Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಇಂಜಿನಿಯರ್ ಯುವತಿಯ ಸೈಕಲ್ ಜಾಥ

UllalaVaniBy UllalaVaniMarch 18, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಹಾಗೂ ದಿವಂಗತ ಉಪಕುಲಪತಿಗಳ ಪುತ್ರಿಯೋರ್ವರು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಪ್ರಯಾಣ ಬೆಳೆಸಿದ್ದು, 37ನೇ ದಿನವಾದ ಶುಕ್ರವಾರ ಮಂಗಳೂರು ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಮಾರ್ಗವಾಗಿ ಕೇರಳದ ಕಡೆ ಪ್ರಯಾಣ ಬೆಳೆಸಿದರು. ಲಿಂಗ ಸಮಾನತೆ ಮತ್ತು ಹದಿಹರೆಯದವರಿಗೆ ಜೀವನ ಕೌಶಲ್ಯ ಶಿಕ್ಷಣದ ಉದ್ದೇಶವನ್ನಿಟ್ಟುಕೊಂಡು ಸೈಕಲ್ ಜಾಥಾ ಆರಂಭಿಸಿದ್ದಾರೆ.

17ullal2 17ullal3 17ullal4ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾಗಿದ್ದ ದಿ.ಶಿವಶಂಕರ ಮೂರ್ತಿ ಇವರ ಪುತ್ರಿಯಾಗಿರುವ ಮೈಸೂರು ಮೂಲದ 27ರ ಹರೆಯದ ಶ್ರುತಿ ಸೈಕಲ್ ಜಾಥಾ ನಡೆಸುತ್ತಿರುವವರು. ಫೆ.8 ರಂದು ಜಮ್ಮು ಕಾಶ್ಮೀರದಿಂದ ಸೈಕಲ್ ಪ್ರಯಾಣ ಆರಂಭಿಸಿರುವ ಶ್ರುತಿ ಈವರೆಗೆ 3,000 ಕ್ಕೂ ಅಧಿಕ ಕಿ.ಮೀ.ನಷ್ಟು ಕ್ರಮಿಸಿ 11 ರಾಜ್ಯಗಳನ್ನು ದಾಟಿ ಇದೀಗ ಕರ್ನಾಟಕದ ಗಡಿಯನ್ನು ದಾಟಿ ಕೇರಳವನ್ನು ತಲುಪಿದ್ದಾರೆ.

ಮೂಲತ: ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ಶ್ರುತಿ ಮೂರು ವರ್ಷ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕೆಲಸ ಮಾಡಿ ವೃತ್ತಿಯನ್ನು ಬಿಟ್ಟು ಹದಿಹರೆಯದ ಮಕ್ಕಳ ವಿಷಯದಲ್ಲಿ ಫೆಲೋಶಿಪ್ ಪಡೆದು ಜೀವನ ಕೌಶಲ್ಯ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತೊಕ್ಕೊಟ್ಟಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಸೈಕ್ಲಿಂಗ್ ಹವ್ಯಾಸವನ್ನು ಪ್ರಾರಂಭಿಸಿದ್ದೆ, ಎರಡು ಮೂರು ದಿನಗಳ ಸೈಕ್ಲಿಂಗ್ ಈ ಹಿಂದೆಯೂ ಮಾಡಿದ್ದೆ. ಈ ಬಾರಿ ಒಂದು ಲಿಂಗ ಸಮಾನತೆಯ ವಿಚಾರವನ್ನು ಪ್ರಮುಖ ಧ್ಯೇಯ ವಾಕ್ಯವನ್ನಾಗಿ ಇಟ್ಟುಕೊಂಡು ಕಾಶ್ಮೀರ್ ಟು ಕನ್ಯಾಕುಮಾರಿ ಪ್ರಯಾಣ ಬೆಳೆಸಿದ್ದೇನೆ. ಈ ನಡುವೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 48 ದಿನಗಳಲ್ಲಿ 4500 ಕಿ.ಮೀ ಸೈಕ್ಲಿಂಗ್ ಮಾಡುವ ಗುರಿಯೊಂದಿಗೆ ಹೊರಟಿದ್ದು, ದಾರಿಯಲ್ಲಿ ಸಿಗುವ ಸರಕಾರಿ ಶಾಲೆಗಳಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ನಡೆಸಿದ್ದು, ಕಳೆದ 36 ದಿನಗಳ ಸೈಕ್ಲಿಂಗ್ ಸಮಯದಲ್ಲಿ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ಸೈಕ್ಲಿಂಗ್ ಸಮಯದಲ್ಲಿ ಎಲ್ಲಾ ಕಡೆ ಉತ್ತಮ ಬೆಂಬಲ ಸಿಕ್ಕಿತ್ತು. ಕಾಶ್ಮೀರದಿಂದ ಗೋವಾವರಗೆ ತನ್ನಿಬ್ಬರು ಸ್ನೇಹಿತರು ಸ್ಕಾರ್ಪಿಯೋ ಮೂಲಕ ಬೆಂಗಾವಲಾಗಿ ಬಂದಿದ್ದರು. ಗೋವಾದಿಂದ ಕನ್ಯಾಕುಮಾರಿಯವರೆಗೆ ಏಕಾಂಗಿಯಾಗಿ ಸೈಕ್ಲಿಂಗ್ ನಡೆಸುವ ಯೋಜನೆ ಹಾಕಿದ್ದು ಮಾ. 27ಕ್ಕೆ ಕನ್ಯಾಕುಮಾರಿ ತಲುಪುವ ಗುರಿಯನ್ನು ಹೊಂದಿದ್ದೇನೆ ಎಂದರು.

ಮನೆಯಲ್ಲಿ ಬೆಂಬಲ :

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿಯಾಗಿದ್ದ ದಿ.ಶಿವಶಂಕರ ಮೂರ್ತಿ ಅವರ ಪುತ್ರಿಯಾಗಿರುವ ಶ್ರುತಿ ಅವರು ಸೈಕ್ಲಿಂಗ್ ವಿಚಾರವನ್ನು ತಾಯಿ, ಅಕ್ಕ ಮತ್ತು ಅಣ್ಣನಲ್ಲಿ ತಿಳಿಸಿದಾಗ ಮೊದಲು ಅವಕಾಶ ನೀಡಿರಲಿಲ್ಲ. ಬಳಿಕ ಸೈಕ್ಲಿಂಗ್ ನಡೆಸಲು ಅನುಮತಿ ನೀಡಿದರು ಎನ್ನುವ ಅವರು ಕಳೆದ 36 ದಿನಗಳ ಸೈಕ್ಲಿಂಗ್‍ನಲ್ಲಿ ಹವಾಮಾನ ಬದಲಾವಣೆ, ಆಹಾರ ವ್ಯತ್ಯಾಸ ಸ್ವಲ್ಪ ಸಮಸ್ಯೆಯಾದರು ಎಲ್ಲಾ ಕಡೆ ಜನರು ಸಹಕಾರ ನೀಡಿದರು ಎಂದು ತಿಳಿಸಿದರು.

ದಿನದಲ್ಲಿ 8 ಗಂಟೆಯ ಸೈಕ್ಲಿಂಗ್ :

ಬೆಳಿಗ್ಗೆ 6 ಗಂಟೆಯಿಂದ ಸೈಕ್ಲಿಂಗ್ ಆರಂಭಿಸುವ ಶ್ರುತಿ ಸಂಜೆ 6ರ ವರೆಗೆ ಸೈಕ್ಲಿಂಗ್ ನಡೆಸುತ್ತಾರೆ. ದಾರಿಯಲ್ಲಿ ಸಿಗುವ ಸರಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಎರಡು ಗಂಟೆ ವ್ಯಯಿಸಿ , ಎರಡು ಗಂಟೆಯ ಕಾಲ ಆಹಾರ ವಿಶ್ರಾಂತಿಗೆ ಬಳಸುತ್ತಾರೆ. ಉಳಿದ 8 ಗಂಟೆಗಳ ಕಾಲ ನಿರಂತರವಾಗಿ ಸೈಕಲ್ ತುಳಿಯುತ್ತಲೇ ದಾರಿಯನ್ನು ಮುಂದುವರಿಸುತ್ತಿದ್ದಾರೆ.

ಭದ್ರತೆಗೆ ವಿವಿಧ ವಸ್ತುಗಳ ಬಳಕೆ:

ಶ್ರುತಿ ಹದಿಹರೆಯದ ಯುವತಿಯಾಗಿರುವುದರಿಂದ ಬಹಳ ಉತ್ಸಾಹದಿಂದಲೇ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ. ತಮ್ಮ ಸುರಕ್ಷತೆಗೆ ಪೆಪ್ಪರ್ ಸ್ಪ್ರೇ, ಮೊಬೈಲ್ ಆ್ಯಪ್, ಪಿನ್ ಮೊದಲಾದ ಸೊತ್ತುಗಳನ್ನು ಬ್ಯಾಗಿನಲ್ಲಿಟ್ಟುಕೊಂಡೇ ಪ್ರಯಾಣ ಮುಂದುವರಿಸುತ್ತಿರುವುದಾಗಿ ತಿಳಿಸಿದ್ದಾರೆ. ಇಷ್ಟು ದಿನಗಳಲ್ಲಿ ಎಲ್ಲಾ ಭಾಗದ ಜನ ಉತ್ತಮವಾಗಿ ಸಹಕರಿಸಿದ್ದಾರೆ. ಯಾರಿಂದಲೂ ತೊಂದರೆಯೂ ಆಗಿಲ್ಲ ಎಂದು ಶ್ರುತಿ ಹೇಳುತ್ತಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬಹುಮುಖ ಪ್ರತಿಭೆಯ ಸುರೇಶ್ ಕೆ. ರಾವ್ ಅವರಿಗೆ ಪ್ರತಿಷ್ಠಿತ ಡಾ. ವಿಷ್ಣುವರ್ಧನ್ ಪ್ರಶಸ್ತಿ

June 25, 2026

ಪ್ರತೀ ಗಲ್ಲಿಗಳ ಅಭಿವೃದ್ಧಿ, ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಬಿಜೆಪಿ ಧ್ಯೇಯ,ಉದ್ದೇಶ; ಎಂಎಲ್ಸಿ ಕಿಶೋರ್ ಕುಮಾರ್

June 25, 2026

ಉಳ್ಳಾಲ ಬೂತ್ ಅಧ್ಯಕ್ಷೆಯ ಮನೆಗೆ ಬಿಜೆಪಿ ನಾಯಕರ ಭೇಟಿ

June 24, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಉರ್ವಾ ಸಂತ ಅಲೋಶಿಯಸ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

By UllalaVaniJune 25, 20260

ಮಂಗಳೂರು: ಉರ್ವಾದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…

ಮಂಗಳೂರು : ತಲೆಮರೆಸಿಕೊಂಡಿದ್ದ ಆರೋಪಿ ಬಂಧನ…!!

June 25, 2026

“ಆಧಾರ್, ಪಾಸ್‌ಪೋರ್ಟ್, ಮತದಾರರ ಚೀಟಿ, ಪ್ಯಾನ್ ಕಾರ್ಡ್ ಕೂಡ ಪೌರತ್ವದ ಪುರಾವೆಯಲ್ಲ: ಹಾಗಾದರೆ ಭಾರತೀಯತ್ವದ ಅಂತಿಮ ದಾಖಲೆ ಯಾವುದು? ಸರಕಾರವನ್ನು ಪ್ರಶ್ನಿಸಲು ಸಂಸದರ ಮೇಲೆ ಸಾರ್ವಜನಿಕರ ಒತ್ತಾಯ”

June 25, 2026

ಬಿಡದಿ ಟೌನ್‌ಶಿಪ್ ಹೋರಾಟಕ್ಕೆ ಹಿರಿಯ ಪತ್ರಕರ್ತರ ಬೆಂಬಲ: ರೈತರ ಸಮಸ್ಯೆಗೆ ಚುನಾವಣಾ ರಾಜಕೀಯವಲ್ಲ, ಬದುಕುವ ಹಕ್ಕಿನ ಪರಿಹಾರ ಬೇಕು

June 25, 2026
1 2 3 … 1,983 Next
Automatic YouTube Gallery

ಕಂಪ್ಯೂಟರ್ ತರಬೇತಿ ಮತ್ತು ಟ್ಯೂಶನ್ ಕೇಂದ್ರ ಆರಂಭ; ನಾಗುರಿಯಲ್ಲಿ ಲೂಯಿಸ್ ಅಕಾಡೆಮಿ' ಶುಭಾರಂಭ

ಇoದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣವು ಅತ್ಯಗತ್ಯ;ಫಾ| ನವೀನ್ ಪಿಂಟೋ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಂಪ್ಯೂಟರ್ ತರಬೇತಿ ಮತ್ತು ಟ್ಯೂಶನ್ ಕೇಂದ್ರ ಆರಂಭ; ನಾಗುರಿಯಲ್ಲಿ ಲೂಯಿಸ್ ಅಕಾಡೆಮಿ' ಶುಭಾರಂಭ
Now Playing
ಕಂಪ್ಯೂಟರ್ ತರಬೇತಿ ಮತ್ತು ಟ್ಯೂಶನ್ ಕೇಂದ್ರ ಆರಂಭ; ನಾಗುರಿಯಲ್ಲಿ ಲೂಯಿಸ್ ಅಕಾಡೆಮಿ' ಶುಭಾರಂಭ
ಇoದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣವು ಅತ್ಯಗತ್ಯ;ಫಾ| ನವೀನ್ ಪಿಂಟೋ 📍 ...
ಇoದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣವು ಅತ್ಯಗತ್ಯ;ಫಾ| ನವೀನ್ ಪಿಂಟೋ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Suratkal: ಸಂಘ ಪರಿವಾರದ ಕಾರ್ಯಕರ್ತನಿಂದ ಲೈಂ*#ಗಿಕ ದೌರ್ಜನ್ಯ: ಬಾಲಕಿ ಆ*ತ್ಮ ಹ*ತ್ಯೆ..!
Now Playing
Suratkal: ಸಂಘ ಪರಿವಾರದ ಕಾರ್ಯಕರ್ತನಿಂದ ಲೈಂ*#ಗಿಕ ದೌರ್ಜನ್ಯ: ಬಾಲಕಿ ಆ*ತ್ಮ ಹ*ತ್ಯೆ..!
ಕಾಟಿಪಳ್ಳ ಬೆಚ್ಚಿಬೀಳಿಸಿದ ಪ್ರಕರಣ..! ಅನೀಶ್ ವಿರುದ್ಧ ಹಲವು ಸೆಕ್ಷನ್‌ಗಳಡಿ ಕೇಸ್ ...
ಕಾಟಿಪಳ್ಳ ಬೆಚ್ಚಿಬೀಳಿಸಿದ ಪ್ರಕರಣ..! ಅನೀಶ್ ವಿರುದ್ಧ ಹಲವು ಸೆಕ್ಷನ್‌ಗಳಡಿ ಕೇಸ್

"ನಾನು ನಂಬಿದ್ದ ಎಲ್ಲರೂ ಕೈಕೊಟ್ಟರು ಅಮ್ಮ"; ಡೆ*ತ್‌ನೋಟ್ ಬರಹ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version