ಕೋಟೆಕಾರು; ಉಳ್ಳಾಲ ತಾಲೂಕಿನ ಕೋಟೆಕಾರ್-ಸಂಕೋಳಿಗೆ ಮಾರ್ಗದ ಸರ್ವಿಸ್ ರಸ್ತೆಯ ವಿಭಜಕಗಳನ್ನು ವ್ಯಾಪಾರಸ್ಥರು ಅಕ್ರಮವಾಗಿ ತೆಗೆದು ಹಾಕಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಕೋಟೆಕಾರ್ ಪ್ರದೇಶದ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಗಂಭೀರ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಪ್ರದೇಶದ ಜನರ ಸುರಕ್ಷತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬoಧಿಸಿದ0ತೆಉಳ್ಳಾಲ ತಾಲ್ಲೂಕು, ಕೋಟೆಕಾರ್ ಕೊರಗಜ್ಜ ಕಟ್ಟೆಯಿಂದ ಸಂಕೋಳಿಗೆವರೆಗೆ ಇರುವ ಎರಡೂ ಬದಿಯ ಸರ್ವಿಸ್ ರಸ್ತೆಗೆ ವಿಭಜಕಗಳನ್ನು ಆಳವಡಿಸಲಾಗಿತ್ತು. ಆದರೆ ಕೆಲ ವ್ಯಾಪಾರಸ್ಥರು ತಮ್ಮ ಸ್ವಾರ್ಥದ ನಿಮಿತ್ತ ಅವೈಜ್ಞಾನಿಕವಾಗಿ ವಿಭಜಕಗಳನ್ನು ತೆಗೆದು ಹಾಕಿರುವುದು ಬೆಳಕಿಗೆ ಬಂದಿದೆ. ಇದರ ಪರಿಣಾಮವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪಾದಚಾರಿಗಳಿಗೆ ರಸ್ತೆ ದಾಟುವುದು ಕಷ್ಟವಾಗುತ್ತಿದೆ. ಇದರಿಂದ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದೆ. ಈ ಮಾರ್ಗದಲ್ಲಿ ಅಧಿಕಾರಿಗಳು ಪ್ರತಿದಿನ ಸಂಚರಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ ಸಂಗತಿ. ಹಾಗಾಗಿ ಈ ಗಂಭೀರ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು, ವಿಭಜಕಗಳನ್ನು ಸರಿಪಡಿಸುವಂತೆ ಕೋಟೆಕಾರ್ ಪ್ರದೇಶದ ಸ್ಥಳೀಯ ನಿವಾಸಿಗಳು ಡಿಸಿಗೆ ಪತ್ರದ…
Author: UllalaVani
ಕೋಟೆಕಾರು,ನ.6:ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವನ್ನು ಬೀರಿಯ ವಾಣಿ ಆಡಿಟೋರಿಯಂನಲ್ಲಿ ತುಂಬು ಸಡಗರದಿಂದ ಆಚರಿಸಲಾಯಿತು. ಲಯನ್ಸ್ ಡಿಸ್ಟ್ರಿಕ್ಟ್ 317D ಯ ಮುಖ್ಯ ಜಿಲ್ಲಾ LCIF ಸಂಯೋಜಕ ಲಯನ್ ಲೋಕೇಶ್ ಶೆಟ್ಟಿ PMJF ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಮುದಾಯ ಸೇವೆ ಮತ್ತು ಸಾಂಸ್ಕೃತಿಕ ಏಕತೆಯಲ್ಲಿ ಕ್ಲಬ್ ಮಾಡುತ್ತಿರುವ ಪ್ರಾಮಾಣಿಕ ಕಾರ್ಯವನ್ನು ಅವರು ಶ್ಲಾಘಿಸಿದರು. ಕ್ಲಬ್ ಅಧ್ಯಕ್ಷ ಲಯನ್ ಕೆ. ವಿಜಯನ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಲಯನ್ ಕೆ. ಗೋಪಿನಾಥ್ ವರದಿ ಮಂಡಿಸಿದರು, ಕ್ಲಬ್ ಉಪಾಧ್ಯಕ್ಷ ಲಯನ್ ಕಮಾಂಡರ್ ಕೆ. ವಿಜಯಕುಮಾರ್ ಸ್ವಾಗತಿಸಿದರು ಮತ್ತು ಖಜಾಂಚಿ ಲಯನ್ ನಿತೀಶ್ ಕೃಷ್ಣ ಧನ್ಯವಾದಗಳನ್ನು ಅರ್ಪಿಸಿದರು. ಈ ಸಮಾರಂಭದಲ್ಲಿ ಕ್ಲಬ್ ಸದಸ್ಯರು ಮತ್ತು ಅವರ ಕುಟುಂಬಗಳು ಉತ್ಸಾಹದಿಂದ ಭಾಗವಹಿಸಿದರು ಮತ್ತು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಕನ್ನಡದ ಹೆಮ್ಮೆಯಾದ ಕರ್ನಾಟಕ ರಾಜ್ಯೋತ್ಸವ ಮತ್ತು ಬೆಳಕಿನ ಹಬ್ಬವಾದ ದೀಪಾವಳಿಯ ಚೈತನ್ಯವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ಏಕತೆ, ಸಮೃದ್ಧಿ ಮತ್ತು…
ಪಡುಬಿದ್ರಿ, ನ.5: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡುಬಿದ್ರಿ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಹಾಗೂ ಲಯನ್ಸ್ ಕ್ಲಬ್ ಪಡುಬಿದ್ರ್ರಿ ಇವರ ಸಹಯೋಗದೊಂದಿಗೆ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ನುರಿತ ವೈದ್ಯರ ತಂಡದವರಿAದ ಉಚಿತ ನೇತ್ರ ತಪಾಸಣಾ ಶಿಬಿರವು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷರು ಹಾಗೂ ಅಡ್ವೆ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಸುವರ್ಣರವರು ಉದ್ಘಾಟಿಸಿ, “ಉಭಯ ಜಿಲ್ಲೆಗಳಲ್ಲಿ 33ಕ್ಕೂ ಮಿಕ್ಕಿ ಶಾಖೆಗಳನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ, ಸಂಸ್ಥೆಯ ಲಾಭಾಂಶದ ಒಂದು ಪಾಲನ್ನು ಸಮಾಜದ ಅಶಕ್ತ ಬಡ ವರ್ಗದ ಜನರ ಏಳಿಗೆಗಾಗಿ ವಿನಿಯೋಗಿಸಿಕೊಂಡು ಬರುತ್ತಿದ್ದು, ಸಂಸ್ಥೆಯು ಸದಾ ಅಭಿವೃದ್ದಿ…
ಮುಡಿಪು,ನ.5: ನವೆಂಬರ್ 3ರ ಸೋಮವಾರದಂದು ಮುಡಿಪು ಸೂರಜ್ ಸ್ಕೂಲ್ನಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳುವ ವೇಳೆ ಸಂಶಯಾಸ್ಪದ ರೀತಿಯಲ್ಲಿ ಕಾರು ನಿಂತು ಮಕ್ಕಳನ್ನು ಕರೆಯುವ ಘಟನೆ ನಡೆದಿದೆ ಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಡಿವೈಎಫ್ಐ ದೂರನ್ನು ನೀಡಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಬಸ್ ಬಂದ ಕಾರಣ ಮಕ್ಕಳು ಸುರಕ್ಷಿತವಾಗಿ ಬಸ್ ಹತ್ತಿದ್ದಾರೆ. ಆದರೆ ಮಕ್ಕಳು ಇಳಿದ ಸ್ಥಳದಲ್ಲಿಯೂ ಅದೇ ಕಾರು ಕಾಣಿಸಿಕೊಂಡಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ, ಡಿವೈಎಫ್ಐ ಮುಡಿಪು ಘಟಕದ ವತಿಯಿಂದ ಸೂರಜ್ ಕಾಲೇಜಿನ ಪ್ರಿನ್ಸಿಪಾಲ್ ರವರನ್ನು ಭೇಟಿಯಾಗಿ ಈ ಕುರಿತು ಕಾಳಜಿ ವಹಿಸುವಂತೆ, ಭದ್ರತೆ ಹಾಗು ಮುಂಜಾಗರೂಕತೆ ವಹಿಸುವಂತೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ಉಸ್ಮಾನ್ ಅಲ್ತಾಫ್, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ನಾಯಕ್, ಮತ್ತು ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ರಕ್ಷಿತ್ ಕುಲಾಲ್ ರವರು ಈ ವಿಷಯದಲ್ಲಿ…
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸಲು ಅವಕಾಶ ನೀಡುವ ಹಾಗೂ ಸಿಗರೇಟ್ಗಳನ್ನು ಚಿಲ್ಲರೆಯಾಗಿ ಮಾರುವ ಅಂಗಡಿ ಹೋಟೆಲ್ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರಾಜು ಕೆ. ಸೂಚಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಹಾಗೂ ಪಾನ್ ಮತ್ತಿತರ ತಂಬಾಕುಗಳನ್ನು ಮಾರುವಂತಿಲ್ಲ. ಸಿಗರೇಟ್ಗಳ ಇಡೀ ಪ್ಯಾಕ್ನಲ್ಲಿ ಮಾರಬೇಕೇ ಹೊರತು ಬಿಡಿಯಾಗಿ ಮಾರುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ಗಳು ಆಗಾಗ್ಗೆ ಅಂಗಡಿ, ಹೋಟೆಲ್ ತಪಾಸಣೆ ನಡೆಸಿ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ಮುಚ್ಚಿಸಿ ಜಪ್ತಿ ಮಾಡಬೇಕು ಎಂದರು. ಈ ಬಗ್ಗೆ ಮುಂದಿನ ಸಭೆಯೊಳಗೆ ಎಷ್ಟು ಅಂಗಡಿಗಳಿಗೆ ಭೇಟಿ ನೀಡಲಾಗಿದೆ. ಎಷ್ಟು ಉಲ್ಲಂಘನೆ ಕಂಡು ಬಂದಿದೆ? ದಂಡ ವಿಧಿಸಿರುವ ಹಾಗೂ ಅಂಗಡಿಗಳನ್ನು…
ಬಜ್ಪೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆದರಿಕೆ ಹಾಕಿ ಬಲವಂತದಿಂದ ಪಟಾಕಿ ಲೂಟಿ ಮಾಡಿದ ಮೂವರು ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಬಂಧಿತರನ್ನು ರೌಡಿ ಶೀಟರ್ ಪ್ರಶಾಂತ್ ಕಳವಾರು ಯಾನೆ ಪಚ್ಚು, ಗಣೇಶ್ ಮತ್ತು ಅಶ್ವಿತ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸಂಘಪರಿವಾರದ ಕರ್ಯರ್ತನೂ ಆಗಿರುವ ಪ್ರಶಾಂತ್ ಕಳವಾರು ವಿರುದ್ಧ ಕೊಲೆ ಮತ್ತು ನಾಲ್ಕು ಕೊಲೆಯತ್ನ ಪ್ರಕರಣಗಳು ಸೇರಿದಂತೆ ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದ 14 ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಣೇಶ್ ವಿರುದ್ಧ 4 ಪ್ರಕರಣಗಳಿವೆ, ಇದರಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ತನಿಖೆ ಮತ್ತು ವಿಚಾರಣೆಯ ವಿವಿಧ ಹಂತದಲ್ಲಿವೆ. ಅಶ್ವಿತ್ ವಿರುದ್ಧ ಒಂದು ಪ್ರಕರಣವಿದ್ದು, ಅದನ್ನು ಖುಲಾಸೆಗೊಳಿಸಲಾಗಿದೆ. ಆದರೆ ಪಟಾಕಿ ದರೋಡೆ ನಡೆಸಿದ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳೊಂದಿಗೆ ಭಾಗಿಯಾಗಿ ಅವರ ಗ್ಯಾಂಗ್ ಸದಸ್ಯನಾಗಿರುವ ಕಾರಣ ಅಶ್ವಿತ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು,ನ. 05; ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ನಿವಾಸಿ ಶೇಖಬ್ಬ್ ಅವರ ಪತ್ನಿ ಜಮೀಲಾ ಎಂದು ಗುರುತಿಸಲಾದ ಮಹಿಳೆಯ ನಾಪತ್ತೆಯಾದ ಬಗ್ಗೆ ಮಾಹಿತಿ ನೀಡುವಂತೆ ನಗರ ಪೊಲೀಸರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸುಮಾರು 35 ವರ್ಷ ವಯಸ್ಸಿನ ಜಮೀಲಾ, ಮೇ 25, 2018 ರಂದು ಸಂಜೆ 4 ಗಂಟೆ ಸುಮಾರಿಗೆ ಮಂಗಳೂರು ನಗರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು, ಆದರೆ ನಂತರ ಮನೆಗೆ ಹಿಂತಿರುಗಲಿಲ್ಲ. ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಬದ್ಯಾರು ನಿವಾಸಿ ಶೌಕತ್ ಅಲಿ ಅವರ ಸಹೋದರ ನೀಡಿದ ದೂರಿನ ಮೇರೆಗೆ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಜಮೀಲಾ 35 ವರ್ಷ ವಯಸ್ಸು, ಸುಮಾರು 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ ಮತ್ತು ಸಾಧಾರಣ ಮೈಕಟ್ಟು, ಕೋಲು ಮುಖ. ಅವರು 7 ನೇ ತರಗತಿಯವರೆಗೆ ಓದಿದ್ದಾರೆ ಮತ್ತು ಕೊನೆಯದಾಗಿ ಕಪ್ಪು ಬುರ್ಖಾ ಧರಿಸಿರುವುದು ಕಂಡುಬಂದಿದೆ. ಅವರು ತುಳು, ಕನ್ನಡ, ಮಲಯಾಳಂ, ಬ್ಯಾರಿ ಮತ್ತು ಹಿಂದಿ…
ಕುಂದಾಪುರ, ನ. 05; ಕುಂದಾಪುರ ಸಮೀಪದ ತಲ್ಲೂರಿನಲ್ಲಿ ಮಂಗಳವಾರ ಸಂಜೆ ದುಷ್ಕರ್ಮಿಗಳು ನಿಲ್ಲಿಸಿದ್ದ ಕಾರಿನ ಕಿಟಕಿ ಒಡೆದು 2 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕೆಂಚನೂರಿನ ನಿವಾಸಿ ಹಾಗೂ ಗುತ್ತಿಗೆದಾರ ಗುಂಡು ಶೆಟ್ಟಿ ಎಂಬವರು ತಲ್ಲೂರಿನ ಬ್ಯಾಂಕಿನಿಂದ 2 ಲಕ್ಷ ರೂ. ಡ್ರಾ ಮಾಡಿ ತನ್ನ ಕಾರಿನೊಳಗೆ ಹಣವನ್ನು ಇಟ್ಟುಕೊಂಡಿದ್ದರು. ನಂತರ ತಲ್ಲೂರು ಪಟ್ಟಣದ ಬಳಿಯ ವಸತಿ ಸಂಕೀರ್ಣದ ಮುಂದೆ ವಾಹನವನ್ನು ನಿಲ್ಲಿಸಿ ತನ್ನ ಬಾಡಿಗೆ ಮನೆಗೆ ಹೋದರು. ಸುಮಾರು 10-15 ನಿಮಿಷಗಳ ನಂತರ ಹಿಂತಿರುಗಿದಾಗ, ಕಾರಿನ ಕಿಟಕಿ ಒಡೆದು ನಗದು ಕಾಣೆಯಾಗಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ದುಷ್ಕರ್ಮಿಗಳು ಕಾರಿನ ಬಲಭಾಗದ ಕಿಟಕಿ ಒಡೆದು ಡ್ಯಾಶ್ಬೋರ್ಡ್ನಲ್ಲಿದ್ದ ಹಣವನ್ನು ಕದ್ದಿದ್ದಾರೆ. ತಲ್ಲೂರು ಜಂಕ್ಷನ್ ಬಳಿಯ ಜನನಿಬಿಡ ಪ್ರದೇಶದಲ್ಲಿ ಕಳ್ಳತನ ಸಂಭವಿಸಿದೆ, ಇದು ವಸತಿ ಅಪಾರ್ಟ್ಮೆಂಟ್ಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಹತ್ತಿರದಲ್ಲಿ ಬಸ್ ಮತ್ತು ಆಟೋ ನಿಲ್ದಾಣವನ್ನು ಹೊಂದಿದೆ. ಹಾಡಹಗಲೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ದುಷ್ಕರ್ಮಿಗಳು ಗುಂಡು ಶೆಟ್ಟಿಅವರು ಬ್ಯಾಂಕ್ನಿಂದ…
ಉಳ್ಳಾಲ, ನ.5: ಬಡಬಗ್ಗರು, ನಿರ್ಗತಿಕರು, ಮನೆಯಿಲ್ಲದೇ ಕಂಗಾಲಾಗಿರುವವರನ್ನು ಗುರುತಿಸಿ ಅವರಿಗೆ `ನಮೋ ಕುಟೀರ’ಎಂಬ ಹೆಸರಿನ ಮೂಲಕ ಬಿಜೆಪಿ ಮುಖಂಡರಾಗಿರುವ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಮನೆಯನ್ನು ಕಟ್ಟಿಕೊಡುವ ಮೂಲಕ ಒಂದು ಸೂರನ್ನು ನಿರ್ಮಿಸಿಕೊಡುತ್ತಿದ್ದಾರೆ. ಈ ಸಾರ್ಥಕ ಕಾಯಕದಿಂದ ಸಮಾಜಕ್ಕೆ ಮಾದರಿಯಾಗಿದ್ದು, ಇವರ ನಿಸ್ವಾರ್ಥ ಸೇವೆಯಿಂದ ಈಗಾಗಲೇ 5 ಮನೆಗಳನ್ನು ಕಟ್ಟಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ. ಸಂತೋಷ್ ಕುಮಾರ್ ರೈ ಅವರು ಈ ಹಿಂದೆ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಸುದ್ದಿಯಾಗಿದ್ರು. ಇದೀಗ ಒಲಿತು ಮಾಡು ಮನುಷ್ಯ ಎನ್ನುತ್ತಾ ಅಸಹಾಯಕರ ಕಂಬನಿ ಒರೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ನಮೋ ಕುಟೀರ ಯೋಜನೆಯ 6 ನೇ ಮನೆಯ ಶಿಲಾನ್ಯಾಸ ಇಂದು ನೆರವೇರಿದೆ. ಹೌದು, ಮಕ್ಕಳಿಲ್ಲದೇ ಜೀವನ ನಡೆಸುತ್ತಿದ್ದ ಹಿರಿಯಜೀವಗಳಾದ ರುಕ್ಮಯ ಮೂಲ್ಯ ಮತ್ತು ವಿಜಯ ದಂಪತಿಗೆ ಇರುವ ಒಂದು ಸೂರನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾದಾಗ ಗ್ರಾಮಸ್ಥರು, ನೆರೆ-ಹೊರೆಯವರು ಬಡವರ ಕಣ್ಮಣಿ, ಸಮಾಜ ಸೇವಕರಾದ ಸಂತೋಷ್ ರೈ ಬೋಳಿಯಾರ್ ಅವರ ಬಳಿ ಈ ಸಂಗತಿ…
ಉಳ್ಖಾಲ,ನ.05: ಇದೇ ನ.8,9 ಮತ್ತು 10 ರಂದು ಗಟ್ಟಿ ಸಮಾಜ ಭವನದ ಆವರಣದಲ್ಲಿ ಉಳ್ಳಾಲ ಕೃಷಿ ಉತ್ಸವ ದೇಸಿ ಆಹಾರ ಮೇಳ ಆದ್ದೂರಿಯಾಗಿ ಮೇಳೈಸಲಿದೆ. ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕರ್ನಾಟಕ ಗೇರು ಅಭಿವೃದ್ದಿ ನಿಗಮ ಮಂಗಳೂರು ಹಾಗೂ ಕೃಷಿ ಇಲಾಖೆ ಮಂಗಳೂರು ಮತ್ತು ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ (ರಿ.) ಹಾಗೂ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಸಹಯೋಗದೊಂದಿಗೆ ವಿನೂತನ ಕಾರ್ಯಕ್ರಮ ಆಯೋಜನೆಗೊಂಡಿದೆ. ಕೆಲವರಿಗೆ ಚೈನಿಸ್, ಜಂಕ್ ಫುಡ್ ತಿಂದು ತಿಂದು ನಾಲಗೆಯ ರುಚಿ ಕೆಟ್ಟಿರತ್ತೆ. ಹಾಗಾಗಿ ಖಂಡಿತವಾಗಲೂ ದೇಸಿ ಆಹಾರ ತಿನ್ನುಬೇಕು ಅನ್ಸತ್ತಾ ಸೊ ನೀವು ಖಂಡಿತವಾಗಲೂ ಈ ದೇಸಿ ಆಹಾರ ಮೇಳಕ್ಕೆ ಬಂದು ಶುಚಿ ರುಚಿಯಾದ ಆಹಾರವನ್ನು ಸವಿಯಬಹುದು. ಇನ್ನು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯ ಜೊತೆಗೆ ನಿಮಗೆ ಉಪಯೋಕ್ತವಾಗುವ ನಿಟ್ಟಿನಲ್ಲಿ ಕೃಷಿಗೆ ಸಂಬoಧಿಸಿದ ಮಾಹಿತಿಗಳು ಕೂಡ ಇಲ್ಲಿ ಲಭ್ಯವಿದೆ. ಇಲಾಖಾ ಮಾಹಿತಿ ಮಳಿಗೆಗಳು, ತರಕಾರಿ ಬೀಜ, ಸಸ್ಯಗಳ ಮಾರಾಟ, ಪ್ರಾತ್ಯಕ್ಷಿಕೆ, ವೈವಿಧ್ಯಮಯ ಪಕ್ಷಿಗಳ…

