ಉಳ್ಳಾಲ:ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ದಿ ಪಡೆದಿದೆ. ಯಕ್ಷಗಾನ ಅನೇಕರು ಆಕರ್ಷಿಸುವ ಕಲೆ. ವರ್ಷಗಳ ಹಿಂದೆ ವಾರಣಾಸಿ ವಿದ್ಯಾರ್ಥಿಗಳಿಂದ ಹಿಂದಿ ಭಾಷೆಯಲ್ಲಿ ಏಕಲವ್ಯ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತ್ತು. ಇದೀಗ ನಿಟ್ಟೆ ವಿ.ವಿಯಲ್ಲಿ ಮಲಯಾಳಂ ಭಾಷೆಯಲ್ಲಿ ಮಹಿಷಾಸುರನ ವಧೆ ನಡೆದಿದೆ.

ಅಶ್ವಥ್ ಮಂಜನಾಡಿ ,ದೀವಿತ್ ಎಸ್.ಕೆ.ಪೆರಾಡಿ ನಿರ್ದೇಶನದಲ್ಲಿ ಮಹಿಷಾಸುರ ವಧೆ ಮೂಡಿಬಂದಿದೆ. ಹಿಮ್ಮೇಳದಲ್ಲಿ
ರಾಜಾರಾಮ್ ಹೊಳ್ಳ, ಚೆಂಡೆ-ಮದ್ದಳೆ-ಕೌಶಿಕ್ ರಾವ್ ಪುತ್ತಿಗೆ, ಕೌಶಲ್ ರಾವ್ ಪುತ್ತಿಗೆ, ಚಕ್ರತಾಳ-ಹರಿಶ್ಚಂದ್ರ ನಾಯ್ಗ ಮಾಡೂರು, ವೇಷ ಭೂಷಣ- ಮೋಹಿನಿ ಕಲಾಸಂಪದ ಕಿನ್ನಿಗೋಳಿ, ದೇವಿ-ಡಾ|ಪ್ರಣಮ್ಯ ಭಟ್, ಬ್ರಹ್ಮ -ಸುಮಿತ್ ವಿ.ಶೆಟ್ಟಿ, ವಿಷ್ಣು -ಡಾ| ವಾದಿಶ್ ಭಟ್, ಮಹೇಶ್ವರ- ಡಾ|ಸತೀಶ್ ಕುಮಾರ್ ಭಂಡಾರಿ, ಮಹಿಷ -ಡಾ|ಅರುಣ್ ಭಟ್, ಶಂಕ-ದುರ್ಗ-ಭರತ್ ರಾಜ್ ಮಾಣೈ, ಡಾ|ಸುಜಾತ
ದೇವೇಂದ್ರ -ದಾಮೋದರ ಯು.ಬಿ, ದೇವೇಂದ್ರ ಬಲ -ಪ್ರತೀಕ್ಷಾ, ಪ್ರೀತಮ್,
ಸಿಂಹ- ಪ್ರೀತಮ್ ನಾಯ್ಕ್ ಪಾತ್ರಧಾರಿಗಳಾಗಿದ್ದರು.



