UN NETWORKS
ಕೊಣಾಜೆ: ಯಾವುದೇ ಉದ್ಯಮಗಳನ್ನು ಸ್ಥಾಪಿಸುವಾಗ ಆತ್ಮ ವಿಶ್ವಾಸದೊಂದಿಗೆ ಛಲವಿದ್ದರೆ ಯಶಸ್ವಿಯಾಗಲು ಸಾಧ್ಯ ಎಂದು ಪಿ.ಎ.ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರಿನ ಆಟಲ್ಲಿರ್ ಡಿಸೈನ್ಸ್ ಶೋರೂಮಿನ ಸಂಸ್ಥಾಪಕ ಮಹಮ್ಮದ್ ಅಷ್ಪಕ್ ಅಭಿಪ್ರಾಯಪಟ್ಟರು.
ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಬಯೋಟಿಕ್ ಫೇಸ್ ಫಾರಂ ವತಿಯಿಂದ ಪ್ರೀ-ಐಡೀಯಥಾನ್ ಎಂಬ ವಿಷಯದ ಬಗ್ಗೆ ನವೋದ್ಯಮ ಆಕಾಂಕ್ಷಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಉದ್ಯಮ ಶೀಲತಾ ಅವಕಾಶಗಳು ಎಂಬ ವಿಷಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉದಯೋನ್ಮುಖ ಉದ್ಯಮಿಗಳಿಗೆ ಬೇಕಾದ ವಿಶಿಷ್ಟಗಳ ಬಗ್ಗೆ ಬೆಳಕು ಚೆಲ್ಲುತ್ತಾ ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಪಿ.ಎ. ತಾ.ತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ| ಸರ್ಫ್ರಾಝ್ ಹಾಶಿಮ್, ಬಯೋಟೆಕ್ನಾಲಾಜಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಪ್ರಸಾದ್ ಎನ್., ಬಯೋಟೆಕ್ ಫೊರಂನ ಸಂಚಾಲಕ ಪ್ರೊ| ಶೈನಿ ಮ್ಯಾಥ್ಯೂ ಹಾಗೂ ಪ್ರೊ| ರೋನಲ್ಡ್ ವಾಲ್ದಾರ್ ಉಪಸ್ಥಿತರಿದ್ಧರು.
ವಿದ್ಯಾರ್ಥಿಗಳಾದ ಮಹಮ್ಮದ್ ಝುನಲ್ ಕಾರ್ಯಕ್ರಮ ನಿರೂಪಿಸಿ, ತಾಪ್ತಿಲಾದ್ಕಾಣಿ ಸ್ವಾಗತಿಸಿದರು. ಅಬ್ದುಲ್ ಅಮೀರ್ ವಂದಿಸಿದರು.


