Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಕುಂಪಲಾಷ್ಠಮಿ ಸಂಭ್ರಮದಲ್ಲಿ ಠಕ್ಕರ್ ಪಾಲಿಟಿಕ್ಸ್!: ಪ್ರತಿಷ್ಠೆಯ ಕಣವಾಯ್ತಾ ಮೊಸರುಕುಡಿಕೆ ಉತ್ಸವ!

UllalaVaniBy UllalaVaniAugust 25, 2024Updated:August 25, 2024No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಹಬ್ಬಗಳು ಜನರ ಮನಸ್ಸನ್ನ ಕಟ್ಟಬೇಕು, ಭಾವನೆಗಳನ್ನ ಬೆಸೆಯಬೇಕು ಅಂತಾರೆ. ವರ್ಷಕ್ಕೊಮ್ಮೆಯಾದ್ರೂ ಜನರನ್ನ ಒಟ್ಟು ಸೇರಿಸಿ ಸಂಭ್ರಮ ಪಡೋಕ್ಕಾದ್ರೂ ಹಬ್ಬಗಳು ಆಚರಣೆಯಲ್ಲಿರಬೇಕು. ಆಗ ಮಾತ್ರ ಒಂದು ಗ್ರಾಮ ಒಟ್ಟಾಗಿ ಸಂಭ್ರಮಿಸಿ ಉತ್ಸವಗಳ ಆಚರಣೆಯ ಜೊತೆಜೊತೆಗೆ ಮನಸ್ಸುಗಳು ಬೆಸೆಯಲು ಸಾಧ್ಯ. ಈ ಕಾರಣಕ್ಕಾಗಿಯೇ ಶ್ರೀಕೃಷ್ಣ ಜನ್ಮಾಷ್ಟಮಿ ನೆಪದಲ್ಲಿ ನಡೆಯೋ ಮೊಸರು ಕುಡಿಕೆ ಉತ್ಸವಗಳು ಆಯಾ ಗ್ರಾಮಗಳ ಜನರ ಸಂಭ್ರಮದ ಕೇಂದ್ರಬಿಂದುವಾಗಿ ನಿಂತಿದೆ. ಆದರೆ ಇಂಥ ಸಂಭ್ರಮಗಳ ಮಧ್ಯೆ ಕೆಲವೊಮ್ಮೆ ಸಣ್ಣಗೆ ತೂರಿಕೊಳ್ಳುವ ರಾಜಕೀಯ ಎಂಬ ತೆಳುರೇಖೆಗಳು ಸದ್ದಿಲ್ಲದೇ ಆ ಭಾಗದ ರಾಜಕೀಯ ವೈಮನಸ್ಸುಗಳತ್ತ ಬೆಳಕು ಚೆಲ್ಲುತ್ತವೇ. ಅಸಲಿಗೆ ಇಷ್ಟೆಲ್ಲಾ ಹೇಳೋಕೆ ಕಾರಣವಾಗಿದ್ದು ಉಳ್ಳಾಲದ ಜನಪ್ರಿಯ ಕುಂಪಲಾಷ್ಟಮಿ ಸಡಗರದ ಮಧ್ಯೆ ಭಾರೀ ಚರ್ಚೆ ಹುಟ್ಟು ಹಾಕಿರೋ ಠಕ್ಕರ್ ಪಾಲಿಟಿಕ್ಸ್. ಅಷ್ಟಕ್ಕೂ ಕುಂಪಲಾಷ್ಟಮಿ ಮಧ್ಯೆ ಇದೆಂಥಾ ಠಕ್ಕರ್ ಪಾಲಿಟಿಕ್ಸ್ ಅನ್ನೋ ಚರ್ಚೆಗೆ ವೇದಿಕೆ ಒದಗಿಸಿದ್ದು ಕುಂಪಲದ ಮುಖ್ಯ ರಸ್ತೆಗಳಲ್ಲಿ ರಾರಾಜಿಸ್ತಿರೋ ಬ್ಯಾನರ್ ಗಳು…!

ಗ್ರಾಮದ ಹಬ್ಬದಲ್ಲಿ ಇದೆಂಥಾ ವಿಭಜನೆ?

ಸೋಮವಾರ ಕುಂಪಲಾಷ್ಟಮಿ ಸಂಭ್ರಮ. ಪ್ರತೀ ವರ್ಷದಂತೆ ಈ ಬಾರಿಯೂ ಬಾಲಕೃಷ್ಣ ಮಂದಿರದ ಕುಂಪಲಾಷ್ಟಮಿ ಮೊಸರು ಕುಡಿಕೆ ಸಂಭ್ರಮಕ್ಕೆ ಇಡೀ ಕುಂಪಲವೇ ನವವಧುವಿನಂತೆ ಶೃಂಗಾರಗೊಂಡಿದೆ. ಒಂದು ಗ್ರಾಮದ ಉತ್ಸವ ಅಂದ ಮೇಲೆ ಅಲ್ಲೆಲ್ಲಾ ಒಂದಷ್ಟು ಶುಭಾಶಯದ ಬ್ಯಾನರ್ ಗಳು ರಾರಾಜಿಸೋದು ಸಹಜ. ಅದೇ ರೀತಿ ಕುಂಪಲಾಷ್ಟಮಿ ಬ್ಯಾನರ್ ಗಳು ಇಡೀ ಗ್ರಾಮದಲ್ಲಿ ರಾರಾಜಿಸ್ತಿವೆ. ಆದರೆ ಇದರ ಮಧ್ಯೆ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವೆ ಹೆಸರಿನಲ್ಲಿ ಎದ್ದುನಿಂತಿರೋ ಬ್ಯಾನರ್ ಗಳು ಹಲವರ ಅಚ್ಚರಿಕೆ ಕಾರಣವಾಗಿದೆ. ಅಸಲಿಗೆ ಈ ಬ್ಯಾನರ್ ನಲ್ಲಿ ಉಲ್ಲೇಖಿಸಿರೋ ಕಾರ್ಯಕ್ರಮದ ಬಗ್ಗೆಯೇ ಹಲವರಿಗೆ ಅಚ್ಚರಿಯಾಗಿದೆ. ಸೋಮವಾರ ಕುಂಪಲಾಷ್ಟಮಿ ಪ್ರಯುಕ್ತ ಸಂಜೆ ಇಡೀ ಗ್ರಾಮದಲ್ಲಿ ‌ಮೊಸರು ಕುಡಿಕೆ ಸಂಭ್ರಮ ನಡೆದ್ರೆ ಅದೇ ಕುಂಪಲ ಶಾಲೆಯ ಮೈದಾನದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಪ್ರತ್ಯೇಕ ಕಾರ್ಯಕ್ರಮವೊಂದನ್ನ ಆಯೋಜಿಸಲಾಗಿದೆ. ಅತ್ತ ಕುಂಪಲಾಷ್ಟಮಿಯ ಸಂಭ್ರಮದ ಶೋಭಾಯಾತ್ರೆ ನಡುವೆಯೇ ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಹುಲಿವೇಷ ಸ್ತಬ್ಥಚಿತ್ರಕ್ಕಾಗಿ ತಾರಾ ಮೆರುಗಿನ ಊದು ಇಡುವ ಕಾರ್ಯಕ್ರಮ ಕುಂಪಲದ ಶಾಲಾ ಮೈದಾನದಲ್ಲೇ ನಡೆಯಲಿದೆ. ಇಡೀ ಕುಂಪಲವೇ ಕುಂಪಲಾಷ್ಟಮಿ ಮೊಸರು ಕುಡಿಕೆ ಸಂಭ್ರಮಿಸೋ ಹೊತ್ತಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಪ್ರಯುಕ್ತ ಇಂಥದ್ದೊಂದು ಕಾರ್ಯಕ್ರಮವನ್ನ ಕುಂಪಲದಲ್ಲೇ ಆಯೋಜಿಸೋ ಅನಿವಾರ್ಯತೆ ಏನಿತ್ತು ಅಂತ ಜನ ಮಾತನಾಡಿಕೊಳ್ಳುವಂತಾಗಿದೆ. ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ನಡೆಯೋ ಸಭಾ ಕಾರ್ಯಕ್ರಮ ಹಾಗೂ ಹುಲಿವೇಷ ಸ್ತಬ್ಧ ಚಿತ್ರಕ್ಕಾಗಿ ಊದು ಇಡೋ ಕಾರ್ಯಕ್ರಮ ಇದಾಗಿದೆ. ಅಸಲಿಗೆ ಈ ಕಾರ್ಯಕ್ರಮದಲ್ಲಿ ಕಿರುತೆರೆ ನಟಿಯರಾದ ಭವ್ಯಗೌಡ, ಮೌನ ಗುಡ್ಡೆಮನೆ, ನಟ ರಿಥ್ವಿಕ್ ಕೃಪಾಕರ್ ಭಾಗಿಯಾಗಲಿದ್ದಾರೆ. ಆದರೆ ಊರ ಹಬ್ಬದ ಮಧ್ಯೆ ಮತ್ತೊಂದು ಪ್ರತ್ಯೇಕ ಕಾರ್ಯಕ್ರಮ ಚರ್ಚೆ ಹುಟ್ಟು ಹಾಕಿದೆ.

ಮೊಸರು ಕುಡಿಕೆ ಉತ್ಸವದಲ್ಲೂ ನಡೀತಿದ್ಯಾ ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್?

ಅಸಲಿಗೆ ಕುಂಪಲಾಷ್ಟಮಿ ದಿನವೇ ಠಕ್ಕರ್ ಕೊಡೋ ರೀತಿಯಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಹೆಸರಲ್ಲಿ ಕುಂಪಲದಲ್ಲಿ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಲಾಗಿದೆ. ‌ಇನ್ನು ಈ ಕಾರ್ಯಕ್ರಮದ ಹಿಂದಿರೋ ಶಕ್ತಿ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ಕುಂಪಲ. ಕೆಲ ಸಮಯದಿಂದೀಚೆಗೆ ಉಳ್ಳಾಲ ಭಾಗದಲ್ಲಿ ಪ್ರಕಾಶ್ ಕುಂಪಲ ಹೆಸರು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಕೇವಲ ಬ್ಯಾನರ್ ಗಳಲ್ಲಷ್ಟೇ ಅಲ್ಲದೇ ಕುಂಪಲದ ಹಲವು ಕಾರ್ಯಕ್ರಮಗಳಿಗೆ ವಿವಿಐಪಿ, ವಿಐಪಿಗಳನ್ನ ಕರೆಸಿ ಸೆಲೆಬ್ರಿಟಿಗಳ ಜೊತೆಗೆ ಅತ್ಯಂತ ಸಮೀಪದ ನಂಟು ಹೊಂದಿರೋ ವ್ಯಕ್ತಿ ಈ ಪ್ರಕಾಶ್ ಕುಂಪಲ. ಹಲವು ರಾಜಕಾರಣಿಗಳ ಪರಮಾಪ್ತ ವಲಯದಲ್ಲೂ ಇವರ ಹೆಸರು ಚಾಲ್ತಿಯಲಿದೆ. ಹೀಗಾಗಿಯೇ ರಾಜಕೀಯವಾಗಿ ಬೆಳೀತಾ ಇರೋ ಈ ಯುವನಾಯಕ ಈ ಭಾಗದಲ್ಲಿ ಹಲವು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹಾಗೇ ನೋಡಿದರೆ ಕುಂಪಲದ ಮತ್ತೊಂದು ದೊಡ್ಡ ಹೆಸರು ಈಗಿನ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರದ್ದು. ರಾಜಕೀಯದ ಹಿರಿಯ ತಲೆ ಸತೀಶ್ ಕುಂಪಲ ಬಾಲಕೃಷ್ಣ ಮಂದಿರದಲ್ಲಿ ಕಟ್ಟಿದ ಕುಂಪಲಾಷ್ಟಮಿ ಸದ್ಯ ಈ ಭಾಗದ ಅತ್ಯಂತ ಜನಪ್ರಿಯ ಉತ್ಸವಗಳ ಸಾಲಿನಲ್ಲಿ ಬಂದು ನಿಂತಿದೆ. ಅದರಲ್ಲೂ ಸತೀಶ್ ಕುಂಪಲ ಬಿಜೆಪಿ ಜಿಲ್ಲಾಧ್ಯಕ್ಷರಾಗಿರೋ ಈ ಹೊತ್ತಲ್ಲಿ ಈ ಕುಂಪಲಾಷ್ಟಮಿ ಸಂಭ್ರಮ ಮತ್ತಷ್ಟು ಮೇಲೈಸಿದೆ. ಆದರೆ ಈ ಹೊತ್ತಲ್ಲೇ ಕುಂಪಲದ ಮಣ್ಣಲ್ಲಿ ವಿಭಜನೆ ರಾಜಕೀಯ ಭಾರೀ ಚರ್ಚೆ ಹುಟ್ಟು ಹಾಕಿದೆ. ಒಂದು ಗ್ರಾಮದ ಸಂಭ್ರಮದ ಹಬ್ಬದ ಮಧ್ಯೆ ಮತ್ತೊಂದು ಗ್ರಾಮದ ಉತ್ಸವದ ಹೆಸರಿನಲ್ಲಿ ಅದೇ ಊರಲ್ಲಿ ಪ್ರತ್ಯೇಕ ಕಾರ್ಯಕ್ರಮವೊಂದು ಆಯೋಜನೆಯಾಗಿರೋದು ಇಲ್ಲಿನ ರಾಜಕೀಯ ಜಿದ್ದಾಜಿದ್ದಿನ ಕಥೆ ಹೇಳ್ತಿದೆ. ಬಿಜೆಪಿಯ ಪ್ರಭಾವಿ ನಾಯಕ ಸತೀಶ್ ಕುಂಪಲರ ಸಾರಥ್ಯದ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲೆಂದೇ ಕುಂಪಲ ಶಾಲೆಯ ಮೈದಾನದಲ್ಲಿ ತಾರಾ‌ಮೆರುಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅನ್ನೋ ಮಾತುಗಳು ಕುಂಪಲದ ಹಾದಿ ಬೀದಿಯಲ್ಲಿ ಹರಿದಾಡ್ತಿದೆ. ಕಾಂಗ್ರೆಸ್ ನ ಪ್ರಭಾವಿಗಳ ಆಪ್ತರಾಗಿರೋ ಪ್ರಕಾಶ್ ಕುಂಪಲ, ಬಿಜೆಪಿಯ ಪ್ರಭಾವಿ ನಾಯಕ ಸತೀಶ್ ಕುಂಪಲರ ಪ್ರಭಾವ ಕುಗ್ಗಿಸಲು ಇಂಥದ್ದೊಂದು ಕಾರ್ಯಕ್ರಮವನ್ನ ಕುಂಪಲಾಷ್ಟಮಿ ದಿನವೇ ಕುಂಪಲದ ಮೈದಾನದಲ್ಲೇ ಹಮ್ಮಿಕೊಂಡಿದ್ದಾರಾ ಅನ್ನೋ ಚರ್ಚೆಗಳೂ ಇವೆ.

ಕಾಂಗ್ರೆಸ್ ನಾಯಕನಿಂದಲೇ ಉಲ್ಲಂಘನೆಯಾಯ್ತಾ ಶಿಕ್ಷಣ ಇಲಾಖೆ ಮಾರ್ಗಸೂಚಿ?

ಇನ್ನು ಸೋಮವಾರ ಸಂಜೆ ಕಾಂಗ್ರೆಸ್ ನಾಯಕ, ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಕುಂಪಲ ಸರ್ಕಾರಿ ಶಾಲೆಯ ವಠಾರದಲ್ಲಿ ಈ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‌ಸ್ಟಾರ್ ನಟ-ನಟಿಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಸಲಿಗೆ ಕುಂಪಲದ ಶಾಲಾ ಮೈದಾನದಲ್ಲಿ ಈ ಹಿಂದೆ ಕುಂಪಲದ ಮೊಸರು ಕುಡಿಕೆ ಹಿನ್ನೆಲೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೀತಾ ಇದ್ದವು. ಆದರೆ ಈ ಬಾರಿ ಕಾರ್ಯಕ್ರಮ ಬದಲಾಗಿದೆ. ಆದರೆ ಈ ಮಧ್ಯೆಯೇ ಸರ್ಕಾರದ ಆದೇಶವೊಂದು ಕಾಂಗ್ರೆಸ್ ಮುಖಂಡನಿಂದಲೇ ಉಲ್ಲಂಘನೆಯಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನ ಹೊರಡಿಸಿ ಸರ್ಕಾರಿ ಶಾಲಾ ಮೈದಾನಗಳನ್ನ ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಬಾರದು ಅಂತ ಆದೇಶ ಮಾಡಿದೆ‌.ಶಾಲೆಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಮಹತ್ವದ ಸುತ್ತೋಲೆಯನ್ನ ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರೇ ಹೊರಡಿಸಿದ್ದರು. ಶಾಲಾ ಮೈದಾನ, ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ-ಉದ್ದೇಶಗಳಿಗೆ ಬಳಸಬಾರದಾಗಿ ಸೂಚನೆ ನೀಡಲಾಗಿತ್ತು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಮರೇ ಹೊಣೆಗಾರರಾಗುತ್ತಾರೆಂದು ದ.ಕ ಡಿಡಿಪಿಐ ಖಡಕ್ ಎಚ್ಚರಿಕೆ ನೀಡಿದ್ದರು. ಇದರ ವಿರುದ್ದ ಕರಾವಳಿಯ ಬಿಜೆಪಿ‌ ಮತ್ತು ಹಿಂದೂ ಪರ ಸಂಘಟನೆಗಳಿಂದ ಅಪಸ್ವರ ಕೇಳಿ ಬಂದಿತ್ತು. ಅದರೆ ಕುಂಪಲದಲ್ಲಿ ಕಾಂಗ್ರೆಸ್ ನಾಯಕರ ಆಪ್ತರೇ ನಿಯಮ ಉಲ್ಲಂಘಿಸಿದ್ದಾರೆ. ಹಾಗಂತ ಈ ನಿಯಮಗಳನ್ನ ಹಾಗೆಲ್ಲಾ ಜಾರಿಗೆ ತರೋದು ಸುಲಭವೂ ಅಲ್ಲ ಬಿಡಿ. ಶಾಲೆಗಳನ್ನ ಕಟ್ಟಿ ಬಿಡೋ ಸರ್ಕಾರಗಳು ಮತ್ತೆ ಅತ್ತ ತಲೆ ಹಾಕೋದು ಅಷ್ಟರಲ್ಲೇ ಇದೆ. ಹೀಗಿರುವಾಗ ಈ ಶಾಲೆಗಳು ಇಂದಿಗೂ ಸುಣ್ಣ ಬಣ್ಣ ಬಳಸಿಕೊಂಡು ಒಂದು ಹಂತಕ್ಕೆ ಚೆನ್ನಾಗಿರೋದು ಸ್ಥಳೀಯ ಪ್ರಭಾವಿ ವ್ಯಕ್ತಿಗಳು, ರಾಜಕೀಯ ನಾಯಕರು ಹಾಗೂ ದಾನಿಗಳ ನೆರವಿನಿಂದ ಅನ್ನೋದು ಅಷ್ಟೇ ಸತ್ಯ. ಹೀಗಿರುವಾಗ ಶಾಲಾ ಮೈದಾನಗಳನ್ನು ಅವರ ಕಾರ್ಯಕ್ರಮಗಳಿಗೆ ಕೊಡದೇ ಇರೋದಕ್ಕೆ ಆಗುತ್ತಾ?…ಆಗಲ್ಲ ಅನ್ನೋಕಾಗಲ್ಲ ಎಂಬ ಜಿಜ್ಞಾಸೆಯ ಮಧ್ಯೆಯೇ ಸರ್ಕಾರದ ಇಂಥಹ ಆದೇಶಗಳು ಮತ್ತೆ ಮತ್ತೆ ಚರ್ಚೆ ಹಾಗೂ ವಿವಾದಕ್ಕೆ ಒಳಗಾಗುತ್ತಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅಕ್ರಮ ಜಾನುವಾರು ಸಾಗಾಟ ಪ್ರಕರಣ; ಇಬ್ಬರ ಬಂಧನ…!!

March 21, 2026

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆಯ ನಡುವೆ ಹಳೆಕೋಟೆ ಸೈಯದ್ ಮದನಿ ಶಾಲೆಯಲ್ಲಿ ಈದ್ ಸಂಭ್ರಮ

March 21, 2026

ಹಿದಾಯತ್ ನಗರ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

March 20, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಅಕ್ರಮ ಜಾನುವಾರು ಸಾಗಾಟ ಪ್ರಕರಣ; ಇಬ್ಬರ ಬಂಧನ…!!

By UllalaVaniMarch 21, 20260

ಮಂಗಳೂರು, ಮಾ. 21 : ಬಡಗ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಸಮೀಪ ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯಕ್ಷಗಾನ ಲೋಕದ ಅಪ್ರತಿಮ ಕಲಾತಪಸ್ವಿ ಸೂರಿಕುಮೇರು ಕೆ. ಗೋವಿಂದ ಭಟ್ ವಿಧಿವಶ

March 21, 2026

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆಯ ನಡುವೆ ಹಳೆಕೋಟೆ ಸೈಯದ್ ಮದನಿ ಶಾಲೆಯಲ್ಲಿ ಈದ್ ಸಂಭ್ರಮ

March 21, 2026

ಹಿದಾಯತ್ ನಗರ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

March 20, 2026
1 2 3 … 1,841 Next
Automatic YouTube Gallery

ಧರ್ಮ ಜೀವನಪದ್ಧತಿ, ಪೂಜೆಗೆ ಮಾತ್ರ ಸೀಮಿತವಲ್ಲ -ಹರಿಕೃಷ್ಣ ಉಪನ್ಯಾಸ

ಕೆರೆಬೈಲ್ ಗುಡ್ಡೆ ಕೊರಗ ತನಿಯ -ಗುಳಿಗ ದೈವದ ಕೋಲ ಪ್ರಯುಕ್ತ ಧಾರ್ಮಿಕ ಸಭೆ; ಧರ್ಮ ಜೀವನಪದ್ಧತಿ, ಪೂಜೆಗೆ ಮಾತ್ರ ಸೀಮಿತವಲ್ಲ -ಹರಿಕೃಷ್ಣ ಉಪನ್ಯಾಸ

ಸ್ಕೂಲ್ ಲೀಡರ್ ಚಿತ್ರಕ್ಕೆ ಪ್ರಶಸ್ತಿ ;ಲವಣಚಂದ್ರಗೆ ಅಭಿನಂದನೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಧರ್ಮ ಜೀವನಪದ್ಧತಿ, ಪೂಜೆಗೆ ಮಾತ್ರ ಸೀಮಿತವಲ್ಲ -ಹರಿಕೃಷ್ಣ ಉಪನ್ಯಾಸ
Now Playing
ಧರ್ಮ ಜೀವನಪದ್ಧತಿ, ಪೂಜೆಗೆ ಮಾತ್ರ ಸೀಮಿತವಲ್ಲ -ಹರಿಕೃಷ್ಣ ಉಪನ್ಯಾಸ
ಕೆರೆಬೈಲ್ ಗುಡ್ಡೆ ಕೊರಗ ತನಿಯ -ಗುಳಿಗ ದೈವದ ಕೋಲ ಪ್ರಯುಕ್ತ ಧಾರ್ಮಿಕ ಸಭೆ; ಧರ್ಮ ...
ಕೆರೆಬೈಲ್ ಗುಡ್ಡೆ ಕೊರಗ ತನಿಯ -ಗುಳಿಗ ದೈವದ ಕೋಲ ಪ್ರಯುಕ್ತ ಧಾರ್ಮಿಕ ಸಭೆ; ಧರ್ಮ ಜೀವನಪದ್ಧತಿ, ಪೂಜೆಗೆ ಮಾತ್ರ ಸೀಮಿತವಲ್ಲ -ಹರಿಕೃಷ್ಣ ಉಪನ್ಯಾಸ

ಸ್ಕೂಲ್ ಲೀಡರ್ ಚಿತ್ರಕ್ಕೆ ಪ್ರಶಸ್ತಿ ;ಲವಣಚಂದ್ರಗೆ ಅಭಿನಂದನೆ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||PROBLEM COVERAGE NEWS|| ರಸ್ತೆ ಪಕ್ಕದಲ್ಲೇ ತ್ಯಾಜ್ಯ ಘಟಕ - ದುರ್ವಾಸನೆ ಸಮಸ್ಯೆ
Now Playing
||PROBLEM COVERAGE NEWS|| ರಸ್ತೆ ಪಕ್ಕದಲ್ಲೇ ತ್ಯಾಜ್ಯ ಘಟಕ - ದುರ್ವಾಸನೆ ಸಮಸ್ಯೆ
ಬಾಳೆಪುಣಿ ಪಂಚಾಯತ್ ವಿರುದ್ಧ ಗ್ರಾಮಸ್ಥರ ಆರೋಪ; ರಸ್ತೆ ಪಕ್ಕದಲ್ಲೇ ತ್ಯಾಜ್ಯ ಘಟಕ- ...
ಬಾಳೆಪುಣಿ ಪಂಚಾಯತ್ ವಿರುದ್ಧ ಗ್ರಾಮಸ್ಥರ ಆರೋಪ; ರಸ್ತೆ ಪಕ್ಕದಲ್ಲೇ ತ್ಯಾಜ್ಯ ಘಟಕ- ದುರ್ವಾಸನೆ ಸಮಸ್ಯೆ

ಸ್ವಚ್ಛತೆ ಮಾಡಬೇಕೆಂದು ಗ್ರಾಮಸ್ಥರ ಆಗ್ರಹ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d