UN NETWORKS
ಕೊಣಾಜೆ: ಯಾವುದೇ ಉದ್ಯಮಗಳನ್ನು ಸ್ಥಾಪಿಸುವಾಗ ಆತ್ಮ ವಿಶ್ವಾಸದೊಂದಿಗೆ ಛಲವಿದ್ದರೆ ಯಶಸ್ವಿಯಾಗಲು ಸಾಧ್ಯ ಎಂದು ಪಿ.ಎ.ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರಿನ ಆಟಲ್ಲಿರ್ ಡಿಸೈನ್ಸ್ ಶೋರೂಮಿನ ಸಂಸ್ಥಾಪಕ ಮಹಮ್ಮದ್ ಅಷ್ಪಕ್ ಅಭಿಪ್ರಾಯಪಟ್ಟರು.
ಪಿ.ಎ. ತಾ.ತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ| ಸರ್ಫ್ರಾಝ್ ಹಾಶಿಮ್, ಬಯೋಟೆಕ್ನಾಲಾಜಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಪ್ರಸಾದ್ ಎನ್., ಬಯೋಟೆಕ್ ಫೊರಂನ ಸಂಚಾಲಕ ಪ್ರೊ| ಶೈನಿ ಮ್ಯಾಥ್ಯೂ ಹಾಗೂ ಪ್ರೊ| ರೋನಲ್ಡ್ ವಾಲ್ದಾರ್ ಉಪಸ್ಥಿತರಿದ್ಧರು.
ವಿದ್ಯಾರ್ಥಿಗಳಾದ ಮಹಮ್ಮದ್ ಝುನಲ್ ಕಾರ್ಯಕ್ರಮ ನಿರೂಪಿಸಿ, ತಾಪ್ತಿಲಾದ್ಕಾಣಿ ಸ್ವಾಗತಿಸಿದರು. ಅಬ್ದುಲ್ ಅಮೀರ್ ವಂದಿಸಿದರು.