Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಹೆಚ್ಚುವರಿ ಬೀದಿದೀಪಗಳ ಅಳವಡಿಕೆ, ಅಲ್ಲಲ್ಲಿ ಸಿ.ಸಿಟಿವಿ ಪೌರಕಾರ್ಮಿಕರ ನಿಯುಕ್ತಿ, ಕೋಟೆಕಾರು ಪ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ

UllalaVaniBy UllalaVaniNovember 4, 2024Updated:November 4, 2024No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧಿಕಾರಿಗಳ ವಿಳಂಬದಿಂದಾಗಿ ತಡವಾಗಿ ಆರಂಭವಾಗಿದ್ದು, ಮೊದಲ ಹಂತದಲ್ಲಿ ಸಭೆ ರದ್ದತಿಗೆ ಕೌನ್ಸಿಲರುಗಳು ಒತ್ತಾಯಿಸಿದರೂ ಬಳಿಕ ಅಧಿಕಾರಿಗಳ ಆಗಮನದಿಂದ ಒಂದು ಗಂಟೆ ತಡವಾಗಿ ಆರಂಭವಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೋಟೆಕಾರು ಪಟ್ಟಣ ಪಂಚಾಯತ್ ನ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಸಿಸಿಟವಿ ಅಳವಡಿಕೆ, ಹುಲ್ಲು ಕಡಿಯುವ ಯಂತ್ರ ಚಾಲನೆಗೆ ಹೆಚ್ಚುವರಿ ಪೌರಕಾರ್ಮಿಕರ ನಿಯುಕ್ತಿ, ಸರಕಾರಿ ಜಾಮೀನು ಅತಿಕ್ರಮಣದ ಕುರಿತು ಕ್ರಮ, ಪ್ರತಿಯೊಂದು ಕೌನ್ಸಿಲರ್ ಗೆ 25 ಎಲ್ ಇಡಿ ಬೀದಿ ದೀಪಗಳು , 125 ಮನೆಗಳ ಡೋರ್ ನಂಬರ್ ರದ್ದುಗೊಳಿಸುವಿಕೆ ಮಾಡದೇ ಹಿಂದಿನಂತೆಯೇ ಮುಂದುವರಿಸಲಾಗುವುದು ಎಂದರು.
ವಾರ್ಡ್ 11 ರ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್ ಮಾತನಾಡಿ, ಕಳೆದ 30 ವರ್ಷಗಳಿಂದ ಮನೆ ಕಟ್ಟಿ ನೆಲೆಸಿರುವ 120 ಮನೆಮಂದಿ ಸಂಕಷ್ಟದಲ್ಲಿದ್ದಾರೆ. ಮನೆ ಕಟ್ಟಿರುವ ಭೂಮಿಯ ಒಡೆಯ ಬೇರೆಯವರಾಗಿದ್ದು, ಆರ್ ಟಿಸಿ ಎಲ್ಲವೂ ಅವರ ಹೆಸರಿನಲ್ಲಿದೆ. ಮೋಸದಲ್ಲಿ ಭೂಮಿಯನ್ನು ಅಷ್ಟೂ ಮನೆಮಂದಿಗೆ ಮಾರಾಟ ಮಾಡಲಾಗಿದೆ. ಇದೀಗ ಬಿಲ್ಡರ್ ಓರ್ವರು ಖಾಸಗಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ 120 ಮನೆಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಡೋರ್ ನಂಬರ್ ರದ್ದುಗೊಳಿಸಲು ಬಂದಿರುವ ಆದೇಶವನ್ನು ಗ್ರಾ.ಪಂ ನ್ಯಾಯಾಲಯದ ತೀರ್ಪಿಗೆ ಬಿಟ್ಟಂತೆ, ಈ ಬಾರಿಯೂ 120 ಮನೆಮಂದಿಗೆ ತೊಂದರೆಯಾಗದಂತೆ ಅದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬಡ ಅರ್ಹ ಫಲಾನುಭವಿಗಳಿಗೆ ಕೋಟೆಕಾರು ಪ.ಪಂ ವ್ಯಾಪ್ತಿಯಲ್ಲಿರುವ 80 ಎಕರೆ ಜಮೀನಿನಲ್ಲಿ ನಿವೇಶನ ನೀಡಬೇಕಿದೆ. ಇಲವಾದಲ್ಲಿ ಸರಕಾರಿ ಭೂಮಿಯನ್ನು ಭುಮಾಫಿಯಾದವರು ಮಾರುವ ಭೀತಿಯಿದೆ. ತನ್ನ ವಾರ್ಡು 11 ರ ಸರ್ವೆ ನಂಬರ್ 222,226,222 ರಲ್ಲಿ 12 ಎಕರೆ ಸರಕಾರಿ ಜಮೀನು ಇದೆ. ಕ್ರೀಡಾಂಗಣ ಮತ್ತು ಬಯಲು ರಂಗ ಮಂಟಪಕ್ಕೆ ಅದನ್ನು ಮೀಸಲಿಡಬೇಕು. ಈ ಕುರಿತು ಎರಡು ವರ್ಷಗಳ ಹಿಂದೆ ಮನವಿ ಸಲ್ಲಿಸಿದ್ದೇನೆ. ಮುಖ್ಯಾಧಿಕಾರಿ ನಿರ್ಣಯ ನಡೆಸಿ ತಹಶೀಲ್ದಾರ್ ಅವರಿಗೆ ಕಳುಹಿಸಿದರೂ ಈವರೆಗೆ ಸ್ಪಂಧನೆ ಸಿಕ್ಕಿಲ್ಲ. ಕ್ರೀಡಾಂಗಣ, ಬಯಲುರಂಗಮಂದಿರದ ನಿರ್ಮಾಣದ ಮೂಲಕ ಸರ್ವೆ ನಂಬರ್ 226-2ಎ ರಲ್ಲಿ 65 ವರ್ಷಗಳಿಂದ ವಾಸಿಸುತ್ತಿರುವ 8 ಮನೆಗಳ ಮೂಲಭೂತ ಸೌಕರ್ಯಗಳಲ್ಲೊಂದಾದ ದಾರಿ ವ್ಯವಸ್ಥೆಯೂ ಸರಿಯಾಗಲಿದೆ. ಪಟ್ಟಣ ಪಂಚಾಯತ್ ಉದ್ದಕ್ಕೂ ಸರಕಾರಿ ಜಮೀನು ಸರ್ವೆ ನಡೆಸಿ ಗಡಿಗುರುತು ನಡೆಸಬೇಕಿದೆ ಎಂದರು.
ಕೌನ್ಸಿಲರ್ ಅಹಮ್ಮದ್ ಬಾವಾ ಕೋಟೆಕಾರು ಮಾತನಾಡಿ, ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಕಳೆದ 30 ವರ್ಷಗಳಿಂದ ವಸತಿ ರಹಿತರು ಬಾಡಿಗೆ ಮನೆಯಲ್ಲಿ ನೆಲೆಸಿದ್ದರೂ, ನಿವೇಶನ ನೀಡುವ ವ್ಯವಸ್ಥೆಗಳಾಗುತ್ತಿಲ್ಲ. ಮೂರು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಕ್ರೀಡಾಂಗಣವೇ ಇಲ್ಲ. ಈ ನಡುವೆ 14ನೇ ವಾರ್ಡು ನಡುಕುಮೇರು ಎಂಬಲ್ಲಿ ಪಾರ್ಕ್ ಮತ್ತು ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಜಾಗ ಮೀಸಲಿಟ್ಟಿರುವುದು ಸಮಂಜಸವಲ್ಲ. ಅದನ್ನು ರದ್ದುಪಡಿಸಿ ವಸತಿ ರಹಿತರಿಗೆ 2.5 ಸೆಂಟ್ಸ್ ನಂತೆ ಜಾಗ ನೀಡಿ ವಸತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದು ಮಾನವೀಯತೆ. ಪಟ್ಟಣ ಪಂಚಾಯತ್ ನ ಹೆಚ್ಚಿನ ಕಡೆ ಈಗಲೂ ತಾತ್ಕಾಲಿಕ ವಿದ್ಯುತ್ ಕನೆಕ್ಷನ್ನಿನಡಿ ದಾರಿದೀಪ, ನೀರು ಪಂಪ್ ಚಲಿಸುತ್ತಿದೆ. ಇದರಿಂದ ಮೆಸ್ಕಾಂ ಗೆ ದುಬಾರಿ ಬಿಲ್ ಪಟ್ಟಣ ಪಂಚಾಯತ್ ಖಜಾನೆಯಿಂದ ಪಾವತಿಸಬೇಕಿದೆ. ತುರ್ತಾಗಿ ಶಾಶ್ವತ ಕನೆಕ್ಷನ್ ನಿರ್ಮಿಸುವಂತೆ ಒತ್ತಾಯಿಸಿದರು. ಅಲ್ಲದೆ ದಾರಿದೀಪಗಳು ಸಮರ್ಪಕವಾಗಿಲ್ಲ. ದುಬಾರಿ ಬಿಲ್ ದಾರಿದೀಪಗಳಿಂದ ಬರುತ್ತಿರುವುದರಿಂದ ಎಲ್ ಇಡಿ ಬಲ್ಬ್ ಅಳವಡಿಸಿದಲ್ಲಿ ಕಡಿಮೆ ವೆಚ್ಛದಲ್ಲಿ ನಿರ್ವಹಣೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಕೌನ್ಸಿಲರ್ ಗೆ 25 ದಾರಿದೀಪಗಳನ್ನು ಅಳವಡಿಸುವ ನಿರ್ಣಯ ಕೈಗೊಳ್ಳಲಾಯಿತು.
ಕೌನ್ಸಿಲರ್ ಸುಜಿತ್ ಮಾಡೂರು ಮಾತನಾಡಿ, ಕೋಟೆಕಾರು ಪಟ್ಟಣ ಪಂಚಾಯತ್ ಕಚೇರಿಗೆ ಬರುವ ಗ್ರಾಮಸ್ಥರಿಗೆ ಮಧ್ಯಾಹ್ನದವರೆಗೂ ಪ್ರತಿಯೊಬ್ಬ ಅಧಿಕಾರಿಗಳು ಲಭ್ಯವಿರಬೇಕು. ಮಧ್ಯಾಹ್ನ ನಂತರ ಕಚೇರಿಯಿಂದ ಹೊರಹೋಗುವ ಕೆಲಸಗಳನ್ನು ನಿರ್ವಹಿಸಬೇಕು. ನಗರೋತ್ಥಾನ ಕಾಮಗಾರಿಗಳು ಬಾಕಿಯುಳಿದಿದ್ದು, ತ್ವರಿತಗತಿಯಲ್ಲಿ ನಿರ್ವಹಿಸಬೇಕಿದೆ. 10 ವರ್ಷಗಳ ಹಿಂದೆ ವಸತಿ ರಹಿತರು ಅರ್ಜಿ ಸಲ್ಲಿಸಿದರೂ ಈವರೆಗೆ ದೊರೆತಿಲ್ಲ, ಕಾನೂನು ತೊಡಕುಗಳು ಇದ್ದರೂ ಸರಿಪಡಿಸಿ ಸಿಗುವಂತೆ ಮಾಡಬೇಕು. ನೀರು ಬಿಡುವವರ ವೇತನ ಬಹಳಷ್ಟು ಕಡಿಮೆಯಿದ್ದು, ವೇತನ ಜಾಸ್ತಿಗೊಳಿಸಬೇಕು. ಪಂಚಾಯಿತಿಗೆ ಬರುವ ಪ್ರತಿಯೊಬ್ಬನ ಕೆಲಸಗಳನ್ನು ಕೈಗೊಳ್ಳಲು ಮುಂಚಿತವಾಗಿ ಕೆವೈಸಿ ಎಂಟ್ರಿ ನಡೆಸಿ ಟಪಾಲ್ ಎಂಟ್ರಿ ಮಾಡಬೇಕು. ಇದರಿಂದ ಬ್ರೋಕರ್ ಗಳ ಹಾವಳಿ ತಪ್ಪುತ್ತದೆ, ನಾಗರಿಕರೇ ಖುದ್ದಾಗಿ ಹೆಚ್ಚುಹಣ ಕಳೆದುಕೊಳ್ಳದೇ ತಮ್ಮ ಕೆಲಸಕಾರ್ಯಗಳನ್ನು ತ್ವರಿತವಾಗಿ ನಡೆಸಲು ಸಾಧ್ಯ. ಹಕ್ಕುಪತ್ರ ಅರ್ಹ ಬಡವರಿಗೆ ಸಿಗಬೇಕಿದೆ. ಆದರೆ ನಡುಕುಮೇರು ಜಂಕ್ಷನ್ ಸಮೀಪ ಹಕ್ಕುಪತ್ರಗಳನ್ನು ಪಡೆದು ದುರ್ಬಳಕೆ ಮಾಡಲಾಗಿದೆ. ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ನೀಡಿರುವ ಕುರಿತು ಪ.ಪಂ ಆಡಳಿತ ನೋಟೀಸು ನೀಡಿದರೂ ಈವರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಪೌರಕಾರ್ಮಿಕರು ಸರಿಯಾಗಿ ತ್ಯಾಜ್ಯ ವಿಲೇವಾರಿ ನಡೆಸುತ್ತಿಲ್ಲ. ಕೌನ್ಸಿಲರ್ ಗಳ ಜೊತೆಗೆ ಉಡಾಫೆ ಮಾತನಾಡುವವರು ಸಾಮಾನ್ಯ ಜನರೊಂದಿಗೆ ಹೇಗೆ ವರ್ತಿಸುತ್ತಾರೆ?. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಿದೆ. ಹುಲ್ಲು ಕತ್ತರಿಸಲು ಯಂತ್ರಗಳನ್ನು ಖರೀದಿಸಲಾಗಿದೆ. ಆದರೆ 10 ಮಂದಿ ಪೌರಕಾರ್ಮಿಕರಿಂದ ಹುಲ್ಲು ಕತ್ತರಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ 10 ಲಕ್ಷ ಟೆಂಡರ್ ನಡೆಸಿ ಹುಲ್ಲು ಕತ್ತರಿಸಲಾಗುತ್ತಿದೆ. ಟೆಂಡರ್ ಪಡಕೊಂಡವರು ಕೇವಲ ಮೂರು ತಿಂಗಳು ಮಾತ್ರ ಕೆಲಸ ನಿರ್ವಹಿಸುತ್ತಾರೆ. ಇದರಿಂದ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿದಲ್ಲಿ ಸ್ವಂತ ಹುಲ್ಲು ಕತ್ತರಿಸುವ ಯಂತ್ರವನ್ನು ಅವರ ಮೂಲಕವೇ ಉಪಯೋಗಿಸಬಹುದು. ವರ್ಷವಿಡೀ ಹುಲ್ಲು ಕತ್ತರಿಸಲು ಸಾಧ್ಯ, ಟೆಂಡರ್ ಹಣವೂ ಉಳಿತಾಯವಾಗುವುದು.
ವಾರ್ಡ್ ನಂಬರ್ 8ರ ಕೌನ್ಸಿಲರ್ ಅಹಮ್ಮದ್ ಇಸಾಕ್ ಜಿ.ಐ , ಕಾಲುಸಂಕ , ಕಿಂಡಿ ಅಣೆಕಟ್ಟುಗಳ ಸಮೀಪ ಹೊರಗಿನವರು ಬಂದು ತ್ಯಾಜ್ಯವನ್ನು ಎಸೆದು ನಾಪತ್ತೆಯಾಗುತ್ತಿದ್ದಾರೆ. ತನ್ನ ವಾರ್ಡ್ ಸೋಮೇಶ್ವರ-ಕೋಟೆಕಾರು ಗ್ರಾಮದ ಗಡಿಪ್ರದೇಶವಾಗಿರುವುದರಿಂದ ಹೊರಗಿನಿಂದ ಬರುವವರು ತ್ಯಾಜ್ಯ ಎಸೆಯುವ ಸಂಶಯವೂ ಇದೆ. ಇದನ್ನು ಪ.ಪಂ ಆಡಳಿತ ಗಂಭೀರವಾಗಿ ಪರಿಗಣಿಸಿ ಸಿ.ಸಿ ಕ್ಯಾಮರಾ ಅಳವಡಿಸಬೇಕಿದೆ. ಈ ಮೂಲಕ ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದರು.
ಕೌನ್ಸಿಲರ್ ಧೀರಜ್ ಕುಸಾಲ್ ನಗರ ಮಾತನಾಡಿ, ಮಾಡೂರು ಹಿಂದೂ ರುದ್ರಭೂಮಿಯಲ್ಲಿ ಸಮಯ ನಿಗದಿಪಡಿಸಬೇಕಿದೆ. ಸ್ಥಳೀಯ ಜನವಸತಿ ಪ್ರದೇಶವಾಗಿರುವುದರಿಂದ ರಾತ್ರಿ ಅಂತಿಮ ಸಂಸ್ಕಾರ ನಡೆಸುವಾಗ ದೂರುಗಳು ಕೇಳಿಬರುತ್ತಿವೆ. ಆದರೆ ಹಿಂದೂ ರುದ್ರಭೂಮಿ ಇರುವಾಗ ಮನೆಗಳ ಸಂಖ್ಯೆ ಕಡಿಮೆಯಿತ್ತು, ಇದೀಗ ಹೆಚ್ಚಾಗಿವೆ. ಈ ಬಗ್ಗೆ ಹಿಂದೂ ರುದ್ರಭೂಮಿ ಸಮಿತಿಯವರಲ್ಲಿ ಪಂಚಾಯಿತಿ ಆಡಳಿತ ವರದಿ ಕೇಳಬೇಕು. ಆಡಳಿತ ವ್ಯವಸ್ಥೆ ಸುಧಾರಣೆ ನಡೆಸುವ ಕುರಿತು ಪ್ರಸ್ತಾಪ ನಡೆಸಿದರು. ಪ.ಪಂ ಕೌನ್ಸಿಲರುಗಳಿಗೆ ಈವರೆಗೆ ಗುರುತಿನ ಚೀಟಿಯನ್ನು ನೀಡಲಾಗಿಲ್ಲ. ಇದರಿಂದಾಗಿ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲರೂ ಕಷ್ಟಪಡುವಂತಾಯಿತು. ಕೌನ್ಸಿಲರುಗಳ ಪಾಸ್ ಬುಕ್ ನ್ನು ಪಡೆದುಕೊಳ್ಳಲಾಗಿಲ್ಲ. ಗೌರವ ಧನ ಪಾವತಿಯೂ ಸಾಧ್ಯವಾಗಿಲ್ಲ. ಪಟ್ಟಣ ಪಂಚಾಯತ್ ನ ಟೆಂಡರ್ ನಿಂದ ಹಿಡಿದು ನಡೆಯುವ ಪ್ರತಿಯೊಂದು ಪ್ರಕ್ರಿಯೆಗಳು ಕೌನ್ಸಿಲರುಗಳ ಗಮನಕ್ಕೆ ತನ್ನಿ ಎಂದು ಒತ್ತಾಯಿಸಿದರು.
13 ನೇ ವಾರ್ಡಿನ ಎಸ್ ಡಿಪಿಐನ ಕೌನ್ಸಿಲರ್ ಸೆಲೀಮಾಬಿ ಮತ್ತು ನಾಮನಿರ್ದೇಶಿತ ಸದಸ್ಯೆ ಕಾಂಗ್ರೆಸ್ಸಿನ ಸಫಿಯಾ ಇಬ್ಬರ ನಡುವೆ ಗೃಹಲಕ್ಷ್ಮೀ ಯೋಜನೆ ಮತ್ತು ಅಂಗನವಾಡಿ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆಯಿತು. ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿ ನಡೆದ ವಾಗ್ವಾದ ವೈಯಕ್ತಿಕ ಹಂತಕ್ಕೆ ತಲುಪಿತ್ತು. ಅಧ್ಯಕ್ಷರ ಸಾಮಧಾನಕರ ಮಾತುಗಳಿಂದ ಸಾಮಾನ್ಯ ಸಭೆಯಲ್ಲಿ ರಾಜಕೀಯ ತರುವುದು ಸಮಂಜಸವಲ್ಲ ಅನ್ನುವ ವಿಚಾರದಲ್ಲಿ ಇಬ್ಬರ ವಾಗ್ವಾದದ ಮುಕ್ತಾಯದ ಜೊತೆಗೆ ಸಭೆಯೂ ಮುಕ್ತಾಯಗೊಂಡಿತು.
ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ ಉಪಸ್ಥಿತರಿದ್ದರು.

ಅಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ಭಾಗಿಯಾಗಬೇಕೆಂದೇನಿಲ್ಲ !
ಗ್ರಾಮಕರಣಿಕ ನವ್ಯಾ ಅವರು ಸಭೆಯ ನಡುವೆ ಮಾತನಾಡಿ,ಸಾಮಾನ್ಯ ಸಭೆಗಳಲ್ಲಿ ಅಧಿಕಾರಿಗಳ ಭಾಗಿ ಕಡ್ಡಾಯವೇನಲ್ಲ. ಎಲ್ಲಿಯೂ ಕಾನೂನಿನಲ್ಲಿ ಇಲ್ಲ. ಇದಕ್ಕೆ ಕೌನ್ಸಿಲರ್ ಸುಜಿತ್ ಪ್ರತಿಕ್ರಿಯಿಸಿ ಕೋಟೆಕಾರು ಪ.ಪಂ ಸಾಮಾನ್ಯ ಸಭೆ 3 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿದೆ. ಬಹುತೇಕ ಕೌನ್ಸಿಲರುಗಳಿಗೆ ಕಂದಾಯ ಇಲಾಖೆಯ ಮಾಹಿತಿಗಳಲ್ಲಿ ಗೊಂದಲವಿರುವುದರಿಂದ ಗ್ರಾಮಕರಣಿಕರ ಉಪಸ್ಥಿತಿ ಅಗತ್ಯ ಇರಬೇಕು. ಅಲ್ಲದೆ ಕೋಟೆಕಾರು ಗ್ರಾಮ ಕರಣಿಕರಾಗಿರುವುದರಿಂದ ಉಪಸ್ಥಿತಿ ಅವ್ಯಶ್ಯವಾಗಿರಬೇಕು. ಹಾಗೆಂದು ಕಾನೂನು ಇದ್ದಲ್ಲಿ ಮುಖ್ಯಾಧಿಕಾರಿಯವರಲ್ಲಿ ಲಿಖಿತ ರೂಪದಲ್ಲಿ ತಿಳಿಸಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಗೊಂದಲಗಳಿದ್ದಲ್ಲಿ ಎಲ್ಲವನ್ನೂ ಪರಿಹರಿಸುತ್ತೇನೆ. ಹಿರಿಯ ಅಧಿಕಾರಿಗಳು ಸಭೆ ಕರೆದಿರುವುದರಿಂದ 128 ಕಡತಗಳನ್ನು ಸಿದ್ಧಪಡಿಸಬೇಕಿದೆ. ಅದಕ್ಕಾಗಿ ಸಭೆಯಿಂದ ನಿರ್ಗಮಿಸುವುದು ಅನಿವಾರ್ಯ ಎಂದಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರ್–ಹಿದಾಯತ್ ನಗರದಲ್ಲಿ ಕೃತಕ ನೆರೆ: ಮಳೆಗೆ ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

May 13, 2026

ಬದ್ರಿಯಾ ವೆಲ್ಫೇರ್ ಸೊಸೈಟಿ ಅಜ್ಜಿನಡ್ಕ (ರಿ) ಇದರ 40 ನೇ ವಾರ್ಷಿಕದ ಅಂಗವಾಗಿ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

May 11, 2026

ಅರಬ್ಬೀ ಸಮುದ್ರದಲ್ಲಿ ಸಿಲುಕಿದ್ದ ಭಾರತದ ಹಡಗನ್ನು ರಕ್ಷಿಸಿದ ಪಾಕ್‌..!!

May 8, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
KARNATAKA

ಕುಕ್ಕೆ ಸುಬ್ರಹ್ಮಣ್ಯ – ದೇವರ ದರ್ಶನ ಸಮಯದಲ್ಲಿ ಬದಲಾವಣೆ

By UllalaVaniMay 13, 20260

ಕಡಬ, ಮೇ. 13 ;ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ ಇದೀಗ…

ಮಂಗಳೂರು ವಿವಿಯಲ್ಲಿ ಏ.27ರಂದು ರಕ್ತದಾನ ಶಿಬಿರ

May 13, 2026

ಮಂಗಳೂರು ವಿವಿಯಲ್ಲಿ ‘ಸಂಭ್ರಮ-2026’ ಉದ್ಘಾಟನೆ

May 13, 2026

ಇಂಧನ ಉಳಿತಾಯಕ್ಕೆ ಕ್ರಮ- ಮೋದಿ ಭದ್ರತಾ ವಾಹನಗಳ ಸಂಖ್ಯೆಯಲ್ಲಿ 50% ಕಡಿತ

May 13, 2026
1 2 3 … 1,914 Next
Automatic YouTube Gallery

ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ

ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ

ತಿಲಕ್ ನಗರದಲ್ಲಿ ನೀರಿಗಾಗಿ ಗ್ರಾಮಸ್ಥರ ಆಕ್ರೋಶ; ಮೂರು ತಿಂಗಳಿAದ ನೀರಿಲ್ಲದೆ ಜನರ ಪರದಾಟ

ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪಿಡಿಒ ಭರವಸೆ
📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ
Now Playing
ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ
ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿಗೆ ...
ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ

ತಿಲಕ್ ನಗರದಲ್ಲಿ ನೀರಿಗಾಗಿ ಗ್ರಾಮಸ್ಥರ ಆಕ್ರೋಶ; ಮೂರು ತಿಂಗಳಿAದ ನೀರಿಲ್ಲದೆ ಜನರ ಪರದಾಟ

ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪಿಡಿಒ ಭರವಸೆ
📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಜ್ಜಿನಡ್ಕ:: ಧಾರಕಾರ ಸುರಿದ ಮಳೆ ಪರಿಣಾಮ ಮನೆಗೆ ನುಗ್ಗಿದ ನೀರು..!!
Now Playing
ಅಜ್ಜಿನಡ್ಕ:: ಧಾರಕಾರ ಸುರಿದ ಮಳೆ ಪರಿಣಾಮ ಮನೆಗೆ ನುಗ್ಗಿದ ನೀರು..!!
ಅಜ್ಜಿನಡ್ಕದಲ್ಲಿ ಭಾರೀ ಮಳೆ;ಅಜ್ಜಿನಡ್ಕ ನಿವಾಸಿ ಅಬ್ದುಲ್ಲರ ಮನೆಗೆ ನುಗ್ಗಿದ ...
ಅಜ್ಜಿನಡ್ಕದಲ್ಲಿ ಭಾರೀ ಮಳೆ;ಅಜ್ಜಿನಡ್ಕ ನಿವಾಸಿ ಅಬ್ದುಲ್ಲರ ಮನೆಗೆ ನುಗ್ಗಿದ ಮಳೆನೀರು

ರಾತ್ರಿ ಪೂರ್ತಿ ನೀರು ಹೊರಹಾಕಿದ ಕುಟುಂಬಸ್ಥರು;ಕ್ರಮಕ್ಕೆ ಸ್ಥಳೀಯರ ಆಗ್ರಹ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version