ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೆ.ಸಿ.ನಗರ: ಎಸ್.ಎಸ್.ಎಫ್ ಕೆ.ಸಿ ನಗರ ಶಾಖೆ ಇದರ ವತಿಯಿಂದ 24 ನೇ ವಾರ್ಷಿಕೋತ್ಸವದ ಪ್ರಯುಕ್ತ ಯೇನಪೋಯ ಮೆಡಿಕಲ್ ಕಾಲೇಜ್ ದೇರಳೆಕಟ್ಟೆ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ದಂತ ಮತ್ತು ವೈದ್ಯಕೀಯ ಶಿಬಿರ ಕೆ.ಸಿ.ನಗರದ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು
ಯೇನಪೋಯ ಡೆಂಟಲ್ ಕಾಲೇಜಿನ ಊಔಆ. ಡಾ.ಗಣೇಶ್ ಶೆಣೈ.ಪಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸ್.ಎಸ್.ಎಫ್ ಕೆಸಿನಗರ ಶಾಖೆ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಹಳಷ್ಟು ಸಾಮಾಜಿಕ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ.ಜಾತಿ ಮತ ಭೇದವಿಲ್ಲದೆ ಹಲವಾರು ಮಂದಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು
ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಆಳ್ವ, ಬ್ಯಾರಿ ಸಾಹಿತ್ಯ ಅಕಾಡಮಿ ರಿಜಿಸ್ಟರ್ ಉಮ್ಮರ್ ಮಾಸ್ಟರ್ ,ಡಾ ಇಮ್ರಾನ್ ಪಾಶ, ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್.
ಉಳ್ಳಾಲ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಕೆ.ಸಿ. ನಗರ .ಅಬ್ದುಲ್ ಖಾದರ್ ಹಾಜಿ. ಅಬ್ಬಾಸ್ ಹಾಜಿ ಮಜಲ್.ಅಬ್ದುರ್ರಹೀಂ ಝಹ್ರೀ,ಇಸ್ಮಾಯಿಲ್ ನಾಗತೋಟ,ನಝೀರ್ ಕೆಸಿ.ನಗರ. ಅಹ್ಮದ್ ಭಾವ,ಹಸೈನಾರ್,ಮೊಯಿದಿನ್ ಬಾವ. ಅಬೂಸಾಲಿಹ್ ಕಾಮಿಲ್ ಸಖಾಪಿ. ಎಸ್,ಎಸ್,ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಹಕೀಮ್ ಕಾರ್ಯಕ್ರಮ ನಿರೂಪಿಸಿದರು.


