ವರದಿ: ಬಶೀರ್ ಕಲ್ಕಟ್ಟ

ಉಳ್ಳಾಲ: ಎಸ್ಎಸ್ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಪ್ ಸರ್ವಿಸ್ ಇದರ ಆಶ್ರಯದಲ್ಲಿ ಮದುವೆಗೆ ಧನಸಹಾಯ ಒದಗಿಸುವ ಚೆಕ್ ಬಿಡುಗಡೆ ಕಾರ್ಯಕ್ರಮ ಎನೆಪೋಯ ಆಸ್ಪತ್ರೆಯ ಕ್ಯಾಂಪಸ್ ಬಳಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಸ್ಎಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ವಹಿಸಿದ್ದರು. ಅಲ್ ಕೋಬರ್ ಕೆಸಿಎಫ್ ಸದಸ್ಯ ಪಿ.ಕೆ. ಅಬ್ದುಲ್ ರವೂಫ್ ಸಅದಿ ಚೆಕ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಫ್ ಜಿಲ್ಲಾ ಕೋಶಾಧಿಕಾರಿಅಲ್ತಾಪ್ ಕುಂಪಲ, ಶಮೀರ್ ಸೇವಂತಿಗುಡ್ಡೆ ಬಾತಿಷ ಮಂಚಿಲ ಉಪಸ್ಥಿತರಿದ್ದರು.


