ಉಳ್ಳಾಲ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆಯಾದರೂ, ಜನರ ಜೀವಭದ್ರತೆ ಬಗ್ಗೆ ಸ್ಥಳೀಯ ಆಡಳಿತ ಮತ್ತು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಶಾಲೆ-ಕಾಲೇಜುಗಳ ಸುತ್ತಮುತ್ತ, ಆಸ್ಪತ್ರೆಗಳ ಬಳಿ, ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಗುಂಪುಗೂಡಿ ತಿರುಗಾಡುವ ಬೀದಿ ನಾಯಿಗಳಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರಿಗೂ ಸುರಕ್ಷತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿ ಕಚ್ಚಿದ ಘಟನೆಗಳು ಹಲವು ಕಡೆ ವರದಿಯಾಗುತ್ತಿದ್ದರೂ, ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳು, ನಗರಸಭೆಗಳು ಮತ್ತು ಪುರಸಭೆಗಳು ಇನ್ನೂ ಗಂಭೀರ ಕ್ರಮ ಕೈಗೊಳ್ಳದೆ ಕೇವಲ ಕಾಗದದ ಸಭೆಗಳಲ್ಲಿ ಮಾತು ಹೇಳುವುದರಲ್ಲೇ ತೃಪ್ತಿಪಡುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಜನರ ಪರವಾಗಿ ಧ್ವನಿ ಎತ್ತಬೇಕಾದ ವಿರೋಧ ಪಕ್ಷಗಳೂ “ಮೌನಿ ಬಾಬಾ”ಗಳಂತೆ ಮೌನ ವಹಿಸಿರುವುದು ಸಾರ್ವಜನಿಕರ ಪ್ರಶ್ನೆಗಳಿಗೆ ಇನ್ನಷ್ಟು ಬಲ ನೀಡುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಸ್ಥಳಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳ ಸುತ್ತಮುತ್ತ ಇರುವ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ…
Author: UllalaVani
ಉಳ್ಳಾಲ ತಾಲೂಕು, ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಮೂಲಗಳ ಮಾಲಿನ್ಯ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಕ್ಷಣ ಎಚ್ಚೆತ್ತುಕೊಳ್ಳಬೇಕಾದ ಅಗತ್ಯ ಎದುರಾಗಿದೆ. ಮನೆಗಳ ಬಾವಿ ನೀರು ದುರ್ವಾಸನೆ ಬೀರುವುದು, ಬಣ್ಣ ಬದಲಾಗುವುದು ಹಾಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಜನರಿಂದ ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಪರಿಸರ ಸಂಘಟನೆ National Environment Conservation Federation (NECF) ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ವೇಗವಾಗಿ ನಡೆಯುತ್ತಿರುವ ನಗರೀಕರಣ, ಮಳೆ ನೀರಿನ ಚರಂಡಿಗಳಿಗೆ ಒಳಚರಂಡಿ ನೀರು ಸೇರ್ಪಡೆ, ಅಪಾರ್ಟ್ಮೆಂಟ್ಗಳ ಮಲಮೂತ್ರ ತ್ಯಾಜ್ಯ, ಆಸ್ಪತ್ರೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಅಕ್ರಮ ತ್ಯಾಜ್ಯ ಹರಿವು ನಡೆಯುತ್ತಿರುವ ಪರಿಣಾಮ ಕೆರೆ, ಹೊಳೆ, ನದಿ ಮತ್ತು ಭೂಗರ್ಭ ಜಲಮಟ್ಟ ತೀವ್ರವಾಗಿ ಮಾಲಿನ್ಯಗೊಳ್ಳುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರ ಪರಿಣಾಮ ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪರಿಸರ ಹೋರಾಟಗಾರರು ಎಚ್ಚರಿಸಿದ್ದಾರೆ. ಮಾಲಿನ್ಯಗೊಂಡ ನೀರಿನ ದೀರ್ಘಕಾಲ ಬಳಕೆಯಿಂದ ಕ್ಯಾನ್ಸರ್, ಲಿವರ್ ಸಂಬಂಧಿತ ಕಾಯಿಲೆಗಳು, ಚರ್ಮದ…
ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗಾಗಿ ಕರಾವಳಿ ಜನತೆ ಮತ್ತು ವಕೀಲ ಸಮುದಾಯ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಈ ಬೇಡಿಕೆಗೆ ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ ನೀಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಮಹತ್ವದ ಬೆಳವಣಿಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಕೀಲ ನೀತಿನ್ ಕುತ್ತಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಹೋರಾಟದ ಮೊದಲ ಹಂತದ ಗೆಲುವಿಗೆ ಮಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಹಾಗೂ ಸರ್ಕಾರವನ್ನು ಮನವರಿಕೆ ಮಾಡಲು ಶ್ರಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅಭಿನಂದನಾರ್ಹರು ಎಂದು ಅವರು ಹೇಳಿದ್ದಾರೆ. ಆದರೆ, ಈ ಹೋರಾಟ ಯಶಸ್ವಿಯಾಗುವುದಿಲ್ಲವೆಂದು ಭಾವಿಸಿ ಕೇವಲ ನೆಪಮಾತ್ರದ ಬೆಂಬಲ ನೀಡಿದ್ದ ಕರಾವಳಿಯ ಕೆಲವು ಬಿಜೆಪಿ ನಾಯಕರು ಈಗ ಮೌನ ವಹಿಸಿರುವುದು ಜನರಲ್ಲಿ ಪ್ರಶ್ನೆ ಹುಟ್ಟಿಸಿದೆ ಎಂದು ನೀತಿನ್ ಕುತ್ತಾರ್ ಟೀಕಿಸಿದ್ದಾರೆ. ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಹಾಗೂ ಸಂಸದ ಬ್ರಿಜೇಶ್ ಚೌಟ ಸೇರಿದಂತೆ…
ಕಲ್ಮಂಜ: ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಉಜಿರೆಯ ಖಾಸಗಿ ಕಾಲೇಜಿನ 7 ಜನ ಐಟಿ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಶ್ರೀ ಪೂರ್ಣ ದೇಶ್ಪಾಂಡೆ ನೀರುಪಾಲಾದ ಘಟನೆ ದೇವಸ್ಥಾನದ ಹತ್ತಿರದ ಅಣೆಕಟ್ಟು ಸಮೀಪ ಮೇ 19 ರಂದು ಸಂಜೆ ನಡೆದಿದೆ. ಎಂಟು ಜನ ಸ್ನೇಹಿತರು ಒಟ್ಟಾಗಿ ನೇತ್ರಾವತಿ ನದಿಗೆ ಈಜಲು ತೆರಳಿದ್ದರು, ಈ ವೇಳೆ ಗೋಕಾಕ್ ಮೂಲದ ಎನ್ನಲಾದ 21ರ ಹರೆಯದ ಶ್ರೀ ಪೂರ್ಣ ದೇಶ್ಪಾಂಡೆ ನೀರುಪಾಲಾಗಿರುವ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು, ಶೌರ್ಯ ತಂಡದವರು, ಮುಳುಗು ತಜ್ಞರು ಹುಡುಕಾಟ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈತ ತನ್ನ ಸ್ನೇಹಿತರೊಂದಿಗೆ ನದಿಗೆ ಇಳಿದಿದ್ದು, ಈ ವೇಳೆ ಈತ ಆಳವಿಲ್ಲ ಎನ್ನುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳಲು ಹಿಂದೆ ಹೋಗಿದ್ದಾರೆ. ಈ ಸಂದರ್ಭ ಆಯತಪ್ಪಿ ನದಿ ಆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಾಯಿಗೆ ಈತ ಒಬ್ಬನೇ ಮಗ ಎಂದು ತಿಳಿದು ಬಂದಿದ್ದು, ಇಂದು ಊರಿಗೆ ಮರಳುವವರಿದ್ದರು. ಆದರೆ ವಿಧಿಯಾಟಕ್ಕೆ 21ರ ಹರೆಯದ ಯುವಕ ಬಲಿಯಾಗಿದ್ದಾನೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ರಾಜಕೀಯ ನಿರಾಸಕ್ತಿ ಹಾಗೂ ಯುವಜನರ ಅಸಮಾಧಾನದ ನಡುವೆಯೇ “ಕಾಕ್ರೋಚ್ ಜನತಾ ಪಾರ್ಟಿ” (ಸಿಜೆಪಿ) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡುತ್ತಿರುವ ಈ ಚಳವಳಿ, ರಾಜಕೀಯ ವ್ಯವಸ್ಥೆಯ ವಿರುದ್ಧದ ಯುವಜನರ ಕೋಪ ಮತ್ತು ಹತಾಶೆಯ ಪ್ರತೀಕವಾಗಿ ಕಾಣಲಾಗುತ್ತಿದೆ. “ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ” ಎಂಬ ಟ್ಯಾಗ್ಲೈನ್ ಹೊಂದಿರುವ ಕಾಕ್ರೋಚ್ ಜನತಾ ಪಾರ್ಟಿಯು, “ವ್ಯವಸ್ಥೆಯು ಲೆಕ್ಕ ಹಾಕಲು ಮರೆತುಹೋದ ಜನರನ್ನು ನಾವು ಪ್ರತಿನಿಧಿಸುತ್ತೇವೆ” ಎಂದು ಘೋಷಿಸಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಯುವಕರ ಗಮನ ಸೆಳೆಯುತ್ತಿದೆ. “ಕಾಕ್ರೋಚ್ ಜನತಾ ಪಾರ್ಟಿ” (ಸಿಜೆಪಿ) ಎಂಬ ವಿಡಂಬನಾತ್ಮಕ ರಾಜಕೀಯ ಸಂಘಟನೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಅಭಿಜೀತ್ ದೀಪ್ಕೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಅವರ ಪ್ರಕಾರ, “ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಚಳವಳಿಯು ಭಾರತದ ಯುವ ಜನಸಂಖ್ಯೆಯ ಕಳವಳಗಳು, ಅಗತ್ಯಗಳು ಹಾಗೂ ಆಶಾವಾದಗಳನ್ನು…
ನೀಟ್ ಪರೀಕ್ಷೆ ವಿಚಾರವಾಗಿ ದೇಶದಾದ್ಯಂತ ಪ್ರತಿಭಟನೆಗಳು, ಮುತ್ತಿಗೆಗಳು, ಧರಣಿಗಳು, ರಾಜಕೀಯ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ವಿಶೇಷವಾಗಿ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರು ಹಾಗೂ NSUI National Students’ Union of India ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸುತ್ತಿರುವುದಾಗಿ ಹೇಳುತ್ತಿವೆ. ಆದರೆ ಸಾರ್ವಜನಿಕರ ಮನಸ್ಸಿನಲ್ಲಿ ಒಂದು ಸರಳ ಪ್ರಶ್ನೆ ಮೂಡುತ್ತಿದೆ “ಇಷ್ಟು ಧರಣಿ, ಪ್ರತಿಭಟನೆಗಳ ನಂತರವೂ ಸರ್ಕಾರದ ನಿಲುವು ಬದಲಾಗದಿದ್ದರೆ, ಈ ಹೋರಾಟದ ಪರಿಣಾಮವೇನು?” ಜನರು ಪ್ರಶ್ನಿಸುತ್ತಿದ್ದಾರೆ:ಸರ್ಕಾರಕ್ಕೆ ನಿಜವಾಗಿಯೂ “ಬಿಸಿ” ಮುಟ್ಟಿದೆಯೇ?ಧರಣಿ, ಮುತ್ತಿಗೆಗಳು ಕೇವಲ ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದಕ್ಕೋ, ಅಥವಾ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೋ? ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದವು. ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪ್ರತಿಭಟನೆಗಳು ಹೆಚ್ಚಾದರೂ, ಸರ್ಕಾರದ ನಿರ್ಧಾರಗಳಲ್ಲಿ ದೊಡ್ಡ ಬದಲಾವಣೆ ಕಂಡುಬಂದಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ. ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು. ಆದರೆ ಪರಿಣಾಮಕಾರಿತ್ವವೇ ಮುಖ್ಯ. ವಿದ್ಯಾರ್ಥಿಗಳ…
ಉಳ್ಳಾಲ: ಸೋಶಿಯಲ್ ಟೀಮ್ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಅಬ್ದುಲ್ ರಶೀದ್ ಝೈನಿ ಅವರು, ಶಿಕ್ಷಣದ ಮಹತ್ವ ಹಾಗೂ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡುವ ಸಹಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಉದ್ಯಮಿ ಇಬ್ರಾಹೀಮ್ ಪೂಮಣ್ಣು ಮಾತನಾಡಿ, ದೇಶದಲ್ಲಿ ಶಿಕ್ಷಣ ಅಭಿವೃದ್ಧಿ ಆಗಲು ಎಲ್ಲರೂ ಪ್ರೋತ್ಸಾಹ ನೀಡಬೇಕು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿರುವುದು ಶ್ಲಾಘನೀಯ ಎಂದರುಈ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,ಬಡ ಕುಟುಂಬದ ವ್ಯಕ್ತಿ ಯ ಚಿಕಿತ್ಸೆಗೆ , ಐದು ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಲು ಸಹಾಯ ಧನ ಚೆಕ್ ವಿತರಣೆ ಮಾಡಲಾಯಿತು. ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸೋಶಿಯಲ್ ಫಾರೂಕ್,ಇಬ್ರಾಹಿಂ ಹುಸೈನ್, ಆಸ್ಪಕ್ ಮರವೂರ್, ವಾಣಿ ತಲಪಾಡಿ , ಹಾಗೂ ನಝಿಮಾ ರವರನ್ನು ಸನ್ಮಾನಿಸಲಾಯಿತು,…
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯುಕೆ ಯ ಬಾಂಗೋರ್ ವಿಶ್ವವಿದ್ಯಾನಿಲಯ ನಡುವೆ ನಡೆಯುವ “ಅಂತರರಾಷ್ಟ್ರೀಯ ಶಿಕ್ಷಣ ನಾವೀನ್ಯತೆ ಮತ್ತು ಪ್ರಜಾಪ್ರಭುತ್ವ ಪಾಲುದಾರಿಕೆ-ನಿರ್ಮಾಣ” ಎಂಬ ಸಂಶೋಧನಾ ಕಾರ್ಯಯೋಜನೆ , ಶೈಕ್ಷಣಿಕ ಸಹಕಾರ ಸಂಬಂಧಿಸಿದಂತೆ ಸಭೆಯು ಇತ್ತೀಚೆಗೆ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ವಿವಿ ಹಾಗೂ ಬಾಂಗೋರ್ ವಿವಿಗಳ ನಡುವಿನ ಶೈಕ್ಷಣಿಕ ಸಹಕಾರಗಳ ಕುರಿತು ಚರ್ಚಿಸಲಾಯಿತು. ಈ ಯೋಜನೆಯ ಮೂಲಕ ಉಭಯ ವಿಶ್ವವಿದ್ಯಾಲಯಗಳ ಪಠ್ಯಕ್ರಮ, ಕ್ರೆಡಿಟ್ ವ್ಯವಸ್ಥೆ, ಮೌಲ್ಯಮಾಪನ ವಿಧಾನಗಳು ಮತ್ತು ಬೋಧನಾ ವಿಧಾನಗಳ ಹೊಂದಾಣಿಕೆ, ಸಂಶೋಧನಾ ತರಬೇತಿ ಮತ್ತು ಡಿಜಿಟಲ್ ಕಲಿಕೆ, ಸಾಂಸ್ಕೃತಿಕ ಹೊಂದಾಣಿಕೆ,ಉಪನ್ಯಾಸಕರ ವಿನಿಮಯ, ಸಂಯುಕ್ತ ಕಾರ್ಯಾಗಾರಗಳು, ಸಂಶೋಧನಾ ಸಹಕಾರ, ಅತಿಥಿ ಉಪನ್ಯಾಸಗಳು ಮತ್ತು ಪ್ರಕಟಣಾ ಯೋಜನೆಗಳಂತಹ ದೀರ್ಘಕಾಲೀನ ಶೈಕ್ಷಣಿಕ ಚಟುವಟಿಕೆಗಳ ಮುನ್ನಡೆಯ ಬಗ್ಗೆ ಚರ್ಚಿಸಲಾಯಿತು.ಬಾಂಗೋರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಜೋಶುವಾ ಆಂಡ್ರೀವ್ಸ್ , ಸಮಾಜ ವಿಜ್ಞಾನಿ ಲಿಸಾ ಸ್ಪಾರ್ಕ್ಸ್ ಅವರು ಶೈಕ್ಷಣಿಕ ಯೋಜನೆ ಹಾಗೂ ಮಹತ್ವದ…
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇವರ ವತಿಯಿಂದ ಪಂಪ ಪ್ರಶಸ್ತಿ ಪುರಸ್ಕೃತ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಬಿ. ಎ. ವಿವೇಕ ರೈ ಇವರಿಗೆ ಎಂಬತ್ತು ವರ್ಷ ತುಂಬಿದ ಸಂಭ್ರಮದ ಪ್ರಯುಕ್ತ ಅವರ ವಿದ್ಯಾರ್ಥಿಗಳಾದ ಕಲಾವಿದರಿಂದ ಕಲಾಭಿನಂದನೆ ಮತ್ತು ತಾಳಮದ್ದಲೆ ಕಾರ್ಯಕ್ರಮವು 21 ರಂದು ಗುರುವಾರ ಅಪರಾಹ್ನ 2.30 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಯು.ಆರ್ .ರಾವ್ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ಅಭಿವಂದನಾ ನುಡಿಗಳನ್ನಾಡಲಿದ್ದಾರೆ.ಬಳಿಕ ನಡೆಯುವ ಭೀಷ್ಮಾರ್ಜುನ ಕಾಳಗ ತಾಳಮದ್ದಳೆಯಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ, ಚೆಂಡೆ / ಮದ್ದಲೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್,ಮುರಳೀಧರ ಕಲ್ಲೂರಾಯ,ಅರ್ಥಧಾರಿಗಳಾಗಿ ಗಣರಾಜ ಕುಂಬಳೆ, ರಾಧಾಕೃಷ್ಣ ಕಲ್ಚಾರ್, ನಾಗವೇಣಿ ಮಂಚಿ ಭಾಗವಹಿಸಲಿದ್ದಾರೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದಡಾ.ಧನಂಜಯ ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಬೆಂಗಳೂರು ವಕೀಲರ ಸಂಘವು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿರುವುದು ಇದೀಗ ರಾಜ್ಯದ ಕಾನೂನು ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಸಂಘದ ಅಧ್ಯಕ್ಷ Vivek Subba Reddy ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮನವಿಯಲ್ಲಿ, ಸಮಗ್ರ ಅಧ್ಯಯನ, ಅಗತ್ಯತೆಯ ವಿಶ್ಲೇಷಣೆ ಹಾಗೂ ಅಂಕಿಅಂಶಗಳ ಆಧಾರವಿಲ್ಲದೆ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವುದರಿಂದ ಹೈಕೋರ್ಟ್ನ ಪ್ರಾಮುಖ್ಯತೆ ಕುಗ್ಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ರಾಜ್ಯದ ಎಲ್ಲಾ ಹಿತಾಸಕ್ತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಬಾರದು ಎಂದು ಕೂಡ ಮನವಿ ಮಾಡಲಾಗಿದೆ. ಆದರೆ, ಈ ಬೆಳವಣಿಗೆಯ ನಡುವೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವಕೀಲರ ಸಂಘಗಳು ಮತ್ತು ನ್ಯಾಯಪರ ಸಂಘಟನೆಗಳ ನಿಲುವು ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವರ್ಷಗಳ ಕಾಲ ದೂರದ ಬೆಂಗಳೂರು ಪ್ರಯಾಣ, ಹೆಚ್ಚಿನ ವೆಚ್ಚ, ಸಮಯದ ನಷ್ಟ…

