ಪುತ್ತೂರು,ಜ. 23: ಜಡ್ಜ್ ಎದುರಲ್ಲೇ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವರನ್ನು ಪುತ್ತೂರು ತಾಲೂಕಿನ ಕಾವು ಮಾನ್ಯಡ್ಕ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ. ರವಿ ಮತ್ತು ಆತನ ಪತ್ನಿ ವಿದ್ಯಾಶ್ರೀ ನಡುವೆ ಕಳೆದ ಕೆಲ ದಿನಗಳಿಂದ ಕಲಹ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಯತ್ನ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗಂಡ–ಹೆಂಡತಿ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬುಧವಾರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಿಚ್ಛೇದನ ಸಂಬಂಧ ಮಾತುಕತೆ ಕೂಡ ನಡೆದಿತ್ತು. ಠಾಣೆಗೆ ಹಾಜರಾಗುವಂತೆ ಪೊಲೀಸರು ರವಿಗೆ ಸೂಚನೆ ನೀಡಿದ್ದರು. ಈ ಮಧ್ಯೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, 5ನೇ ಹೆಚ್ಚುವರಿ ನ್ಯಾಯಾಲಯದ ಜಡ್ಜ್ ಎದುರಲ್ಲಿಯೇ ವಿಷ ಸೇವಿಸಿದ್ದಾನೆ. ರವಿ ವಿಷ ಸೇವಿಸುವ ಸಾಧ್ಯತೆ ಇದೆ ಎಂಬ…
Author: UllalaVani
ಉಡುಪಿ, ಜ. 23 : ಎಕ್ಸ್ ಪ್ರೆಸ್ ಬಸ್ ನಿಂದ ಹೊರಕ್ಕೆ ಎಸೆಯಲ್ಪಟ್ಟ ಮಹಿಳೆಯೋರ್ವರು ಗಂಭೀರ ಗಾಯಗಳೊಂದಿಗೆ ಹೆದ್ದಾರಿ ಬದಿ ಬಿದ್ದಿರುವುದನ್ನು ಕಂಡ ಯುವ ಸಮಾಜ ಸೇವಕ ಕಟಪಾಡಿ ಅಭಿರಾಜ್ ಸುವರ್ಣ ಅವರು ತನ್ನ ಕಾರ್ ನಲ್ಲಿ ಚಿಕಿತ್ಸೆಗೆ ತುರ್ತಾಗಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನು ಮೆರೆದ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ. ಅಂಡರ್ ಪಾಸ್ ಕಾಮಗಾರಿ ನಿರತ ಕಟಪಾಡಿಯ ಬಸ್ ತಂಗುದಾಣದಲ್ಲಿ ಕಟಪಾಡಿ ಮೂಡಬೆಟ್ಟು ಕುದ್ರಾಡಿ ಎಂಬಲ್ಲಿನ ಚಿಕ್ಕ ಪೂಜಾರ್ತಿ (50) ಎಂಬವರು ಉಡುಪಿಯತ್ತ ತೆರಳಲು ಎಕ್ಸ್ ಪ್ರೆಸ್ ಬಸ್ ಹತ್ತಿದ್ದರು. ಬಸ್ ಚಲಿಸುತ್ತಿದ್ದಂತೆಯೇ ಕೆಲವೇ ಕ್ಷಣಗಳಲ್ಲಿ ಇರುವ ತಿರುವಿನಲ್ಲಿ ಈಕೆ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದರು.ಇದೇ ಹಾದಿಯಾಗಿ ತೆರಳುತ್ತಿದ್ದ ಅಭಿರಾಜ್ ಸುವರ್ಣ ಈಕೆಯನ್ನು ಚಿಕಿತ್ಸೆಗೆ ಕರೆದೊಯ್ಯಲು ಯಾವುದೇ ವಾಹನಗಳ ಲಭ್ಯವಿಲ್ಲದುದನ್ನು ಗಮನಿಸಿ, ಮತ್ತು ತುರ್ತು ಚಿಕಿತ್ಸೆಯ ಅಗತ್ಯತೆಯನ್ನು ಮನಗಂಡು ತನ್ನ ಕಾರ್ ಮೂಲಕ ಉಡುಪಿಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾರೆ. ಐಸಿಯು ವಿನಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು; ದ.ಕ.ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟ ಜ.25ರಂದು ಬೆಳಗ್ಗೆ 9ಗಂಟೆಗೆ ಕದ್ರಿಯ ಕೆ.ಪಿ.ಟಿ ಮೈದಾನದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳೂರು: 9 ವರ್ಷಗಳ ಬಳಿಕ ಮಂಗಳೂರಿನ “ಮಹಾವೀರ ವೃತ್ತ”ಕ್ಕೆ ಕರಾವಳಿಯ ಸಾಂಸ್ಕöÈತಿಕ ವೈಭವಮಂಗಳೂರು: ಮಂಗಳೂರಿನ ಮುಕುಟದಂತಿರುವ ಪಂಪ್ವೆಲ್ನ ಮಹಾವೀರ ವೃತ್ತ ಇಂದು ಹೊಸ ಕಾಂತಿಯೊAದಿಗೆ ಕಂಗೊಳಿಸುತ್ತಿದೆ. ಬರೋಬ್ಬರಿ 9 ವರ್ಷಗಳ ದೀರ್ಘ ನಿರೀಕ್ಷೆಗೆತೆರೆ ಎಳೆದಂತೆ, ವೃತ್ತದಲ್ಲಿ ಪುನಃ ಕಲಶ ಪುನರ್ನಿರ್ಮಾಣಗೊಂಡಿದ್ದು, ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ನವ ಚೈತನ್ಯವನ್ನು ತುಂಬಿದೆ. ಬಹುನಿರೀಕ್ಷಿತ ನವೀಕೃತ ಮಹಾವೀರ ವೃತ್ತದ ಲೋಕಾರ್ಪಣೆ ಜ. 24ರಂದು ನೆರವೇರಲಿದೆ. ಮಂಗಳೂರು ಜೈನ ಸೊಸೈಟಿ (ರಿ) ಅವರ ಮುಂದಾಳತ್ವದಲ್ಲಿ ರೂಪುಗೊಂಡ ಈ ಅಭಿವೃದ್ಧಿ ಕಾರ್ಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಲೋಕಾರ್ಪಣೆ ನೆರವೇರಿಸಲಿದ್ದು, ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಡಾ. ಯು.ಟಿ. ಖಾದರ್ ಅವರು ನಾಮಫಲಕ ಅನಾವರಣಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ…
ಇನ್ಸ್ಟಾಗ್ರಾಮ್ನಲ್ಲಿ ಹವಾ ಸೃಷ್ಟಿಸಿದ್ದ ನಾಗುರಿಯ ನಿವಾಸಿ ಆಶಾ ಪಂಡಿತ್, ಜನವರಿ 23 ರ ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಆಶಾ ಪಂಡಿತ್ ತಮ್ಮ ಬೈಗುಳದ ರೀಲ್ಗಳಿಂದ ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯತೆ ಗಳಿಸಿದ್ದರು. ಅವರು ಪಡೀಲ್ ಬಳಿ ಒಂದು ಸಣ್ಣ ಅಂಗಡಿಯನ್ನೂ ನಡೆಸುತ್ತಿದ್ದರು. ಕುಟುಂಬದ ಮೂಲಗಳ ಪ್ರಕಾರ, ಅವರಿಗೆ ನಿನ್ನೆ ರಾತ್ರಿ ವಾಂತಿ ಸಮಸ್ಯೆ ಉಂಟಾಗಿತ್ತು. ಶುಕ್ರವಾರ ಬೆಳಗಿನ ಜಾವ ಅವರಿಗೆ ಹೃದಯಾಘಾತವಾಗಿ ಮನೆಯ ಅಂಗಳದಲ್ಲಿ ಕುಸಿದು ಬಿದ್ದರು ಎಂದು ವರದಿಯಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಆಗಲೇ ಮೃತಪಟ್ಟಿದ್ದರು.
ಉಳ್ಳಾಲ: ಆದರ್ಶ ಮಿತ್ರ ಮಂಡಳಿ ಕೊಲ್ಯ ಇದರ 50 ನೇ ಸುವರ್ಣ ಸಂಭ್ರಮ ಕಾರ್ಯಕ್ರಮವು ಜ.23 ರಿಂದ ಜ 25 ರ ವರೆಗೆ ಕೊಲ್ಯ ಶ್ರೀ ಶಾರದಾ ಮಂದಿರದಲ್ಲಿ ನಡೆಯಲಿದೆ ಎಂದು ಆದರ್ಶ ಮಿತ್ರ ಮಂಡಳಿಯ ಗೌರವ ಸಲಹೆಗಾರರಾದ ರಾಜೇಶ್ ಕುಮಾರ್ ಕೆ.ಎಸ್ ಹೇಳಿದರು. ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ, ಜ.23 ರಂದು ಶುಕ್ರವಾರ ಸಂಜೆ 4.30 ಗಂಟೆಗೆ ಶ್ರೀ ಶಾರದಾ ಮಹಿಳಾ ಮಂಡಳಿಯವರಿಂದ ಲಲಿತ ಸಹಸ್ರನಾಮ,5.30ಕ್ಕೆ ದೀಪ ಪ್ರಜ್ವಲನೆ, ಭಜನಾ ಕಾರ್ಯಕ್ರಮ, ಸಂಜೆ ಆರು ಗಂಟೆಗೆ ಸತ್ಯ ನಾರಾಯಣ ಪೂಜೆ, ರಾತ್ರಿ ಎಂಟು ಗಂಟೆಗೆ ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು. ಜ.24 ರಂದು ಶನಿವಾರ ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಯಮಿ ಸೌಂದರ್ಯ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಟಿ ಜಿ ರಾಜರಾಮ…
ನಿಟ್ಟೆ ಡೀಮ್ಡ್ ಯುನಿವರ್ಸಿಟಿ, ಸೆಕ್ಷನ್ ಇನ್ಫಿನ್- 8 ಹಾಗೂ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿಗೆ ಬೇಕಾದ ತಂತ್ರಜ್ಞಾನವನ್ನು ಒದಗಿಸುವ ಉದ್ದೇಶದಿಂದ RuTAGe ಸ್ಮಾರ್ಟ್ ವಿಲೇಜ್ ಸೆಂಟರ್ನ್ನು ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಬುಧವಾರ ಶುಭಾರಂಭಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಿಟ್ಟೆ ಡೀಮ್ಡ್ ಯುನಿವರ್ಸಿಟಿ ಯ ಸಂಶೋಧನೆ ಮತ್ತು ಪೇಟೆಂಟ್ಸ್ ಸಲಹೆಗಾರರಾದ ಡಾ. ಇಡ್ಯಾ ಕರುಣಸಾಗರ್ ಅವರು RuTAGe ಸಮರ್ಥ ಗ್ರಾಮ ಕೇಂದ್ರ ಯೋಜನೆಯ ವಿವರವಾದ ರೂಪುರೇಷೆ, ಉದ್ದೇಶ ಮತ್ತು ಕಾರ್ಯವಿಧಾನವನ್ನು ಪ್ರಸ್ತುತಪಡಿಸಿದರು. ಗ್ರಾಮೀಣ ಪ್ರದೇಶಗಳ ನೈಜ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸಂಶೋಧನೆ ಆಧಾರಿತ ಹಾಗೂ ಅನುಷ್ಠಾನಗೊಳ್ಳುವ ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಅವರು ವಿವರಿಸಿದರು. U.S.A ಯ ACM ಬಿಸಿನೆಸ್ ಸೊಲ್ಯುಷನ್ನ ಮುಖ್ಯಸ್ಥರಾದ ಡಾ. ಎನ್. ಸಿ. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಗ್ರಾಮೀಣ ಭಾಗದ ಜನರ ಅಭಿವೃದ್ದಿಯ ಉದ್ದೇಶದಿಂದ ಈ ಯೋಜನೆಯನ್ನು ಇಲ್ಲಿ ಆರಂಭಿಸುತ್ತಿದ್ದು ಎಲ್ಲರ ಸಹಕಾರ ಖುಷಿ ನೀಡಿದೆ ಎಂದರು. U.S.A ಯ ಕುಟುಂಬ ವೈದ್ಯ…
ಉಳ್ಳಾಲ: ಲಯನ್ಸ್ ಕ್ಲಬ್ ಛೋಟಾ ಮಂಗಳೂರು ವತಿಯಿಂದ ಹಸಿದವನಿಗೆ ಅನ್ನ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಗೋವರ್ಧನ ಶೆಟ್ಟಿ ಲಯನ್ಸ್ ಇಂಟರ್ನೇಶನಲ್ ಡಿಸ್ಟಿçಕ್ಟ್ 317ಡಿ ಚಾಲನೆ ನೀಡಿದ್ರು. ಅಧ್ಯಕ್ಷತೆಯನ್ನು ಉಳ್ಳಾಲ ನಗರ ಸಭೆ ಪೌರಯುಕ್ತರು ಸಂತೋಷ್ ಎಂಡಿ ಕೆ ಎಮ್ಎ ಇ ಎಸ್ ವಹಿಸಿದ್ದರು. ಪೌರ ಕಾರ್ಮಿಕರ ಕರ್ತವ್ಯ ಶಿಸ್ತು ಸಮುದಾಯದ ಆರೋಗ್ಯ ಕಾಪಾಡುವ ಬದ್ಧತೆಯನ್ನು ಶ್ಲಾಘಿಸಿದರು ಹಾಗೂ ಪೌರಾಯುಕ್ತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪೌರ ಕಾರ್ಮಿಕರು ಹೇಗೆ ಶ್ರಮಪಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ ಸಮಾಜದ ಆರೋಗ್ಯ ಸ್ವಾಸ್ಥ್ಯ ದಲ್ಲಿ ಅವರು ಪಾತ್ರವನ್ನು ಶ್ಲಾಘಿಸಿದರು. ಸ್ವಚ್ಛತಾ ಪೌರ ಕಾರ್ಮಿಕರಲ್ಲಿ ಇಬ್ಬರು ಮಹಿಳೆ ಹಾಗೂ ಇಬ್ಬರು ಪುರುಷರನ್ನು ಪೌರಾಯುಕ್ತರು ಹಾಗೂ ಉದ್ಘಾಟಕರು ಸಾಂಕೇತಿಕವಾಗಿ ವೇದಿಕೆಯಲ್ಲಿ ಹೂ ನೀಡಿ ಗೌರವಿಸಿದರು ಉಳಿದಂತೆ 61 ಮಂದಿ ಸ್ವಚ್ಛತಾ ಕಾರ್ಮಿಕರನ್ನು ಹೂ ನೀಡಿ ಗೌರವಿಸಲಾಯಿತು. ದಣಿದು ಬಂದ ಜೀವಕ್ಕೆ ತ್ರಾಸ ಆಗಬಾರದೆಂಬ ಇರಾದೆಯಿಂದ ಎತ್ತರದಲ್ಲಿ ಕುಳ್ಳಿರಿಸಿ ಸವಿರುಚಿಯಾದ ಭೋಜನವನ್ನು ಪೌರಾಯುಕ್ತರು ಹಾಗೂ ಉದ್ಘಾಟಕರು ಸ್ವತ:…
ಕೊಣಾಜೆ: ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಕುಲಾಲ ಸಮಾಜವು ಮಾನವೀಯ ಮೌಲ್ಯ, ನಿಷ್ಠೆಯನ್ನು ಪ್ರತಿಬಿಂಭಿಸುವ ಸಮುದಾಯವಾಗಿದೆ. ಕಿರಿಯರು ಹಿರಿಯ ವ್ಯಕ್ತಿಗಳ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಮುನ್ಮಡೆಯಬೇಕು ನರಿಂಗಾನ ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಹೇಳಿದರು. ಅವರು ಕುಲಾಲ ಸಂಘ ಮುಡಿಪು ವಲಯ ಇದರ 2025-26 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಜೀವನದಲ್ಲಿ ಏರು ಪೇರು ಸಹಜ. ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಯಶಸ್ಸು. ಮಕ್ಕಳಿಗೆ ಸಂಸ್ಕಾರ ಮತ್ತು ವಿದ್ಯೆ ಕೊಡುವ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವ ಹಾಗೆ ನೋಡಿಕೊಳ್ಳುವುದು ನಮ್ಮ ಜವಬ್ಧಾರಿ ಎಂದರು.ಹಿರಿಯರಾದ ದರ್ಣಪ್ಪ ಮೂಲ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಮಾಜಿ ಅಧ್ಯಕ್ಣರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ ಕುಲಾಲ ಸಮಾಜದ ಮಾಣಿಕ್ಯ ಅಮ್ಮೆಂಬಳ ಬಾಳಪ್ಪ ಅವರು ಸ್ವಾತಂತ್ರ್ಯ ಹೋರಾಟದ ಮೂಲಕ , ಸಮಾಜಕ್ಕೆ ಸದಾ ಮಾರ್ಗದರ್ಶನ ನೀಡಿದ ಮಹಾನ್ ಸಾಧಕರಾಗಿದ್ದಾರೆ…
ಉಳ್ಳಾಲ: ಯಾರಾದರೂ ನೀರಿಗೆ ಬಿದ್ದಾಗಲೂ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತ ಸಂಭವಿಸಿದ ತಕ್ಷಣ ಸಿಪಿಆರ್ ನೀಡಬೇಕು. ಸಮಯ ವ್ಯಯಿಸಿದರೆ ವ್ಯಕ್ತಿಯ ಅಂಗಾಂಗ ಕ್ಷೀಣವಾಗಿ ಸಾವು ಸಂಭವಿಸುವ ಅಪಾಯ ಇದೆ ಎಂದು ಕೆಎಂಸಿ ಆಸ್ಪತ್ರೆಯ ಸ್ಟಾಫ್ ನರ್ಸ್ ಪೂರ್ಣಿಮಾ ಹೇಳಿದರು. ಉಳ್ಳಾಲ ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ವತಿಯಿಂದ ಮೀನುಗಾರರ ಸುರಕ್ಷತೆ ನಿಟ್ಟಿನಲ್ಲಿ ಮಂಗಳವಾರ ಕೋಟೆಪುರದಲ್ಲಿ ನಡೆದ ಪ್ರಥಮ ಚಿಕಿತ್ಸಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಮೀನುಗಾರಿಕೆಗೆ ತೆರಳಿದ ಸಂದರ್ಭ ಹೃದಯಾಘಾತ ಆದರೆ ಪಥಮ ಚಿಕಿತ್ಸೆ ನೀಡಿದ ಬಳಿಕ ತಕ್ಷಣ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸಲು ಸಾಧ್ಯವಿದ್ದು ಈ ವಿಚಾರದಲ್ಲಿ ಮೀನುಗಾರರು ಸದಾ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಅಧ್ಯಕ್ಷತೆ ವಹಿಸಿದ್ದರು. ಶಿಪ್ಪಿಂಗ್ ಸಂಸ್ಥೆಯ ಅಧಿಕಾರಿ ಪ್ರೀತಮ್, ಪೈಲೆಟ್ ಯು.ಕೆ.ಇಸ್ಮಾಯಿಲ್, ಸಂಘದ ಕಾರ್ಯದರ್ಶಿ ಅಬ್ದುಲ್ ಘನಿ, ಸಲಹೆಗಾರರಾದ ಇಸ್ಮಾಯಿಲ್ ಕೋಡಿ, ಯುಕೆಎಫ್ ಮೋನು ಮೊದಲಾದವರು ಉಪಸ್ಥಿತರಿದ್ದರು.ನಾಡದೋಣಿ ಮತ್ತು ಗಿಲ್ನೆಟ್…

