UN NEWS NETWORKS
ಮುನ್ನೂರು: ದಿ| ಜೋಗಿಬೆಟ್ಟು ರಘುನಾಥ್ ಭಂಗ ಇವರ ಧರ್ಮಪತ್ನಿ ಕಾಂತಾಡಿಗುತ್ತು ಬರಂಗ್ರೆ ಉಮಾವತಿ ಭಂಗ (94) ಇವರು ಜು.25 ರಂದು ಮುನ್ನೂರಿನಲ್ಲಿರುವ ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು , ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಅಂತಿಮ ಸಂಸ್ಕಾರ ಜು.26 ರಂದು ಬೆಳಿಗ್ಗೆ 10 ಗಂಟೆಗೆ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.





