ಕೊಣಾಜೆ ; ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗ ಮತ್ತು ಯೂನಿಯನ್ ಬ್ಯಾಂಕ್ ಚೇರ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತು ಒಂದು ವಾರದ ಕಾರ್ಯಾಗಾರ ಇತ್ತೀಚಿಗೆ ನಡೆಯಿತು.

ಸಂಪನ್ಲೂಲ ವ್ಯಕ್ತಿಗಳಾಗಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರಿನ ಪ್ರಾಧ್ಯಪಕರಾದ ಡಾ.ಯತೀನ್, ಮಂಗಳೂರು ಶಾರದಾ ಕಾಲೇಜಿನ ಇಮಗ್ಲೀಷ್ ಪ್ರಾಧ್ಯಾಪಕರಾದ ಡಾ.ಮೀನಾ ಕೆ ವಣಿಕೇರ್, ಮಂಗಳೂರಿನ ಬೆಸೆಂಟ್ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಸನ್ನಕುಮಾರ್ ಎಂ.ಜೆ, ಯೆನಪೋಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಮ್ಯೂರಲ್ ಹೆನ್ರಿತ ಕುಟಿನ್ಹ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ಕೀರ್ತಿ ಡಿ’ಸೋಜ ಮಾಹಿತಿಗಳನ್ನು ಹಂಚಿಕೊAಡರು.
ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಸಚಿವರಾದ ಕೆ.ರಾಜು ಮೊಗವೀರ ಕೆ.ಎಎಸ್ ಮತ್ತು ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಅಸ್ಮಾ ಕೆ.ಎಸ್.ಎ.ಎಸ್ ಉಪಯುಕ್ತ ಮಾರ್ಗದರ್ಶನ ನೀಡಿದರು.
ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ಕೀರ್ತಿ ಡಿಸೋಜ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಡಾ.ದಿನಕರ ಕೇಂಜೂರು, ಡಾ.ರಮ್ಯ ಕೆ.ಆರ್, ವೈಶಾಲಿ ಕೆ ಮತ್ತು ಸಿ.ಲಹರಿ ಉಪಸ್ಥಿತರಿದ್ದರು.
ಕೃತಿಕ ಸ್ವಾಗತಿಸಿದರು. ಹರ್ಷಿತಾ ಬಿ,ನ್ ಮತ್ತು ಪಲ್ಲವಿ ಜೆ ಅತಿತಿಗಳನ್ನು ಪರಿಚಯಿಸಿದರು. ಪ್ರಿನ್ಸನ್ ಡಿಸೋಜ ಕಾರ್ಯಾಗಾರದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಮೋಕ್ಷಿತ ಎಮ್, ಮತ್ತು ತಂಡದವರು ಪ್ರಾರ್ಥಿಸಿದರು. ವೈಶಾಲಿ ಕೆ ವoದಿಸಿದರು. ಸಜೀಲಾ ಕೆ ಕಾರ್ಯಕ್ರಮ ನಿರೂಪಿಸಿದರು.



