Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಕಬ್ಬು ತಿನ್ನುವ ಹಬ್ಬದ ಸಂಭ್ರಮ ಜನತೆಯನ್ನು ಪುಳಕಿತರನ್ನಾಗಿಸಿತು ಗೌರಿ-ಗಣೇಶನ ಆರಾಧನೆ

UllalaVaniBy UllalaVaniSeptember 17, 2015Updated:September 19, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಗೌರಿ- ಗಣೇಶನ ಆರಾಧನೆ ಒಂದು ದಿನದ ಆಚರಣೆಯಲ್ಲ. ಅದು ವಾರಗಳ ಕಾಲ ನಡೆಯುವ ಸಂಭ್ರಮ. ಕಬ್ಬು ತಿನ್ನುವ ಹಬ್ಬ, ಸಂಬಂಧಗಳ ನಂಟನ್ನು ಇನ್ನಷ್ಟು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವ ಸಂಭ್ರಮವೇ ಬೇರೆ. ಮನೆಯಲ್ಲಿಯೂ ಮನದಲ್ಲಿಯೂ ಖುಷಿಯೋ ಖುಷಿ. ಗೌರ-ಗಣೇಶನ ಆರಾಧನೆಯೊಂದಿಗೆ ಜನ ಪುಳಕಿತರಾದರು.

Picture 147 copy Picture 148 copy Picture 150 copy Picture 156 copy Picture 158 copy Picture 159 copy Picture 160 copy Picture 161 copy Picture 162 copy Picture 163 copy Picture 167 copy Picture 169 copy Picture 171 copy Picture 173 copy Picture 174 copy Picture 179 copy Picture 180 copy Picture 181 copy Picture 183 copy Picture 184 copy Picture 185 copy Picture 186 copy Picture 187 copy
ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡು ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಗೌರಿ-ಗಣೇಶ ಹಬ್ಬದ ಸಡಗರ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ.
ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ ಆಚರಣೆಯಿಂದ ಐಕ್ಯತೆಯ ಭಾವನೆ ಮೂಡಿ ಭಾಂದವ್ಯ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ.
ಪೌರಾಣಿಕ ಹಿನ್ನೆಲೆ:
ಗೌರಿ ಗಣೇಶ ಹಬ್ಬವನ್ನು ಒಟ್ಟಾಗಿ ಮಾಡುವುದು ಈ ಹಬ್ಬದ ವಿಶಿಷ್ಟವಾಗಿದೆ. ಶಾಸ್ತ್ರದ ಪ್ರಕಾರ ಗೌರಿ ಹಬ್ಬದಂದು ಮಹಾಮಾತೆ ಪಾರ್ವತಿ ದೇವಿಯು ತನ್ನ ತವರುಮನೆಗೆ ಹೋಗುತ್ತಾಳೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಈ ಹಬ್ಬ ಭಾದ್ರಪದ ತೃತೀಯ ದಿನದಂದು ಬರುತ್ತದೆ. ಮಾರನೆಯ ದಿನ ವಿನಾಯಕ ಚೌತಿ ಆ ದಿನದಂದು ಜಗನ್ಮಾತೆಯಾದ ಪಾವರ್ತಿಯನ್ನು ತನ್ನ ಮಗನಾದ ವಿನಾಯಕ ಬಂದು ಕರೆದುಕೊಂಡು ಹೋಗುತ್ತಾನೆ ಎಂಬ ಮಾತಿದೆ.
ಹಬ್ಬದ ತಯಾರಿ:
ಗೌರಿ ಗಣೇಶ ಹಬ್ಬವೆಂದರೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಕಾರಣ ಈ ಹಬ್ಬದ ಸಡಗರ ತುಸು ಜೋರಾಗಿರುತ್ತದೆ. ಗೌರಿಯನ್ನು ಮನೆಗೆ ಬರಮಾಡಿಕೊಳ್ಳಲು ಮುತ್ತೈದೆಯರು ಹೊಸ ಬಟ್ಟೆ ಬರೆಗಳನ್ನು ಖರೀದಿಸಿ ಹಬ್ಬದ ದಿನ ಅದನ್ನು ಧರಿಸಿ ದೇವಿಯನ್ನು ಪೂಜೆಯ ಮೂಲಕ ಮನೆಗೆ ಬರಮಾಡಿಕೊಳ್ಳುತ್ತಾರೆ.
ಕಬ್ಬು ತಿನ್ನುವ ಹಬ್ಬ: ಹಿಂದೂ ಸಂಪ್ರದಾಯದ ಪ್ರಕಾರ ಚತುರ್ಥಿ ಹಬ್ಬವನ್ನು ಗಣೇಶ ಹಬ್ಬ ಎಂದು ಪರಿಗಣಿಸಲಾಗಿದ್ದು ಕಬ್ಬು ಈ ದಿನದ ವಿಶೇಷಗಳಲ್ಲಿ ಒಂದು. ಗಣಪತಿಯ ಶಿರವು ಆನೆಯ ಶಿರವಾದ ಕಾರಣ ಗಜನಾಯಕನನ್ನು ಕಬ್ಬುಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದಂದು ಪ್ರತಿಯೊಂದು ಮನೆಯಲ್ಲಿಯೂ ಕೂಡ ಕಬ್ಬನ್ನು ತೋರಣವಾಗಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ ಕಬ್ಬಿನಿಂದ ಗಣೇಶನನ್ನು ಮಂಟಪವನ್ನು ಅಲಂಕರಿಸುತ್ತಾರೆ. ಮನೆಗಳಿಗೆ ಕಬ್ಬುಗಳನ್ನು ತಮ್ಮ ವಾಹನಗಳಲ್ಲಿ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ತಿಳಿಯುತ್ತದೆ ಈ ಹಬ್ಬಕ್ಕೆ ಕಬ್ಬು ಎಷ್ಟು ಪ್ರಾಮುಖ್ಯವೆಂದು. ಅಷ್ಟೆ ಅಲ್ಲದೆ ನಗರಗಳ ಪ್ರಮುಖ ಬೀದಿಗಳಲ್ಲಿ ಕಬ್ಬುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ಕಾಣಬಹುದಾಗಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ವಿಘ್ನ ವಿನಾಶಕ ಕರೆಯಲ್ಪಡುವ ಏಕದಂತನಿಗೆ ಯಾವುದೇ ಕಾರ್ಯಕ್ರಮದಲ್ಲಿಯೂ ಕೂಡ ಮೊದಲು ಪೂಜೆ ನಡೆಯಬೇಕು ಎಂಬುವುದು ವಾಡಿಕೆ. ಅದರಂತೆಯೇ ಗಣೇಶ ಹಬ್ಬದಂದು ಪ್ರತಿಯೊಂದು ದೇವಸ್ಥಾನಗಳಲ್ಲಿ ವಿನಾಯಕನಿಗೆ ವಿಶೇಷವಾದ ಪೂಜೆಗಳು ನೇರವೆರುತ್ತದೆ. ಸ್ವರ್ಣ ಗೌರಿ ಹಬ್ಬದಂದೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಶುರುವಾಗುತ್ತದೆ. ಈ ದಿನ ದಂದು ಮನೆಯವರೆಲ್ಲರೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳಲ್ಲಿ ಪಾಲ್ಗೋಳುತ್ತಾರೆ. ಪ್ರತಿಯೊಂದು ದೇವಸ್ಥಾನದಲ್ಲಿಯೂ ಕೂಡ ವಿಶೇಷ ಪೂಜೆಯಿದ್ದು ಲೋಕ ಕಲ್ಯಾಣಕ್ಕಾಗಿ ಗಣೇಶನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.

ಮನೆಯಲ್ಲಿ ವಿಶಿಷ್ಟ ಭೋಜನಗಳು: ಮನೆಯ ಗೃಹಿಣಿಯ ಮುಂಜಾನೆಯೇ ಎದ್ದು ಮನೆಯನ್ನೆಲ್ಲಾ ಗುಡಿಸಿ ಸಾರಿಸಿ ರಂಗೋಲಿಯನ್ನು ಇಡುವ ಮೂಲಕ ಹಬ್ಬದ ತಯಾರಿ ನಡೆಯತ್ತದೆ. ಬಾಂಧವ್ಯಗಳನ್ನು ಬೆಸೆಯುವ ಹಬ್ಬಗಳಾದುದರಿಂದ ಮನೆಯವರೆಲ್ಲರೂ ಸೇರಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆವರು ದಿನವಿಡೀ ಗಣೇಶನನ್ನು ಸ್ತುತಿಸುತ್ತ ವಿಧ ವಿಧವಾದ ಅಡುಗೆಗಳನ್ನು ಮಾಡುತ್ತಾರೆ. ಮನೆಯಲ್ಲಿ ಗಣೇಶನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ಕಜ್ಜಾಯ, ಮೋದಕ, ಲಡ್ಡು ಹೀಗೆ ಹತ್ತು ಹಲವಾರು ರೀತಿಯ ಭಕ್ಷಗಳನ್ನು ತಯಾರಿಸಿ ಗಣಪತಿಗೆ ನೈವೇದ್ಯವಾಗಿ ಇಟ್ಟರೆ ಇನ್ನು ಕೆಲವರು ಅಂಗಡಿಗಳಲ್ಲಿ ಗಣೇಶ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸಿದ ಸಿಹಿತಿಂಡಿಗಳನ್ನು ತಂದು ದೇವರಿಗೆ ಬಡಿಸುತ್ತಾರೆ. ಗಣಪತಿಯನ್ನು ತಿಂಡಿಬೊಕ ಎಂದು ತಮಾಷೆ ಮಾಡುವುದುಂಟು ಕಾರಣ ಗಣಪತಿಗೆ ಸಿಹಿ ಭಕ್ಷಗಳೆಂದರೆ ಎಲ್ಲಿಲ್ಲದ ಪ್ರೀತಿ ಆದ್ದರಿಂದ ಈ ಹಬ್ಬದಂದು ವಿಶಿಷ್ಟ ಭಕ್ಷಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವುದು:
ಗಣೇಶ ಹಬ್ಬ ರಾಷ್ಟ್ರೀಯ ಹಬ್ಬವಾದುದರಿಂದ ದೇಶದ ಎಲ್ಲ ಕಡೆಗಳಲ್ಲಿಯೂ ಸಹ ಗಣೇಶ ಹಬ್ಬವನ್ನು ಆಚರಿಸುವುದನ್ನು ಕಾಣುತ್ತೇವೆ. ಅದರಲ್ಲೂ ಸಹ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾಗಗಳಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶ ಹಬ್ಬದಂದು ನಗರದ ಬೀದಿಗಳಲ್ಲಿ ಗಣೇಶ ವಿಗ್ರಹಗಳನ್ನು ಕುಳ್ಳಿರಿಸಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಸಾರ್ವಜನಿಕರಿಗೆ ಮನೋರಂಜನೆಯನ್ನು ನೀಡುತ್ತಾರೆ. ಸಾರ್ವಜನಿಕವಾಗಿ ಗಣಪತಿಯನ್ನು ೩ ಅಥವಾ ೭ ದಿನಗಳಲ್ಲಿ ವಿಸರ್ಜಿಸುತ್ತಾರೆ. ಕೆಲವೊಂದು ಮನೆಗಳಲ್ಲಿಯೂ ಕೂಡ ಗಣಪತಿಯ ವಿಗ್ರಹಗಳನ್ನು ಇಡುತ್ತಾರೆ. ಮನೆಯಲ್ಲಿ ಇಟ್ಟ ಗಣಪತಿಯನ್ನು ಅದೇ ದಿನದಂದು ನೀರಿಗೆ ವಿಸರ್ಜಿಸಬೇಕು ಎನ್ನುವುದು ಕೆಲವರ ಮಾತು. ಕೆಲವೊಂದು ಸಂಘ ಸಂಸ್ಥೆಗಳು ಇಡುವ ಗಣಪತಿಯು ಒಂದು ವಾರ ಅಥವಾ ಮೂರು ದಿನಗಳ ನಂತರ ಅತ್ಯಂತ ಸಡಗರಿಂದ ವಿರ್ಸಜಿಸಲಾಗುತ್ತದೆ. ಗಣಪತಿಯ ವಿರ್ಸಜನೆಯನ್ನು ನೋಡಲು ಜನರು ಕ್ಕಿಕ್ಕಿರಿದು ಸೇರುತ್ತಾರೆ.

ಗೌರಿ-ಗಣೇಶ ಹಬ್ಬ ಎರಡನ್ನು ಜತೆಯಲ್ಲಿಯೇ ಆಚರಿಸಲಾಗುತ್ತಿದ್ದು, ಇದು ದೇವರಾಧನೆಯ ಹಬ್ಬವಾದರೂ ಇದರ ಮೂಲತತ್ವ ಸಾಂಸ್ಕ್ರತಿಕ ಹಿನ್ನೆಲೆಯಿಂದ ಕೂಡಿದೆ. ಯಾವುದೇ ಹಬ್ಬವಾದರೂ ಕೂಡ ಮನೆ ಮಂದಿ ಸೇರಿ ಆಚರಿಸುವುದರೊಂದಿಗೆ ಐಕ್ಯತೆಯ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಇಂದು ನಾವು ಆಚರಿಸುವ ಹಬ್ಬದ ಮುಂದಿನ ನಮ್ಮ ಪೀಳಿಗೆ ಇದರ ಮಹತ್ವ ತಿಳಿಯಬೇಕು. ಹಬ್ಬ ಹರಿದಿನಗಳು ಕೇವಲ ಶೀಕಿಯಾಗದೇ ನಮ್ಮ ಧರ್ಮ ನಮ್ಮ ತನವನ್ನು ಎತ್ತಿ ಇಡಿಯಬೇಕು. ಇದು ನಮ್ಮ ಆಶಯ.

 

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಆನಂದ ಕೆ. ಅಸೈಗೋಳಿ ನೂತನ ಸದಸ್ಯರಾಗಿ ನೇಮಕ

June 26, 2026

ಬಹುಮುಖ ಪ್ರತಿಭೆಯ ಸುರೇಶ್ ಕೆ. ರಾವ್ ಅವರಿಗೆ ಪ್ರತಿಷ್ಠಿತ ಡಾ. ವಿಷ್ಣುವರ್ಧನ್ ಪ್ರಶಸ್ತಿ

June 25, 2026

ಪ್ರತೀ ಗಲ್ಲಿಗಳ ಅಭಿವೃದ್ಧಿ, ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಬಿಜೆಪಿ ಧ್ಯೇಯ,ಉದ್ದೇಶ; ಎಂಎಲ್ಸಿ ಕಿಶೋರ್ ಕುಮಾರ್

June 25, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಮಾತೃಶ್ರೀ ಬಡಾವಣೆಯ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ರ ಮನೆಯ ದಾರಿಗೆ ಅನುದಾನ ಮಂಜೂರಾದರೂ, ಟೆಂಡರ್‌ ಪೂರ್ಣಗೊಂಡಿಲ್ಲ : ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್

By UllalaVaniJune 26, 20260

ಕೋಟೆಕಾರು: 11ನೇ ವಾರ್ಡಿನ ಶಾಸ್ತಾವು ಮಾತೃಶ್ರೀ ಬಡಾವಣೆಯ ನಿವಾಸಿ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ಅವರ ಮನೆಗೆ ಹೋಗಲು ಇರುವ…

ʻಶಾಸಕರು ಅರ್ಧ ಬಿಟ್ಟ ಕಾಂಕ್ರೀಟಿಕರಣವನ್ನು ನಾನೇ ಪೂರ್ಣಗೊಳಿಸುತ್ತೇನೆ ʼ : ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ , ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟನೆಯಲ್ಲಿ ಭರವಸೆ

June 26, 2026

ಗ್ಯಾಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಅಗತ್ಯ – ಅಡುಗೆ ಅನಿಲವನ್ನು ಮೂಲಭೂತ ಹಕ್ಕಾಗಿ ಘೋಷಿಸಲಿ

June 26, 2026

ಮಂಗಳೂರು: ಡ್ರಗ್ ಸರಬರಾಜು ಮಾಡುತ್ತಿದ್ದ ಓರ್ವ ಆರೋಪಿಯ ಸೆರೆ

June 26, 2026
1 2 3 … 1,986 Next
Automatic YouTube Gallery

೫ ಲಕ್ಷ ರೂ.ಸಣ್ಣ ರಸ್ತೆ ಕಾಮಗಾರಿಗೆ ಸಚಿವ ಯು.ಟಿ.ಖಾದರ್‌ ಅವರು ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
೫ ಲಕ್ಷ ರೂ.ಸಣ್ಣ  ರಸ್ತೆ ಕಾಮಗಾರಿಗೆ   ಸಚಿವ ಯು.ಟಿ.ಖಾದರ್‌ ಅವರು   ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ.
Now Playing
೫ ಲಕ್ಷ ರೂ.ಸಣ್ಣ ರಸ್ತೆ ಕಾಮಗಾರಿಗೆ ಸಚಿವ ಯು.ಟಿ.ಖಾದರ್‌ ಅವರು ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ.
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಡ್ಯಾರ್ ಗಾರ್ಡನ್: ಯುವಕರಿಗೆ ದೊಡ್ಡ ಕನಸು ಕಾಣುವಂತೆ ಶಾರುಖ್ ಖಾನ್ ಪ್ರೇರಣಾದಾಯಕ ಸಂದೇಶ
Now Playing
ಅಡ್ಯಾರ್ ಗಾರ್ಡನ್: ಯುವಕರಿಗೆ ದೊಡ್ಡ ಕನಸು ಕಾಣುವಂತೆ ಶಾರುಖ್ ಖಾನ್ ಪ್ರೇರಣಾದಾಯಕ ಸಂದೇಶ
ಮoಗಳೂರಿನಲ್ಲಿ ಶಾರುಖ್ ಖಾನ್ ಮಿಂಚು; ರೋಹನ್ ಕಾರ್ಪೊರೇಶನ್ ಅದ್ಧೂರಿ ಕಾರ್ಯಕ್ರಮ ...
ಮoಗಳೂರಿನಲ್ಲಿ ಶಾರುಖ್ ಖಾನ್ ಮಿಂಚು; ರೋಹನ್ ಕಾರ್ಪೊರೇಶನ್ ಅದ್ಧೂರಿ ಕಾರ್ಯಕ್ರಮ

'ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್'ಗೆ ಅಡ್ಯಾರ್ ಗಾರ್ಡನ್ ಸಾಕ್ಷಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version