Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಅಪರಾಧ ಸುದ್ದಿಗಳು

ವಿದ್ಯುತ್ ಅಘಾತಕ್ಕೊಳಗಾಗಿ ಯುವಕ ಮೃತ್ಯು: 5 ಲಕ್ಷ ಪರಿಹಾರ ಘೋಷಣೆ

UllalaVaniBy UllalaVaniAugust 17, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ವಿದ್ಯುತ್ ತಂತಿ ನೆರೆ ನೀರಿಗೆ ಬಿದ್ದು ಅದರಲ್ಲಿ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಉಳ್ಳಾಲ ಉಳಿಯ ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದ್ದು, ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಉಳ್ಳಾಲ ಉಳಿಯ ಎವ್ರಿ ಡಿಸೋಜ ಮತ್ತು ಮೋನಿಕಾ ಡಿಸೋಜ ದಂಪತಿ ಪುತ್ರ ಅಶೊಕ್ ಡಿಸೋಜ (33) ಸಾವನ್ನಪ್ಪಿದವರು. ಬೋಟು ನಿರ್ಮಾಣ ಮತ್ತು ಸಿಯಾಳ ಮಾರಾಟ ಕೆಲಸವನ್ನು ನಡೆಸುತ್ತಿದ್ದ ಅಶೋಕ್ ಎಂದಿನಂತೆ ಉಳಿಯ ಸಮೀಪ ತನ್ನ ಗೆಳೆಯರ ಜತೆಗೆ ಮಾತನಾಡಿ, ಮನೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ಸಾಗಿದ್ದರು. ಆದರೆ ದುರಾದೃಷ್ಟವಶಾತ್ ನೇತ್ರಾವತಿ ನದಿ ತೀರದಲ್ಲಿರುವ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನೆರೆ ನೀರು ನಿಂತಿತ್ತು. ಸಂಜೆ ಬೀಸಿದ ಭಾರೀ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ನೆರೆ ನೀರಿಗೆ ಬಿದ್ದಿತ್ತು. ಇದನ್ನು ಗಮನಿಸದೆ ಅಶೋಕ್ ಅವರು ದಾರಿನಡುವೆ ನೀರನ್ನು ದಾಟುತ್ತಿದ್ದಂತೆ ವಿದ್ಯುತ್ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮನೆಮಂದಿ ಕಾಯುತ್ತಲೇ ಇದ್ದರು !
ಅಶೋಕ್ ಮನೆಗೆ ಹೊರಡಿರುವುದಾಗಿ ತಿಳಿಸಿದ್ದರೂ ತಡರಾತ್ರಿಯಾದರೂ ಬಾರದ ಹಿನ್ನೆಲೆಯಲ್ಲಿ ತಾಯಿ, ತಂದೆ ಮತ್ತು ಸಹೋದರ ಕಾಯುತ್ತಲೇ ಇದ್ದರು. ಜೋರಾಗಿ ಮಳೆ ಬರುತ್ತಿದ್ದರಿಂದ ಮನೆ ಸುತ್ತಲೂ ನೆರೆ ಆವರಿಸಿದ್ದರಿಂದಾಗಿ ಮನೆಮಂದಿಗೆ ಹೊರಬರಲು ಅಸಾಧ್ಯವಾಗಿತ್ತು. ಬಳಿಕ ಸ್ನೇಹಿತರ ಜತೆಗೆ ಉಳಿದುಕೊಂಡಿರುವ ಸಾಧ್ಯತೆ ಇದೆ ಎಂದು ಸಮಾಧಾನಗೊಂಡಿದ್ದರು. ಆದರೆ ಇಂದು ಮುಂಜಾನೆ ನೆರೆಮನೆಯವರು ಮೃತದೇಹ ತೇಲುತ್ತಿರುವುದನ್ನು ಕಂಡು ಮನೆಮಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಗರಸಭೆ ಸದಸ್ಯೆ ಸುಂದರ್ ಉಳಿಯ ಇವರು ಮೆಸ್ಕಾಂ ಇಲಾಖೆ ಸೇರಿದಂತೆ , ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಶೋಕ್ ಡಿಸೋಜ ಅವರು ಮೂವರು ಮಕ್ಕಳಲ್ಲಿ ಹಿರಿಯವರು. ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿರುವ ಇವರು ಕಿರಿಯ ಮನೆಯಲ್ಲಿ ತಂದೆ, ತಾಯಿ ಮತ್ತು ಸಹೋದರನ ಜತೆಗೆ ವಾಸಿಸುತ್ತಿದ್ದರು. ತಂದೆಯೂ ಅನಾರೋಗ್ಯದಿಂದ ಇದ್ದು, ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು. ಇದೀಗ ಅವಘಢದಿಂದ ಆದ ಅಶೋಕ್ ಸಾವು ಇಡೀ ಕುಟುಂಬವನ್ನು ಕಂಗಾಲಾಗಿಸಿದೆ.

ಮೃತದೇಹ ಕೊಂಡೊಯ್ಯಲು ಬಿಡದೆ ಸ್ಥಳೀಯರ ಪ್ರತಿಭಟನೆ
ಬೆಳಿಗ್ಗೆ ವೇಳೆ ಮೃತದೇಹ ನೆರೆಮನೆಯವರು ನೋಡಿದ್ದರಿಂದಾಗಿ ಘಟನೆ ಬೆಳಕಿಗೆ ಬಂದಿದೆ. ಮೆಸ್ಕಾಂ ಇಲಾಖೆ, ಕಂದಾಯ ಇಲಾಖೆ ಹಾಗೂ ನಗರಸಭೆಯ ಅವ್ಯವಸ್ಥೆಯಿಂದಾಗಿ ಅವಘಢ ಸಂಭವಿಸಿರುವುದಾಗಿ ಆರೋಪಿಸಿ ಸಂತ ಸೆಬೆಸ್ತಿಯನ್ನರ ಚರ್ಚಿನ ಸಹಾಯಕ ಧರ್ಮಗುರುಗಳು ಸೇರಿದಂತೆ ಸ್ಥಳೀಯರು ಮೃತದೇಹವನ್ನು ಸ್ಥಳದಿಂದ ಕೊಂಡೊಯ್ಯದಂತೆ ಪ್ರತಿಭಟಿಸಿದರು. ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಭರವಸೆ ನೀಡುವವರೆಗೂ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಂತ ಸೆಬೆಸ್ತಿಯನ್ನರ ಚರ್ಚಿನ ಸಹಾಯಕ ಧರ್ಮಗುರು ಸಹಾಯಕ ಧರ್ಮಗುರು ಸ್ಟ್ಯಾನಿ ಪಿಂಟೋ ಮಾತನಾಡಿ ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಅಶೋಕ್ ಡಿಸೋಜಾ ಸಾವನ್ನಪ್ಪಿರುವುದು ಇಡೀ ಕುಟುಂಬವನ್ನು ಕಂಗೆಡಿಸಿದೆ. ವಿದ್ಯುತ್ ತಂತಿ ತುಂಡಾಗಿ ಅವಘಢ ಸಂಭವಿಸಿದೆ. ಬಡ ಕುಟುಂಬದವರಾಗಿರುವುದರಿಂದ ಗರಿಷ್ಟ 25 ಲಕ್ಷ ಪರಿಹಾರ ಕೊಡಬೇಕಿದೆ. ಅಲ್ಲದೆ ಉಳ್ಳಾಲ ನಗರಸಭೆ ವ್ಯಾಪ್ತಿಯಾಗಿರುವುದರಿಂದ ಈ ಭಾಗದವರಿಗೆ ಸೂಕ್ತ ರಸ್ತೆ ವ್ಯವಸ್ಥೆ ಮಾಡಬೇಕು. ಕಂದಾಯ ಇಲಾಖೆ ರಸ್ತೆಗಾಗಿ ಸ್ಥಳವನ್ನು ಒದಗಿಸಿಕೊಡಬೇಕಿದೆ. ಸಚಿವ ಯು.ಟಿ.ಖಾದರ್ ಅವರು ಗರಿಷ್ಠ ಮೊತ್ತದ ಪರಿಹಾರವನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಅದರಂತೆ ಇಲಾಖೆಯವರು ಅದನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮೃತ ಅಶೋಕ್ ಡಿಸೋಜ ಕುಟುಂಬಕ್ಕೆ ತುರ್ತಾಗಿ 54 ಗಂಟೆಯೊಳಗೆ ಗರಿಷ್ಟ ಪರಿಹಾರವಾಗಿ ರೂ. 5 ಲಕ್ಷ ನೀಡುವುದಾಗಿ ತಹಶೀಲ್ದಾರ್ ಗುರುಪ್ರಸಾದ್ ಘೋಷಣೆ ಮಾಡಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಯಾದ್ಯಂತ 4-5 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಸತತ 24 ಗಂಟೆಗಳ ಕಾಲವೂ ಕಂದಾಯ ಇಲಾಖೆ ಕಾರ್ಯಾಚರಣೆ ನಡೆಸುತ್ತಲೇ ಇದೆ. ದುರಾದೃಷ್ಠದಿಂದ ಅಶೋಕ್ ಸಾವು ಸಂಭವಿಸಿದೆ. ಬಡಕುಟುಂಬದ ಯುವಕನಾಗಿರುವುದರಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಮುಖ್ಯಮಂತ್ರಿಯವರ ವಿಶೇಷ ಪರಿಹಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ ಅವರು ಮೆಸ್ಕಾಂ ಇಲಾಖೆಯಿಂದಲೂ ತನಿಖೆ ಬಳಿಕ ಪರಿಹಾರ ದೊರಕಿಸುವ ಭರವಸೆ ನೀಡಿದರು. ರಸ್ತೆ ನಿರ್ಮಾಣಕ್ಕೆ ಸ್ಥಳೀಯಾಡಳಿತ ಚುನಾವಣೆ ಇರುವುದರಿಂದ ಶೀಘ್ರವೇ ನಡೆಸಲು ಅಸಾಧ್ಯ. ಚುನಾವಣೆ ಬಳಿಕ ಜಾಗದ ಸರ್ವೆ ನಂಬರನ್ನು ಪಡೆದು ಸಂಬಂಧಪಟ್ಟವರಿಗೆ ಮಾತುಕತೆ ನಡೆಸಿ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ ಅವರು ಸ್ಥಳದಲ್ಲಿರುವ ಮರಗಳನ್ನು ತೆರವುಗೊಳಿಸಲು ನಗರಸಭೆ ಅರಣ್ಯ ಇಲಾಖೆ ಜತೆಗೆ ಮಾತುಕತೆ ನಡೆಸಬೇಕೆಂದು ಸೂಚಿಸಿದರು.
ಮಾಮೂಲಿ ಮಳೆಯಲ್ಲ ಜಾಗೃತರಾಗಿ : ಜಿಲ್ಲೆಯಾದ್ಯಂತ ನದಿ ತೀರದಲ್ಲಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಿದ ತಹಶೀಲ್ದಾರ್ ಗುರುಪ್ರಸಾದ್ ಗುರುವಾರ ಮಳೆಗೆ ಮೂಡುಪೆರಾರ ಸಮೀಪ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೊಳಂಬೆ, ಅದ್ಯಪಾಡಿ, ಪಾವೂರು, ಪಾವೂರು ಉಳಿಯ ಭಾಗದಲ್ಲಿ ನೆರೆ ನೀರು ಬರುತ್ತಿವೆ. ಇದೊಂದು ಮಾಮೂಲಿ ಮಳೆಯಲ್ಲ ಎಂದು ತಗ್ಗುಪ್ರದೇಶದ ಮಂದಿ ಅರಿಯಬೇಕಿದೆ. ಗುರುವಾರ ತಡರಾತ್ರಿ ಪಾವೂರು ಉಳಿಯ ಭಾಗದಲ್ಲಿ 11 ಗಂಟೆ ಬಳಿಕ ನೀರು ಜಾಸ್ತಿಯಾಗಿದೆ. ಯಾವ ಸಮಯದಲ್ಲೂ ನೀರು ಜಾಸ್ತಿಯಾಗುವ ಸಾಧ್ಯತೆಯಿರುವುದರಿಂದ ಜಿಲ್ಲಾಡಳಿತ ಸೂಚಿಸಿದಂತೆ ತಗ್ಗುಪ್ರದೇಶದವರು  ಸೂಚನೆಯನ್ನು ಪಾಲಿಸಬೇಕಿದೆ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ನೋಡೆಲ್ ಅಧಿಕಾರಿಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತೆ ಗಾಯತ್ರಿ ನಾಯಕ್ , ಮಾತನಾಡಿ ಜಿಲ್ಲಾಡಳಿತದ ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ನೀಡುತ್ತಾ ಬಂದಿದ್ದೇವೆ. ಪ್ರದೇಶದಲ್ಲಿ ಮಳೆ- ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಜೀವ ಬಲಿಯಾಗಿರುವ ಶಂಕೆ ಇದೆ. ಈ ಭಾಗದ ಜನರ ಮನವಿಯನ್ನು ಪರಿಗಣಿಸಿ ಗರಿಷ್ಠ ಮಟ್ಟದ ಪರಿಹಾರವನ್ನು ಒದಗಿಸುತ್ತೇವೆ. ಮತ್ತೆ ಅವಘಢಗಳು ನಡೆಯದಂತೆ ಇಲಾಖೆಯ ಜೊತೆಗೆ ಜನರು ಕೈಜೋಡಿಸಬೇಕಿದೆ. ರಾತ್ರಿ ಹೊತ್ತಿನಲ್ಲಿ ಸಂಜೆ ಬಳಿಕ ನೆರೆ ನೀರಿನಲ್ಲಿ ಯಾರೂ ಹೋಗದಂತೆ ಜಾಗೃತವಹಿಸಬೇಕಿದೆ. 48 ಗಂಟೆಯೊಳಗೆ ಕಂದಾಯ ಇಲಾಖೆ ತುರ್ತಾಗಿ ಪರಿಹಾರ ವಿತರಿಸುತ್ತದೆ. ಮೆಸ್ಕಾಂ ಇಲಾಖೆ ಮರಣೋತ್ತರ ವರದಿ ಬಂದ ಬಳಿಕ, ಮೃತ ಯುವಕನ ವಯಸ್ಸಿಗೆ ಅನುಗುಣವಾಗಿ ಪರಿಹಾರವನ್ನು ಒದಗಿಸಲಿದೆ .

ಮೆಸ್ಕಾಂ ಅಧಿಕಾರಿಗಳಾದ ದಯಾನಂದ್, ರಾಜೇಶ್, ಪೌರಾಯುಕ್ತೆ ವಾಣಿ ಆಳ್ವ ಮುಂತಾದವರು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಉಳ್ಳಾಲ ಪೊಲೀಸರು…!

March 26, 2026

ತಲಪಾಡಿಯಲ್ಲಿ ಇ-ಸಿಗರೇಟ್ ಕೇಸ್: ಆರೋಪಿಯನ್ನು ಬಂಧಿಸಿದ ಪೊಲೀಸರು

March 26, 2026

ತೊಕ್ಕೊಟ್ಟು ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಧೃಡ ಕಲಶಾಭಿಷೇಕ ಸಂಪನ್ನ

March 25, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ..!

By UllalaVaniMarch 26, 20260

ಮಂಗಳೂರು, ಮಾ. 26 : ನಗರದ ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಆಸುಪಾಸಿನಲ್ಲಿ ಕಳೆದ ಕೆಲವು ದಿನಗಳಿಂದ ಓಡಾಡುತ್ತಿದ್ದ ಬೃಹತ್ ಗಾತ್ರದ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

14 ವರ್ಷದ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದ ಕ್ಯಾ. ಚೌಟ ಕರೆ

March 26, 2026

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಉಳ್ಳಾಲ ಪೊಲೀಸರು…!

March 26, 2026

ಪಿಯುಸಿ ವಿದ್ಯಾರ್ಥಿ ಏಣಿ ಮೇಲಿಂದ ಬಿದ್ದು ಸಾವು..!!

March 26, 2026
1 2 3 … 1,847 Next
Automatic YouTube Gallery

ಬಾಳಿಕೆ-ಬೋಳ್ನಾಡುಗುತ್ತು ಕುಟುಂಬದ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ ಏ.5ರಿಂದ ಆರಂಭ

ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪ್ರತಿಷ್ಠೆ, ಕಲಶಾಭಿಷೇಕಕ್ಕೆ ಭವ್ಯ ಸಿದ್ಧತೆ; ಏ.5ರಿಂದ 10ರವರೆಗೆ ಧಾರ್ಮಿಕ ವೈಭವ: ಬೋಳ್ನಾಡುಗುತ್ತು ಕ್ಷೇತ್ರದಲ್ಲಿ ಮಹೋತ್ಸವ

ಕ್ಷೇತ್ರದಲ್ಲಿ ಕುಟುಂಬಸ್ಥರಾದ ನಳಿನಾಕ್ಷ ಶೆಟ್ಟಿ ಮಾಹಿತಿ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಬಾಳಿಕೆ-ಬೋಳ್ನಾಡುಗುತ್ತು ಕುಟುಂಬದ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ ಏ.5ರಿಂದ ಆರಂಭ
Now Playing
ಬಾಳಿಕೆ-ಬೋಳ್ನಾಡುಗುತ್ತು ಕುಟುಂಬದ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ ಏ.5ರಿಂದ ಆರಂಭ
ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪ್ರತಿಷ್ಠೆ, ಕಲಶಾಭಿಷೇಕಕ್ಕೆ ಭವ್ಯ ಸಿದ್ಧತೆ; ...
ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪ್ರತಿಷ್ಠೆ, ಕಲಶಾಭಿಷೇಕಕ್ಕೆ ಭವ್ಯ ಸಿದ್ಧತೆ; ಏ.5ರಿಂದ 10ರವರೆಗೆ ಧಾರ್ಮಿಕ ವೈಭವ: ಬೋಳ್ನಾಡುಗುತ್ತು ಕ್ಷೇತ್ರದಲ್ಲಿ ಮಹೋತ್ಸವ

ಕ್ಷೇತ್ರದಲ್ಲಿ ಕುಟುಂಬಸ್ಥರಾದ ನಳಿನಾಕ್ಷ ಶೆಟ್ಟಿ ಮಾಹಿತಿ


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಲ್ಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ – ಉಚಿತ ವೈದ್ಯಕೀಯ ಪರೀಕ್ಷೆ
Now Playing
ಕೊಲ್ಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ – ಉಚಿತ ವೈದ್ಯಕೀಯ ಪರೀಕ್ಷೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ;ಕೊಲ್ಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆ ಹಿನ್ನಲೆ ಉಚಿತ ವ್ಯೆದ್ಯಕೀಯ ಪರೀಕ್ಷೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d