Author: UllalaVani

Kannada News From Coastal Karnataka

ಮಂಗಳೂರು, ಫೆ. 27 ; ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದ್ದು, ಗುರುವಾರ ಮಾರ್ಗನ್ಸ್ ಗೇಟ್‌ನ ಪಾಲಾ ಮಾರ್ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್‌ಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಾಯಿತು. ನಗರದ ಪ್ರಮುಖ ಸರ್ಕ್ಯೂಟ್ ಆಗಿರುವ ‘ಮಾರ್ಗ ಸಂಖ್ಯೆ 27’ರಲ್ಲಿ ಈ ಹವಾನಿಯಂತ್ರಿತ (ಎಸಿ) ವಿದ್ಯುತ್ ಬಸ್ ಸಂಚಾರ ಆರಂಭಿಸಿದ್ದು, ದೈನಂದಿನ ಪ್ರಯಾಣಿಕರಿಗೆ ಸುಸ್ಥಿರ, ಪರಿಸರ ಸ್ನೇಹಿ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ. ಮಂಗಳೂರಿನ ಖಾಸಗಿ ಸಾರಿಗೆ ವಲಯದಲ್ಲಿ ಇದು ಐತಿಹಾಸಿಕ ಮೈಲಿಗಲ್ಲಾಗಿ ಗುರುತಿಸಿಕೊಂಡಿದೆ.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸೇವೆಯನ್ನು ಉದ್ಘಾಟಿಸಿ ನಿರ್ವಾಹಕರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಹಸಿರು ಇಂಧನ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು. ವಿದ್ಯುತ್ ಚಾಲಿತ ವಾಹನಗಳ ಬಳಕೆ ಭವಿಷ್ಯದ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನ…

Read More

ಮುಡಿಪು: ಮುಡಿಪು ಪ್ರದೇಶದ “ಗೋ ಗ್ಯಾಸ್” ಸಂಸ್ಥೆಯಿಂದ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್ ಘೋಷಿಸಲಾಗಿದೆ. ಈ ವಿಶೇಷ ಯೋಜನೆಯಡಿ 100 ರೂಪಾಯಿ ಮೌಲ್ಯದ ಗ್ಯಾಸ್ ಖರೀದಿಸಿದಲ್ಲಿ ಗ್ರಾಹಕರಿಗೆ 10 ರೂಪಾಯಿ ಮೌಲ್ಯದ ಗ್ಯಾಸ್ ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.ಹೊಸ ವರ್ಷದ ಸಂಭ್ರಮದ ಅಂಗವಾಗಿ ಪರಿಚಯಿಸಲಾದ ಈ ಆಫರ್ ಮೂಲಕ ಗ್ರಾಹಕರು ಹೆಚ್ಚು ಪ್ರಯೋಜನ ಪಡೆಯಬಹುದಾಗಿದೆ. ಗೃಹಬಳಕೆಯ ಗ್ಯಾಸ್ ಖರೀದಿಯಲ್ಲಿ ಸ್ವಲ್ಪ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಆಫರ್ ಕುರಿತು ಹೆಚ್ಚಿನ ಮಾಹಿತಿಗಾಗಿ 57359 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

Read More

ಯುವಶಕ್ತಿ ಸೇವಾಪಥ ದ.ಕ. ವತಿಯಿಂದ “ಚತುರ್ಥ ಸೇವಾಹೆಜ್ಜೆ” ಕಾರ್ಯಕ್ರಮ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಶಕ್ತಿ ಸೇವಾಪಥ ದ.ಕ. ಸಂಘಟನೆಯಿಂದ “ಚತುರ್ಥ ಸೇವಾಹೆಜ್ಜೆ” ಎಂಬ ಮಹತ್ವದ ಸೇವಾ ಕಾರ್ಯಕ್ರಮವನ್ನು ಮಂಗಳೂರಿನ ಉರ್ವದಲ್ಲಿರುವ ಶ್ರೀ ಮಾರಿಯಮ್ಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮಂಗಳೂರು ಆಶ್ರಯದಲ್ಲಿ ಬೀಮ್ ಸನಾತನ್ ಹಾಗೂ ಟೀಮ್ ಸನಾತನ್ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸೇವಾನಿಧಿ ಹಸ್ತಾಂತರ, ಸೇವಾಸಾಧಕರಿಗೆ ಗೌರವ ಸಮರ್ಪಣೆ, ವಿವಿಧ ಸೇವಾಸಂಸ್ಥೆಗಳಿಗೆ ಅಭಿನಂದನೆ ಹಾಗೂ ಮಿತ್ರಸಂಸ್ಥೆಗಳಿಗೆ ಪುರಸ್ಕಾರ ಪ್ರದಾನ ನಡೆಯಲಿದೆ. ಸಮಾಜಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನದ ಮೂಲಕ ಮಾನವೀಯತೆಯನ್ನು ಮೆರೆದರೆಂದು ಸಂಘಟಕರು ಮನವಿ ಮಾಡಿದ್ದಾರೆ. ಸಾಂಸ್ಕೃತಿಕ ವೈಭವದೊಂದಿಗೆ ಕಾರ್ಯಕ್ರಮ ಇನ್ನಷ್ಟು ಕಂಗೊಳಿಸಲಿದ್ದು, ಟೀಮ್ KFM ನಾಸಿಕ್ ಟ್ರೂಪ್ ಮೂಡಿಪು ತಂಡದ ಕಲಾ ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಲಿದೆ. ಸಂಘಟಕರು ಎಲ್ಲಾ…

Read More

ಮುಡಿಪು: ಮುಡಿಪು ಪ್ರದೇಶದ ಖ್ಯಾತ ಶಿಕ್ಷಣ ಸಂಸ್ಥೆಯಾದ ಝೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ LKGರಿಂದ 10ನೇ ತರಗತಿ ವರೆಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. “A Mark of Quality, Commitment and Excellence” ಎಂಬ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಇಸ್ಲಾಮಿಕ್ ಹಾಗೂ ಸೆಕ್ಯುಲರ್ ಶಿಕ್ಷಣವನ್ನು ಒಂದೇ ಗೂಡಿನಡಿ ನೀಡುತ್ತಿರುವುದು ವಿಶೇಷತೆ.ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಲಿಕಾ ವ್ಯವಸ್ಥೆ, ಪೂರ್ವ ಯೋಜಿತ ಸಹಪಠ್ಯ ಚಟುವಟಿಕೆಗಳು, ಅರಬಿಕ್ ಹಾಗೂ ಇಸ್ಲಾಮಿಕ್ ಶಿಕ್ಷಣ, ಪೂರ್ಣಕಾಲಿಕ ಅರಬಿಕ್ ಮಾರ್ಗದರ್ಶಕರು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ನೈತಿಕ ಬೆಳವಣಿಗೆಗೆ ಅಗತ್ಯವಾದ ತರಬೇತಿಗಳು ಲಭ್ಯವಿವೆ. ತೈಕ್ವಾಂಡೋ, ಫ್ಯಾಷನ್ ಡಿಸೈನಿಂಗ್, ಕಲೆ-ಹಸ್ತಕಲೆ ಮತ್ತು ಭಾಷಾ ಕ್ಲಬ್‌ಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸಲು ಅವಕಾಶ ಕಲ್ಪಿಸಲಾಗಿದೆ. ಇಸ್ಲಾಮಿಕ್ ಉಡುಗೆ ಸಂಹಿತೆ, ಶಿಷ್ಟಾಚಾರ ಮತ್ತು ನಡವಳಿಕೆಗೆ ವಿಶೇಷ ಗಮನ ನೀಡಲಾಗುತ್ತದೆ. ಹುಡುಗರ ಮತ್ತು ಹುಡುಗಿಯರಿಗಾಗಿ ವಿಶಾಲ ಪ್ರಾರ್ಥನಾ ಕೊಠಡಿ ವ್ಯವಸ್ಥೆ ಮಾಡಲಾಗಿದೆ.ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ಮತ್ತು ತರಬೇತಿ ನೀಡಲಾಗುತ್ತಿದ್ದು,…

Read More

ಮುಡಿಪು: ಮುಡಿಪು ಪ್ರದೇಶದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2026–2027ನೇ ಶೈಕ್ಷಣಿಕ ಸಾಲಿನ Pre-KG ರಿಂದ 10ನೇ ತರಗತಿ ವರೆಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. “ಪ್ರತಿ ಕನಸುಗಾರ ಬಾಲಕನಿಗೂ ಶೈಕ್ಷಣಿಕ, ಕ್ರೀಡಾ ಹಾಗೂ ಸಾಹಸ ಚಟುವಟಿಕೆಗಳ ಸಮನ್ವಯ” ಎಂಬ ಉದ್ದೇಶದೊಂದಿಗೆ ಸಂಸ್ಥೆ ವಿದ್ಯಾರ್ಥಿಗಳ ತಲೆ, ಹೃದಯ ಮತ್ತು ಕೈಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದೆ.ಶಾಲೆಯಲ್ಲಿ ಅನುಭವಿ ಮತ್ತು ಉತ್ತಮ ತರಬೇತಿ ಪಡೆದ ಶಿಕ್ಷಕ ವೃಂದ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ವಿಶಾಲವಾದ ಆಟದ ಮೈದಾನ, ಸಮೃದ್ಧ ಗ್ರಂಥಾಲಯ ಸೌಲಭ್ಯ, ಸಜ್ಜಿತ ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗಳು ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತವೆ. ಶಾಲಾ ವಾಹನದ ಸೌಲಭ್ಯವೂ ಲಭ್ಯವಿದ್ದು, ದೂರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಹ ಅನುಕೂಲವಾಗಿದೆ.ಕ್ರೀಡೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದ್ದು, ನಿಧಾನ ಕಲಿಯುವ ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ, ಸಂಗೀತ, ನೃತ್ಯ,…

Read More

ಮುಡಿಪು: ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಪ್ರದೇಶದಲ್ಲಿರುವ ‘ಬ್ರಹ್ಮಶ್ರೀ ನಿಲಯ’ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವುದರ ಜೊತೆಗೆ, ಮನೆಗೆ ಕಿಟಕಿ–ಬಾಗಿಲು ಅಳವಡಿಸಲು ಅಗತ್ಯವಾದ ಆರ್ಥಿಕ ಸಹಾಯ ನೀಡಿದ ಸಹೃದಯಿ ದಾನಿಗಳಿಗೆ ಕೃಷ್ಣಮ್ಮ ರಂಗನಾಥ್ ಕುಕ್ಕದಕಟ್ಟೆ ಸೈಟ್ ಅವರು ಹೃದಯಾಂತರಾಳದ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.ಮನೆಯ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮನಗಂಡು, ಸಮಾಜಮುಖಿ ಚಿಂತನೆಯೊಂದಿಗೆ ದಾನಿಗಳು ಒಗ್ಗೂಡಿ ಸಹಾಯಹಸ್ತ ಚಾಚಿರುವುದು ಶ್ಲಾಘನೀಯವಾಗಿದೆ. ವಿಶೇಷವಾಗಿ ಸರಕಾರಿ ಪ್ರೌಢಶಾಲೆ ಮುಡಿಪು ಕುರ್ನಾಡು ಇದರ 2000–2001ನೇ ಸಾಲಿನ ಹಳೆ ವಿದ್ಯಾರ್ಥಿಗಳು ಒಂದಾಗಿ ಮಾನವೀಯತೆ ಮೆರೆದಿರುವುದು ಗಮನಾರ್ಹವಾಗಿದೆ.ಸಹಾಯ ಮಾಡಿದ ದಾನಿಗಳಲ್ಲಿ ಶಿಲ್ಪಾ ಪೂಜಾರಿ (ತೊಕ್ಕೊಟ್ಟು), ನೃತ್ಯ ಶೆಟ್ಟಿ (ಮುಂಬಯಿ), ಚೈತ್ರಾ ಪೂಜಾರಿ (ದುಬೈ), ಆಸಿಫ್ ಫಜೀರು, ಮಿಲನ್ ಪೂಜಾರಿ (ಬೆಂಗಳೂರು), ಹಂಝ (ದುಬೈ), ಮನೋಜ್ ಶೆಟ್ಟಿ (ಕೆಳಗಿನ ನಾರ್ಯ), ದಿವ್ಯರಾಜ್ ಶೆಟ್ಟಿ (ತೊಕ್ಕೊಟ್ಟು), ರಾಜೀವ ಪೂಜಾರಿ (ದುಬೈ), ಸಿದ್ಧಿಕ್ ಮೂಳೂರು, ವಿದ್ಯಾಧರ ಶೆಟ್ಟಿಗಾರ್ (ತಲೆಕ್ಕಿ), ರಾಜೇಶ್ ದುರ್ಗಾಲಾಪು (ಸೈಟ್), ಗಣೇಶ್ ಸಾಲಿಯಾನ್ಸ್ – ದಿಶಾ ಎಲೆಕ್ಟಿಕಲ್ (ಬೋಳ್ಯಾರು), ಕೆ.ಎಚ್. ಸಿದ್ದಿಕ್ (ಮುಡಿಪು), ಲೋಹಿತ್…

Read More

ಮುಡಿಪು : ಮುಡಿಪಿನ ಸಂತ ಜೋಸೆಫ್ ವಾಜ್ ದೇವಾಲಯದ ನೂತನ ಪಾಲನಾ ಪರಿಷತ್ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನೆರವೇರಿತು. ಈ ಸಂದರ್ಭದಲ್ಲಿ ಅರುಣ್ ಡಿಸೋಜ ಉಪಾಧ್ಯಕ್ಷರಾಗಿ, ರೋಶನ್ ಡಿಸೋಜ ಕಾರ್ಯದರ್ಶಿಯಾಗಿ ಹಾಗೂ ಜೋಯಲ್ ಡಿಸೋಜ ಸರ್ವ ಆಯೋಗ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಕಾರ್ಯಾವಧಿ ಯಶಸ್ವಿಯಾಗಲೆಂದು ಹಾರೈಸಿದರು. ದೇವಾಲಯದ ಅಭಿವೃದ್ಧಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ವಿಸ್ತರಣೆಗಾಗಿ ನೂತನ ತಂಡ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು. ಈ ಸಂದರ್ಭ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಮುಡಿಪು ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದು ಶುಭಾಶಯ ಕೋರಿದರು.ಇಲ್ಲಿನ ಸಂತ ಜೋಸೆಫ್ ವಾಜ್ ದೇವಾಲಯದ ನೂತನ ಪಾಲನಾ ಪರಿಷತ್ತಿಗೆ ಆಯ್ಕೆಯಾಗಿರುವ ಮೂವರು ಪದಾಧಿಕಾರಿಗಳು ತಮ್ಮ ಸರಳತೆ, ಸೇವಾಭಾವ ಮತ್ತು ಸಂಘಟನಾ ನೈಪುಣ್ಯದ ಮೂಲಕ ಈಗಾಗಲೇ ಸಮಾಜದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.ಉಪಾಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಡಿಸೋಜ ಅವರು ಶಾಂತ ಸ್ವಭಾವ, ಸಮನ್ವಯ ಕೌಶಲ್ಯ ಮತ್ತು ಧಾರ್ಮಿಕ…

Read More

ಮುಡಿಪು : ಇಲ್ಲಿನ ಕೈರಂಗಳದಲ್ಲಿರುವ ಶ್ರೀಕೃಷ್ಣ ಗೇಮ್ಸ್ ಕ್ಲಬ್ ಅವರ ಆಶ್ರಯದಲ್ಲಿ ಮಾ.4 ರಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಕೈರಂಗಳ ಶಾಲಾ ವಠಾರದಲ್ಲಿ ವಿದ್ಯುದ್ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ಶ್ರೀ ಹನುಮಗಿರಿ ಮೇಳ ತಂಡದಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಎಂಬ ಸುಂದರ ಪೌರಾಣಿಕ ಕಥಾಭಾಗವನ್ನು ಬಯಲಾಟ ರೂಪದಲ್ಲಿ ಪ್ರದರ್ಶಿಸಲಾಗುವುದು.ಹರೀಶ್ ಬಳಂತಿಮೊಗರು ವ್ಯವಸ್ಥಾಪನೆಯಲ್ಲಿ ‌ ಮೇಳ ಕಾರ್ಯನಿರ್ವಹಿಸುತ್ತಿದ್ದು , ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿರುವ ಗುರುರಾಜ್ ಭಟ್ ಅವರು ಕಾರ್ಯಕ್ರಮಕ್ಕೆ ಶುಭಕೋರಿದ್ದು, ಸ್ಥಳೀಯ ಭಕ್ತರು ಹಾಗೂ ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.ಉಳ್ಳಾಲ ತಾಲೂಕಿನ ಕೈರಂಗಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕೃಷ್ಣ ಗೇಮ್ಸ್ ಕ್ಲಬ್ (ರಿ.) ಗ್ರಾಮೀಣ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಸಮಾಜಮುಖಿ ಹಾಗೂ ಕ್ರೀಡಾ ಸಂಘಟನೆಯಾಗಿದೆ. ಗ್ರಾಮದಲ್ಲಿನ ಯುವಕರನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಳತ್ತ ಪ್ರೇರೇಪಿಸುವ ಉದ್ದೇಶದಿಂದ ಈ ಕ್ಲಬ್ ಸ್ಥಾಪನೆಯಾಗಿದೆ.ಕಾಲಕಾಲಕ್ಕೆ…

Read More

ಮಂಗಳೂರು ಫೆ. 26: ಮಂಗಳೂರಿನ ಕೃಷಿ ಭೂಮಿಗಳಲ್ಲಿ ಬೃಹತ್ ಸ್ಟೀಲ್ ವಿದ್ಯುತ್ ಪ್ರಸರಣ ಗೋಪುರಗಳು (ಟವರ್) ನಿಧಾನವಾಗಿ ತಲೆಯೆತ್ತುತ್ತಿರುವಂತೆ, ಈ ಯೋಜನೆಯ ಸುತ್ತ ತೀವ್ರ ಹಾಗೂ ಸಂಘರ್ಷಮಯ ಚರ್ಚೆಗಳು ಆರಂಭವಾಗಿವೆ. ಪರಿಹಾರದ ಕುರಿತಾದ ತಾಂತ್ರಿಕ ಸಂವಾದವಾಗಿ ಶುರುವಾಗಿದ್ದ ಈ ವಿಚಾರ, ಕೆಲವು ಪ್ರದೇಶಗಳಲ್ಲಿ ಸಂಘಟಿತ ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಈಗ ಆಡಳಿತ ವರ್ಗ ಮತ್ತು ನಾಗರಿಕರ ಮುಂದಿರುವ ಬಹುಮುಖ್ಯ ಪ್ರಶ್ನೆಯೆಂದರೆ, ರೈತರು ನಿಜಕ್ಕೂ ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆಯೇ ಅಥವಾ ಯಾವುದೋ ದೊಡ್ಡ ರಾಜಕೀಯ ನಾಟಕದ ಭಾಗವಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆಯೇ?ಬಾಹ್ಯ ಪ್ರಭಾವ ಮತ್ತು ಸಂಘಟನೆಗಳ ಪಾತ್ರರೈತರಿಗೆ ತಮ್ಮ ಭೂಮಿಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವ ಸಂಪೂರ್ಣ ಹಕ್ಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪರಿಹಾರದ ವಿವರವಾದ ಲೆಕ್ಕಾಚಾರ, ಜಂಟಿ ಸಮೀಕ್ಷೆಗಳು ಮತ್ತು ಮುಂಗಡ ಪಾವತಿಯ ದಾಖಲೆಗಳು ಅತ್ಯಂತ ಅವಶ್ಯಕ. ಇಂತಹ ಪಾರದರ್ಶಕತೆ ಕೊರತೆಯಾದಾಗ ಮಾತ್ರ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗುವುದರಿಂದ ಆಗುವ ಆರ್ಥಿಕ ನಷ್ಟ ಕೇವಲ ಒಂದು ಹಳ್ಳಿಗೆ ಮಾತ್ರ…

Read More

ಪಿಲಾರು:ಪಿಲಾರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಅಂಗವಾಗಿ ಅಂಬೇಡ್ಕರ್‌ರವರ ಭಾವಚಿತ್ರ ಬಿಡಿಸುವ ಮತ್ತು ಭಾವಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ಉಳ್ಳಾಲ ತಾಲೂಕು ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ವೇದಿಕೆಯನ್ನು ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಉದ್ಘಾಟಿಸಿ ,ಚಿತ್ರಕಲಾ ಸ್ಪರ್ಧೆ ವಿಷಯದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಟ್ರಸ್ಟ್ ನ ಸ್ಥಾಪಕಧ್ಯಕ್ಷರಾದ ಯಾದವ ಮಾತನಾಡಿದರು. ಈ ಸಂದರ್ಭದಲ್ಲಿ ಗೀತಾ ಡಿ.ಗಟ್ಟಿ, ಶಾಲಾ ಅಭಿವೃದ್ಧಿಯ ಉಪಾಧ್ಯಕ್ಷರಾದ ನಂದಾದೀಪ, ಗ್ರೇಟ್ಟ ಡಿಸೋಜಾ, ಶಾಲಾ ಶಿಕ್ಷಕಿರಾಗಿರುವ ರೇಸಿ ಡಿ’ಸೋಜಾ, ರೇಣುಕಾ, ರಮ್ಯ, ಅಡುಗೆ ಸಹಾಯಕರಾಗಿರುವ ಅರುಣ ಕುಮಾರಿ, ಲಲಿತ ಉಪಸ್ಥಿತರಿದ್ದರು.

Read More