ಮಡ್ಯಾರು: ಮಡ್ಯಾರು ಪರಾಶಕ್ತಿ ಕ್ಷೇತ್ರದಲ್ಲಿ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಗಳ ಮಹಾ ಆರಾಧನೆಮರಕಡ ಶ್ರೀ ಗುರುಪರಾಶಕ್ತಿ ಮಠದ ಸಂಸ್ಥಾಪಕ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ಮಹಾ ಆರಾಧನೆಯು ಮಡ್ಯಾರು ಪರಾಶಕ್ತಿ ಕ್ಷೇತ್ರದಲ್ಲಿ ನಡೆಯಿತು.


ಸ್ವಾಮಿಯವರ ಚಿಂತನ ಬರೇ ಸಾಮಾನ್ಯ ಚಿಂತನ ಅಲ್ಲ. ಇಂತಹ ಭವ್ಯ ಚಿಂತನ ಬರೇ ಮನುಜ ಮಾತ್ರನಿಂದ ಸಾಧ್ಯವಿಲ್ಲ. ಅವರೇ ಅಂದ0ತೆ, ಮಾಯಾತೀತನೋರ್ವ ಮಾಯೆಯೊಳಗೆ ಬಂದು ಉದ್ಧರಿಸುವ ಚಿಂತನ.ಹೇಳುವವನೋರ್ವ ಜೀವಜಾಲಗಳ ಹೊರಗೆ ನಿಂತು ಹೇಳಿದ.ಕೇಳುಗನಿಗೆ ಅದು ಅರ್ಥವೇ ಆಗಲಿಲ್ಲ. ಆದರೆ ಮುಂದೆ ಜನಾಂಗ ವೊಂದು ಬರಲಿದೆ.ಬರಿಸುವೆ ನಾ. ಅವರು ಅರ್ಥೈಸಿಕೊಳ್ಳುವರು ಎಂದು. ಪೂಜ್ಯರು ನೀಡಿದ ನುಡಿಗಳು ಅದು ದೇವ ನುಡಿಗಳು. ಅದನ್ನು ಅರ್ಥವಿಸಿಕೊಳ್ಳುವುದು ಸುಲಭ ಅಲ್ಲ. ಒಂದೊAದು ಶಬ್ದಗಳು ಒಂದೊAದು ತತ್ತ್ವ.ಇಲ್ಲಿ ಭಕ್ತರು ಎಂದಿಲ್ಲ. ಎಲ್ಲರೂ ಬಂಧುಗಳು. ಒಂದು ಕೈ ಸೋತಾಗ ತಮ್ಮ ಕೈ ಜೋಡಿಸಿ ಮೇಲೆತ್ತುವವರು. ಜಾತಿ ಭೇದಗಳ ಮೀರಿದ ಚಿಂತನ. ಯಾರು ಆರ್ತತೆಯೊಳಗೆ ಬಂದು ಕೇಳಿದರೋ,ಯಾರು ಕಣ್ಣೀರು ಕೊಟ್ಟು ಕೇಳಿದರೋ, ಯಾರು ತಾಯಿ ಎಂದು ಶರಣಾಗತರಾದರೋ ಅವರಿಗೆ ತಕ್ಷಣ ಪರಿಹಾರ ಕೊಟ್ಟವರು ಸ್ವಾಮಿ.ಇಂದು ಅವರು ಹೆಜ್ಜೆ ಇಡಿಸಿದಂತೆ ನಾವು ಹೆಜ್ಜೆ ಇಡುತ್ತಿದ್ದೇವೆ. ಅವರ ಸಂಕಲ್ಪಗಳೆಲ್ಲವೂ ಮುಂದಿನ ದಿನಗಳಲ್ಲಿ ಪರಿಪೂರ್ಣತೆಗೆ ಬರಲಿದೆ ಎಂದು ಪೂಜನೀಯ ಮಾತೆ ಶಕುಂತಲಾ ಅಮ್ಮನವರು ಹೇಳಿದರು.



ಶ್ರೀ ಗುರು ಪರಾಶಕ್ತಿ ಮಠದ ಸಂಸ್ಥಾಪಕರಾದ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ಮಹಾ ಆರಾಧನೆಯ ಸಂದರ್ಭದಲ್ಲಿ ದೀಪಪ್ರಜ್ವಲನಗೈದು, ಪುಷ್ಪನಮನದೊಂದಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.
ಮಹಾಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಆರಾಧನೆ ನೆರವೇರಿಸಿ ಮಾತನಾಡಿದ ಶ್ರೀ ಗುರುಪರಾಶಕ್ತಿ ಮಠದ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು, ಮಾಯಾತೀತತೆಯ ಸೊಬಗನ್ನು ಈ ವಸುಂಧರೆಗೆ ತಂದ ಅಸೀಮತೆಯ ಭಾವ ಪಡಕೊಂಡು ಮಾಯೆಯ ವಿಸ್ಮಯತೆಯ ಅನಾವರಣಗೊಳಿಸಿದ ಪರಮಪೂಜ್ಯರಿಗೆ ನಮನಗಳನ್ನು ಅರ್ಪಿಸೋಣ.ಸ್ವಾಮಿ ಎಂಬ ಪದದ ವಿಸ್ತಾರತೆಯ ಇಂದಿನ ಮಹಾ ಆರಾಧನೆಯಲ್ಲಿ ಕಂಡೆವು ನಾವು.ಒಳಗೊಳಗೇ ನಿಂತವನೋರ್ವ, ಒಳಗೊಳಗೇ ನಿನಾದವ ಕೊಡುವವನೋರ್ವ, ನಮ್ಮೊಳಗೇ ನಿಂತು ನಮ್ಮ ಅಸ್ತಿತ್ವವ ನಮಗೆ ಕೊಡುವವ ಸ್ವಾಮಿ.ಒಳಗೆ ನಿಂತು ನಮ್ಮ ಆತ್ಮ ಶುದ್ಧಗೊಳಿಸಿದ ಆತ್ಮಸಖ. ಅವರವರ ಭಾವಗಳಲಿ ಸ್ಪಂದಿಸಿ, ಅವರವರ ಜೈತ್ರ ಯಾತ್ರೆಯಲಿ ತಾನೂ ಯಾತ್ರಿಕನಾಗಿ, ಪಯಣದಲಿ ಭಾಗಿಯಾಗಿ,ನೋವು ನಲಿವುಗಳಿಗೆ ಎಲ್ಲದಕ್ಕೂ ಅಹುದೆಂದವ ‘ಸ್ವಾಮಿ’ ಎಂದರು.
ಮುAದುವರಿದು ನಿತ್ಯ ನಿರಂತರನಾಗಿ ನಮ್ಮೊಳಗೇ ಇರುವ ಅಚಿಂತ್ಯನೀತ.ಸೃಷ್ಟಿಯ ಪರಮಾಚಾರ್ಯ ಆತ. ಪ್ರತಿಯೋರ್ವನೊಳಗು ಇರುವ ಆತ್ಮನ ರಚನಾ ಕರ್ತೃ ಆತ. ಅಮೂರ್ತತೆಯೊಳಗೆ ಇದ್ದರೂ ಇಲ್ಲದವನೋರ್ವ, ಸಕಲ ಭಾವಗಳ ಒಳಗೆ ದೇವಭಾವ ತುಂಬಿದವನೋರ್ವನಿಗೆ ನಮೋ ಎನ್ನೋಣ.ಕ್ಷೇತ್ರೇಶನ ಪರಿಚಯವೇ ಕ್ಷೇತ್ರದ ಪರಿಚಯ. ದೇವಭಾವದ ಸಾಕಾರತೆಯೊಳಗೆ ನಾವು ಕಂಡರೂ ಆಕಾರ ನಿರಾಕಾರಗಳಲ್ಲಿ ಇಲ್ಲದವನ ಚಿಂತನದ ಸಾಕಾರತೆಯೇ ಮಹಾ ಆರಾಧನೆ ಎಂದು ನುಡಿ ಸಂದೇಶ ನೀಡಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಮರಕಡ ಶ್ರೀಗಳ ಆದರಣೀಯತೆ, ಮನುಷ್ಯ ಪ್ರೀತಿ ನಿಜಕ್ಕೂ ಅನುಕರಣೀಯ.ಸದಾ ನಮ್ಮ ಹೃದಯದಲ್ಲಿ ಅವರು ನೆಲೆ ನಿಂತಿದ್ದಾರೆ. ವಿಶ್ವ ಶಾಂತಿಯೊAದಿಗೆ ಲೋಕಹಿತವನ್ನು ಸದಾ ಬಯಸಿದ ಮಹನೀಯರು ಅವರು ಎಂದರು.
ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನುಡಿನಮನಗಳನ್ನು ಸಲ್ಲಿಸಿದರು.ರಾಮಕ್ಷತ್ರಿಯ ಸಮಾಜದ ಕುಲ ಪುರೋಹಿತರಾದ ವಿದ್ವಾನ್ ಸತ್ಯಕೃಷ್ಣ ಭಟ್, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್,ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪುತ್ತಿಲ ಪ್ರತಿಷ್ಟಾನದ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.
ಈ ಸಂದರ್ಭ ಪೂಜ್ಯ ಮಹಾಸ್ವಾಮಿಯವರ ಪುತ್ರಿಯರಾದ ಶೀತಲ್ ಕೋಟೆಕಾರ್, ಕಾವ್ಯ ಕೋಟೆಕಾರ್, ಅಳಿಯಂದಿರಾದ ವಿಶಾಲ್ ರಾವ್, ಸನತ್ ಕೋಟೆ, ಮೊಮ್ಮಕ್ಕಳಾದ ಪ್ರಣವ್ ಕೋಟೆಕಾರ್, ಪ್ರಕೃತಿ ಕೋಟೆಕಾರ್, ಗಗನ್ ದೀಪ್ ಚಿತ್ತಾರಿ,ದೇವರ ಅರಮನೆ ಕುಟುಂಬಸ್ಥರಾದ ಮನಮೋಹನ್ ರಾವ್, ಭವಾನಿ ಶಂಕರ್ ರಾವ್,ರಘುರಾಮ್ ರಾವ್, ರಂಜನ್ ಕೋಟೆಕಾರ್,ಕಡೆಕಾರು ಕುಟುಂಬದ ಹಿರಿಯರಾದ ರಾಧಾಕೃಷ್ಣ ಜೆಪ್ಪು, ಜೆ. ಕೃಷ್ಣಾನಂದ ರಾವ್, ಕಡೆಕಾರು ಗುರುವನ ಶ್ರೀ ದುರ್ಗಾ ಕ್ಷೇತ್ರದ ಅಧ್ಯಕ್ಷರಾದ ಯೋಗೇಶ್ ಕುಮಾರ್ ಜೆಪ್ಪು, ವೆಂಕಟೇಶ್ ಜೆಪ್ಪು, ಹರಿಪ್ರಸಾದ್ ಜೆ, ಶಾಂತರಾಮ ಶೆಟ್ಟಿ ಅಡ್ಯಾರ್, ಪ್ರಥಮ್ ಹೆಗ್ಡೆ, ವಿಜಯಚಂದ್ರ ಮಡಂತ್ಯಾರು,ಯೋಗೀಶ್ ಕುಮಾರ್ ಅತ್ತಾವರ,ಜ್ಯೋತಿಷಿ ಗಂಗಾಧರ್ ಪಣಿಕ್ಕರ್ ಮುಂತಾದವರು ಪುಷ್ಪನಮನ ಸಲ್ಲಿಸಿದರು.ಕಲ್ಪನಾ ವೆಂಕಟೇಶ್ ಜೆಪ್ಪು, ದುರ್ಗಾದಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.



