ಕೋಝಿಕೋಡ್ : ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟವು ದೇಶದ ಶಕ್ತಿಯನ್ನೂ ಬಲವನ್ನೂ ಪ್ರತಿಬಿಂಬಿಸುವುದಷ್ಟೇ ಅಲ್ಲ, ಮಾನವೀಯತೆಯೆಂಬ ನಮ್ಮ ಶಾಶ್ವತವಾದ ಕಟ್ಟುಪಾಡುಗಳನ್ನೂ ಒತ್ತಿ ಹೇಳುವುದಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.ಸೇನೆಯ `ಆಪರೇಷನ್ ಸಿಂದೂರ್’ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.ಕಾಶ್ಮೀರವನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದಲ್ಲಿ ಅಶಾಂತಿ ಸೃಷ್ಟಿಸುವ ಭಯೋತ್ಪಾದನಾ ಚಟುವಟಿಕೆಗಳಿಗೆ ಮುಕ್ತಾಯ ತರಲು ಭಾರತದ ಕ್ರಮಗಳು ಪ್ರೇರಕವಾಗಬಹುದು. ರಾಜತಾಂತ್ರಿಕ ನಿಲುವುಗಳ ಮೂಲಕವೂ ಭಯೋತ್ಪಾಧನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ವ್ಯಾಪಕವಾಗಿಯೂ ಪರಿಣಾಮಕಾರಿ ಯಾಗಿಯೂ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಕೈಗೊಳ್ಳಲು ಮತ್ತು ಗೌರವಯುತ ಸಾಧನೆಗಳನ್ನು ತಲುಪಲು ಭಾರತಕ್ಕೆ ಸಾಧ್ಯವಾಗಲಿ ಎಂದು ಅವರು ಆಶಿಸಿದರು. ಈ ಪ್ರಯತ್ನಗಳನ್ನು ಬೆಂಬಲಿಸುವುದು ಮಾನವೀಯತೆಯಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಕರ್ತವ್ಯವೆಂದು ಅವರು ಹೇಳಿದರು. ಭಾರತದ ಭದ್ರತೆ, ಏಕತೆ ಮತ್ತು ಅಖಂಡತೆಗಾಗಿ ಎಲ್ಲ ನಾಗರಿಕರೂ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಗ್ರ್ಯಾಂಡ್ ಮುಫ್ತಿ ಕರೆ ನೀಡಿದರು.
Author: UllalaVani
ಉಳ್ಳಾಲ : ದರ್ಗಾಗಳು ಇಸ್ಲಾಮ್ ಧರ್ಮದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿವೆ. ಇವು ಅಲ್ಲಾಹನ ಅನುಗ್ರಹ ಹಾಗೂ ಕೃಪೆಯ ಕೇಂದ್ರಗಳಾಗಿದ್ದು, ಶ್ರದ್ಧಾಭಕ್ತಿಯಿಂದ ದರ್ಗಾ ಝಿಯಾರತ್ ಮಾಡುವವರಿಗೆ ದೈವಿಕ ಅನುಭವ ಹಾಗೂ ಆಧ್ಯಾತ್ಮಿಕ ಶಾಂತಿ ಲಭಿಸುತ್ತವೆ ಎನ್ನುವುದು ಸಹಸ್ರಾರು ಭಕ್ತರ ನಂಬಿಕೆಯಾಗಿದೆ. ಈ ಪವಿತ್ರ ಕ್ಷೇತ್ರಗಳು ಲೋಕದ ವಿವಿಧ ಭಾಗಗಳಲ್ಲಿ ವಿಸ್ತಾರಗೊಂಡಿದ್ದು, ಪ್ರತಿ ದರ್ಗಾ ತನ್ನದೇ ಆದ ಐತಿಹಾಸಿಕತೆ, ಆಧ್ಯಾತ್ಮಿಕ ತಾತ್ಪರ್ಯ ಹಾಗೂ ಪಾವಿತ್ರ್ಯತೆಯನ್ನು ಹೊಂದಿರುವುದು ಗಮನಾರ್ಹವಾಗಿದೆ ಎಂದು ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು.ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಸೋಮವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ದರ್ಗಾಕ್ಕೆ ವಿವಿಧ ಕಡೆಗಳಿಂದ ಭಕ್ತಾದಿಗಳು ಬಂದು ಝಿಯಾರತ್ ಮಾಡುತ್ತಾರೆ. ಇದು ಭಕ್ತಾದಿಗಳು ದರ್ಗಾಕ್ಕೆ ಕೊಡುವ ಗೌರವ ಆಗಿದೆ ಎಂದು ಹೇಳಿದರು.ಪ್ರಸಿದ್ಧ ದರ್ಗಾಗಳ ಪೈಕಿ ಉಳ್ಳಾಲ ದರ್ಗಾ ಒಂದು ಪ್ರಮುಖ ಕ್ಷೇತ್ರವಾಗಿದ್ದು, ವರ್ಷಪೂರ್ತಿ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇದ್ದರೂ ಈ ದರ್ಗಾ…
ಉಳ್ಳಾಲ: ಮಾನವನ ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಇಂತಹ ಸವಾಲುಗಳನ್ನು ಧೈರ್ಯದಿಂದ ಮತ್ತು ಜವಾಬ್ದಾರಿಯಿಂದ ಎದುರಿಸುವ ಶಕ್ತಿ ಪ್ರತಿಯೊಬ್ಬನಲ್ಲಿಯೂ ಇರಬೇಕಾಗಿದೆ. ಈ ಶಕ್ತಿಯ ಮೂಲ ಧರ್ಮ, ಆರಾಧನೆ, ಕುಟುಂಬ ಮತ್ತು ಸ್ನೇಹ ಸಂಬಂಧಗಳ ಬಲವಾಗಿದೆ. ಮಾನವೀಯತೆಯ ಮೌಲ್ಯಗಳನ್ನು ಪ್ರಥಮ ಸ್ಥಾನಕ್ಕೆ ತರಬೇಕು ಎಂದು ಅಬ್ದುಲ್ ರಶೀದ್ ಮದನಿ ಹೇಳಿದರು.ಅವರು ಉಳ್ಳಾಲ ದರ್ಗಾದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಬುಧವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಇಸ್ಲಾಮಿನ ತತ್ವಾದರ್ಶಗಳು—ನೀತಿ, ನ್ಯಾಯ, ಸಹಾನುಭೂತಿ ಮತ್ತು ಸಹಬಾಳ್ವೆ—ಜೀವನದ ದಿಕ್ಕು ನಿರ್ಧಾರ ಮಾಡುವ ಪ್ರಮುಖ ಅಂಶಗಳಾಗಿವೆ. ಇವುಗಳ ಪಾಲನೆಯ ಮೂಲಕ ನಾವು ಜೀವನವನ್ನು ಶ್ರೇಯಸ್ಕರಗೊಳಿಸಬಹುದು. ಪರಸ್ಪರ ದ್ವೇಷ, ವೈರ ಮತ್ತು ಅಸಹಿಷ್ಣುತೆ ಎಂಬುದನ್ನು ದೂರವಿಟ್ಟು ಸಹಜತೆ, ಶಾಂತಿ ಮತ್ತು ಸಹೋದರತ್ವದ ಬದುಕನ್ನು ಆಶ್ರಯಿಸಬೇಕಾಗಿದೆ.ಜೀವನದ ಎಲ್ಲಾ ಹಂತಗಳಲ್ಲೂ ಇಸ್ಲಾಮಿನ ಚೌಕಟ್ಟನ್ನು ಮೀರದೆ, ಅದರ ಮೌಲ್ಯಾಧಾರಿತ ಮಾರ್ಗದರ್ಶನದಲ್ಲಿ ನಡೆಯುವುದು ಅತ್ಯಂತ ಅಗತ್ಯ. ಈ ಮೂಲಕ ನಾವೆಲ್ಲರೂ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ನೈತಿಕತೆಯ ಉದಾತ್ತ ಮಾದರಿಯಾಗಿ…
ಉಳ್ಳಾಲ : ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೋಲಾಜಿ ಸಂಸ್ಥೆಯಲ್ಲಿ 7 ವರ್ಷದ ಬಾಲಕಿ ಥೈರಾಯ್ಡ್ ಕ್ಯಾನ್ಸರ್ ನಿವಾರಣೆಗೆ ಸುಪ್ರಮೇಜರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಅತ್ಯಂತ ಸೂಕ್ಷ್ಮತೆಯಿಂದ ಕೂಡಿದ್ದ ಈ ಶಸ್ತ್ರಚಿಕಿತ್ಸೆಯಲ್ಲಿ ಹೊಸತಂತ್ರಜ್ಞಾನ ಉಪಯೋಗಿಸಿ ವೈದ್ಯರ ತಂಡ ಯಶಸ್ವಿಗೊಂಡಿದ್ದು, ಬಾಲಕಿಯೂ ಗುಣಮುಖಳಾಗಿದ್ದಾಳೆ ಎಂದು ಝುಲೇಖಾ ಯೇನೆಪೊಯ ಆಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ಜಲಾಲುದ್ದೀನ್ ಅಕ್ಬರ್ ಹೇಳಿದರು. ದೇರಳಕಟ್ಟೆ ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೋಲಾಜಿ ಸಂಸ್ಥೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರುಕಳೆದ 30 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಮೊದಲ ಬಾರಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪೋಷಕರು ಮಗುವಿನ ಕುತ್ತಿಗೆಯಲ್ಲಿನ ಊತವನ್ನು ಗಮನಿಸಿ ಆಸ್ಪತ್ರೆಗೆ ಕರೆತಂದಿದ್ದರು. ಸರಣಿ ಪರೀಕ್ಷೆಗಳ ನಂತರ ಥೈರಾಯ್ಡ್ ಗ್ರಂಥಿಯ ವ್ಯಾಪಿಲ್ಲರಿ ಕಾರ್ಸಿನೋಮ ಇರುವುದು ಧೃಡವಾಗಿದ್ದು ಕುತ್ತಿಗೆಯ ಮಧ್ಯ ಹಾಗೂ ಎರಡೂ ಭಾಗಕ್ಕೆ ಹರಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅರ್ಬುದ ಶಸ್ತ್ರಚಿಕಿತ್ಸಾ ತಂಡದಲ್ಲಿರುವ ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ಮೊಹಮ್ಮದ್, ಅರಿವಳಿಕೆ ತಜ್ಞೆ ಡಾ.ಪ್ರೀತಿ ಇವರ ಜೊತೆಗೂಡಿ…
ಉಳ್ಳಾಲ: ಪೆಹಲ್ಗಾಮ್ ಘಟನೆ ಇಡೀ ಮಾನವ ಕುಲಕ್ಕೆ ನೋವಾಗುವ ಘಟನೆ. ಭಾರತೀಯರು ಎಂದಿಗೂ ಇಂತಹ ಕೃತ್ಯವನ್ನು ಸಹಿಸಲಾರರು. ಮೃತ ಕುಟುಂಬಸ್ಥರಿಗೆ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ಒದಗಿಸಲಿ, ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ದೇವರ ಅನುಗ್ರಹವಿರಲಿ ಎಂದು ಕೆಥೊಲಿಕ್ ಸಭಾ ಸ್ತ್ರೀ ಸಂಘಟನಾ ಅಧ್ಯಕ್ಷೆ ಪ್ರಮೀಳಾ ಡಿಸೋಜ ಹೇಳಿದ್ದಾರೆ.ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಇದರ ವತಿಯಿಂದ ತೊಕ್ಕೊಟ್ಟು ಫ್ಲೆöÊಓವರ್ ಕೆಳಗಡೆ ಜರಗಿದ ಪಹಲ್ಗಾಮ್ ಭಯೋತ್ಪಾಧಕರ ದಾಳಿಗೆ ಬಲಿಯಾದವರ ಗೌರವಾರ್ಥವಾಗಿ ಹಾಗೂ ಒಗ್ಗಟ್ಟಿನ ಸಂಕೇತವಾಗಿ ಮೊಂಬತ್ತಿ ನಡಿಗೆ ಹಾಗೂ ಮೌನ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, 26 ಜನರನ್ನು ಕೊಲ್ಲುತ್ತಾರೆ, 400 ಕೆ.ಜಿ ಆರ್ ಡಿಎಕ್ಸ್ ಹೊಡೆಯುತ್ತಾರೆ ಎಂದಾದಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಭಾರತದ ಇತಿಹಾಸದಲ್ಲಿ ಮರೆಯಲಾಗದ ಘಟನೆ, ವಿಷಯವನ್ನು ಯಾವ ಧರ್ಮದವರೂ ಒಪ್ಪಲು ತಯಾರಿಲ್ಲ, ಕೃತ್ಯ ಎಸಗಿದವರಿಗೆ ಜಾತಿಯಿಲ್ಲ ಅವರು ಭಯೋತ್ಪಾದಕರು ಜಾತಿ ಮಾತ್ರ. ಕಾಶ್ಮೀರ ಅಂದಲ್ಲಿ ಭವ್ಯಭಾರತದ ಪರಂಪರೆಯ ಜಾಗ.…
ಮುನ್ನೂರು: ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯ ಬೀಜ ಬಿತ್ತುತ್ತವೆ. ಮಹಿಳಾ ಸಂಘಟನೆಯ ಕಾರ್ಯವೈಖರಿ ಪ್ರಶಂಸನೀಯವಾಗಿದೆ, ಶಿಬಿರಗಳ ಆಯೋಜನೆಯ ಮೂಲಕ ಅವರು ಮಕ್ಕಳಲ್ಲಿ ಸೃಜನಾತ್ಮಕತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕಿ ಉಷಾ ಹೇಳಿದರು.ಅವರು ಭ್ರಾಮರಿ ಮಹಿಳಾ ಮಂಡಲದ ಪ್ರಥಮ ವಾರ್ಷಿಕೋತ್ಸವ ಹಾಗೂ ಮೂರು ದಿನದ ಚಿಣ್ಣರ ಚಾವಡಿ 2.0 ಬೇಸಿಗೆ ಶಿಬಿರಕ್ಕೆ ಮುನ್ನೂರು ಸುಭಾಷನಗರದ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.ಶಿಬಿರಗಳು ತಾಂತ್ರಿಕ ಕೌಶಲ್ಯಗಳು, ಕಲೆ, ಆಟೋಟಾಪಗಳ ಮೂಲಕ ಮಕ್ಕಳನ್ನು ಸಮಗ್ರ ವ್ಯಕ್ತಿತ್ವ ವಿಕಸನದತ್ತ ದಾರಿ ಮಾಡಿಸುತ್ತವೆ. ಮಹಿಳಾ ಸಂಘಗಳ ಸಕ್ರಿಯ ಪಾಲ್ಗೊಳ್ಳುವಿಕೆ ಸಮಾಜದ ಬಾಳಿಗೆ ಹೊಸ ಬೆಳಕು ತರುತ್ತಿದೆ. ಇವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪುಷ್ಟಿಮಾಡುವ ಕೆಲಸದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಮೂಲಕ ಇವರು ಮುಂದಿನ ಪೀಳಿಗೆಗೆ ನುರಿತ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ವಕೀಲರಾದ ಮಹಮದ್ ಅಸ್ಗರ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಮತ್ತು ಮಹಿಳೆಯರ…
ಮಂಗಳೂರು: ಕಾರು ಹರಿಸಿ ಮುಡಿಪು ನಿವಾಸಿ ಯುವ ನ್ಯಾಯವಾದಿಯನ್ನು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.ಮುಡಿಪು ನಿವಾಸಿ ಯುವ ನ್ಯಾಯವಾದಿ ಮಹಮ್ಮದ್ ಅಸ್ಗರ್ ಕೊಲೆಯತ್ನಕ್ಕೆ ಒಳಗಾದವರು. ಎ.24 ರಂದು ಮೊಹಮ್ಮದ್ ಮುಸ್ತಾಕ್ ಎಂಬಾತ ನ್ಯಾಯವಾದಿ ಅಸ್ಗರ್ ಕಚೇರಿಗೆ ಆಗಮಿಸಿ ತನ್ನ ಪ್ರಕರಣವನ್ನು ನಡೆಸುವಂತೆ ಹೇಳಿದ್ದನು. ಆದರೆ ಅಸ್ಗರ್ ಅವರು ನ್ಯಾಯಾಲಯದಲ್ಲಿ ವ್ಯಕ್ತಿಯ ಪ್ರಕರಣ ವಾದಿಸಲು ತನ್ನಿಂದ ಅಸಾಧ್ಯ ಅನ್ನುತ್ತಿದ್ದಂತೆ , ಅಕ್ರಮವಾಗಿ ಕಚೇರಿಗೆ ನುಗ್ಗಿದ ಮೊಹಮ್ಮದ್ ಮುಸ್ತಾಕ್ ಬೆದರಿಕೆಯೊಡ್ಡಿ ಕಾರಿನ ಕೀಯನ್ನು ಕಸಿದು, ಕಾರು ಕೊಂಡೊಯ್ಯಲು ಯತ್ನಿಸುವ ಸಂದರ್ಭ ಅಡ್ಡಗಟ್ಟಿದಾಗ ಕಾರು ಹರಿಸಿ ಕೊಲೆಗೆ ಯತ್ನಿಸಿದ್ದಾನೆ. ಈ ಕುರಿತು ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ : ಪ್ರವಾದಿ ಗಳು,ಅಂಬಿಯಾಕಳು, ಔಲಿಯಾ ಸ್ಥಾನದಲ್ಲಿ ಇರುವವರಿಗೆ ಪ್ರತ್ಯೇಕ ಸ್ಥಾನ ಇದೆ. ಅ ವರ ಶಕ್ತಿ ಅಸಾಧಾರಣ ಶಕ್ತಿ ಆಗಿರುತ್ತದೆ. ಪ್ರವಾದಿಗಳು ,ಅಂಬಿಯಾಕಳು ಶತ್ರುಗಳ ವಿರುದ್ಧ ಹೋರಾಡಿ ಧರ್ಮ ಪ್ರಚಾರ ಮಾಡಿದವರು. ಅವರಿಗೆ ಅಲ್ಲಾಹು ಪ್ರತ್ಯೇಕ ಶಕ್ತಿ ನೀಡಿದ್ದಾನೆ ಎಂದು ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.ಅವರು ಖುತ್ ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಹೆಸರಿನಲ್ಲಿ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯುವ 22 ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಔಲಿಯಾಗಳ ಹಾಗೂ ಪ್ರವಾದಿಯವರ ಶಕ್ತಿಗೆ ಸಾಮ್ಯತೆ ಇದೆ. ಅವರ ಚರಿತ್ರೆ ಓದಿದರೆ ಅವರು ಮಾಡಿದ ಸಾಧನೆ ಅರ್ಥ ಆಗುತ್ತದೆ. ನಮ್ಮ ಈಮಾನ್ ವೃದ್ಧಿ ಆಗಲು ಧಾರ್ಮಿಕ ಚೌಕಟ್ಟಿನಲ್ಲಿ ನಾವಿರಬೇಕು. ಪ್ರವಾದಿ ಹಾಗೂ ಔಲಿಯಾಕಳ ಹೆಸರಿನಲ್ಲಿ ಓದುವುದು, ಅವರ ಸಾಧನೆ ಬಗೆ ಸಮಾಜಕ್ಕೆ ತಿಳಿಸುವುದು ಪುಣ್ಯ ದಾಯಕ ಕಾರ್ಯ ಎಂದವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್…
ಕೋಟೆಕಾರು : ಇಲ್ಲಿನ ಬಗಂಬಿಲ ಪರಿಸರದಲ್ಲಿ ಕರ್ಯಾಚರಿಸುತ್ತಿರುವ ಅಸಿಸ್ಸಿ ಶಾಲೆ ಸಮೀಪವೇ ಇರುವ ಸರಕಾರಿ ಜಮೀನು ಸರ್ವೆ ನಂಬರ್ 301/3 ರ 1.50 ಎಕರೆ ಜಮೀನಿನಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಅವರು ಎಸ್ ಟಿಪಿ, ಎಫ್ಎಸ್ಟಿಪಿಗೆ ಜಾಗವನ್ನು ಮೀಸಲಿರಿಸುವಂತೆ ಪಟ್ಟಣ ಪಂಚಾಯತ್ ಗೆ ಆದೇಶಿಸಿದ್ದು, ಇದರಿಂದ ಶಾಲೆ ಕಲಿಯುವ ಸಾವಿರದಷ್ಟು ವಿದ್ಯಾರ್ಥಿಗಳ ಬದುಕಿನ ಜೊತೆಗೆ ತಹಶಿಲ್ದಾರರು ಚೆಲ್ಲಾಟವಾಡುತ್ತಿದ್ದಾರೆ ಅನ್ನುವ ಆರೋಪ ಕೇಳಿಬಂದಿದೆ.ವಸತಿ ಪ್ರದೇಶವಾಗಿರುವ ಬಗಂಬಿಲ ಪರಿಸರದಲ್ಲಿ ಅನೇಕ ಮನೆಗಳು, ಕೃಷಿ ಭೂಮಿಯನ್ನು ಪ್ರದೇಶ ಒಳಗೊಂಡಿದೆ. ಪ್ರಮುಖವಾಗಿ 5ರ ಹರೆಯದಿಂದ 16ರ ಆಸುಪಾಸಿನ ಹರೆಯದ ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಆದರೆ ಉದ್ದೇಶಿತ ಜಮೀನಿನಲ್ಲಿ ಎಸ್ ಟಿಪಿ ನಿರ್ಮಾಣವಾದಲ್ಲಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾನಿಕಾರಕ ವಾಯುಗಳಾದ ಮಿಥೇನ್ , ಹೈಡ್ರೋಜನ್ ಸಲ್ಪೈಡ್ ಮುಂತಾದ ದುರ್ವಾಸನೆ ನೀಡುವ ಮತ್ತು ವಿಷಕಾರಿ ಅನಿಲಗಳು ಹೊರ ಬೀಳುತ್ತವೆ. ಇದು ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗಬಹುದು. ಸುತ್ತಲಿನ ವಾತಾವರಣದ ಗುಣಮಟ್ಟ ಹದಗೆಡಿಸುತ್ತದೆ. ಜನರಲ್ಲಿ ಅಸ್ವಸ್ಥತೆ, ತಲೆ ಸುತ್ತು,…
ಮಂಗಳೂರು: ‘ಮುದ್ದು ಸೊಸೆ’ ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ, ಮತ್ತೊಂದು ಹೃದಯಸ್ಪರ್ಶಿ ಕತೆ ‘ಮುದ್ದು ಸೊಸೆ’ಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್ ನಾಯಕಿಯಾಗಿರುವ, ಮುನಿ ಮತ್ತು ಹರಿಣಿ ಶ್ರೀಕಾಂತ್ ತಾರಾಗಣದ ಈ ಬಹುನಿರೀಕ್ಷಿತ ಧಾರಾವಾಹಿ ಏಪ್ರಿಲ್ 14ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ. ವೈದ್ಯೆ ಆಗಬೇಕೆಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದಾರ್ಥಿನಿ ವಿದ್ಯಾ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಹೇಳುತ್ತದೆ ‘ಮುದ್ದು ಸೊಸೆ’. ಮನಸ್ತುಂಬಾ ಓದು ತುಂಬಿರುವ, ಮನಸೊಪ್ಪದ ಮದುವೆಯಾಗಿರುವ ‘ಮುದ್ದು ಸೊಸೆ’ ಮನೆಮಂದಿಯೆಲ್ಲ ಸೇರಿ ನೋಡಲೇಬೇಕಾದ ಧಾರಾವಾಹಿ. ಪ್ರೀತಿ, ಸಂಬಂಧಗಳ, ಆತ್ಮವಿಶ್ವಾಸ -ಪ್ರಬಲ ಸಂಕಲ್ಪ ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ ಕಥಾ ಹಂದರದಿಂದ ‘…

