UN networks
ಉಳ್ಳಾಲ: ಜಿಲ್ಲೆಯಲ್ಲಿ ಲವ್ ಜಿಹಾದ್, ಭಯೋತ್ಪಾಧನೆ , ಗೋ ಕಳವು ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ, ಇಲ್ಲಿನ ಮುಸ್ಲಿಂ ಶಿಕ್ಷಣ ಸಂಸ್ಥೆಯ ಮಾಲೀಕರು, ಉದ್ದಿಮೆದಾರರು, ಮುಸ್ಲಿಂ ಸಂಘಟನೆಗಳು ಮೌನವಾಗಿ ಕುಳಿತಿರುವುದು ದೇಶವನ್ನು ಇಸ್ಲಾಮೀಕರಣಗೊಳಿಸುವ ಸಂಚಿಗೆ ಬೆಂಬಲಿಸುವAತಿದೆ ಎಂದು ಉಳ್ಳಾಲ ಪ್ರಖಂಡದ ವಿ.ಹಿಂ.ಪ ಅಧ್ಯಕ್ಷ ಬಿ.ನಾರಾಯಣ ಕುಂಪಲ ಹೇಳಿದರು.






ಅವರು ವಿಶ್ವ ಹಿಂದು ಪರಿಷತ್ , ಬಜರಂಗದಳ ಉಳ್ಳಾಲ ಪ್ರಖಂಡ ಕರಾವಳಿಯ ಭದ್ರತೆಗೆ ಸವಾಲು ಒಡ್ಡುವ ಭಯೋತ್ಪಾಧನೆ ಹಾಗೂ ಲವ್ ಜಿಹಾದ್ ವಿರುದ್ಧ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸೋಮವಾರ ಹಮ್ಮಿಕೊಂಡ ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶವನ್ನು ಇಸ್ಲಾಮೀಕರಣಗೊಳಿಸುವ ಸಂಚು ಬಹಳ ವರ್ಷಗಳಿಂದ ನಡೆಯುತ್ತಾ ಬಂದಿದೆ. ೨೦೦೮ ರಲ್ಲಿ ಮುಂಬೈ ದಾಳಿ ನಡೆಸುವಾಗ ಕೈಗೆ ಕೇಸರಿ ಕಟ್ಟಿಕೊಂಡರೂ ಸೆರೆಸಿಕ್ಕ ಕಸಬ್ ನಿಂದ ಮುಸ್ಲಿಂ ಭಯೋತ್ಪಾಧಕರೆಂದು ಜಗಜ್ಜಾಹೀರಾಯಿತು. ಪಂಪ್ ವೆಲ್ ನಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟದ ಸಂದರ್ಭವು ಇಂತಹದ್ದೇ ಕೇಸರಿ ಕೈಗೆ ಕಟ್ಟಿ ಹಿಂದೂ ಭಯೋತ್ಪಾಧನೆಯ ಹಣೆಪಟ್ಟಿ ಕಟ್ಟಲು ಹೊರಟಿದ್ದಾರೆ. ಉಳ್ಳಾಲದ ಚೆಂಬುಗುಡ್ಡೆ, ಮುಕ್ಕಚ್ಚೇರಿ ಹಾಗೂ ಇತ್ತೀಚೆಗೆ ಮಾಜಿ ಶಾಸಕರ ಸಂಬAಧಿಯೇ ಶಂಕಿತ ಉಗ್ರರಾಗಿ ಬಂಧಿಸಲ್ಪಟ್ಟಿದ್ದಾರೆ. ಈ ಮೂಲಕ ಮಾಜಿ ಶಾಸಕರ ಪಕ್ಷದವರು ಭಯೋತ್ಪಾಧನೆಗೆ ಪ್ರೋತ್ಸಾಹ ಕೊಡುತ್ತಿರುವ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಹಲವು ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ಮುಸ್ಲಿಮರು ನಡೆಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ನಡೆಯುವ ಭಯೋತ್ಪಾಧನೆ, ಗೋ ಕಳವು, ಲವ್ ಜಿಹಾದ್ ವಿರುದ್ಧ ಪ್ರತಿಭಟನೆಯನ್ನೇ ನಡೆಸದಿರುವುದು ಇಸ್ಲಾಂ ದೇಶದ ಸಂಚು ತಿಳಿದುಬರುತ್ತದೆ ಎಂದರು.
ವಿ.ಹಿಂ.ಪ ಪ್ರಚಾರ ಪ್ರಮುಖ್ ಆಶೀಖ್ ಮಾಡೂರು ಮಾತನಾಡಿ, ದೇಶಕ್ಕೆ ಒಳ್ಳೆಯದನ್ನು ಮಾಡುವ ಎನ್ ಆರ್ ಸಿ-ಸಿಎಎ ಅನ್ನು ಜಾರಿಗೊಳಿಸುವಾಗ ಪ್ರತಿಭಟನೆಗೆ ಇಳಿದ ಇಸ್ಲಾಂ ಸಮಾಜ ಹಿಂದೂ ಯುವತಿಯ ೩೫ ತುಂಡು ನಡೆಸಿ ಹತ್ಯೆ, ಸ್ಫೋಟ, ಗೋವು ಕಳವು, ಮತಾಂತರ ಪ್ರಕರಣಗಳು ಕಣ್ಣ ಮುಂದಿದ್ದರೂ ಮಾತಾಡುತ್ತಿಲ್ಲ. ಹಿಂದೂಗಳ ಮೇಲೆ ಯಾರದ್ದೋ ಮನೆಯಿಂದ ಗೋವು ಕಳವು ನಡೆಸುವಾಗ ತಡೆಯೊಡ್ಡಿದ, ಹಿಂದೂ ಹೆಣ್ಮಕ್ಕಳನ್ನು ಪುಸಲಾಯಿಸುವಾಗ ತಡೆಯೊಡ್ಡಿದ ಕೇಸುಗಳಿದ್ದರೆ, ಇಸ್ಲಾಂ ಪಾಲಿಸುವವರ ವಿರುದ್ಧ ಮತಾಂತರ, ದನಕಳವು, ಬಯೋತ್ಪಾಧನೆಯ ಕೇಸುಗಳಿವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ವಿರುದ್ಧ ಇಸ್ಲಾಂ ನವರು ಮುಂದೆಯೂ ಮೌನವೇ ಇದ್ದಲ್ಲಿ, ಹಿಂದೂ ಸಮಾಜ ಜನಜಾಗೃತಿಯನ್ನು ಆಂದೋಲನವನ್ನಾಗಿ ಬದಲಾಯಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ,ಜಿಲ್ಲಾ ಗೋರಕ್ಷಾ ಸಹ ಪ್ರಮುಖ್ ಪವಿತ್ರ ಕೆರೆಬೈಲು , ವಿ.ಹಿಂ.ಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್,ಬಜರಂಗದಳ ಜಿಲ್ಲಾ ಸಹಸಂಚಾಲಕ ಗುರುಪ್ರಸಾದ್ ಉಳ್ಳಾಲ್ , ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಧನಲಕ್ಷಿö್ಮà ಗಟ್ಟಿ, ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪದ್ಮನಾಭ ಮರ್ಕೆದು, ಶಿವಪ್ರಸಾದ್ , ನವೀನ್ ಕೊಣಾಜೆ, ಪುಷ್ಪರಾಜ್ ಕುಂಪಲ, ಸೂರಜ್ ತೊಕ್ಕೊಟ್ಟು ಉಪಸ್ಥಿತರಿದ್ದರು.


