ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ಸಮುದ್ರಪಾಲಾದ ಹಾಸನ ಹುಣಸೀಕೆರೆಯ ಮಿರ್ಜಾ ಮೊಹಲ್ಲಾ ವಲ್ಲಭಬಾಯಿ ರಸ್ತೆಯ ನಾಲ್ವರು ಸ್ನೇಹಿತರ ಮೃತದೇಹ ಸೋಮವಾರ ಬೆಳಿಗ್ಗೆ ಮತ್ತು ಭಾನುವಾರ ತಡರಾತ್ರಿ ವೇಳೆ ಪತ್ತೆಯಾಗಿದೆ.
ಭಾನುವಾರ ತಡರಾತ್ರಿ ವೇಳೆ ಸಯ್ಯದ್ ಖಲೀಲ್ (19) ಮೃತದೇಹ ಪತ್ತೆಯಾಗಿದ್ದರೆ, ಇಮ್ರಾನ್ ಪಾಷಾ(19), ಮಹಮ್ಮದ್ ಶಿಯಾಬ್ (19), ಮಹಮ್ಮದ್ ಹನೀಫ್(20) ಎಂಬವರ ಸೋಮೇಶ್ವರ ಸಮುದ್ರದಲ್ಲಿ ಜಲ ಸಮಾಧಿಯಾಗಿದ್ದರು.
ಘಟನೆಯ ಬಳಿಕ ಸ್ಥಳೀಯ ಈಜುಗಾರರ ತಂಡ ಸೇರಿದಂತೆ ಅಗ್ನಿಶಾಮಕ ದಳ, ಕೋಸ್ಟ್ಗಾರ್ಡ್ನವರು ಹುಡುಕಾಟ ನಡೆಸಿದ್ದರು. ರವಿವಾರ ತಡರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದ್ದು ರಾತ್ರಿಯೇ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹಾಸನಕ್ಕೆ ಕಳುಹಿಸಿಕೊಡಲಾಗಿತ್ತು. ಸೋಮವಾರ ಬೆಳಗ್ಗೆ ಮತ್ತಿಬ್ಬರ ಮೃತದೇಹ ಪತ್ತೆಯಾಗಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷ ನಡೆಸಿ ಹೆತ್ತವರಿಗೆ ಬಿಟ್ಟುಕೊಡಲಾಯಿತು.
ಸಮುದ್ರ ಪಾಲಾದ ನಾಲ್ವರು ಸೇರಿದಂತೆ ಆರು ಮಂದಿ ಸ್ನೇಹಿತರು ರವಿವಾರ ಹಾಸನದಿಂದ ಮೂರು ಬೈಕ್ಗಳಲ್ಲಿ ಹೊರಟು ಉಳ್ಳಾಲ ಸೈಯಿದ್ ಮದನಿ ದರ್ಗಾ ವೀಕ್ಷಣೆಗೆಂದು ಬಂದಿದ್ದರು. ಮಧ್ಯಾಹ್ನವಾದ್ದರಿಂದ ನೇರವಾಗಿ ಸೋಮೇಶ್ವರ ದೇವಸ್ಥಾನ ಬಳಿಯ ಕಡಲ ಕಿನಾರೆಗೆ ಬಂದು ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ಖಲೀಲ್ ಸಮುದ್ರದ ಅಲೆಗೆ ಸಿಲುಕಿ ಸಮುದ್ರ ಪಾಲಾದಾಗ ಆತನನ್ನು ಉಳಿಸಲು ಹೋಗಿ ಉಳಿದ ಮೂವರು ಸಮುದ್ರ ಪಾಲಾಗಿದ್ದರು.
ಸಚಿವ ಖಾದರ್ ಭೇಟಿ : ಘಟನೆಯ ಬಗ್ಗೆ ಮಾಹಿತಿ ತಿಳಿದ ಸಚಿವ ಯು.ಟಿ.ಖಾದರ್ ಬೆಂಗಳೂರಿನಿಂದ ಸಂಜೆ ವೇಳೆ ಆಗಮಿಸಿ ರಾತ್ರಿ ಘಟನಾ ಸ್ಥಳಕ್ಕೆ ಭೆಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮತ್ತು ಮೃತದೇಹಗಳನ್ನು ತ್ವರಿತ ಗತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿಯೇ ಕುಟುಂಬಕ್ಕೆ ಹಸ್ತಾಂತರಿಸಲು ಸಹಾಯ ಮಾಡಿದರು. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




