ಮಂಗಳೂರು: ಮಂತ್ರಾಲಯ- ಮಂಗಳೂರು ಬರುವ ಕೆ.ಎ19 ಎಫ್ 3551 ಕೆಎಸ್ ಆರ್ ಟಿಸಿ ಬಸ್ ಬಳ್ಳಾರಿಯಿಂದ 10 ಕಿ.ಮೀ ದೂರದಲ್ಲಿ ಕೆಟ್ಟು ನಿಂತು ಗಂಟೆ ಕಳೆದರೂ, ಇಲಾಖೆಯಿಂದ ಯಾವುದೇ ಸ್ಪಂಧನೆ ಈವರೆಗೆ ಸಿಕ್ಕಿಲ್ಲ ಅನ್ನುವ ಆರೋಪ ಪ್ರಯಾಣಿಕರು ಮಾಡಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರೆಲ್ಲರೂ ಬಸ್ಸೊಳಗಡೆ ಪ್ರಯಾಣಿಕರಿದ್ದು, ಕಗ್ಗತ್ತಲಲ್ಲಿ ನಿರ್ಜನ ಪ್ರದೇಶದಲ್ಲಿ ಬಸ್ ನಿಂತಿರುವುದರಿಂದ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ನಿರ್ವಾಹಕ-ಚಾಲಕರು ಸಂಬಂಧಪಟ್ಟ ಡಿಪೋ ಅವರಿಗೆ ಮಾಹಿತಿ ನೀಡಿದರೂ ಗಂಟೆ ಕಳೆದರೂ ಸ್ಪಂಧನೆ ಸಿಗುತ್ತಿಲ್ಲ. ಕೆಎಸ್ಆರ್ಟಿಸಿ ಅಲ್ಲಿನ ಕಚೇರಿಗಳಿಗೆ ಫೋನಾಯಿಸಿದರೂ ಸ್ಪಂಧನೆ ಸಿಗುತ್ತಿಲ್ಲ. ಈ ಕೂಡಲೇ ರಾಜ್ಯ ಸಾರಿಗೆ ಸಚಿವರು ತುರ್ತಾಗಿ ಗಮನ ಹರಿಸಬೇಕಿದೆ. ಅಧಿಕಾರಿಗಳಿಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿದರ್ಶನ ನೀಡಬೇಕೆಂಬ ಆಗ್ರಹವನ್ನು ಮಾಡಿದ್ದಾರೆ.
Author: UllalaVani
ಬಗಂಬಿಲ : ಬೆಂಕಿ ಅವಘಢದಿಂದ ಸಂಪೂರ್ಣ ಮನೆ ಹಾಗೂ ವಸ್ತುಗಳನ್ನು ಕಳೆದುಕೊಂಡ ಮನೆಮಂದಿಗೆ ರಜಕ ಯೂತ್ ವತಿಯಿಂದ ನೆರವಿನ ಹಸ್ತ ನೀಡಲಾಯಿತು.ದೇರಳಕಟ್ಟೆಯ ವೈದ್ಯನಾಥನಗರದಲ್ಲಿ ಸುಶೀಲಾ ಮಡಿವಾಳ್ತಿ ಇವರ ಮನೆಯಲ್ಲಿ ಜೂ.6 ರಂದು ಘಟನೆ ಸಂಭವಿಸಿತ್ತು. ಘಟನೆಯಿಂದ ಲಕ್ಷಾಂತರ ನಷ್ಟವೂ ಉಂಟಾಗಿದೆ. ದಿನಗೂಲಿ ನಡೆಸಿ ಸಂಸಾರದ ನೌಕೆಯನ್ನು ಸಾಗಿಸುತ್ತಿರುವ ಕುಟುಂಬಕ್ಕೆ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೀಗ ರಜಕ ಯೂತ್ ಮಂಗಳೂರು ತಂಡವು ಭೇಟಿ ನೀಡಿ ರೂ. 40,000 ಆರ್ಥಿಕ ನೆರವು ನೀಡಿ ಸಹಕರಿಸಿದೆ.ಬೆಂಕಿ ದುರಂತದಿಂದ ಜನಾರ್ಧನ ಮಡಿವಾಳರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ನೆರವು ಅವರಿಗೆ ಸ್ವಲ್ಪಮಟ್ಟಿಗೆ ಆಸರೆಯಾಗಲಿದೆ ಎಂದು ರಜಕ ಯೂತ್ ತಂಡದ ಸದಸ್ಯರು ತಿಳಿಸಿದ್ದಾರೆ.ಜೊತೆಗೆ, ಸರಕಾರ ಹಾಗೂ ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ತಕ್ಷಣದ ಸಹಾಯ ಹಸ್ತ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಅಲ್ಲದೆ, ಶಾಸಕರ ಪರಿಹಾರ ನಿಧಿಯಿಂದ ಕೂಡ ಸಹಾಯ ನೀಡುವ ನಿರೀಕ್ಷೆಯಲ್ಲಿ ಕುಟುಂಬ ಇದೆ.ರಜಕ ಯೂತ್ ತಂಡದ ನಾಯಕ ಪ್ರದೀಪ್ , ಮನೆಮಂದಿ ಸುಶೀಲಾ ಮಡಿವಾಳ್ತಿ, ಆಶಾ,…
ಉಳ್ಳಾಲ : ಕಳವುಗೈದ ರಿಕ್ಷಾ ಬ್ಯಾಟರಿಗಳನ್ನು ವಾಪಸ್ಸು ತಂದು ಇಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ರೌಡಿಶೀಟರ್ ಓರ್ವ ರಿಕ್ಷಾ ಗಾಜು ಒಡೆದು, ಯುವಕನೋರ್ವನ ಮೇಲೆ ಕತ್ತಿ ಬೀಸಿ ಕೊಲೆಗೆ ಯತ್ನಿಸಿ, ಮನೆ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ ಕೊಲೆಬೆದರಿಕೆ ಹಾಕಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಹೈದರ್ ಆಲಿ ರಸ್ತೆಯ ಮುಕ್ಕಚ್ಚೇರಿ ಎಂ.ಎಫ್.ಸಿ ಕ್ಲಬ್ ಹತ್ತಿರ ನಡೆದಿದೆ. ಘಟನೆ ಸಂಬಂಧ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಆರೋಪಿ ರೌಡಿಶೀಟರ್ ಅರ್ಫಾನ್ ನನ್ನು ಬಂಧಿಸಿದ್ದಾರೆ.ಅಬ್ದುಲ್ಲಾ ಹಮೀದ್ ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ. ಹಮೀದ್ ಅವರ ರಿಕ್ಷಾದ ಗಾಜನ್ನು ಒಡೆದ ಆರೋಪಿ ಬಳಿಕ ಅಳಿಯ ಮೊಹಮ್ಮದ್ ಇರ್ಷಾದ್ ಅವರ ರಿಕ್ಷಾದ ಗಾಜನ್ನು ಒಡೆಯಲು ಮುಂದಾಗಿದ್ದಾನೆ. ಅಲ್ಲದೆ ಹಮೀದ್ ಅವರ ಪುತ್ರ ಆದಿಲ್ ಅಹಮ್ಮದ್ ಎಂಬವರ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದನು. ಜೂ.10 ರಂದು ಮಧ್ಯಾಹ್ನ2 ರ ಹೊತ್ತಿಗೆ ಮನೆಯ ಕಿಟಕಿ ಸಮೀಪ ನಿಲ್ಲಿಸಿದ್ದ ಎರಡು ರಿಕ್ಷಾಗಳ ಬ್ಯಾಟರಿಗಳನ್ನು ಅರ್ಫಾನ್ ಮತ್ತು ಆತನ ಇಬ್ಬರು ಸಹಚರರು ಕಳವು…
Ahamadab : ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡು ನೂರಾರು ಮಂದಿ ವಿಮಾನ ದುರಂತದಲ್ಲಿ (Ahmedabad Plane Tragedy) ಸಾವಾನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಹೊರತುಪಡಿಸಿ ವಿಮಾನದಲ್ಲಿದ್ದವರೆಲ್ಲರೂ ಸುಟ್ಟು ಕರಕಲಾಗಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಕಥೆಗಳು ಒಂದೊಂದಾಗಿ ಗೊತ್ತಾಗುತ್ತಿವೆ.ತಮ್ಮ ಪತ್ನಿಯ ಕೊನೆ ಆಸೆ ಈಡೇರಿಸಲು ಆಕೆಯ ಚಿತಾಭಸ್ಮವಿಸರ್ಜನೆಗೆ ಲಂಡನ್ ನಿಂದ ಅಹಮದಾಬಾದ್ ಗೆ(London to Ahamedabad) ಬಂದ ವ್ಯಕ್ತಿಯೋರ್ವರು ತಾವೇ ಸುಟ್ಟು ಬೂದಿಯಾಗಿದ್ದಾರೆ ಎಂಬ ಕಥೆ ಎಂಥವರನ್ನೂ ಭಾವುಕರನ್ನಾಗಿಸುತ್ತೆ. ಗುಜರಾತಿನ (Gujrat) ಅಮೋಲಿ ಜಿಲ್ಲೆಯ ವಾಡಿಯಾ ಗ್ರಾಮದ ಮೂಲದ ಇದೀಗ ಲಂಡನ್ ನಿವಾಸಿಯಾಗಿರುವ ಅರ್ಜುನ್ ಬಾಯ್ ಮನುಭಾಯ್ ಪಟೋಲಿಯಾ ಕೆಲವೇ ದಿನಗಳ ಹಿಂದೆ ಅಹಮದಾಬಾದ ಆಗಮಿಸಿದ್ದರು. ಅವರ ಪತ್ನಿ ಭಾರತಿಬೆನ್ ವಾರದ ಹಿಂದೆ ಲಂಡನ್ನಲ್ಲಿ ನಿಧನರಾಗಿದ್ದರು. ಅವರ ಪೂರ್ವಜರ ಗ್ರಾಮದ ನೀರಿನಲ್ಲಿಯೇ ಅವರ ಚಿತಾಭಸ್ಮವನ್ನು ವಿಸರ್ಜಿಸಬೇಕೆಂಬುದು ಅವರ ಅಂತಿಮ ಆಸೆಯಾಗಿತ್ತು. ಹೀಗಾಗಿ ಅರ್ಜುನ್ ಬಾಯ್ ತಮ್ಮ8 ಮತ್ತು 4 ವರ್ಷದ ಸಣ್ಣ ಹೆಣ್ಣುಮಕ್ಕಳನ್ನು ಲಂಡನ್ನಲ್ಲಿಯೇ ಬಿಟ್ಟು ಅರ್ಜುನ್ ಒಬ್ಬಂಟಿಯಾಗಿ ಭಾರತಕ್ಕೆ ಬಂದಿದ್ದರು. ಹೆಂಡತಿಯ ಅಂತಿಮ…
ಅಸೈಗೋಳಿ : ಮಂಗಳೂರು ತಾಲೂಕಿನ ಕೊಣಾಜೆ ಬಳಿ ಅಸೈಗೋಳಿಯಲ್ಲಿ ಇರುವ ಕ್ಸೇವಿಯರ್ ಐಟಿಐ ಸಂಸ್ಥೆಯಲ್ಲಿ 2025-26 ಶೈಕ್ಷಣಿಕ ಸಾಲಿಗೆ ಪ್ರವೇಶ ಆರಂಭವಾಗಿದೆ. ಹಲವು ಇಂಜಿನಿಯರಿಂಗ್ ತರಬೇತಿ ಹುದ್ದೆಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ.ಸಂಸ್ಥೆಯಲ್ಲಿ ಕೆಳಕಂಡ ಕೋರ್ಸ್ಗಳನ್ನು ನಡೆಸಲಾಗುತ್ತಿದೆ: ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್, ಮೆಕಾನಿಕ್, ಡೀಸೆಲ್ ಮೆಕಾನಿಕ್, ಎಂ.ಆರ್.ಎ.ಸಿ (ರೆಫ್ರಿಜರೇಷನ್ ಮತ್ತು ಎಸಿ ಮೆಕಾನಿಕ್), ವೆಲ್ಡರ್ ,ಮೆಕಾನಿಕ್ ಮೋಟಾರ್ ವೀಕೆಲ್ (ಎಂ.ಎಂ.ವಿ.) – ಎಸ್ಎಸ್ಎಲ್ಸಿ ಪಾಸ್ ವಿದ್ಯಾರ್ಥಿಗಳಿಗಾಗಿ 2 ವರ್ಷದ ಕೋರ್ಸ್.ಕನಿಷ್ಠ ಅರ್ಹತೆ: ಎಸ್ಎಸ್ಎಲ್ಸಿ ಪಾಸ್ ಅಥವಾ ಪಿಯುಸಿ ಪಾಸ್ / ಫೇಲ್ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲ್ ಅವರನ್ನು ಸಂಪರ್ಕಿಸಬಹುದು. ದೂರವಾಣಿ: 94482 39682
ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ. ವಾರದ ಹಿಂದಷ್ಟೇ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಎನ್ಐಎ ತನಿಖೆಗೆ ವಹಿಸಿ ಆದೇಶ ಮಾಡಿತ್ತು. ಮಂಗಳೂರು, ಜೂನ್ 14: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ. ವಾರದ ಹಿಂದಷ್ಟೇ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಎನ್ಐಎ ತನಿಖೆಗೆ ವಹಿಸಿ ಆದೇಶ ಮಾಡಿತ್ತು.ಬೆಂಗಳೂರು ಎನ್ಐಎ ಘಟಕದ ಅಧಿಕಾರಿಗಳು ಮಂಗಳೂರಿಗೆ ಬಂದಿದ್ದು ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಇಬ್ಬರು ಇನ್ಸ್ ಪೆಕ್ಟರ್ ಮತ್ತು ಸಿಬಂದಿಯುಳ್ಳ ಅಧಿಕಾರಿಗಳ ತಂಡ ಮಂಗಳೂರಿಗೆ ಬಂದಿದೆ. ಮಂಗಳೂರು ಸಿಸಿಬಿ ಮತ್ತು ಇತರ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆ ಪಿಎಫ್ಐ ಕಾರ್ಯಕರ್ತರು ಶಾಮೀಲಾಗಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ…
ಕುಂಪಲ : ಇಲ್ಲಿನ ಶ್ರೀ ಬಾಲಕೃಷ್ಣ ಮಂದಿರ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 90%ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ‘ಜ್ಞಾನ ದೀವಿಗೆ ಪುರಸ್ಕಾರ’ ನೀಡುವ ಕಾರ್ಯಕ್ರಮ ಜೂನ್ 15, 2025, ಭಾನುವಾರ ಸಂಜೆ 5.30ಕ್ಕೆ ನಡೆಯಲಿದೆ.ಕಾರ್ಯಕ್ರಮವನ್ನು ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಗುತ್ತಿದ್ದು, ದೀಪ ಪ್ರಜ್ವಲನೆ ಕಾರ್ಯವನ್ನು ಡಾ. ಕೆ.ಸಿ. ನಾಯ್ಕ (ಆಡಳಿತಾಧಿಕಾರಿಗಳು, ಶಕ್ತಿ ಎಜ್ಯುಕೇಶನ್ ಸೊಸೈಟಿ, ಶಕ್ತಿನಗರ, ಮಂಗಳೂರು) ನೆರವೇರಿಸಲಿದ್ದಾರೆ.ಪ್ರಮುಖ ಅತಿಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಜ್ಞಾನ ದೀವಿಗೆ ಪುರಸ್ಕಾರವನ್ನು ಪ್ರಧಾನ ಮಾಡಲಿದ್ದಾರೆ.ಸಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದವ ಕೋಟ್ಯಾನ್, ಉದ್ಯಮಿ, ಪೆರ್ಮುದೆ, ಮುಖ್ಯ ಅತಿಥಿಗಳಾಗಿ ಜಗದೀಶ್ ಆಳ್ವ, ಅಧ್ಯಕ್ಷರು, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ , ಗಿರೀಶ್ ಉಳ್ಳಾಲ್, ನಿವೃತ್ತ ಬ್ಯಾಂಕ್ ಅಧಿಕಾರಿ, ಕಾಪಿಕಾಡ್,ಚಂದ್ರಶೇಖರ್ ಗಟ್ಟಿ, ಉದ್ಯಮಿ, ಮುಡಿಪು, ರಂಜನ್ ಶೆಟ್ಟಿ, ನಿರ್ದೇಶಕರು, ಕುಡ್ಲ ಚಿಟ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು, ಗಂಗಾ ಆನಂದ್, ಅಧ್ಯಕ್ಷರು, ಬ್ರಹ್ಮಶ್ರೀ ಬಿಲ್ಲವ…
ಬೆಳ್ಮ : ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್ (25) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದವರು. ನಸುಕಿನ ಜಾವ ಹೃದಯ ಭಾಗದಲ್ಲಿ ನೋವುಂಟಾಗಿದ್ದು, ಕೆಲ ಕ್ಷಣಗಳಲ್ಲೇ ವಿನಯ್ ಸಾವನ್ನಪ್ಪಿದ್ದಾರೆ. ನಡುಪದವು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿನಯ್ ಉದ್ಯೋಗದಲ್ಲಿದ್ದರು. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭ ಕಾಲಿಗೆ ಕಲ್ಲು ಚುಚ್ಚಿ , ಸೆಪ್ಟಿಕ್ ಆಗಿ ಬೆರಳನ್ನು ಕತ್ತರಿಸಲಾಗಿತ್ತು. ಈ ಹಿಂದೆ ದಪ್ಪ ಶರೀರವನ್ನು ಹೊಂದಿದ್ದ ವಿನಯ್ ಡಯೆಟಿಂಗ್ ಮೂಲಕ ತೂಕವನ್ನು ಇಳಿಸಿದ್ದರು. ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ತನ್ನನ್ನು ಸಕ್ರಿಯವಾಗಿ ವಿನಯ್ ತೊಡಗಿಸಿಕೊಂಡಿದ್ದರು. ತಂದೆ ಶಿವಾನಂದ ರೆಡ್ಡಿಯವರು ಭಜನಾ ಸಂಕೀರ್ತನೆಯಲ್ಲಿ ಸಕ್ರಿಯ ಹಾರ್ಮೋನಿಯಂ ವಾದಕರಾಗಿದ್ದು, ಉಚಿತವಾಗಿ ಮಕ್ಕಳಿಗೆ ಹಾರ್ಮೋನಿಯಂ ಕಲಿಸಿಕೊಡುವವರಾಗಿದ್ದಾರೆ. ಬಳ್ಳಾರಿ ಮೂಲದವರಾಗಿರುವ ಕುಟುಂಬ ಕಳೆದ 25 ವರ್ಷಗಳಿಂದ ದೇರಳಕಟ್ಟೆ ಕಾನೆಕೆರೆಯಲ್ಲಿ ವಾಸವಿದ್ದರು. ಮೃತ ವಿನಯ್ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಉಳ್ಳಾಲ : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಸುವರ್ಣ ಮಹೋತ್ಸವ ಸಂಭ್ರಮ – 2025 ಪ್ರಯುಕ್ತ 50ನೇ ವಾರ್ಷಿಕ ಆರ್ಯಭಟ ಪ್ರಶಸ್ತಿ ಪ್ರಧಾನ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಸ್ಥಾಪಕ ಅಧ್ಯಕ್ಷ ವಿದ್ವಾನ್ ಶ್ರಾವಣ್ ಉಳ್ಳಾಲ್ ಇವರಿಗೆ ಅಂತರಾಷ್ಟ್ರೀಯ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಡಾ| ಹೆಚ್.ಎಲ್ ಎನ್ ರಾವ್ ಸ್ಥಾಪಿಸಿದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ 50ನೇ ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಗೌರವಾನ್ವಿತ ನ್ಯಾಯಮೂರ್ತಿ ಡಾ. ಅಶೋಕ್ ಬಿ ಹಿಂಚಿಗೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿ ಕಳೆದ 50 ವರ್ಷಗಳಲ್ಲಿ ಸಾಧಿಸಿ ಗೌರವಿಸುವವರ ಕಾರ್ಯ ಎಲ್ಲರಿಗೂ ಮಾದರಿ, ಕಾರ್ಯಶ್ರದ್ಧೆಗೆ ಮೆಚ್ಚುಗೆಮ್ಯಾನ್ ಹೂ ಮೇಕ್ಸ್ ಟೈಟಲ್ ಅಂದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ . ಗೌರವ ಸ್ವೀಕರಿಸಿದವರಿಂದ ಪ್ರಶಸ್ತಿಗೆ ಬೆಲೆ, ತೂಕ, ಮೌಲ್ಯ ಘನತೆ ಬಂದಿದೆ. ಮಹಿಳಾ ಸಬಲೀಕರಣ, ವಯೋವೃದ್ಧರು, ಯುವಸಮುದಾಯವನ್ನು ಸಮಾಜದಲ್ಲಿ ಗುರುತಿಸುವ ಕಾರ್ಯ ಮಹತ್ತರವಾದದ್ದು. ಅವರಿಗೂ ತಾವು ಆಯ್ದುಕೊಂಡ…
ಉಳ್ಳಾಲ : ಬಿಜೆಪಿ ಮಂಗಳೂರು-204 ಮಂಡಲದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಗದೀಶ್ ಆಳ್ವ ಕುವೆತ್ತಬೈಲ್ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಬೆನ್ನಲ್ಲೇ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಯಶವಂತ್ ದೇರಾಜೆ , ಸೋಮೇಶ್ವರ ಪುರಸಭೆ ಉಪಾಧ್ಯಕ್ಷರು, ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ರವಿಶಂಕರ್ ಸೋಮೇಶ್ವರ , ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸುರೇಶ್ ಆಳ್ವ ಸಾಂತ್ಯಗುತ್ತು, ಚಿನ್ನದ ಕೆಲಸ ನಿರ್ವಹಿಸುತ್ತಿರುವ ಮಾರಿಪಲ್ಲ ನಿವಾಸಿ ಮನೋಜ್ ಆಚಾರ್ಯ , ಕೃಷಿಕರು, ಬಾಳೆಪುಣಿಯ ಸುಮನ ಹರೀಶ್ ಶೆಟ್ಟಿ , ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅಧಿಕಾರಿ ಹುಕ್ರಪ್ಪ ನಾಯ್ಕ್ ಬಿ. ಸಣ್ಣಪದವು ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಪ್ರಧಾನ ಕಾರ್ಯದರ್ಶಿಗಳಾಗಿ ವಕೀಲರು ಮಾಡೂರು ನಿವಾಸಿ ಮೋಹನ್ ರಾಜ್ ಕೆ ಆರ್ , ಸಿವಿಲ್ ಗುತ್ತಿಗೆದಾರರಾಗಿರುವ ತೊಕ್ಕೊಟ್ಟು ನಿವಾಸಿ ದಯಾನಂದ ತೊಕ್ಕೊಟ್ಟು ಆಯ್ಕೆಯಾದರೆ, ಕಾರ್ಯದರ್ಶಿಗಳಾಗಿ ಸಿವಿಲ್ತೊ ಗುತ್ಡತಿಗೆದಾರರಾಗಿರುವ ರಮೇಶ್ ಬೆದ್ರೋಳಿಕೆ, ಕೊಣಾಜೆ ಕಟ್ಟೆಪುಣಿ ನಿವಾಸಿ, ಕೊಣಾಜೆ ಗ್ರಾಮ…

