Author: UllalaVani

Kannada News From Coastal Karnataka

ಕೋಟೆಕಾರು: ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಬರುವ ಬಗಂಬಿಲ ಪ್ರದೇಶದ ಸರ್ವೆ ನಂಬರ್‌ 301/3 ರಲ್ಲಿ 1.50 ಎಕರೆ ಜಮೀನನ್ನು ಎಫ್‌ ಎಸ್‌ ಟಿಪಿ ಮತ್ತು ಎಸ್‌ ಟಿಪಿ ಕಾದಿರಿಸಲು ಕೋಟೆಕಾರು ಪ.ಪಂ ಗೆ ಉಳ್ಳಾಲ ತಾಲೂಕು ತಹಶೀಲ್ದಾರ್‌ ಆದೇಶಿಸಿದ್ದು, ಕೋಟೆಕಾರು ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಅಧಿಕವಿದ್ದರೂ, ಕ್ರೀಡಾಂಗಣ, ವಾಕಿಂಗ್‌ ಪಾತ್ ‌, ಪಾರ್ಕಿಂಗ್‌ ಮೀಸಲಿರಿಸಿದ್ದ ಜಮೀನನ್ನು ಇದೀಗ ಏಕಾಏಕಿ ಕೊಳಚೆ ಸ್ಥಾವರ ನಿರ್ಮಿಸಲು ಮುಂದಾಗಿರುವುದು ಬಗಂಬಿಲ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯತ್‌ ನ ನಿರ್ಣಯ ಪಡೆದುಕೊಳ್ಳದೇ, ಅಲ್ಲದೆ ಸಂಬಂಧಿಸಿದ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ. ಬಗಂಬಿಲ ಪರಿಸರದಲ್ಲಿ ಕೊಳಚೆ ನೀರು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಲು ಉದ್ದೇಶಿಸುವ ಮೂಲಕ ಬಗಂಬಿಲ ಪರಿಸರ ನಿವಾಸಿ ಜನರ ಜೀವದ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಜನತೆ ಹಿತವನ್ನು ಕಾಪಾಡಬೇಕಾದ ಕೋಟೆಕಾರು ಪಟ್ಟಣ ಪಂಚಾಯತ್‌ ಕೌನ್ಸಿಲರುಗಳ ವಿಶ್ವಾಸವನ್ನು ಪಡೆದುಕೊಳ್ಳದೇ ತಹಶೀಲ್ದಾರ್‌ ನಿರ್ಣಯಕ್ಕೆ ಮುಂದಾಗಿರುವುದು ಜನತೆ ಆಕ್ರೋಶಕ್ಕೆ…

Read More

ಉಳ್ಳಾಲ : ರಿಕ್ಷಾ ಚಾಲಕ ಸೇರಿದಂತೆ ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ಪಶ್ಚಿಮ ಬಂಗಾಳ ಮೂಲದ 20ರ ಹರೆಯದ ಯುವತಿಯನ್ನು ಮುನ್ನೂರು ಬಂಗುಲೆ ಸಮೀಪ ಸಾಮೂಹಿಕ ಅತ್ಯಾಚಾರ ವೆಸಗಿದ ಪ್ರಕರಣಕ್ಕೆ ಸಂಬಂಧಿಸಿ , ಯುವತಿಯ ಸಹೋದರಿ ರಿಕ್ಷಾ ಚಾಲಕನಿಗೆ ರೂ.2,000 ಗೂಗಲ್‌ ಪೇ ಮಾಡಿ ಸುರಕ್ಷಿತವಾಗಿ ರೈಲು ಹತ್ತಿಸುವಂತೆ ಕೇಳಿಕೊಂಡಿದ್ದಳೆಂಬುದಾಗಿ ತನಿಖೆ ವೇಳೆ ತಿಳಿದುಬಂದಿದೆ. ಆದರೆ ಆರೋಪಿ ಅದನ್ನೇ ದುರ್ಬಳಕೆ ಮಾಡಿ ಪಿಶಾಚಿ ಕೃತ್ಯವೆಸಗಿದ್ದಾರೆ.ಆರೋಪಿಗಳಾದ ರಿಕ್ಷಾ ಚಾಲಕ ಪ್ರಭುರಾಜ್, ಆತನ ಸ್ನೇಹಿತ ಡೆಲಿವರಿ ಬಾಯ್ ಮಣಿ ಮತ್ತು‌ ಇಲೆಕ್ಷ್ಟೀಷಿಯನ್‌ ಆಗಿರುವ ಮಿಥುನ್‌ ಕೃತ್ಯ ನಡೆಸಿದ 24 ಗಂಟೆಗಳೊಳಗೆ ಬಂಧಿಸಲಾಗಿತ್ತು. ಸಂತ್ರಸ್ತೆ ಯುವತಿ 3-4 ತಿಂಗಳುಗಳ ಹಿಂದೆ ಪ್ರಿಯತಮನ ಜೊತೆಗೆ ಊರುಬಿಟ್ಟು ಆತನ ಜೊತೆಗೆ ಕೇರಳ ಕಡೆಗೆ ಕೆಲಸಕ್ಕೆ ಬಂದಿದ್ದರು. ಎ.17 ರಂದು ಇಬ್ಬರ ನಡುವೆ ಜಗಳ ನಡೆದಿದ್ದು ಪ್ರಿಯತಮ ಜಗಳ ನಡೆಸಿ ಮೊಬೈಲನ್ನು ಒಡೆದು ಹಾಕಿ ಮನೆಯಿಂದ ಹೊರಹಾಕಿದ್ದಾನೆ. ಇದರಿಂದ ನೊಂದ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು. ಮಂಗಳೂರಿನಲ್ಲಿ…

Read More

ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಮುನ್ನೂರು ಗ್ರಾಮದ ನೇತ್ರಾವತಿ ನದಿ ಕಿನಾರೆಗೆ ರಿಕ್ಷಾದಲ್ಲಿ ಕರೆತಂದು ಕಂಠಪೂರ್ತಿ ಕುಡಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಅಸ್ವಸ್ಥಳಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿ ರಿಕ್ಷಾ ಚಾಲಕನಿಗೆ ಗೂಗಲ್ ಪೇ ಮಾಡಿದ ಸಾಕ್ಷಾö್ಯಧಾರದ ಮೇಲೆ ಕುಂಪಲ ವಾಸುಕಿನಗರ ಮತ್ತು ಬಗಂಬಿಲ ನಿವಾಸಿ ಇಬ್ಬರು ರಿಕ್ಷಾ ಚಾಲಕರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಳದಲ್ಲಿ ಗೆಳೆಯನ ಜೊತೆಗೆ ಕಳೆದ ಎರಡು ತಿಂಗಳಿನಿAದ ಕೆಲಸಕ್ಕಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ, ನಿನ್ನೆ ಸಂಜೆ ಯಾವುದೋ ವಿಚಾರಕ್ಕೆ ಸಂಬAಧಿಸಿ ಮುನಿಸಿಕೊಂಡಿದ್ದಳು. ಗೆಳೆಯ ಮನೆಯಿಂದ ಯುವತಿಯನ್ನು ಹೊರಹಾಕಿದ್ದಾನೆ. ಇದರಿಂದ ಬೇಸರಗೊಂಡ ಯುವತಿ ಉಪ್ಪಳದಲ್ಲಿ ಮಂಗಳೂರು ತೆರಳುವ ರೈಲನ್ನೇರಿದ್ದಳು. ಉಪ್ಪಳ ದಾಟಿ ರೈಲು ಸೋಮೇಶ್ವರದ ಉಳ್ಳಾಲ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ನಿಲ್ದಾಣದಲ್ಲೇ ಕುಳಿತಿದ್ದಳು. ಅಲ್ಲೇ ರಿಕ್ಷಾ ಚಾಲಕರಾಗಿದ್ದ ಕುಂಪಲ ನಿವಾಸಿ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಕಷ್ಟಸುಖ ಮಾತನಾಡಿಸಿ, ಕೆಲಸ ಕೊಡಿಸುವುದಾಗಿ…

Read More

ಬೆಂಗಳೂರು : ಪವಿತ್ರ ಈಸ್ಟರ್, ಗುಡ್ ಫ್ರೈಡೇ ದಿನಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರು ಎಸ್ ಎಸ್ ಎಲ್ ಸಿ ಮೌಲ್ಯ ಮಾಪನದ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು. ಈ ಬಗ್ಗೆ ಯು ಟಿ ಖಾದರ್ ರವರ ಬಳಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ ಶಿಕ್ಷಕಿಯರು ಸರಕಾರದ ಜೊತೆ ಮಾತುಕತೆ ನಡೆಸಿ ವಿನಾಯಿತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಶಿಕ್ಷಣ ಇಲಾಖೆಯ ಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಈಸ್ಟರ್ ಗುಡ್ ಫ್ರೈಡೇ ದಿನಗಳಾದ ಗುರುವಾರ,ಶುಕ್ರವಾರ ಹಾಗೂ ಭಾನುವಾರ ಕರ್ತವ್ಯಕ್ಕೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಶಿಕ್ಷಣ ಇಲಾಖೆಯು ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ/ಶಿಕ್ಷಕಿಯರಿಗೆ ಈಸ್ಟರ್,ಗುಡ್ ಫ್ರೈಡೇ ದಿನಗಳಲ್ಲಿ ವಿನಾಯಿತಿ ನೀಡಿ ಉಳಿದ ದಿನಗಳಲ್ಲಿ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

Read More

ಉಳ್ಳಾಲ:  ಯುವತಿಯೋರ್ವಳು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಪತ್ತೆಯಾಗಿದ್ದು, ಮೈಪೂರ್ತಿ ಗಾಯದ ಗುರುತು ಪತ್ತೆ ಆಗಿದ್ದು, ಸಾಮೂಹಿಕ  ಅತ್ಯಾಚಾರದ ಶಂಕೆ ಮೇಲೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ತಡರಾತ್ರಿ ವೇಳೆ ಹೊರರಾಜ್ಯದ ಯುವತಿ  ನಶೆಯಿಂದ ಸ್ಥಳೀಯ ಮನೆಬಾಗಿಲು ಬಡಿದಿದ್ದಾಳೆ. ನೀರು ಕೇಳುತ್ತಿದ್ದಂತೆ  ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ಕುರಿತು 112 ಗೆ ಮನೆಮಂದಿ ಫೋನಾಯಿಸಿ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ನಶೆಯಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದು, ಮೈಯಿಡೀ ಗಾಯದ ಗುರುತುಗಳಿರುವುದಾಗಿ ತಿಳಿದುಬಂದಿದೆ.  ಠಾಣಾ ಸರಹದ್ದಿನ ಪ್ರದೇಶದಲ್ಲಿ ನಿರ್ಜನ ಮನೆಯೊಂದಿದ್ದು, ಅಲ್ಲಿಗೆ ತಡರಾತ್ರಿ  ಗಾಂಜಾ, ಅಮಲು ವ್ಯಸನಿಗಳು ನಿತ್ಯ ಬರುತ್ತಿರುತ್ತಾರೆ. ಅಲ್ಲೇ ನಿನ್ನೆ ತಡರಾತ್ರಿ  ನಾಲ್ವರ ತಂಡವೂ ಇತ್ತು. ಆದರೆ ಯುವತಿ ನೆರೆಮನೆಗೆ ಬರುತ್ತಿದ್ದಂತೆ  ನಾಲ್ವರ ತಂಡವೂ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವಾಕೆ ಈವರೆಗೆ ಪೊಲೀಸರಿಗೆ ಯಾವುದೇ…

Read More

ಕುತ್ತಾರು: ಕುತ್ತಾರುಪದವು ಮುನ್ನೂರು ಯುವಕ ಮಂಡಲದ 56ನೇ ವಾರ್ಷಿಕೋತ್ಸವ ಸಮಾರಂಭದ ಸವಿನೆನಪಿಗಾಗಿ ಅರ್ಹ ಬಡ ವಿದ್ಯಾ ರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ಎ.27 ಬೆಳಿಗ್ಗೆ 10ಕ್ಕೆ ಜರಗಲಿದೆ.ಅಂದೇ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ಕ್ಕೆ ಸ್ಥಳೀಯ ಮಕ್ಕಳಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 9ಕ್ಕೆ ದಿನಕರ ಭಂಡಾರಿ ಕಣಾಂಜಾರು ರಚಿಸಿ, ಪ್ರಶಾಂತ್ ಸಿ.ಕೆ ನಿರ್ದೇಶನದ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರು ಅಭಿನಯಿಸುವ ಮದಿಮೆದ ಇಲ್ಲಡ್ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ. ವಿಶೇಷ ಸೂಚನೆಯಾಗಿ ಪುಸ್ತಕ ವಿತರಣೆಯ ಅರ್ಜಿಗಳನ್ನು ಎ.23 ಹಾಗೂ ಎ.24ರಂದು ಸಂಘದಲ್ಲಿ ನೀಡಲಾಗುವುದು .

Read More

ಉಳ್ಳಾಲ : ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ಬಂಡಿಕೊಟ್ಯ ಉಳ್ಳಾಲ ಇದರ ವಾರ್ಷಿಕ ಬಂಡಿ ಉತ್ಸವವು ಎಪ್ರಿಲ್ 23 ರಿಂದ 25ರ ತನಕ ನಡೆಯಲಿರುವುದು. ಈ ಪ್ರಯುಕ್ತ ದೈವಸ್ಥಾನದಲ್ಲಿ ಬಿಸು ಹಬ್ಬದಂದು ಕೋಳಿ ಕುಂಟ ನಡೆಯಿತು.ಈ ಸಂದರ್ಭ ದೈವಸ್ಥಾನದ ಅಧ್ಯಕ್ಷರಾದ ಉಳ್ಳಾಲ್ ಸುಂದರ್, ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಸುರೇಂದ್ರಶೆಟ್ಟಿ ಮಂಚಿಲಗುತ್ತು, ಗಣೇಶ್ ಶೆಟ್ಟಿ ಬೊಡಂಗಿಲ, ಶಂಕರ ಹೊಯ್ಗೆಮನೆ, ಜಯಲತಾ ದಿಲೀಪ್ ಉಳ್ಳಾಲ, ಶ್ರೀನಿವಾಸ ಕೊಂಡಾನ, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ಕೆ.ಗೋಪಾಲ, ಹರ್ಷವರ್ಧನ ಉಳ್ಳಾಲ, ಮಧ್ವರಾಜ್ ತೊಕ್ಕೊಟ್ಟು, ನಿತಿನ್ ರಾಜ್ ಬಂಡಿಕೊಟ್ಯ, ದೇವಕಿ ಆರ್. ಉಳ್ಳಾಲ, ಉಳ್ಳಾಲಗುತ್ತು ರಮಾನಾಥ ಭಂಡಾರಿ, ಭವಾನಿಶಂಕರ್ ಅತ್ತಾವರ, ಉದಯಕುಮಾರ್ ಆರ್.ಕೆ, ಮೋಹನದಾಸ ಪಾಂಡೇಶ್ವರ, ಲಕ್ಷ್ಮಣ ಬಂಡಸಾಲೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಪ್ರಶಾಂತ್ ಹೆಚ್. ಸುವರ್ಣ ಉಪಸ್ಥಿತರಿದ್ದರು.

Read More

ತೊಕ್ಕೊಟ್ಟು : ಶಿಕ್ಷಣ ಕಾಶಿಯಾಗಿರುವ ಉಳ್ಳಾಲ ತಾಲೂಕಿನಲ್ಲಿ ಅತೀ ಕಡಿಮೆ ಶುಲ್ಕವನ್ನು ಪಡೆದು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ, ಪಿಯುಸಿ ಶಿಕ್ಷಣವನ್ನು ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಅನುಕೂಲಕರವಾದ ರೀತಿಯಲ್ಲಿ ಒದಗಿಸುತ್ತಾ ಬಂದಿದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಲಾ ಕಾಲೇಜಿನ ಶಾಖೆಗಳನ್ನು ಹೊಂದಿರುವ ಸಂಸ್ಥೆ ತಾವು ಪಡೆಯುವ ಕನಿಷ್ಠ ಶುಲ್ಕದಲ್ಲಿ ಬಸ್ಸಿನ ವ್ಯವಸ್ಥೆ, ಶಾಲಾ ಯುನಿಫಾರಂ, ಪಠ್ಯಪುಸ್ತಕಗಳೆಲ್ಲವನ್ನೂ ನೀಡುತ್ತಾ ಬಂದಿದೆ. ಎಲ್ಲದಕ್ಕೂ ಮಿಗಿಲಾಗಿ ಸರಕಾರಿ ಶಾಲೆಗಳಲ್ಲಿ ಒದಗಿಸುವಂತಹ ಮಧ್ಯಾಹ್ನದ ಊಟವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ.ಹೌದು ಬೆಂಗಳೂರು ಹೈದ್ರೋಸ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧೀನಕ್ಕೆ ಒಳಪಟ್ಟಿರುವ ಹರೇಕಳ ದೇರಿಕಟ್ಟೆಯ ನಿಶಾರ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶಾಲೆಯ ವಾರ್ಷಿಕ ಶುಲ್ಕ ರೂ.25,000 ಆಗಿದ್ದು, ಪಿಯುಸಿ ಕಾಲೇಜಿನ ಶುಲ್ಕವೂ ರೂ.25000 ಆಗಿದೆ. ಇನ್ನಿತರ ಯಾವುದೇ ಶುಲ್ಕಗಳಿರುವುದಿಲ್ಲ. ಶಾಲಾ ಕಾಲೇಜಿನ ಒಟ್ಟು ಪ್ರವೇಶದಲ್ಲಿ ಆರ್.ಟಿ.ಇಗೆ ಶೇ.25% ಮೀಸಲಾತಿಯಿದೆ. ಇನ್ನುಳಿದ…

Read More

ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹನುಮಾನ್ ನಗರ ಕುಂಪಲ ಇದರ ವಾರ್ಷಿಕ ಮಹಾಸಭೆ ತಾರೀಕು 16/3/2025 ರಂದು ವ್ಯಾಯಾಮ ಶಾಲೆಯಲ್ಲಿ ನಡೆಯಿತು ಸಭೆಯಲ್ಲಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷರಾದ ಉಮೇಶ್ ಕುಜುಮಗದ್ದೆ ಸಭೆಯನ್ನು ನಡೆಸಿಕೊಟ್ಟರು ಮೊದಲಿಗೆ ಅಧ್ಯಕ್ಷರಾದ ರಘುವೀರ್ ರವರು ಎಲ್ಲರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು ಕೋಶಾಧಿಕಾರಿಯದ ಮನೋಜ್ ರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು ನಂತರ 2025-2026 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ನೂತನ ಅಧ್ಯಕ್ಷರಾಗಿ ಉಮೇಶ್ ಗಟ್ಟಿ ಹನುಮಾನ ನಗರ ಉಪಾಧ್ಯಕ್ಷರು ರಂಜಿತ್ ಕುಲಾಲ್ ಕುಜುಮಗದ್ದೆ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಂಪಲ, ಜೊತೆ ಕಾರ್ಯದರ್ಶಿಯಾಗಿ ಅಶ್ವಿತ್ ಕುಜುಮಗದ್ದೆ, ಕೋಶಾಧಿಕಾರಿಗಳಾಗಿ ಸುಪ್ರೀತ್ ಕುಜುಮಗದ್ದೆ ಸಹಾಯಕರಾಗಿ ಸುರೇಶ್ ಶೆಟ್ಟಿ ಚಿತ್ರಾಂಜಲಿನಗರ ಕ್ರೀಡಾ ಕಾರ್ಯದರ್ಶಿಗಳಾಗಿ ಯತಿನ್, ಭವಿತ್ ಹಾಗೂ ಅನಿಲ್, ಪೂಜಾ ಸಂಚಾಲಕರಾಗಿ ರವಿಚಂದ್ರಗಟ್ಟಿ ಶ್ರೀ ರಾಜ್ ಲಕ್ಷ್ಮಣ ಕುಜುಮಗದ್ದೆ, ಶ್ಯಾಮ್ ಪ್ರಸಾದ್ ಭಜನಾ ಸಂಚಾಲಕರಾಗಿ ಸುಭಾಷ್, ಸುರೇಂದ್ರ, ಪ್ರಥಮ್ ಹಾಗೂ ಕಾರ್ಯಕಾರಿ ಸಮಿತಿಗೆ ಹಿರಿಯ ಸದಸ್ಯರುಗಳನ್ನು ಆಯ್ಕೆ…

Read More

ಉಳ್ಳಾಲ : ಇತಿಹಾಸ ಪ್ರಸಿದ್ದ ಉಳ್ಳಾಲ ಉರೂಸ್ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಉಳ್ಳಾಲ ಉರೂಸ್ ಸಮಿತಿ ನಿಯೋಗವು ಭೇಟಿ ಮಾಡಿ ಉರೂಸ್ ಪ್ರಯುಕ್ತ ಮೇ 16ರಂದು ನಡೆಯುವ ಸಾಮಾಜಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಯಿತು. ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಯು.ಟಿ ಝುಲ್ಫಿಕರ್, ಸದಸ್ಯರಾದ ಅಬ್ದುಲ್ ಖಾದರ್ ಅವೂದಿ, ಉರೂಸ್ ಪ್ರಚಾರ ಸಮಿತಿ ಸದಸ್ಯರಾದ ಸೈಯದ್ ಕುಬೈಬ್ ತಂಙಳ್, ರಮೀಝ್ ಉಪಸ್ಥಿತರಿದ್ದರುಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ರವರ 22ನೇ ಪಂಚವಾರ್ಷಿಕ 432ನೇ ವಾರ್ಷಿಕ ಉರೂಸ್ ಸಮಾರಂಭವು ಎಪ್ರಿಲ್ 24ರಿಂದ ಪ್ರಾರಂಭಗೊಂಡು ಮೇ 18 ರ ತನಕ ನಡೆಯಲಿದೆ, .

Read More