ಮುಡಿಪು: ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಸಾರ್ವಜನಿಕ ಸಹಿ ಸಂಗ್ರಹಮುಡಿಪು ನವೋದಯದಿಂದ ಮುದುಂಗಾರು ಕಟ್ಟೆ–ಪಾತೂರು ಸಂಪರ್ಕಿಸುವ ಮುಖ್ಯ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ, ನಾಗರಿಕ ಹೋರಾಟ ಸಮಿತಿ ಮುದುಂಗಾರು ಕಟ್ಟೆ–ಬಾಳೆಪುಣಿ ವತಿಯಿಂದ ಇಂದು ಸಾರ್ವಜನಿಕ ಸಹಿ ಸಂಗ್ರಹ ಕಾರ್ಯಕ್ರಮ ನಡೆಯಿತು.

ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ, ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಯಿತು. ರಸ್ತೆ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಹಾಗೂ ನಾಗರಿಕ ಹೋರಾಟ ಸಮಿತಿಯ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ನಾಗರಿಕ ಹೋರಾಟ ಸಮಿತಿ ಸದಸ್ಯರಾದ ಉಸ್ಮಾನ್ ಅಲ್ತಾಫ್, ಅಬ್ದುಲ್ ಅಝೀಜ್,, ಅಬೂಬಕ್ಕರ್ ಜಲ್ಲಿ, ದಿವಾಕರ ಆರಂತಾಡಿ, ಪ್ರದೀಪ್ ಆರಂತಾಡಿ, ಕೇಶವ ಶೆಟ್ಟಿಗಾರ್, ಅಸ್ಪಾಕ್ ಕಾಚರಮಾರ್, ಖಲೀಲ್ ಸಿ. ಹೆಚ್, ಅಶ್ರಫ್ ಯು. ಎಮ್, ಅನ್ಸಾರ್ SAIM, ಇಕ್ಬಾಲ್ ಸೆಲ್ ನೆಟ್, ರವೂಫ್ ಯು. ಎಮ್, ಸಿದ್ದೀಕ್ ಎಂ. ಕೆ, ಉಸ್ಮಾನ್ ಎಂ. ಕೆ, ಶಿವಪ್ರಸಾದ್ ನಾರ್ಯ, ಸುರೇಶ್ ಶೆಟ್ಟಿಗಾರ್, ಲತೀಫ್ ಕಡ್ವಾಯಿ ಉಪಸ್ಥಿರಿದ್ದರು..



