UN NETWORKS
ಕಣಚೂರು: ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿ ಮುಖ್ಯ. ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ನಾನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಕಠಿಣ ಪರಿಶ್ರಮ ಅಗತ್ಯ ಎಂದರು.
ಕಣಚೂರು ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಸ್ಪರ್ಧಿಗಳಲ್ಲಿ ಸನ್ನಡತೆ ಹಾಗೂವಿತೃನ್ನು ಮೇಲಕ್ಕೆತ್ತುವ ಕ್ರೀಡಾ ಮನೋಭಾವ ಬೇಕು ಹೊರತು ಇತರ ಕ್ರೀಡಾಳುಗಳ ಮನಸ್ಸು ನೋಯದಂತೆ ಅನ್ಯೋನ್ಯತೆಯಿಂದ ಮುನ್ನಡೆಯಬೇಕು ಎಂದು ನುಡಿದರು.
ಕ್ರೀಡೆಯಲ್ಲಿ ಶ್ರದ್ಧೆ ಹಾಗೂ ಉತ್ಸುಕತೆ ಬೇಕು. ಈ ದಿನ ಬದುಕಿನಲ್ಲಿ ಮರೆಯಲಾರದ ದಿನವಾಗಬೇಕು. ಮತ್ತೊಮ್ಮೆ ಇಂತಹ ಅವಕಾಶ ವಯಸ್ಸಿನ ಆಧಾರದಲ್ಲಿ ದೊರಕದು ಎಂಬ ಭಾವನೆ ಸದಾ ನಮ್ಮಲ್ಲಿರಬೇಕು ಎಂದರು.
ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಚೇರ್ ಮೆನ್ ಯು.ಕೆ. ಮೋನು,ಟ್ರಸ್ಟಿ ಝೊಹ್ ರಾ ಮೋನು ಹಾಗೂ ಸಹದಾ ರಹಮಾನ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಡಾ.ಎಚ್. ಎಸ್. ಡಾ. ಎಚ್. ಎಸ್. ವಿರೂಪಾಕ್ಷ , ವೈದ್ಯಕೀಯ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಅಲೈಡ್ ಸೈನ್ಸಸ್ ಪ್ರಾಂಶುಪಾಲ ವಿವಿಯನ್ ಡಿಸೊಜ, ಡಾ. ಮಹಮ್ಮದ್ ಸುಹೈಲ್, ಕಣಚೂರು ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಪ್ರೊ. ರೆನಿಲ್ಡಾ ಶಾಂತಿ ಲೋಬೊ ಸ್ವಾಗತಿಸಿದರು.

ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.


