UN NETWORKS
ಮಂಗಳೂರು: ರಿಫಾಯಿಯ್ಯ ದಫ್ಫ್ ಕಮಿಟಿ ಪಕ್ಕಲಡ್ಕ ಇದರ 14ನೇ ವಾರ್ಷಿಕ ಪ್ರಯುಕ್ತ ದಫ್ಫು ರಾತೀಬು ಮತ್ತು ರಿಫಾಯಿಯ್ಯಾ ಮಾಲೆ ಆಲಾಪನೆ ಪಕ್ಕಲಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಫಹಾದುದ್ದೀನ್ ಫ್ಥವಿ ಅಸ್ಸಖಾಫ್ ಕಣ್ಣೂರು ಮತ್ತು ಜುನೈದ್ ಪರಪ್ಪನಂಙಡಿ ರಿಫಾಯಿಯ್ಯಾ ಮಾಲೆ ಆಲಾಪನೆ ನೇತೃತ್ವ ವಹಿಸಿದ್ದರು.
ರಿಫಾಯಿಯ್ಯ ದಫ್ಫ್ ಕಮಿಟಿ ಪಕ್ಕಲಡ್ಕ ಅಧ್ಯಕ್ಷ ಝೈನುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬ್ ವಿ.ಎ ನಝೀರ್ ಅಝ್ ಹರಿ ಬೊಳ್ಮಿನಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಅಝ್ ಹರ್ ಫೈಝಿ ದುಅ ನೆರವೇರಿಸಿದರು. ಬುಖಾರಿಯ್ಯಾ ತಂಡ ಮಳ್ ಹರ್ ರವರಿಂದ ಹಸನ್ ಸ ಅದಿ ಮತ್ತು ಮಾಸ್ಟರ್ ಶಮ್ಮಾಝ್ ಬಜಾಲ್ ನೇತೃತ್ವದಲ್ಲಿ ನಹತೇ ಶರೀಫ್ ನಡೆಯಿತು.
ಸುಲ್ತಾನುಲ್ ಆರಿಫೀನ್ ಅಹ್ಮದುಲ್ ಖಬೀರುರ್ರಿಫಾಯಿ ರವರ ಹೆಸರಿನಲ್ಲಿ ನಡೆಸುವ ವಾರ್ಷಿಕ ದಫ್ಫು ರಾತೀಬುಗೆ ಮುಸ್ಲಿಂ ಉಸ್ತಾದ್ ಕಾಸರಗೋಡು ಮತ್ತು ಸಿ.ಟಿ.ಎಂ ಸೈಯ್ಯದ್ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ಕೆ.ಸಿ ರೋಡ್ ನೇತೃತ್ವದಲ್ಲಿ ನಡೆಯಿತು.
ರಿಫಾಯಿಯ್ಯ ದಫ್ಫ್ ಕಮಿಟಿ ಪಕ್ಕಲಡ್ಕ ಕೋಶಾಧಿಕಾರಿ ಯಾಕೂಬ್, ಕಾರ್ಯದರ್ಶಿ ಸಬೀರ್ ಅಹ್ಮದ್, ಜೋತೆ ಕಾರ್ಯದರ್ಶಿಗಳಾದ ಹುಸೈನ್, ಅನೀಝ್ ಬಜಾಲ್, ಅಬ್ದುಲ್ ರಹ್ಮಾನ್ ಮಾಣಾಲ್ ಕೋಡಿ, ಸದಸ್ಯರಾದ ಅಬ್ದುಲ್ ಕರೀಂ, ನೂರುದ್ದೀನ್, ಇರ್ಫಾನ್, ಇಫ್ರಾದ್ ಅಧ್ಯಕ್ಷ ಸಫ್ವಾನ್ ಪಕ್ಕಲಡ್ಕ, ಕಾರ್ಯದರ್ಶಿ ಮೊಹಮ್ಮದ್ ತಾಜುದ್ದೀನ್ ಅನಸ್, ಸದಸ್ಯರಾದ ಇಜಾಝ್ ಶಫೀಕ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಉಮರ್ ಸಖಾಫಿ ಕಲ್ಮಿಂಜೆ ಸ್ವಾಗತಿಸಿದರು. ರಿಫಾಯಿಯ್ಯ ದಫ್ಫ್ ಕಮಿಟಿ ಪಕ್ಕಲಡ್ಕ ಸದಸ್ಯ ಫೈರೋಝ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.


