ಉಳ್ಳಾಲ, ಏ. 09: ಕಿನ್ಯ ಅಜ್ಜಿನಡ್ಕ ನಿವಾಸಿ ರೌಡಿಶೀಟರ್ ಆರಿಫ್ ಕೊಲೆ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಏಳು ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ. ತನಿಖೆಯು ಸ್ಥಳೀಯ ಮರಣದಂಡನೆಕಾರರು ಮತ್ತು ಅಂತರರಾಷ್ಟ್ರೀಯ ನಿರ್ವಾಹಕರನ್ನು ಒಳಗೊಂಡ ಯೋಜಿತ ಪಿತೂರಿಯನ್ನು ಬಹಿರಂಗಪಡಿಸಿದೆ. ಬಂಧಿತ ಆರೋಪಿಗಳನ್ನು ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಜ್ವಾನ್ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಅವರನ್ನು ಬಂಧಿಸಲಾಗಿದೆ.ಮಾರ್ಚ್ 27 ರ ಬೆಳಿಗ್ಗೆ, ಆರಿಫ್ ತನ್ನ ಬೈಕ್ನಲ್ಲಿ ಬಂದರ್ ಮೀನು ಮಾರುಕಟ್ಟೆಯ ಕಡೆಗೆ ಪ್ರಯಾಣಿಸುತ್ತಿದ್ದಾಗ, ತೊಕ್ಕೊಟ್ಟು ಫ್ಲೈಓವರ್ ತಲುಪುತ್ತಿದ್ದಂತೆ, ಅವರನ್ನು ಹಿಂಬಾಲಿಸಿಕೊಂಡು ಬಂದ ಕಾರು ಉದ್ದೇಶಪೂರ್ವಕವಾಗಿ ಹಿಂದಿನಿಂದ ಅವರ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದಿದೆ. ಆರಿಫ್ ನೆಲಕ್ಕೆ ಬಿದ್ದಾಗ, ಮಾರಕ ಆಯುಧಗಳನ್ನು ಹೊಂದಿದ್ದ ಗುಂಪು ಅವರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿತ್ತು.ಈ ಭೀಕರ ಹತ್ಯೆಯ ವ್ಯವಸ್ಥಿತ ಸಂಚು ತನಿಖೆಯಿಂದ ಬಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.ಬಂಧಿತರಲ್ಲಿ ಒಬ್ಬನಾದ ಇರ್ಷಾದ್,…
Author: UllalaVani
ಕರ್ನಾಟಕ ರಾಜ್ಯದಲ್ಲಿ ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ಪ್ರಾರಂಭವಾಗಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಬೋಧನೆಗೆ ದ್ವಿ ಭಾಷಾ ನೀತಿಯಂತೆ ಶಿಕ್ಷಣ ಇಲಾಖೆಯು ತಯಾರಿ ನಡೆಸುತ್ತಿದೆ. ಸರಕಾರಿಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತರಬೇತಿ ನಡೆಯುತ್ತಿದೆ. ಇದು ಸಂತೋಷದಾಯಕವಾದAತ ವಿಚಾರ. ಆದರೆ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇದರಿಂದಾಗಿ ಮಕ್ಕಳ ಸಂಖ್ಯೆಯು ತೀರಾ ಕಡಿಮೆಯಾಗುವ ಸಂಭವವಿದೆ. ಆದುದರಿಂದ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿಯೂ ಅನುದಾನಿತ ಎಲ್ ಕೆ ಜಿ ಮತ್ತು ಯುಕೆಜಿ ಹಾಗೂ ಒಂದನೇ ತರಗತಿ ಪ್ರಾರಂಭಿಸಲು ಅನುಮತಿ ನೀಡುವಂತೆ ಮಂಗಳೂರು ವಿಧಾನಸಭಾ ಶಾಸಕರು, ಕರ್ನಾಟಕ ರಾಜ್ಯದ ಜನಪ್ರಿಯ ವಿಧಾನಸಭಾಧ್ಯಕ್ಷರಾದ ಹಾಜಿ ಯುಟಿ ಖಾದರ್ ಫರೀದರ್ ಅವರಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ಶಿಕ್ಷಕರ ಸಂಘದ ಪರವಾಗಿ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಪರವಾಗಿ ವಿನಂತಿಸಲಾಯಿತು. ಸಂಘದ ಮನವಿಗೆ…
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತು ಚೀಟಿ ನೀಡಲು ಸಮುದಾಯ ಆಧಾರಿತ ಸಂಸ್ಥೆಗಳು ಸಹಕರಿಸಬೇಕು. ಅವರಿಗೆ ನಿವೇಶನವನ್ನು ಮಂಜೂರು ಮಾಡುವ ಕುರಿತು ಸಂಬAಧಪಟ್ಟ ಇಲಾಖೆಗಳು ಕ್ರಮವಹಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸೂಚಿಸಿದ್ದಾರೆ. ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಆಯ್ಕೆ ಹಾಗೂ ಸಮನ್ವಯ ಸುತಿ ಸಭೆ ಹಾಗು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ ಕುರಿತು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧನಶ್ರೀ ಯೋಜನೆಯಡಿ ಎಚ್.ಐ.ವಿ ಸೋಂಕಿತ ಮಹಿಳೆಯರಿಗೆ ಹಾಗೂ ಚೇತನ ಯೋಜನೆಯಡಿ ದಮನಿತ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಧನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳಿಗೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಗಳ ಸಮಸ್ಯೆಯಾದಲ್ಲಿ ಅದನ್ನು ಪರಿಹರಿಸುವಂತೆ ಕ್ರಮವಹಿಸಬೇಕು ಎಂದು ಡಿ.ಸಿ ಹೇಳಿದರು. 15ಮಂದಿ ನಿವೇಶನ ರಹಿತ ಟ್ರಾನ್ಸ್ ಜೆಂಡರ್ಸ್ ಪಟ್ಟಿಯನ್ನು ಮಂಗಳೂರು ಮಹಾನಗರಪಾಲಿಕೆಗೆ ಒದಗಿಸಲಾಗಿದೆ. ಗೃಹಲಕ್ಷಿö್ಮÃ ಯೋಜನೆಯಡಿ…
ಕಾಸರಗೋಡು, ಏ. 08 ;ಏ. 9 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಜಿಲ್ಲೆ ಸಂಪೂರ್ಣವಾಗಿ ಸಿದ್ಧವಾಗಿದ್ದು, ನಾಲ್ಕು ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತ ಯಂತ್ರಗಳು ಮತ್ತು ಸಾಮಗ್ರಿಗಳ ವಿತರಣೆ ನಡೆಯುತ್ತಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 5,480 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ 229, ಕಾಸರಗೋಡಿನಲ್ಲಿ 218, ಉದುಮದಲ್ಲಿ 217, ಕಾಞಂಗಾಡ್ನಲ್ಲಿ 239 ಮತ್ತು ತ್ರಿಕರಿಪುರದಲ್ಲಿ 218 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಿಗೆ ಕಾಸರಗೋಡಿನ ಸರ್ಕಾರಿ ಕಾಲೇಜಿನಲ್ಲಿ; ಉದುಮಕ್ಕೆ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ್ತು ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳಿಗೆ ಕಾಞಂಗಾಡ್ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತಗಟ್ಟೆ ವಿತರಣಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಂದ ಬೆಳಿಗ್ಗೆಯಿಂದಲೇ ಚುನಾವಣಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.ಜಿಲ್ಲೆಯಲ್ಲಿ ಒಟ್ಟು 11,00,036 ಮತದಾರರಿದ್ದು, ಇದರಲ್ಲಿ 5,57,163 ಮಹಿಳೆಯರು, 5,42,861 ಪುರುಷರು ಮತ್ತು 12…
ಉಳ್ಳಾಲ; ಅಲ್ಫಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಳ್ಳಾಲ ಫುಟ್ಬಾಲ್ ಅಕಾಡೆಮಿ ವತಿಯಿಂದ ಬೇಸಿಗೆ ಫುಟ್ಬಾಲ್ ಶಿಬಿರವು ಎ.9ರಿಂದ ಮೇ 15ರವರೆಗೆ ಆಯೋಜಿಸಲಾಗಿದೆ. ಉಳ್ಳಾಲದ ಗ್ರೀನ್ಸ್ ಫೀಲ್ಡ್ ಮೈದಾನದಲ್ಲಿ ಬೆಳಗ್ಗೆ 6;30ರಿಂದ 9;30ರವರೆಗೆ ಶಿಬಿರ ನಡೆಯಲಿದೆ. 6ರಿಂದ 15 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದು ಉಳ್ಳಾಲ ಫುಟ್ಬಾಲ್ ಅಕಾಡೆಮಿಯ ಹೆಡ್ ಕೋಚ್ ತಮೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9972724345
ಮಡ್ಯಾರ್ ; ವಿಶ್ವ ಪಶುವೈದ್ಯರ ದಿನಾಚರಣೆ ಪ್ರಯುಕ್ತ ಕರ್ನಾಟಕ ಪಶುವೈದ್ಯರ ಸಂಘ(ರಿ.) ದಕ್ಷಿಣ ಜಿಲ್ಲಾ ಘಟಕ ಮತ್ತು ಅಸ್ತç ಗ್ರೂಪ್ ಹಾಗೂ ಫೀಡ್ ಆನಿಮಲ್ ಸೆವ್ ಆನಿಮಲ್ ಟ್ರಸ್ಟ್ ನಂದಾದೀಪ ಸೇವಾ ಬಳಗ ಮಡ್ಯಾರ್ ಕೋಟೆಕಾರ್ ಮಂಗಳೂರು ಜಂಟಿ ಆಶ್ರಯದಲ್ಲಿ ಏ.25ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ಗಂಟೆವರೆಗೆ ಮಡ್ಯಾರ್ ಶಾಸ್ತರ ಅಶ್ವಥ ಕಟ್ಟೆಯ ಮುಂಭಾಗ ಉಚಿತ ರೇಬಿಸ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ. ಸಾಕು ಪ್ರಾಣಿ ನಾಯಿ ಮತ್ತು ಬೆಕ್ಕುಗಳು ಹಾಗೂ ಬೀದಿ ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಗುತ್ತದೆ. ರೇಬೀಸ್ ಎಂಬುದು ಮಾನವ ಮತ್ತು ಪ್ರಾಣಿಗಳಿಗೆ ಅಪಾಯಕಾರಿಯಾದ ವೈರಸ್ ಸೋಂಕು ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸುವುದು ಅವಶ್ಯಕವಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ;ಅನು ಸುಪರ್ಣ: 9902299360, ಹರೀಶ್ ರಾವ್: 8123104592, ಶೋಭಾ ಗಟ್ಟಿ:…
ಕೊಣಾಜೆ; ಉಳ್ಳಾಲ ತಾಲೂಕಿನಾದ್ಯಂತ ಸೃಷ್ಟಿ ಮಾಡಿರುವ ಬಯಲು ಕಸಾಲಯಗಳನ್ನು ಅಳಿಸಿ ಸುಸ್ಥಿರ ಅಭಿವೃದ್ಧಿ ಕಾರ್ಯವನ್ನು ಅಭಿಯಾನ ರೀತಿಯಲ್ಲಿ ಶೀಘ್ರವಾಗಿ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು. ಮುಡಿಪು ಜೀವನ್ ಮೂರ್ತಿ ಸರ್ವೋದಯ ಮಂಟಪದಲ್ಲಿ ನಡೆದ ಶೂನ್ಯ ಕಸ ನಿರ್ವಹಣೆ ಸ್ವಚ್ಛ ಮನೆ ಸ್ವಯಂ ಘೋಷಣೆ ಸುಸ್ಥಿರ ಸ್ವಚ್ಛತೆ ಸುಸ್ಥಿರ ಅಭಿವೃದ್ಧಿ ಸಂವಾದಕ್ಕೆ ಚಾಲನೆ ನೀಡಿ ಕೆಎ19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ವತಿಯಿಂದ ಅಸಾಹಾಕಯ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ನೀಡಲಾದ ಒಂದು ಲಕ್ಷ ಇಪ್ಪತ್ತೆöÊದು ಸಾವಿರ ಮೊತ್ತದ ಶೈಕ್ಷಣಿಕ, ಆರೋಗ್ಯ, ಸ್ವ ಉದ್ಯೋಗ, ಸೋಲಾರ್ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.ರೋಗ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಸ್ವಚ್ಛ ಪರಿಸರ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಸರಕಾರ ಸಮಾಜ ಹಾಗೂ ಸಂಘಸAಸ್ಥೆಗಳು ಒಂದಾಗಿ ಶ್ರಮಿಸುವುದು ಅಗತ್ಯ ಎಂದರು.ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜನ ಶಿಕ್ಷಣ ಟ್ರಸ್ಟ್ ಹಾಗು ಉಳ್ಳಾಲ ಪುತ್ತೂರು, ಮಂಗಳೂರು ತಾಲೂಕಿನ 11 ಕುಟುಂಬಗಳಿಗೆ ನೆರವಾದ ಕೆಎ19.20 ಯುನೈಟೆಡ್ ಆಫ್…
ಬಂಟ್ವಾಳ ; ಸಾಮಾನ್ಯವಾಗಿ ಚುನಾವಣೆ ಸಮೀಪಿಸುತ್ತಿದ್ದರು ಮತದಾರರು ಮತಹಾಕುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವುದಿಲ್ಲ. ಕೆಲವರು ಉತ್ಸಾಹದಿಂದ ಮತ ಹಾಕಿದರೆ ಇನ್ನು ಕೆಲವರು ಯಾರಪ್ಪ ಹೋಗುವುದು ಅಷ್ಟು ದೂರ ಎಂಬ ಭಾವನೆಯಿಂದ ಮನೆಯಲ್ಲಿಯೇ ಉಳಿದುಬಿಡುತ್ತಾರೆ. ಆದರೆ ಈ ಬಾಲಕಿಯೋರ್ವಳು ಮತದಾರರನ್ನು ಚುನಾವಣಾ ಪ್ರಕ್ರಿಯೆಯ ಭಾಗವಾಗಿಸಲು ವಿಶಿಷ್ಟ ಜಾಗೃತಿಯನ್ನು ಮೂಡಿಸುತ್ತಿದ್ದಾಳೆ. ಹೌದು, ಬಂಟ್ವಾಳ ತಾಲೂಕಿನ 11 ವರ್ಷದ ಈ ಪುಟ್ಟ ಹುಡುಗಿ ಚುನಾವಣೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಲು ಮಂಜೇಶ್ವರ, ಕಾಸರಗೋಡು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ. ಐದು ಭಾಷೆಗಳನ್ನು ಕಲಿತಿರುವ ಸನ್ನಿಧಿ ಕಶೆಕೋಡಿ ದೆಹಲಿ, ಗೋವಾ, ಕೇರಳ , ಕರ್ನಾಟಕ ಮುಂತಾದ ರಾಜ್ಯಗಳ ಚುನಾವಣೆಗಳಿಗೂ ಇದೇ ರೀತಿಯ ಕಾರ್ಯದಿಂದ ಪ್ರಶಂಸೆ ಗಳಿಸಿದ್ದಾರೆ. ಕೇರಳ ಚುನಾವಣೆ ಹಿನ್ನಲೆ ಕಾಸರಗೋಡು ಜಿಲ್ಲಾ ಕಲೆಕ್ಟರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಪುಟ್ಟ ಪೋರಿಯ ಕೆಲಸಕ್ಕೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಲೋಕೇಶ್ ಗೌಡ ಕಶೆಕೋಡಿ ಹಾಗೂ ಶೀಲಾವತಿ ದಂಪತಿಯ ಪುತ್ರಿಯಾಗಿರುವ ಸನ್ನಿಧಿ ಕಶೆಕೋಡಿ ಪ್ರಸ್ತುತ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ…
ಈ ವಾರ್ಷಿಕ ಸಾಲಿನಲ್ಲಿ ಅತ್ಯುತ್ತಮ ಸೌಲಭ್ಯದೊಂದಿಗೆ ಪಿಯುಸಿ ಜೊತೆ ಆರಂಭವಾಗಲಿರುವ ಕಣಚೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ ಮತ್ತು ಕಣಚೂರು ಮೆಡಿಕಲ್ ಕಾಲೇಜಿನ ದಶಮಾನೋತ್ಸವ ಕೊಡುಗೆಯಾಗಿ ನೀಡುವ ಒಂದು ಕೋಟಿ ರುಪಾಯಿ ವಿದ್ಯಾರ್ಥಿ ವೇತನಕ್ಕೆ ಅರ್ಹತಾ ಪರೀಕ್ಷೆಯು ಕಣಚೂರು ಹೆಲ್ತ್ ಸಿಟಿ ಕ್ಯಾಂಪಸ್ ನಲ್ಲಿ ನಡೆಯಿತು. ಕಣಚೂರು ಸಂಸ್ಥೆಯು ಪಿಯುಸಿ ಇಂಟಿಗ್ರೇಟೆಡ್ NEET, JEE, NDA, CET, CA, ಮಾಡಲು ಬಯಸುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸಿತ್ತು. ಭಾರತದ ಖ್ಯಾತ ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರರು ಮತ್ತು ಶ್ರೇಷ್ಠ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿ ಆರಂಭಿಸಿರುವ ಈ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಇದು ಹುಡುಗರಿಗೆ ಮತ್ತು ಹುಡುಗಿಯರಿಗೆ ಅವರ ಸಾಧನೆಗೆ ಅವಕಾಶ ಕಲ್ಪಿಸುವ ಪ್ರಯತ್ನವಾಗಿದೆ. ಗ್ರಾಮೀಣ ಮತ್ತು ಪ್ರತಿಭಾವಂತ ಆರ್ಥಿಕ ಹಿಂದುಳಿದ ಸಂಸಾರದ ಮಕ್ಕಳಿಗೆ ಪಿಯುಸಿ ಇಂಟಿಗ್ರೇಟೆಡ್ ಕಲಿಯಲು ಲಕ್ಷಾಂತರ ರೂಪಾಯಿ…
ಉಳ್ಳಾಲ: ನೂರೆ ಅಜ್ಮೀರ್ ಇದರ ಐದನೇ ವಾರ್ಷಿಕದ ಐತಿಹಾಸಿಕ ಮಹಾ ಸಂಗಮ ಕಾರ್ಯಕ್ರಮ ಉಳ್ಳಾಲ ಹಝ್ರತ್ ಕಾಲೇಜು ಮೈದಾನದಲ್ಲಿ ನಡೆಯಿತು. ಸ್ಪೀಕರ್ ಯುಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವಿಧ ಧಾರ್ಮಿಕ ಕೇಂದ್ರಗಳ ಜೊತೆ ಸೌಹಾರ್ದ ಸಾಮರಸ್ಯ ಇರುವ ಈ ಉಳ್ಳಾಲ ಅಭಿವೃದ್ಧಿ ಆಗಬೇಕು.ಇದು ನಮ್ಮ ಯೋಜನೆ ಆಗಬೇಕು. ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ನಾವು ಮಾಡಬೇಕು ಎಂದು ಕರೆ ನೀಡಿದರು.ಶೈಖುನಾ ಇರ್ಶಾದ್ ದಾರಿಮಿ ಮಿತ್ತ ಬೈಲ್ ದುಆ ನೆರವೇರಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ ಶುಭಹಾರೈಸಿದರು. ವಲಿಯುದ್ದೀನ್ ಫೈಝಿ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಫಾರೂಕ್ ಉಳ್ಳಾಲ್, ಶರೀಫ್ ಹಾಜಿ ವೈಟ್ ಸ್ಟೋನ್, ಉಳ್ಳಾಲ ದರ್ಗಾ ಮಾಜೀ ಅಧ್ಯಕ್ಷ ಅಬ್ದುಲ್ ರಶೀದ್ , ಮುಸ್ತಫಾ ಅಬ್ದುಲ್ಲಾ, ಲತೀಫ್ ಗುರುಪುರ, ನಾಝಿಮ್ ಮುಕ್ಕಚೇರಿ,ಎಂ ಎಚ್ ಮೊಯ್ದಿನ್ ಹಾಜಿ, ಆಸಿಫ್ ಅಬ್ದುಲ್ಲಾ,ಅಬ್ದುಲ್ ರಹ್ಮಾನ್ ಫ್ಲವರ್, ಫಕೀರಬ್ಬ ಮಾಸ್ಟರ್, ಕೆ.ಎಸ್.ಮೊಯ್ದಿನ್, ಹಮೀದ್ ಕಣ್ಣೂರು, ಅಶ್ರಫ್…

