರುವ ಬಗ್ಗೆ ತಿಳಿಸಿರುತ್ತಾರೆ.ಇದು ಭಾರತೀಯ ದಂಡ…

Read More

ಮಂಗಳೂರು : ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದ ಮೇರೆಗೆ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ದಕ್ಷಿಣ ಕನ್ನಡದ ಮಾಲವಂತಿಗೆ, ಕಿಲ್ಲೂರು ಮನೆ ನಿವಾಸಿ ಮೊಹಮ್ಮದ್ ಕೈಫ್(22) ಬಂಧಿತ ಆರೋಪಿ. ಕರಾವಳಿ ಟೈರ‍್ಸ್ ಎಂಬ ಇನ್‌ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಜುಲೈ 19ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಕರಾವಳಿ ಟೈರ‍್ಸ್ ಎಂಬ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುತ್ತಿದ್ದ ಆರೋಪಿತನನ್ನು ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ಪತ್ತೆ ಮಾಡಿ, ಆರೋಪಿತನು ತಮಿಳುನಾಡಿಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಬಳಿಕ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಕ್ರಮ ಕೈಗೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿರುತ್ತದೆ. ಅಲ್ಲದೇ ಕರಾವಳಿ ಟೈರ‍್ಸ್ ಎಂಬ ಪೇಜ್ ವಿರುದ್ಧ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ…

Read More

ಉಳ್ಳಾಲ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರ ಕೆಲವು ಪ್ರಮುಖ ಬೇಡಿಕೆಯ ಅಂಶಗಳನ್ನು ಪರಿಗಣಿಸುವಂತೆ ಹಾಗೂ ಬಿ.ಎಲ್.ಒ ಕರ್ತವ್ಯದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ  ಉಚ್ಚಿಲದಲ್ಲಿ ಸಂಘದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ನಿಯೋಗದಿಂದ ಮನವಿ ಸಲ್ಲಿಸಲಾಯಿತು. ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ, ಗ್ರಾಮ ವ್ಯಾಪ್ತಿಯಲ್ಲೇ ನೇಮಿಸುವುದು,  ಪ್ರಾಥಮಿಕ ಶಾಲಾ ಶಿಕ್ಷಕ ಗಣತಿದಾರರಿಗೆ ಪ್ರಾ ಥಮಿಕ ಶಾಲಾ ಮುಖ್ಯ ಶಿಕ್ಷಕರನ್ನೇ ಮೇಲ್ವಿಚಾರಕರಾಗಿ ನೇಮಿಸುವುದು,  ತೀವ್ರ ಕಾಯಿಲೆ, ಗರ್ಭಿಣಿ ಶಿಕ್ಷಕಿಯರು, ಒಂದು ವರ್ಷದೊಳಗಿನ ಮಗುವಿರುವ ಶಿಕ್ಷಕಿಯರುಗಳಿಗೆ  ಕಾರ್ಯದಿಂದ ವಿನಾಯಿತಿ ನೀಡುವುದು.  ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡುವುದು, ನವರಾತ್ರಿ ಹಬ್ಬ ಆಚರಣೆಗೆ ಶಿಕ್ಷಕರಿಗೂ ಅವಕಾಶ ಮಾಡಿಕೊಟ್ಟು ನವರಾತ್ರಿಯ ನಂತರ ಸಮೀಕ್ಷಾ ಕಾರ್ಯಕ್ಕೆ ಅವಕಾಶ ಮಾಡುವುದು,  ಗಣತಿ ಕಾರ್ಯದಲ್ಲಿ ನೇಮಕವಾಗಿರುವ ಶಿಕ್ಷಕರನ್ನು ಗಣತಿ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು,  ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ…

Read More

ಮಂಗಳೂರು : ನಕಲಿ‌ ಆಧಾರ್ ಕಾರ್ಡ್, ಪಹಣಿ ಪತ್ರ ಸೃಷ್ಟಿಸಿ ವಂಚಿಸುತ್ತಿದ್ದ ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸರು ಮತ್ತೋರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಗುರುಪುರ ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಅಲಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲಿ ಬಂಧನದೊಂದಿಗೆ ನಕಲಿ‌ ಆಧಾರ್ ಕಾರ್ಡ್, ಪಹಣಿ ಪತ್ರ ಸೃಷ್ಟಿಸಿ ವಂಚಿಸಿ ಬಂಧನಕ್ಕೊಳಗಾದವರ ಸಂಖ್ಯೆ 6ಕ್ಕೆ ಏರಿದಂತಾಗಿದೆ. ಆರೋಪಿಯನ್ನು ಗುರುಪುರದಲ್ಲಿ ಬಂಧಿಸಿದ್ದ ಪೊಲೀಸರು, ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆ ಇದ್ದು, ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಗರದ ದಡ್ಡಲ್ ಕಾಡ್ ಎಂಬಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಸರಕಾರದ ಬೇರೆ ಬೇರೆ ಇಲಾಖೆಯ ಕಚೇರಿ ಮತ್ತು ನ್ಯಾಯಾಲಯಕ್ಕೆ ವಂಚಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ‌ ಪೊಲೀಸರು ಮುಲ್ಕಿ…

Read More

ಮಂಗಳೂರು : ಮುಲ್ಕಿ ಹಳೆಯಂಗಡಿ ಸಮೀಪದ ಪಾವಂಜೆ ನಿವಾಸಿ ಖ್ಯಾತ ಸಂಶೋಧಕ, ಸಾಹಿತಿ, ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ (88) ಅವರು ಬುಧವಾರ ರಾತ್ರಿ ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರೊ. ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ)ರವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೆನರಾದ ರಾಜಕೀಯ ಇತಿಹಾಸ : 1565-1763 ಎನ್ನುವ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದರು. ಮುಲ್ಕಿ ವಿಜಯಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ 32 ವರ್ಷ ಕರ್ತವ್ಯ ನಿರ್ವಹಿಸಿದ ವಸಂತ ಮಾಧವರು, ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಇತಿಹಾಸ ಕೃತಿಗಳನ್ನು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ವಸಂತ ಮಾಧವರ ಕುರಿತಾದ ಕೃತಿಯನ್ನು ಡಾ.…

Read More

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇದರ ವತಿಯಿಂದ ಸೆ.19 ಹಾಗೂ 20 ರಂದು ದಾವಣಗೆರೆ ಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫುಟ್ಬಾಲ್ (ಪದವಿ ಪೂರ್ವ) ಟೂರ್ನಮೆಂಟ್‌ ನಲ್ಲಿ ಆಡುವ ಜಿಲ್ಲಾ ತಂಡದಲ್ಲಿ ಉಳ್ಳಾಲದ ಪ್ರತಿಷ್ಠಿತ ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜ್ ಇಲ್ಲಿನ ನಾಲ್ಕು ಗ್ರೇಟ್ ಆಟಗಾರರಾದ 1. ಮೊಹಮ್ಮದ್ ಆನಸ್ 2. ಸುಹೈಲ್ ಅಹ್ಮದ್ ಫಾರಿಸ್ 3. ಮೊಹಮ್ಮದ್ ಉನೈನ್ 4.ಅಫ್ನಾನ್ ರೆಹಮಾನ್ ಅಬ್ಬಾಸ್ ಇವರುಗಳು ಸ್ಥಾನ ಪಡೆಯುವ ಮೂಲಕ ಕಾಲೇಜು ಹಾಗೂ ಉಳ್ಳಾಲಕ್ಕೆ ಕೀರ್ತಿ ತಂದಿದ್ದಾರೆ. ಈ ಆಟಗಾರರು ಕಾಲೇಜು ಕೋಚ್ ತಮೀಮ್ ಉಳ್ಳಾಲ್ ರಿಂದ ತರಬೇತಿ ಪಡೆದಿದ್ದಾರೆ.

Read More

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇದರ ವತಿಯಿಂದ ಸೆ.19 ಹಾಗೂ 20 ರಂದು ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಗರ್ಲ್ಸ್ ವಿಭಾಗದ ಫುಟ್ಬಾಲ್ (ಪದವಿ ಪೂರ್ವ) ಟೂರ್ನಮೆಂಟ್‌ ನಲ್ಲಿ ಆಡುವ ಜಿಲ್ಲಾ ಟೀಮ್ ನಲ್ಲಿ ಉಳ್ಳಾಲದ ಪ್ರತಿಷ್ಠಿತ ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜ್ ಇಲ್ಲಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ , ಪ್ರತಿಭಾವಂತ ಯುವ ಆಟಗಾರ್ತಿ “ಮೆಯ್ಸಾ ಮರಿಯಮ್ ” ಸ್ಥಾನ ಪಡೆದಿದ್ದಾರೆ. ಇವರು ಕಾಲೇಜು ಕೋಚ್ ತಮೀಮ್ ಉಳ್ಳಾಲ್ ರಿಂದ ತರಬೇತಿ ಪಡೆದಿದ್ದಾರೆ .

Read More