UN NETWORKS
ಹರೇಕಳ: ದ.ಕ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ದ.ಕ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ವಿಷಯ ಬಗ್ಗೆ ಮಾಹಿತಿ ಕಾರ್ಯಾಗಾರವು ನಡೆಯಿತು.
ಮಾಹಿತಿಯನ್ನು ನೀಡಿದ ಇಲಾಖೆಯ ಜಿಲ್ಲಾ ಸಲಹೆಗಾರರಾದ ಡಾ.ಪ್ರೀತ ಇವರು, ದೇಶದಲ್ಲಿ ಶೇಕಡ 14ರಷ್ಟು ಯುವಕರು ಅಂದರೆ 13 ರಿಂದ 15 ವರ್ಷದೊಳಗಿನವರು ಯಾವುದಾದರೊಂದು ರೀತಿಯ ತಂಬಾಕು ಉತ್ಪನ್ನಗಳ ಸೇವನೆಯನ್ನು ಮಾಡುತ್ತಾರೆ. ಇಲ್ಲಿ ತುಂಬಾ ಮಂದಿ ಯುವಕ, ಯುವತಿಯರು ತಮ್ಮ ಮನೆಯಲ್ಲೇ ಧೂಮಪಾನ ಮಾಡುವವರನ್ನು ನೋಡಿ ಅನುಕರಣೆ ಮಾಡುತ್ತಾರೆ. ಹಾಗಾಗಿ ಮೊದಲು ಮನೆಯನ್ನು ತಂಬಾಕು ಮುಕ್ತಗೊಳಿಸಲು ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯುವರು ವಹಿಸಿ ಯಾವುದೇ ರೋಗ ಬಂದ ಮೇಲೆ ಆಸ್ಪತ್ರೆಗೆ ಹೋಗುವುದಕ್ಕಿಂತ ರೋಗಗಳು ಬರುವ ಮುಂಚೆಯೇ ಜಾಗೃತೆ ವಹಿಸುವುದು ಒಳಿತು. ಉತ್ತಮ ಆರೋಗ್ಯದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದರು. ವೇದಿಕೆಯಲ್ಲಿ ಸಮಾಜ ಸೇವಕಿಯಾದ ಶುೃತಿ ಸಾಲಿಯಾನ್ ಉಪಸ್ಥಿತರಿದ್ದರು.

ಅಧ್ಯಾಪಕರಾದ ರವಿಶಂಕರ್ ಸರ್ವರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ನಿರೂಪಿಸಿದರು. ಕೌಶಿಕ್ ಪ್ರಾರ್ಥನೆ ಗೈದರು.


