Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಅಂಗನವಾಡಿಗಳನ್ನು ಬಲಿಷ್ಠಗೊಳಿಸಲು ಸ್ವರೂಪ ಬದಲಿಸುವ ಯೋಜನೆ ಇದೆ : ಡಾ. ಜಯಮಾಲ

UllalaVaniBy UllalaVaniJuly 27, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಬಾಳೆಪುಣಿ : ಅಂಗನವಾಡಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅಂಗನವಾಡಿಗಳ ಸ್ವರೂಪ ಬದಲಾಯಿಸುವ ಮಹತ್ವಾಂಕಾಕ್ಷಿ ಯೋಜನೆಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಸರಕಾರ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರಿಗೆ ಕಳೆದ ಫೆಬ್ರವರಿಯಲ್ಲಿ ವೇತನ ಪರಿಷ್ಕರಣೆ ಮಾಡಿದೆ.ಪೋಷಕರು ಮಕ್ಕಳ ಆರೋಗ್ಯದ ಕುರಿತು ನಿವಾ ಇಡುವಂತೆಯೇ ಅಂಗನವಾಡಿಯಲ್ಲಿ ನೈರ್ಮಲ್ಯ ಕಾಪಾಡುವುದು ಶಿಕ್ಷಕಿಯರು ಹಾಗೂ ಸಹಾಯಕಿಯರ ಆದ್ಯ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಭಾಭವನದಲ್ಲಿ ಗುರುವಾರ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 60000 ಅಂಗನವಾಡಿಗಳಿದ್ದು 3331ಮಿನಿ ಅಂಗನವಾಡಿಗಳು, 100ಮೊಬೈಲ್ ಅಂಗನವಾಡಿಗಳಿದೆ. ನಗರಕ್ಕೆ 250ಹೊಸ ಅಂಗನವಾಡಿ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯೇ 500ಕ್ಕೂ ಹೆಚ್ಚು ಅಂಗನವಾಡಿಗಳಿವೆ. ನಾವು ಹಾಲು ಉಪ್ಪಿಟ್ಟಿಗಾಗಿಯೇ ಅಂಗನವಾಡಿಗೆ ಹೋಗುತ್ತಿದ್ದೆವು. ಅದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಹಿಂದಿನ ಸರ್ಕಾರ ಮಕ್ಕಳಿಗೆ ಹಾಲು, ಮೊಟ್ಟೆ ಯೋಜನೆ ಜಾರಿಗೆ ತಂದು ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಕೆಲಸ ಮಾಡಿದೆ. ಅತಿ ಮುಖ್ಯವಾಗಿ ಹಿಂದಿನ ಸರಕಾರದ ಆಡಳಿತ ನೇತೃತ್ವ ವಹಿಸಿದ್ದ ಸಿದ್ಧರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಹಸಿವು ಮುಕ್ತ ಕರ್ನಾಟಕ ಮಾಡಿದರು ಎಂದು ಹೆಳಿದರು.

ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಮಾತನಾಡಿ ನನ್ನ ವ್ಯಾಪ್ತಿಯಲ್ಲಿ ಸಮಾಜಕ್ಕೆ ದುಷ್ಪರಿಣಾಮ ಬೀರುವ ಕೆಡುಕಾಗುವ ಚಟಗಳಾದ ಗುಟ್ಕಾ ಮೊದಲಾದ ಪದಾರ್ಥಗಳನ್ನು ನಿಷೇಧಿಸುವ ಕುರಿತಾಗಿ ಕಾನೂನನ್ನು ತರುವ ಯೋಜನೆ ಇದ್ದು ನನ್ನ ಖಾತೆಯಲ್ಲದಿದ್ದರೂ ನನ್ನ ಖಾತೆಯಡಿ ತಂದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಪಡಲಿದ್ದೇನೆ. ನಿಷೇಧಕ್ಕೆ ಸಂಬಂಧಿಸಿ ಶೀಘ್ರವೇ ಆ ಕುರಿತಾದ ಕಾನೂನು ಪ್ರಕಟಿಸಲಿದ್ದೇವೆ. ಮಳೆಗಾಲದಲ್ಲಿ ಆಟಿ ತಿಂಗಳಲ್ಲಿ ಅನ್ನಆಹಾರ ತಿಂಡಿ ತಿನಿಸು ಹೇಗಿತ್ತು ಮತ್ತು ಹಿಂದಿನ ಸಂಸ್ಕಾರ ಸಂಸ್ಕೃತಿ ತಿಳಿಯಲು ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದು ನುಡಿದರು.ಮಾಜಿ ಸಚಿವ ಬಿ. ರಮನಾಥ ರೈ ಮಾತನಾಡಿದರು.ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟುಗೋಳಿ, ಮಾಣಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾವೆ, ಶಾಲಾ ಗೌರವ ಸಲಹೆಗಾರ ರಮೇಶ್ ಶೇಣವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಮಂಗಳೂರು ಸಿಡಿಪಿಒ ಶ್ಯಾಮಲಾ, ಬಂಟ್ವಾಳ ತಾಲೂಕು ಸಿಡಿಪಿಒ ಮಲ್ಲಿಕಾ, ಎಪಿಎಂಸಿ ಮಾಜಿ ಸದಸ್ಯ ಉಮ್ಮರ್ ಪಜೀರು, ಹೂ ಹಾಹುಕವ ಕಲ್ಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಚಂದ್ರ, ರಾಜಗೋಪಾಲ ಭಟ್, ಅಬೂಬಕ್ಕಾರ್, ಅರುಣ್ ವಿಕ್ಟರ್, ಬಶೀರ್, ನರಿಂಗಾನ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ,ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು ಹಾಗೂ ಹಿರಿಯ ಮುಖಂಡ ಪದ್ಮನಾಭ ನರಿಂಗಾನ, ಉಪಸ್ಥಿತರಿದ್ದರು. ಶಾಲಾಭಿವೃದ್ದಿ ಸಮಿತಿ ವತಿಯಿಂದ ಸಚಿವೆ ಡಾ. ಜಯಮಾಲ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ. ಎಸ್.ಗಟ್ಟಿ ಸ್ವಾಗತಿಸಿದರು. ವಿಟ್ಲ ಸಿಡಿಪಿಒ ಸುಧಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.

ಹಿಂದಿನ ಕಾಲದಲ್ಲಿ ತುಳುನಾಡಿನ ಶ್ರೇಷ್ಠ ಆಟವಾದ ಚೆನ್ನೆಮಣೆ ಬಹಳ ವರ್ಷಗಳ ನಂತರ ಆಡಿದೆ. ಕಾಲ ಬದಲಾಗುತ್ತಿದೆ. ಹಾಗಿದ್ದರೂ ತುಳುನಾಡಿನಲ್ಲಿದ್ದವರು ಆಟಿ ತಿಂಗಳನ್ನು ನೆನಪು ಮಾಡಿಕೊಳ್ಳದಿದ್ದರೆ ಜೀವನ ಕಷ್ಟಕರ, ನೆನಪು ಮಾಡಿಕೊಳ್ಳಲೇಬೇಕು. ಯಾಕೆಂದರೆ ನಾವು ಬೆಂಗಳೂರಿನಲ್ಲಿ ಇದ್ದರೂ ತಿಂಗಳಿಗೆ ಎರಡು ಬಾರಿ ಪತ್ರೊಡೆ ಮಾಡಿ ತಿನ್ನುತ್ತೇವೆ. ಅಂತಹ ತಿನಿಸುಗಳು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ, ಇಟ್ಟಿದೆ. ಅದು ನಮ್ಮ ಹಿರಿಯರಿಂದ ನಾವು ಕಲಿತುಕೊಂಡು ಬಂದ ಸತ್ಯ. ಇಲ್ಲಿನ ಮಹಿಳೆಯರು ಆಟಿಡೊಂಜಿ ಕೂಟಕ್ಕೆ ತಯಾರಿಸಿದ ಪ್ರತಿ ಅಡುಗೆ ಚೆನ್ನಾಗಿ ಸೊಗಸಾಗಿ ಮಾಡಿದ್ದೀರಿ. ಅನ್ನಪೂರ್ಣೇ ಇಲ್ಲೇ ನೆಲೆಯಾಗಿದ್ದು ನಾಡಿನ ಎಲ್ಲ ಹೆಣ್ಮಕ್ಕಳಲ್ಲಿ ಅನ್ನಪೂರ್ಣೆಯ ಅಂಶ ಮೈಗೂಡಿದೆ.
ಡಾ. ಜಯಮಾಲ
ಸಚಿವೆ

ಸರಕಾರಿ ಶಾಲೆಗಳಲ್ಲಿ ಸೀಟು ಬೇಕು ಎಂದು ಕೇಳಿಕೊಂಡು ಬಂದಾಗ ಇಲ್ಲ ಎನ್ನುವ ಹಕ್ಕು ಯಾರಿಗೂ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಇಲ್ಲದಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ವೇತನ ಹೆಚ್ಚಿಸಿತ್ತು. ಮಾತೃಪೂರ್ಣ ಯೋಜನೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದರೂ ಕರಾವಳಿ ಜಿಲ್ಲೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಸಕ್ಸಸ್ ಕಾಣಲಿಲ್ಲ. ಅದಕ್ಕಾಗಿ ಸ್ವಲ್ಪ ಬದಲಾವಣೆ ಮಾಡಿದರೆ ಉತ್ತಮ.
ಯು.ಟಿ. ಖಾದರ್
ಸಚಿವರು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

February 20, 2026

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

By UllalaVaniFebruary 20, 20260

ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಸುಜೀತ್ ಮಾಡೂರು ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026
1 2 3 … 1,807 Next
Automatic YouTube Gallery

ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!

ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
Now Playing
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ...
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
Now Playing
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ...
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಈ ಚರಂಡಿ ನೀರಿಗೆ ವ್ಯವಸ್ಥೆ ಕಲ್ಪಿಸುವವರು ಯಾರು ಸ್ವಾಮಿ....!

#ullalavani #News #Package #Thokkottu #Junction
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d