ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದಕ್ಷಿಣ ಭಾರತದ ಜನ ಸ್ವಾಭಿಮಾನದಿಂದ ಬದುಕಲು ನಾರಾಯಣ ಗುರುಗಳ ಆದರ್ಶಗಳಿಂದ ಸಾಧ್ಯವಾಗಿದೆ ಎಂದು ಮಂಗಳೂರು ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಅಭಿಪ್ರಾಯಪಟ್ಟರು. ತೊಕ್ಕೊಟ್ಟಿನ ಸುವರ್ಣ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಕೇಂದ್ರ ಸಮಿತಿ ತೊಕ್ಕೊಟ್ಟು , ಉಳ್ಳಾಲ ಇದರ ವತಿಯಿಂದ ಗುರುಸ್ಮರಣೆ – ಬ್ರಹ್ಮಶ್ರೀ ಚೈತನ್ಯ ಸಭೆಯಲ್ಲಿ ಗುರು ಸಂದೇಶ ನೀಡಿದರು. ಗುರುಗಳು ಬಿತ್ತಿರುವ ಚಿಂತನೆಗಳು, ಶಕ್ತಿಗಳ ಸೂಕ್ಷ್ಮವಾಗಿ ಅವಲೋಕನ ಮಾಡಬೇಕಿದೆ. ಅವರ ಆದರ್ಶಗಳು ದಕ್ಷಿಣದ ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿದೆಯಾದರೂ ಎಲ್ಲರೂ ಅದನ್ನು ಒಪ್ಪುತ್ತಿಲ್ಲ. ಬಸವಣ್ಣ, ಗೌತಮ ಬುದ್ಧ, ಅಂಬೇಡ್ಕರ್, ಮಹಾತ್ಮ ಗಾಂಧಿ ಇಂತಹ ಮಹಾತ್ಮರಿಗೆ ಸಿಕ್ಕ ಪ್ರಚಾರ ಶೋಷಣೆಗೊಳಗಾದ ಸಮಾಜದ ಪರ ನಿಂತ ಗುರುಗಳಿಗೆ ಸಿಗದೇ ಇರುವುದು ಖೇದಕರ. ಮುಂದಿನ ದಿನಗಳಲ್ಲಾದರೂ ಅವರ ಚಿಂತನೆಗಳು ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗಲು ಎಲ್ಲರೂ ಎದ್ದುನಿಲ್ಲಬೇಕಾಗಿದೆ. ಸಾಂಪ್ರಾದಾಯಿಕ ಶಿಕ್ಷಣದ ಜತೆಗೆ ವೃತ್ತಿ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಂಬಿಕಾರೋಡ್: ನೇತ್ರಾವತಿ ನದಿ ತಿರುವು ವಿರೋಧಿಸಿ ಸಮಾನ ಮನಸ್ಕರ ಚಿಂತನ-ಮಂತನ ಸಭೆ ಅ.8 ರ ಸಂಜೆ 4.00ಗಂಟೆಗೆ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರದಲ್ಲಿ ಗುತ್ತಿಗೆದಾರರು, ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಕೋಟ್ಯಂತರ ರೂ ಲಂಚದ ರೂಪದಲ್ಲಿ ಹೋಗಿರುವ ಸಂಶಯವಿದೆ. 5 ವರ್ಷದ ವಾರಾಹಿ ಯೋಜನೆಗೆ 35 ವರ್ಷ ತೆಗೆದುಕೊಂಡು 50 ಕೋಟಿಯ ಯೋಜನೆಗೆ 500 ಕೋಟಿ ಖರ್ಚು ಮಾಡಿದಂತೆ ಇನ್ನೂ ನೆನೆಗುದಿಗೆ ಬಿದ್ದಿರುವ ಕಳಸ-ಬಂಡೂರಿ ಯೋಜನೆಯಂತೆ ಇದು ಕುಡ ದುಡ್ಡು ಹೊಡೆಯುವ ಯೋಜನೆ. ಮುಂದಿನ ಜನಾಂಗಕ್ಕಾಗಿ ಸಮೃದ್ಧ ಕರಾವಳಿ ಮೀನುಗಾರಿಕೆ, ಕೃಷಿ ಉಳಿವಿಗಾಗಿ ಧಾರ್ಮಿಕ ಕ್ಷೇತ್ರದಲ್ಲಿನ ಪವಿತ್ರ ನೀರು ಬತ್ತಿ ಹೋಗದಂತೆ ನೋಡಿಕೊಳ್ಳಲು ಜನರನ್ನು ತೋಳಿನಲ್ಲಿ ರಕ್ಷಣೆ ಮಾಡುತ್ತಿರುವ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಹೋರಾಟ ನಡೆಸುವ ತೀರ್ಮಾನ ಕೈಗೊಂಡು ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಿಯಾಶೀಲ ಅನುಭವೀ ಮಾರ್ಗದರ್ಶಕರ ಸಮ್ಮುಖದಲ್ಲಿ ನಡೆಯುವ ಸಮಾವೇಶಗಳು ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು. ಅವರು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ಜರಗಿದ ಕ್ಷೇಮ ಸ್ಟೆಮ್ಕಾನ್-2015 , ಕಾಂಡಕೋಶಗಳ ವಾಸ್ತು ಸ್ಥಿತಿ ಹಾಗೂ ಮೂಳೆಶಾಸ್ತ್ರಕ್ಕೆ ಅನ್ವಯವಾಗುವ ಜೀವಕೋಶ ಆಧಾರಿತ ಚಿಕಿತ್ಸೆಗೆ ಒತ್ತು ಕುರಿತ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗಳು ಕ್ಷೀಣಿಸುತ್ತಿವೆ. ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ನಿಟ್ಟೆ ವಿ.ವಿ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದಕ್ಕಾಗಿ ಕ್ರಿಯಾಶೀಲ ಮಾರ್ಗದರ್ಶಕರೂ ಸಂಸ್ಥೆಯಲ್ಲಿ ಲಭ್ಯವಿದ್ದಾರೆ. ಇಂತಹ ಕ್ಷೇತ್ರದಲ್ಲಿನ ವಿಪುಲ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ನಿಟ್ಟೆ ವಿ.ವಿ ಉಪಕುಲಪತಿ ಡಾ.ಯಸ್.ರಮಾನಂದ ಶೆಟ್ಟಿ ಮಾತನಾಡಿ ಭಾರತ ಸರಕಾರವು ಕಳೆದ ಹದಿನೈದು ವರುಷಗಳಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲಬೈಲು: ಬೈಕ್ ಸೀಝ್ ಮಾಡಲು ಬಂದ ಸೀಝರ್ಗಳ ತಂಡ ಮತ್ತು ಬೈಕ್ ಮಾಲೀಕನ ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಶುಕ್ರವಾರ ಸಂಜೆ ತೊಕ್ಕೊಟ್ಟು ಉಳ್ಳಾಲಬೈಲಿನ ಗೇರುಕೃಷಿ ಅಭಿವೃದ್ಧಿ ಕೇಂದ್ರದ ಎದುರಿನಲ್ಲಿ ನಡೆದಿದೆ. ಮಂಗಳೂರಿನಿಂದ ಉಳ್ಳಾಲ ಭಾಗಕ್ಕೆ ಕೆ.ಎ.19.ಇ.ಜೆ .5657 ಎಂಟೈಸರ್ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಎಕ್ಕೂರು ಮೂಲದ ಫೈನಾನ್ಸ್ ನ ಇಬ್ಬರು ಸೀಝರ್ ಗಳು ಕೆ.ಎ.19.ಇ.ಬಿ 386 ಪಲ್ಸಾರ್ ಬೈಕಿನಲ್ಲಿ ಹಿಂಬಾಲಿಸಿದ್ದರು. ಉಳ್ಳಾಲಬೈಲು ಸಮೀಪ ಪಲ್ಸಾರ್ ಬೈಕಿನಲ್ಲಿದ್ದವರು ಎಂಟೈಸರ್ ಬೈಕಿಗೆ ಅಡ್ಡವಿಟ್ಟು ಫೈನಾನ್ಸಿನ ಕಂತು ಪಾವತಿಸದ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಫೈನಾನ್ಸ್ ಸೀಝರ್ ರಲ್ಲಿ ಓರ್ವ ಬೈಕಿನ ಕೀಯನ್ನು ತೆಗೆದು ಸಮೀಪದಲ್ಲಿದ್ದ ಮನೆಯೊಂದರ ಕಂಪೌಂಡಿನ ಒಳಗೆ ಬಿಸಾಡಿದ್ದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆಯಿತು. ಈ ವೇಳೆ ಎರಡು ಬೈಕುಗಳಲ್ಲಿ ಇದ್ದಂತಹ ಇಬ್ಬರು ತಮ್ಮ ತಂಡಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಉಳ್ಳಾಲ ಭಾಗದಿಂದ 10-15 ಮಂದಿಯ ತಂಡ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಗಾಂಧಿ ಜಯಂತಿ ರಜೆ ನಿಮಿತ್ತ ಈಜಲು ಹೋದ ಬಾಲಕನೋರ್ವ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ತಲಪಾಡಿ ಬಳಿಯ ಅಳಿವೆಬಾಗಿಲಿನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದ್ದು, ಮುಳುಗುತ್ತಿದ್ದ ಮತ್ತಿಬ್ಬರು ಬಾಲಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತ ಬಾಲಕನನ್ನು ತಲಪಾಡಿ ಕೆ.ಸಿ.ನಗರ ಪಿಲಿಕೂರು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಅರ್ಫಾಝ್ (16) ಎಂದು ಗುರುತಿಸಲಾಗಿದ್ದು, ತಲಪಾಡಿ ಕೆ.ಸಿ.ರೋಡ್ ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 9ನೇ ತರಗತಿ ವಿದ್ಯಾರ್ಥಿ. ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕೆ.ಸಿ.ನಗರದ ಸುಮಾರು 10-15 ರಷ್ಟು ಮಕ್ಕಳ ತಂಡ ತಲಪಾಡಿಯ ಅಳಿವೆಬಾಗಿಲು ಸಮೀಪ ಈಜಲು ತೆರಳಿದ್ದರು. ಮಧ್ಯಾಹ್ನ ವೇಳೆ ಈಜಾಟ ಆಡಲು ಆರಂಭಿಸಿದ್ದ ಮಕ್ಕಳ ಪೈಕಿ ಮೂವರು ಸಂಜೆ ವೇಳೆ ಕೆಸರಿನಲ್ಲಿ ಹೂತು ಮುಳುಗಿದ್ದರು. ಇದನ್ನು ಕಂಡು ಉಳಿದ ಮಕ್ಕಳು ರಕ್ಷಣೆಗಾಗಿ ಬೊಬ್ಬೆ ಹಾಕಿದ್ದು, ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಇಬ್ಬರನ್ನು ರಕ್ಷಿಸಿದರೆ ಅರ್ಫಾಝ್ ಮಾತ್ರ ನೀರುಪಾಲಾಗಿದ್ದ. ತಲಪಾಡಿ ಕಡೆಯಿಂದ ಹರಿದುಬರುವ ಹೊಳೆ ಸಮುದ್ರಕ್ಕೆ ಸೇರುವಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಹಿಳೆಯೋರ್ವರ ಸರವನ್ನು ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಕಳವುಗೈದಿರುವ ಘಟನೆ ಸೋಮೇಶ್ವರದ ಉಚ್ಚಿಲ ರೈಲ್ವೇ ಟ್ರಾಕ್ ಸಮೀಪ ಗುರುವಾರ ರಾತ್ರಿ ವೇಳೆ ನಡೆದಿದೆ. ಸೋಮೇಶ್ವರ ಉಚ್ಚಿಲದ ನಿವಾಸಿ ಶಹನಾಝ್ (62) ಎಂಬವರು ಮನೆಗೆಂದು ನಡೆದುಕೊಂಡು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಅವರ ಕುತ್ತಿಗೆಯಲ್ಲಿದ್ದ ರೂ.30,000 ಬೆಲೆಬಾಳುವ 15 ಗ್ರಾಂ ಚಿನ್ನದ ಸರವನ್ನು ಕಳವುಗೈದು ಪರಾರಿಯಾಗಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಗಳ ಹಿಂದೆ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಗನವಾಡಿ ಶಿಕ್ಷಕಿಯ ಸರವನ್ನು ಇದೇ ರೀತಿಯಲ್ಲಿ ಬೈಕಿನಲ್ಲಿ ಬಂದ ಕಳ್ಳರು ಕಳವುಗೈದಿದ್ದರು.
ಉಳ್ಳಾಲ: ಹೆಚ್ಚುವರಿ ಬಡ್ಡಿ ನೀಡಲು ಪೀಡಿಸುತ್ತಿದ್ದ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮೇಶ್ವರ ನಿವಾಸಿ ಜೀತು ಪೂಜಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ಕುಂಪಲ ನಿವಾಸಿ ಹರೀಶ್ ಎಂಬವರು ಜೀತು ಪೂಜಾರಿ ಕೈಯಿಂದ ರೂ. 5 ಲಕ್ಷ ಹಣವನ್ನು ಬಡ್ಡಿಸಾಲದ ರೂಪದಲ್ಲಿ ಪಡೆದುಕೊಂಡಿದ್ದರು. ಅದರ ಅಸಲು ಹಣ ಮತ್ತು ಬಡ್ಡಿಯಾಗಿ ರೂ. 2 ಲಕ್ಷ ನಗದನ್ನು ಹರೀಶ್ ವಾಪಸ್ಸು ಮಾಡಿದ್ದರು. ಆದರೆ ಹೆಚ್ಚುವರಿ ಬಡ್ಡಿ ನೀಡಬೇಕೆಂದು ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ಜೀತುಪೂಜಾರಿ ನಿಂದಿಸಿ ಬೆದರಿಕೆ ಒಡ್ಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಹರೀಶ್ ಅವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕುಂದಾಪುರ ಟು ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಆರಂಭವಾಗಿ ವರ್ಷಗಳು ಸಂದು ರಸ್ತೆ ಕಾಮಗಾರಿ ಪೂರ್ಣವಾಗದೆ, ಅದರ ಅವ್ಯವಸ್ಥೆಗೆ ಜೀವಗಳು ಮಾತ್ರ ಬಲಿಯಾಗುತ್ತಲೇ ಇವೆ. ಆದರೂ ಗಮನಹರಿಸಬೇಕಾದ ಜನಪ್ರತಿನಿಧಿಗಳು ಜನರ ಧ್ವನಿಗೆ ಪ್ರತಿಕ್ರಿಯಿಸದೆ ತಮ್ಮ ಪಾಲಿಗೆ ಮುಂದುವರಿಯುತ್ತಿರುವ ನಡೆ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ. ಮಂಗಳೂರಿನಿಂದ ತಲಪಾಡಿಯವರೆಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಮೇ. 2008ರಲ್ಲಿ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಒಂದೇ ವರ್ಷ ಅಂದರೆ 2009ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಆದರೆ ಈವರೆಗೆ ಕಾಮಗಾರಿ ಪೂರ್ಣವಾಗದೆ ಸರಿಸುಮಾರು 7 ವರ್ಷಗಳು ಪೂರ್ಣವಾಗುತ್ತಾ ಬಂದಿದೆ. ಈ ನಡುವೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಕಂಪೆನಿಗಳಿಂದ ಜನಪ್ರತಿನಿಧಿಗಳು ಕಮೀಷನ್ ಪಡೆದುಕೊಂಡು ಕಾಮಗಾರಿ ವಿಳಂಬವಾದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಅನ್ನುವ ಆರೋಪವೂ ಕೇಳಿಬಂದಿದೆ. ಲೆಕ್ಕವಿಲ್ಲದ ಅಪಘಾತಗಳು : ಕುಂದಾಪುರದಿಂದ ತಲಪಾಡಿವರೆಗೆ ಹಲವೆಡೆ ಕಾಮಗಾರಿಗಳು ಪೂರ್ಣವಾಗಿದೆ. ಪಡುಬಿದ್ರಿ, ಮುಲ್ಕಿ, ಕುಳಾಯಿ, ನಂತೂರು, ಪಂಪ್ವೆಲ್, ಕಲ್ಲಾಪು, ತೊಕ್ಕೊಟ್ಟು,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅನಧಿಕೃತ ಜಾಗದಲ್ಲಿ ವಾಸಿಸುವ ಮಂದಿಗೆ ದಂಡ ವಿಧಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಯ್ದೆ ಸರಕಾರದಲ್ಲಿದ್ದು, ಈ ಮೂಲಕ ಬಡ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಗರಸಭೆ ಸದಸ್ಯರು ಪ್ರಂiÀiತ್ನಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಉಳ್ಳಾಲ ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಶೌಚಾಲಯ, ವಿದ್ಯುತ್, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯಗಳಿಲ್ಲದೆ ಜನ ವಾಸಿಸುತ್ತಿದ್ದಾರೆ. ದಾಖಲೆಗಳು ಇಲ್ಲವೆಂದು ಸಮಾಜದಿಂದಲೇ ಅವರನ್ನು ದೂರ ಮಾಡುವುದು ಸರಿಯಲ್ಲ. ಅದಕ್ಕೆಂದೇ ಕಾನೂನುಗಳು ಇದ್ದರೂ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಅಂತಹ ನಿರ್ಗತಿಕ ಕುಟುಂಬಗಳಿಗೆ ದಾರಿ ತೋರಿಸಬೇಕಿದೆ. ಅಲ್ಲದೆ ಸರಕಾರದಿಂದ ಅಂತಹ ಕುಟುಂಬಗಳಿಗೆ ದಂಡ ವಿಧಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಯ್ದೆ ಇದೆ ಎಂದ ಅವರು ಸಾಮಾನ್ಯ ಸಭೆ ಚರ್ಚೆಗಳಲ್ಲೇ ಮುಗಿಯುವುದಕ್ಕಿಂತ ಪೂರ್ವಭಾವಿಯಾಗಿ ಸದಸ್ಯರು, ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಮಂಡಿಸುವ ವಿಚಾರದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಗತ್ಸಿಂಗರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯ ಮಾಡುತ್ತಿರುವ ಭಗತ್ ಸಿಂಗ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಆದರ್ಶ, ಚಿಂತನೆಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಭಗತ್ಸಿಂಗ್ ಪ್ರತಿಷ್ಠಾನ ಕೇಂದ್ರ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಭಗತ್ಸಿಂಗರ ಜನ್ಮದಿನೋತ್ಸವದ ಅಂಗವಾಗಿ ಯುವ ಉದ್ಯಮಿ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ರಿಷಿ ಹಾರ್ಡ್ವೇರ್ನ ಮಾಲಕ ಸತೀಶ್ ಕರ್ಕೇರ ಅವರಿಗೆ ಭಗತ್ಸಿಂಗ್ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸತೀಶ್ ಕರ್ಕೇರ ಅವರನ್ನು ಭಗತ್ಸಿಂಗ್ ಪ್ರತಿಷ್ಠಾನ ಗುರುತಿಸಿ ಗೌರವಿಸುವುದು ಶ್ಲಾಘನೀಯ. ಕೇಂದ್ರ ಸರಕಾರದ ಮುದ್ರಾ ಯೋಜನೆಯನ್ನು ಭಗತ್ಸಿಂಗ್ ಪ್ರತಿಷ್ಠಾನದ ಪ್ರತಿಯೊಬ್ಬ ಸದಸ್ಯರು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಉದ್ಯೋಗ ಸೃಷ್ಟಿಸಿ ಎಂದರು. ಸನ್ಮಾನ ಸ್ವೀಕರಿಸಿದ ಉದ್ಯಮಿ ಸತೀಶ್ ಕರ್ಕೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಗತ್ಸಿಂಗ್ ಪ್ರತಿಷ್ಠಾನದ…

