Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಕ್ರಿಸ್ ಮಸ್ ಸಡಗರ: ವಿವಿದೆಡೆ ಏಸು ಗುಣಗಾನ

UllalaVaniBy UllalaVaniDecember 24, 2015Updated:December 24, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ವಜ್ರ ಗುಜರನ್ ಮಾಡೂರು

ಕ್ರಿಸ್ಮಸ್ ಬಂದಿದೆ.. ಈ ಮಹತ್ವಪೂರ್ಣ ದಿನಕ್ಕಾಗಿ ಕಾಯುತ್ತಿದ್ದ ಜನರ ಮುಖದಲ್ಲಿ ಸಡಗರ ಮೂಡಿದೆ. ಮನೆ ಮುಂದೆ ನಕ್ಷತ್ರ ಮಿನುಗತ್ತದೆ.. ಮನೆಯೊಳಗೆ ಕೇಕ್ ಘಮ್ಮೆನ್ನುತ್ತದೆ.. ಸಾಂತಕ್ಲಾಸ್ ಮನೆ ಮನೆಗೆ ಸಿಹಿ ನೀಡಿ ಸಂತಸ ಪಸರಿಸುತ್ತಾನೆ.. ನಿಸರ್ಗ ಸೇರಿದಂತೆ ಮನೆಮನಗಳಲ್ಲಿ ಹೊಸತನ ಚಿಗುರೊಡೆಯುತ್ತದೆ. ಚರ್ಚ್ ಸೇರಿದಂತೆ ಎಲ್ಲೆಡೆ ಯೇಸುವಿನ ಸ್ಮರಣೆ ನಡೆಯುತ್ತದೆ.

ಡಿಸೆಂಬರ್ 25 ಕ್ರಿಸ್ತ ಯೇಸುವಿನ ಜನನೋತ್ಸವವು ಕ್ರಿಸ್ಮಸ್ ಹಬ್ಬವಾಗಿ ಆಚರಣೆಯಾಗುತ್ತಿದೆ. ಹಾಗೆ ನೋಡಿದರೆ ಕ್ರಿಸ್ಮಸ್ ಹಬ್ಬ ಕ್ರೈಸ್ತರು ಆಚರಣೆ ಮಾಡಿದರೂ ಆ ಸಂಭ್ರಮದಲ್ಲಿ ಇತರ ಎಲ್ಲ ಜನರೂ ಪಾಲ್ಗೊಳ್ಳುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯಲ್ಲಿ ದನಗಳ ಕೊಟ್ಟಿಗೆಯಲ್ಲಿ ಸಾಕು ತಂದೆ ಜೋಸೆಫರ ಆಶ್ರಯದಲ್ಲಿ ಮಾತೆ ಮರಿಯಮ್ಮನವರ ಉದರದಲ್ಲಿ ಜನಿಸಿದ ಏಸು 33ವರ್ಷಗಳ ಕಾಲ ಮಾತ್ರ ಭೂಮಿ ಮೇಲೆ ಬಾಳಿದರೂ ಅದ್ಭುತ ಪವಾಡಗಳನ್ನು ಮಾಡಿ ಸಮಸ್ತ ಜನರ ಪಾಪಗಳ ಪರಿಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಿದರು. ಆದರೆ ಈ ಪ್ರಪಂಚದಲ್ಲಿ ಸತ್ತ ಮೇಲೆ ಯಾರು ಜೀವಂತವಾಗಿ ಎದ್ದು ಬರುವುದಿಲ್ಲ್ಲ. ಮೃತ್ಯುಂಜಯ ಕ್ರಿಸ್ತ ಯೇಸು ಸ್ವಾಮಿ ತಾವು ನುಡಿದಂತೆ ಸತ್ತು ಮೂರೇ ದಿನದಲ್ಲಿ ಜೀವಂತವಾಗಿ ಎದ್ದು ಪುನರುತ್ಥಾನಗೊಂಡಿದ್ದು ಲೋಕ ರಕ್ಷಣೆಗೆ ಎಂದು ನಂಬಿದ್ದಾರೆ ಕ್ರೈಸ್ತಬಾಂಧವರು.

IMG-20151224-WA0013

IMG-20151224-WA0014

IMG-20151224-WA0015

IMG-20151224-WA0026

IMG-20151224-WA0027

IMG-20151224-WA0028

permannur St.Sebastian (22)

permannur St.Sebastian (23)

IMG-20151224-WA0026

permannur St.Sebastian (15)

permannur St.Sebastian (13)

permannur St.Sebastian (10)

permannur St.Sebastian (9)

permannur St.Sebastian (18)

permannur St.Sebastian (19)

24ullal5

permannur St.Sebastian (4)ಲೋಕ ಕಲ್ಯಾಣಕ್ಕಾಗಿ ಅವತಾರ ತಾಳಿದ ದೇವಮಾನವ ಏಸುದೇವ ಹುಟ್ಟಿದ ಕ್ರಿಸ್ ಮಸ್ ಹಬ್ಬದ ಪೂರ್ವ ತಯಾರಿ ಒಂದು ತಿಂಗಳಿನ ಮುಂಚೆಯೇ ನಡೆಯುತ್ತದೆ. ಬಾಲ ಏಸುವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಸಡಗರದಲ್ಲಿ ಕೈಸ್ತಧರ್ಮಿಯರು ಮುಳುಗಿರುವ ಈ ದಿನವನ್ನು ಪವಿತ್ರ ದಿನವೆಂದು ಕರೆಯುತ್ತಾರೆ.

ದೇವಪುತ್ರ ಏಸುದೇವನ ಜನನ:
ಕ್ರಿಸ್ ಮಸ್ ಹಬ್ಬವನ್ನು ದೇಶದಾದ್ಯಂತ ಅತ್ಯಂತ ಶ್ರದ್ಧೆ,ನಿಷ್ಠೆಯಿಂದ ಆಚರಿಸುವ ಮೂಲ ಕಾರಣ ಎಂದರೆ ಅದು ದೇವಪುತ್ರ ಏಸು ಜನನವಾದ ದಿನವೆಂದು. ಏಸು ಜನನ ದಿನದ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ ಸಹ ಡಿಸೆಂಬರ್ 25ರಂದು ಕ್ರಿಸ್ ಮಸ್ ಎಂದು ಎಲ್ಲರೂ ಆಚರಿಸುತ್ತಾರೆ. ಮೇರಿ ಮತ್ತು ಜೋಸೆಫರ ಮಗನಾಗಿ ಇಸ್ರೇಲ್ ನ ಬೆತ್ಲಹೆಮ್ ಎಂಬ ಊರಿನಲ್ಲಿ ದನದ ಹಟ್ಟಿಯಲ್ಲಿ ಜನನವಾದ ಮಗು ಏಸುದೇವ.

ಉಡುಗೊರೆಯ ಹಬ್ಬ:

ಹಬ್ಬದ ದಿನದಂದು ಹೊಸ ಬಟ್ಟೆ ಬರೆಗಳು ತೆಗೆದುಕೊಳ್ಳುವ ಮೂಲಕ ಹಾಗೂ ಪರಸ್ಪರ ಉಡುಗೊರೆಯನ್ನು ಹಂಚಿಕೊಳ್ಳುವ ಮೂಲಕ, ಅದರಂತೆಯೇ ಕ್ರಿಸ್‍ಮಸ್ ಹಬ್ಬದ ವಿಶೇಷತೆ ಎಂದರೆ ಅದು ಪರಸ್ಪರ ಉಡುಗೊರೆಗಳನ್ನು ಹಂಚಿಕೊಂಡು ಶುಭಾಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಹಬ್ಬವಾಗಿದೆ. ಕ್ರಿಸ್‍ಮಸ್ ಹಬ್ಬದಂದು ಮನೆ ಮಂದಿಯೆಲ್ಲ ಒಟ್ಟಾಗಿ ಸೇರಿಕೊಂಡು ಪರಸ್ಪರ ಉಡುಗೊರೆಗಳನ್ನು ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಚರ್ಚ್‍ಗಳಲ್ಲಿ ವಿಶೇಷ ಪೂಜೆ:

ಹಿಂದೂ ಮುಸಲ್ಮಾನರ ಹಬ್ಬದಂತೆಯೇ ಅತ್ಯಂತ ಪವಿತ್ರ ಹಬ್ಬ ಎಂದು ಕರೆಯಲ್ಪಡುವ ಕ್ರಿಸ್ ಮಸ್ ಹಬ್ಬದ ಮುಂಚಿನ ದಿನ ಅಂದರೆ ಡಿಸೆಂಬರ್ 24ರಂದು ಸಂಜೆ ಮನೆಮಂದಿಯೆಲ್ಲ ಕಡ್ಡಾಯವಾಗಿ ಚರ್ಚ್‍ಗಳಿಗೆ ತೆರಳಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ದಿನದಂದು ಬಹುತೇಕ ಎಲ್ಲ ಚರ್ಚ್‍ಗಳಲ್ಲಿಯೂ ಸಹ ಜನರು ಕಿಕ್ಕಿರಿದು ಸೇರಿರುತ್ತಾರೆ. ಪವಾಡ ಪುರುಷ ಏಸುಕ್ರಿಸ್ತ ಜನನವಾಗುವ ಸಮಯದ ವರೆಗೂ ಪ್ರಾರ್ಥನೆಯನ್ನು ಮಾಡುತ್ತಾರೆ. ಪ್ರತಿಯೊಬ್ಬರು ಕೂಡ ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಚರ್ಚ್‍ಗಳಿಗೆ ತೆರಳಿ ದೇವರಲ್ಲಿ ಪ್ರಾರ್ಥನೆ ನೆರವೇರಿಸುತ್ತಾರೆ.

ಕುಟುಂಬದ ಹಬ್ಬ:

ಮನೆಯವರು ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬ ಅದು ಕ್ರಿಸ್ ಮಸ್. ಹಬ್ಬದ ಸಂಭ್ರಮ ಒಂದು ವಾರ ಕೆಲವರಿಗೆ ತಿಂಗಳಿನ ಮುಂಚೆಯೇ ಶುರುವಾಗಿರುತ್ತದೆ. ಮನೆಯನ್ನು ಅಲಂಕಾರಗೊಳಿಸಿ ಬಗೆ ಬಗೆಯ ಭಕ್ಷಗಳನ್ನು ತಯಾರಿಸಿ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಭೋಜನವನ್ನು ಮಾಡುತ್ತಾರೆ. ಕೇಕ್ , ಕರಿದ ತಿನಿಸುಗಳು, ವಿಶೇಷ ಹಣ್ಣುಹಂಪಲಗಳಿಂದ ಮಾಡಿದ ನಾನಾ ತರಹದ ಭಕ್ಷಗಳನ್ನು ಕೆಲವರು ಬೇಕರಿಗಳಿಂದ ತಂದರೆ ಇನ್ನು ಕೆಲವರು ಮನೆಯಲ್ಲಿಯೇ ತಯಾರಿಸುತ್ತಾರೆ. ಅದಕ್ಕೆ ಹಬ್ಬದ ಸಮಯದಲ್ಲಿ ಪ್ರತಿಯೊಂದು ಬೇಕರಿಗಳಲ್ಲಿಯೂ ಕೂಡ ಕ್ರಿಸ್ ಮಸ್ ತಿನಿಸು ಎಂದು ಕೆಲವೊಂದು ಭಕ್ಷ್ಯಗಳನ್ನು ಮಾರಾಟ ಮಾಡಲಾಗುತ್ತದೆ. ಕ್ರಿಸ್ ಮಸ್ ಹಬ್ಬದಂದು ಮನೆಗೆ ನೆಂಟರು ಸ್ನೇಹಿತರು ಬರುತ್ತಾರೆ. ಬರುವ ಅತಿಥಿಗಳನ್ನು ಸತ್ಕರಿಸಿ ಅವರಿಗೆ ಸಿಹಿತಿಂಡಿಗಳನ್ನು ಕೊಡುವುದು ಹಬ್ಬದ ವಿಶೇಷಗಳಲ್ಲಿ ಒಂದು.

ಉಡುಗೊರೆ ಫ್ರೆಂಡ್ ಸಾಂತಕ್ಲಾಸ್:

ಕ್ರಿಸ್ ಮಸ್ ಹಬ್ಬವೆಂದರೆ ಮೊದಲಿಗೆ ನೆನಪಿಗೆ ಬರುವುದೆಂದರೆ ಅದು ಸಾಂತಕ್ಲಾಸ್. ಮಕ್ಕಳ ಅಚ್ಚುಮೆಚ್ಚಿನ ಉಡುಗೊರೆಯ ಫ್ರೆಂಡ್ ಸಾಂತಕ್ಲಾಸ್ ಕ್ರಿಸ್ ಮಸ್ ಹಬ್ಬದ ಮುಖ್ಯ ಕೇಂದ್ರ ಬಿಂದುವಾಗಿರುತ್ತಾರೆ. ಅವರು ಬರುತ್ತಾರೆ ಎಂದರೆ ಸಾಕು ಮಕ್ಕಳಿಗೆ ಅದು ಎಲ್ಲಿಲ್ಲದ ಆಸಕ್ತಿ ಕಾರಣ ಅವರು ತರುವ ಉಡುಗೊರೆ. ಕ್ರಿಸ್ ಮಸ್ ಹಬ್ಬದಂದು ಮನೆ ಮನೆ ಗೆ ಬರುವ ಸಾಂತಕ್ಲಾಸಿನನ್ನು ಬರಮಾಡಿಕೊಳ್ಳಲು ಮಕ್ಕಳು ತುದಿ ಕಾಲಿನಲ್ಲಿ ನಿಂತಿರುತ್ತಾರೆ.ಅವರು ನೀಡುವ ಚಾಕಲೇಟ್, ಕೇಕ್ ಸಣ್ಣಪಟ್ಟ ಉಡುಗೊರೆಗಳನ್ನು ತೆಗದುಕೊಳ್ಳುವುದೆಂದರೆ ಮಕ್ಕಳಿಗೆ ತುಂಬ ಇಷ್ಟ. ಹಬ್ಬದ ದಿನದಂದು ಕೆಂಪು ಬಟ್ಟೆಯನ್ನು ತೊಟ್ಟು, ಉದ್ದದ ಗಡ್ಡದ ಅಜ್ಜ ಬರುತ್ತಾನೆ. ಆತನ ಕೈ ತುಂಬ ಉಡುಗೊರೆಗಳು ಇರುತ್ತದೆ ಎಂದು ಮಕ್ಕಳು ಪರಸ್ಪರ ಮಾತನಾಡಿಕೊಳ್ಳುವುದನ್ನು ನಾವು ಕಾಣಬಹುದು. ಹಬ್ಬದ ಪೂರ್ವಭಾವಿಯಾಗಿ ಸಾಂತಕ್ಲಾಸ್ ವೇಷಧಾರಿಗಳು ಮಕ್ಕಳನ್ನು ರಂಜಿಸಲು ಅಥವಾ ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸಲು ಪ್ರಮುಖ ರಸ್ತೆಗಳಲ್ಲಿ ಸಾಗುವುದನ್ನು ನಾವು ಕಾಣುತ್ತೇವೆ.

ಮನೆ ಮನೆಯಲ್ಲಿ ಕ್ರಿಸ್ ಮಸ್ ಟ್ರೀ:

ಅತ್ಯಂತ ಸಂಭ್ರಮ ಸಡಗರದ ಪ್ರತೀಕವಾಗಿರುವ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಮನೆಯ ಮುಂದೆ ಗೋದಲಿಯನ್ನು ವಾರದ ಮುಂಚೆಯೆ ತಯಾರಿಸುತ್ತಾರೆ. ಈ ಗೋದಲಿಯನ್ನು ನೋಡುವುದೇ ಸುಂದರ. ಹಟ್ಟಿ ಅದರ ಸುತ್ತಲೂ ದನ ಕರುಗಳು, ಹುಲ್ಲುಗಳನ್ನು ಬೆಳೆಸಿ ಏಸು ಜನನದ ಚಿತ್ರಣವನ್ನು ತೋರಿಸಿಕೊಡುವ ಈ ಗೋದಳಿಗಳು ಅತ್ಯಂತ ಪವಿತ್ರವಾದುದು ಎಂಬ ಮಾತಿದೆ. ಕೇವಲ ಮನೆಯಲ್ಲಿ ಮಾತ್ರವಲ್ಲದೇ ಚರ್ಚ್‍ಗಳಲ್ಲಿಯೂ ವಿಧ ವಿಧವಾದ ಗೋದಲಿಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ ಯಾವುದೇ ಧರ್ಮದವರು ಮುಕ್ತವಾಗಿ ನೋಡುವಂತೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ. ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಗಳನ್ನು ಇಡುವುದು ಈ ಹಬ್ಬದ ಮತ್ತೊಂದು ವಿಶೇಷಗಳಲ್ಲಿ ಒಂದು. ಅಷ್ಟೇ ಅಲ್ಲದೇ ಹಿಂದುಗಳ ಹಬ್ಬ ದೀಪಾವಳಿಯಂದು ಗೂಡುದೀಪಗಳನ್ನು ನೇತಾಡಿಸುವಂತೆ ಕ್ರಿಸ್‍ಮಸ್ ಹಬ್ಬದಂದು ನಕ್ಷತ್ರ ಅಥವಾ ಸ್ಟಾರ್ಸ್ ನೇತಾಡಿಸುತ್ತಾರೆ. ಮಕ್ಕಳಿಗೆಂದೇ ಸಂಗೀತ ಕಾರ್ಯಕ್ರಮಗಳನ್ನು ಇನ್ನಿತರ ನೃತ್ಯ ನಾಟಕಗಳನ್ನು ಮಾಡುವ ಮೂಲಕ ಹಬ್ಬದ ವೈಶಿಷ್ಟ್ಯತೆಯನ್ನು ಹೆಚ್ಚಿಸುತ್ತಾರೆ.

ಹಬ್ಬಗಳೆಂದರೆ ಹೀಗೆಯೇ ಅದು ಯಾವ ಧರ್ಮದ ಹಬ್ಬವಾದರೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಯಾವುದೇ ಧರ್ಮವಾದರೂ ಕೂಡ ಅದರ ಹಿನ್ನೆಲೆ ನಂಬಿಕೆಯನ್ನು ಅಲ್ಲಗಳೆಯುವಂತಿಲ್ಲ. ಹಬ್ಬ ಆಚರಣೆಗಳ ಮೂಲಕ ಕುಟುಂಬವನ್ನು ಸಮಾಜವನ್ನು ಒಂದು ಮಾಡಿಸುವಂತಹ ಹಬ್ಬಗಳು ಯಾವತ್ತಿಗೂ ಕೂಡ ವೈಶಿಷ್ಟ್ಯತೆಗಳಲ್ಲಿ ಒಂದು. ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

March 6, 2026

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ

March 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

By UllalaVaniMarch 6, 20260

ಉಳ್ಳಾಲ; ಇಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! ಹತ್ತಿಪ್ಪತ್ತು ಜನ ನಾಗರಿಕರು ಸೇರಿ ತಮಗೆ ಇರುವ ಆತಂಕ ತೋಡಿಕೊಂಡರೆ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾ ಘಟಕ ಪುನರ್ ಸಂಘಟನೆಗೆ ನಿರ್ಧಾರ

March 5, 2026

ಇರಾನ್ ದಾಳಿ; ಮೂವರು ಭಾರತೀಯರು ಸಾವು…!

March 5, 2026
1 2 3 … 1,825 Next
Automatic YouTube Gallery

Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!

ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ತೊಕ್ಕೊಟ್ಟು ಒಳಪೇಟೆಯಲ್ಲಿ ಮಾ.8ರಂದು ಶುಭಾರಂಭ

ಗ್ರಾಹಕರಿಗಾಗಿ ಬಿಗ್ ಕಾಂಬೋ ಆಫರ್...!


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!
Now Playing
Anvith Electronics | ಆಫರ್...ಆಫರ್... ಆಫರ್... ಮಾ.8ರಂದು ಇಲ್ಲಿಗೆ ಬರ್ಲೆಬೇಕು....!
ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ...
ಪ್ರಕಾಶ್ ಜಿ ಮಾಲಕತ್ವದ ಅನ್ವಿತ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಆರಂಭ; ತೊಕ್ಕೊಟ್ಟು ಒಳಪೇಟೆಯಲ್ಲಿ ಮಾ.8ರಂದು ಶುಭಾರಂಭ

ಗ್ರಾಹಕರಿಗಾಗಿ ಬಿಗ್ ಕಾಂಬೋ ಆಫರ್...!


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೌಹಾರ್ದ ಇಫ್ತಾರ್ ಕೂಟ; ಹಿಂದೂ, ಮುಸ್ಲಿಂ, ಕ್ರೈಸ್ತ ರು ಭಾಗಿ
Now Playing
ಸೌಹಾರ್ದ ಇಫ್ತಾರ್ ಕೂಟ; ಹಿಂದೂ, ಮುಸ್ಲಿಂ, ಕ್ರೈಸ್ತ ರು ಭಾಗಿ
ಯೆನೆಪೋಯ ಸಮೂಹ ಸಂಸ್ಥೆಯ ವತಿಯಿಂದ ಜಪ್ಪಿನಮೊಗರಿನ ಯೆನೆಪೋಯ ಸ್ಕೂಲ್‌ನಲ್ಲಿ ಸೌಹಾರ್ದ ...
ಯೆನೆಪೋಯ ಸಮೂಹ ಸಂಸ್ಥೆಯ ವತಿಯಿಂದ ಜಪ್ಪಿನಮೊಗರಿನ ಯೆನೆಪೋಯ ಸ್ಕೂಲ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ; ಡಾ.ಯೆನೆಪೊಯ ಅಬ್ದುಲ್ಲಾ ಕುಂಞ ನೇತೃತ್ವದಲ್ಲಿ ಕಾರ್ಯಕ್ರಮ

ಸೌಹಾರ್ದ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ರು ಭಾಗಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Yenepoya #School #iftharspecial #ifthar #ullala #utkhader
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d