Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಕೊಲ್ಯದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಭೆ

UllalaVaniBy UllalaVaniJanuary 8, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಲ್ಯ: ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಅನುಷ್ಠಾನಕ್ಕೆ ತಂದು ಜನರ ಚಿಂತನೆಗಳಿಗೆ ಸ್ಪಂಧಿಸಿರುವ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಮತ್ತೆ ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.

ಕೊಲ್ಯ ಸೌಭಾಗ್ಯ ಸದನದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ವತಿಯಿಂದ ಭಾನುವಾರ ನಡೆದ ನವಭಾರತಕ್ಕಾಗಿ ನವಕರ್ನಾಟಕ ಚುನಾವಣಾ ಪ್ರಣಾಳಿಕೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಇದೇ ಮೊದಲ ಬಾರಿಗೆ ಬಿಜೆಪ ಚುನಾವಣ ಪ್ರಣಾಳಿಕೆಯಲ್ಲೂ ಹೊಸತನ ತಂದಿದ್ದು ಆ ನಿಟ್ಟಿನಲ್ಲಿ ರಾಜ್ಯ, ಜಿಲ್ಲೆ , ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಕಾರ್ಯಕ್ರಮಗಳ ಕುರಿತಾಗಿ ಪ್ರತಿಯೊಬ್ಬರ ಭಾವನೆ ಚಿಂತನೆಗಳನ್ನು ಪತ್ರವೊಂದರಲ್ಲಿ ಬರೆದು ತಿಳಿಸಬಹುದು. ಯಡಿಯೂರಪ್ಪ ನೇತೃತ್ವ ಸರಕಾರ ಆಡಳಿತಕ್ಕೆ ಬಂದಾಗ ಯಾವ ಕಾರ್ಯಕ್ರಮ ಅಗತ್ಯ ಎಂಬುದನ್ನು ಬಲು ಸುಲಭದಲ್ಲಿ ಅರಿಯಲು ಸಾಧ್ಯವಾಗುತ್ತದೆ. ಆ ಮೂಲಕ ನವಕರ್ನಾಟಕ ನಿರ್ಮಾಣದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದ್ದು ಪ್ರತಿಯೊಬ್ಬರ ಚಿಂತನೆಗೆ ಮನ್ನಣೆ ದೊರಕಲಿದೆ ಎಂದರು.

ದಶಕದ ಹಿಂದೆ ಪ್ರಪಂಚದಲ್ಲಿ ಚೀನಾ ಏಕ ಪಕ್ಷ ಪಾರಮ್ಯ ಮೆರೆದಿತ್ತು. ಇದೀಗ ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿಕೊಂಡ ಜಗತ್ತಿನ ಏಕೈಕ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲ ವೃತ್ತಿಯವರು ಎಲ್ಲ ವರ್ಗ ಎಲ್ಲ ಧರ್ಮದ ಮಂದಿ ತಮ್ಮ ಅಭಿಪ್ರಾಯ ತಮ್ಮ ರಾಜ್ಯ ಜಿಲ್ಲೆ ಕ್ಷೇತ್ರ ಮಟ್ಟದಲ್ಲಿ ಮಂಡಿಸಬಹುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ಜನರ ಎಲ್ಲ ಅಭಿಪ್ರಾಯಗಳಿಗೆ ಕ್ಷೇತ್ರ, ಜಿಲ್ಲೆ, ರಾಜ್ಯ ವರ್ಗೀಕರಣ ಮಾಡಲಾಗುತ್ತದೆ. ಸರ್ವರಿಗೆ ಸಮಪಾಲು ಸಮಬಾಳು ಕಲ್ಪಿಸಲಾಗುವುದು. ಒಟ್ಟಿನಲ್ಲಿ ನವಭಾರತಕ್ಕಾಗಿ ನವಕರ್ನಾಟಕ ನಿರ್ಮಾಣವಾಗಬೇಕಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಾರ್ಯದರ್ಶಿ ನಮಿತಾ ಶ್ಯಾಂ, ಮನಾಪ ಮಾಜಿ ಮೇಯರ್ ಶಂಕರ್ ಭಟ್, ಪ್ರಣಾಳಿಕೆ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್ ಬಂಗಾರಡ್ಕ ಹಾಗೂ ರವೀಂದ್ರ ಪೈ ಬೆಂಗಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೈಜಂಪ್ ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಸೃಜನ್ ಜನಾರ್ಧನ್ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಆಚಾರ್ಯ ವಂದಿಸಿದರು.

                                  ಜಾಹೀರಾತು

ಸಭೆಗೆ ಆಗಮಿಸಿದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಜನರ ಅಭಿಪ್ರಾಯಗಳು:
ಎಸಿ ಕೊಠಡಿಗೆ ಸೀಮಿತವಾಗಿದ್ದ ಚುನಾವಣಾ ಪ್ರಣಾಳಿಕೆ ಈಗ ಮನೆಯಿಂದ ಹೊರಗೆ ಬರುತ್ತಿರುವುದು ಸಂತಸ ಕೊಟ್ಟಿದೆ.
ಹಿಂದುಳಿದ ವರ್ಗಕ್ಕೆ ಡೊನೇಶನ್ ರಹಿತ ಶಿಕ್ಷಣ , ಆರ್ಥಿಕ ಮೀಸಲಾತಿ, ಉಳ್ಳಾಲಕ್ಕೆ ಥೀಮ್ ಪಾರ್ಕ್, ವಾಟರ್ ಪಾರ್ಕ್, ಕ್ರೀಡಾಂಗಣ, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ ಗೌರವಿಸುವಂತೆ ಕ್ರಮ, ಮಾದಕ ವ್ಯಸನ ಸಂಬಂಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ.
ಆನಂದ ಕೆ. ಅಸೈಗೋಳಿ
ನಿವೃತ್ತ ಮುಖ್ಯ ಶಿಕ್ಷಕ
***
ಅಲ್ಪಸಂಖ್ಯಾತ ರಿಗೆ ಸಿಗುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಸಿಗುವಂತಾಗಬೇಕು. ಮಧ್ಯವರ್ತಿಗಳ ಸಮಸ್ಯೆ ಇರಬಾರದು.
ಕರೀಂ
ನಾಗತೋಟ
**
ಗ್ರಾಮ ಪಂಚಾಯಿತಿ ಮಟ್ಟದಿಂದಲೇ ತ್ಯಾಜ್ಯ ವಿಲೇವಾರಿಗೆ ಕ್ರಮ, ಪ್ರಾಣತ್ಯಾಗ ಮಾಡಿದ ಸೈನಿಕನ ಕುಟುಂಬಕ್ಕೆ ಸರಕಾರಿ ಕೆಲಸ, ಸುವ್ಯವಸ್ಥೆಯುಳ್ಳ ಸೈನಿಕ ಭವನ, ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡಲು ಸೂಕ್ರ ಕ್ರಮ
ವೆಂಕಟೇಶ್ ಕುಂಪಲ
ನಿವೃತ್ತ ಸೈನಿಕರು
**
ಮಾನ ಉಳಿಸುವ ಕಾರ್ಯ ಮಾಡುವ ಟೈಲರ್ ಗಳು ಅಸಂಘಟಿತ ಕಾರ್ಮಿಕ ವಿಭಾಗಕ್ಕೆ ಸೇರಿದ್ದು, ಯಡ್ಯೂರಪ್ಪ ಅವರು ಬೋರ್ಡ್ ಸ್ಥಾಪಿಸಿಸಿದ್ದರೂ ಬೇಕಾದ ಸೌಲಭ್ಯ ಸಿಕ್ಕಿಲ್ಲ.
ವಸಂತ
ಕೆಎಸ್ ಟಿಎ ರಾಜ್ಯ ಪ್ರಧಾನ ಕಾರ್ಯದರ್ಶಿ
**
ಕ್ರೀಡೆಗೆ ಉತ್ತೇಜನ ಸಿಗಬೇಕು. ಕ್ರೀಡಾಂಗಣ ಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ. ಮಂಗಳೂರು ವಿವಿಯಲ್ಲಿ ಬಿಪಿಎಡ್ ಮುಂದುವರಿಸಬೇಕು.
ಗೋಪಿನಾಥ್
ಉಮಾ ಮಹೇಶ್ವರೀ ಕಬಡ್ಡಿ ಅಕಾಡೆಮಿ
**
ದೇವಸ್ಥಾನ ಭಕ್ತರಿಂದ ಭಕ್ತರಿಗಾಗಿಯೇ ಇರಬೇಕು, ಎ ಗ್ರೇಡ್ ದೇವಸ್ಥಾನದ ಆದಾಯ ಸಿ ಗ್ರೇಡ್ ದೇವಸ್ಥಾನದ ಅಭಿವೃದ್ಧಿಗೆ ಸಹಾಯಕವಾಗುವಂತೆ ಕ್ರಮ ಕೈಗೊಳ್ಳಬೇಕು. ಆಗಮ ಶಾಸ್ತ್ರ ವಾಸ್ತು ಶಾಸ್ತ್ರ ಉಳಿಸಿಕೊಂಡು ಹೋಗಬೇಕು.
ಮುಳಿಂಜ ವೆಂಕಟೇಶ ಭಟ್
*
ಸ್ವಸಹಾಯ ಸಂಘದ ಮೂಲಕ ಕಡಿಮೆ ಬಡ್ಡಿಗೆ ಸಾಲ ಸಿಗಬೇಕು.
ವಾಣಿ ತಲಪಾಡಿ
**
ಸಂವಿಧಾನ ತಿದ್ದುಪಡಿ ಆಗ್ತಿದ್ದರೂ ನಾಯಕರು ಮೌನ ವಹಿಸುವುದೇಕೆ?
ಆನಂದ ಪೂಜಾರಿ ಸರ್ಕುಡೇಲು
ಕೆಎಸ್‍ಆರ್ ಟಿಸಿ ನಿವೃತ್ತ ಡ್ರೈವರ್
**
ಮೊಗವೀರ ಸಮುದಾಯ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದು ಆ ಕಾರಣಕ್ಕೆ ಎಸ್ ಟಿ ವರ್ಗಕ್ಕೆ ಸೇರಿಸಬೇಕು. ಸಮುದಾಯವನ್ನು ಒಡೆಯುವ ಪ್ರಯತ್ನ ನಿಲ್ಲಬೇಕು, ಗೋಮಾಳ ಭೂಮಿಯನ್ನು ಸರಕಾರದ ವಶಕ್ಕೆ ಪಡೆಯಬೇಕು.
ರಾಜೇಶ್ ಪುತ್ರನ್
ಉಳ್ಳಾಲ ಮೊಗವೀರ ಸಂಘದ ಕಾರ್ಯದರ್ಶಿ
**
ಧರ್ಮ ಶಿಕ್ಷಣ ಸಿಗಬೇಕು
ನಾರಾಯಣ ಕಜೆ
**
ಮಂಗಳೂರು ಕ್ಷೇತ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ, ಅಗ್ನಿಶಾಮಕ ಠಾಣೆ ನಿರ್ಮಿಸಬೇಕು. ಎಸ್‍ಎಸ್‍ಎಲ್ಸಿ ತೇರ್ಗಡೆಯಾಗದಿದ್ದರೂ ಚಾಲಕರಿಗೆ ಬ್ಯಾಡ್ಜ್ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು.
ಮುನೀರ್ ಮಾಸ್ಟರ್ ಕೈರಂಗಳ
ಬಿಜೆಪಿ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ
**
ಕೃಷಿಗೆ ಬೇಕಾದ ಕೃಷಿ ಮಾಹಿತಿ ಕೇಂದ್ರ ಸ್ಥಾಪನೆಗೆ ಕ್ರಮ
ಟಿ.ಜಿ.ರಾಜಾರಾಮ ಭಟ್
ಪ್ರಗತಿಪರ ಕೃಷಿಕರು

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ

June 29, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ..!!

By UllalaVaniJuly 1, 20260

ಉಡುಪಿ, ಜು.01: ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲಿಯನ್ (40)…

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮೂಗಿನ ಅಲರ್ಜಿ ಮತ್ತು ಸೈನಸೈಟಿಸ್ ಚಿಕಿತ್ಸಾ ಶಿಬಿರ

July 1, 2026

ನಾಗುರಿ ದುರಂತ ; ಸಚಿವ ಖಾದರ್ ದೆಹಲಿ ಪ್ರವಾಸ ಮೊಟಕು: ಶೀಘ್ರ ಪರಿಹಾರ ನೀಡಲು ಸೂಚನೆ 

July 1, 2026
1 2 3 … 1,992 Next
Automatic YouTube Gallery

| Ullalavani| ಕೆರೆಬೈಲ್‌ : ಖಾಸಗಿ ತಡೆಗೋಡೆಗಾಗಿ ಊರನ್ನೇ ತೊರೆಯುವ ಸ್ಥಿತಿಯಲ್ಲಿ ಕೆರೆಬೈಲ್ ಮನೆಮಂದಿ..!

ಮನೆ ಮೇಲೆ ಬಿದ್ದ ಖಾಸಗಿ ಜಾಗದಲ್ಲಿ ನಿರ್ಮಿಸಲಾದ ತಡೆಗೋಡೆ ;ಚೆಂಬುಗುಡ್ಡೆ ಕೆರೆಬೈಲ್ ನಲ್ಲಿ ನಡೆದ ಘಟನೆ

4 ದಿನಗಳ ಹಿಂದೆಯಷ್ಟೇ ಸ್ಥಳಾಂತರಗೊಂಡಿದ್ದ ಮನೆಮಂದಿ..?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani| ಕೆರೆಬೈಲ್‌ : ಖಾಸಗಿ ತಡೆಗೋಡೆಗಾಗಿ ಊರನ್ನೇ ತೊರೆಯುವ ಸ್ಥಿತಿಯಲ್ಲಿ ಕೆರೆಬೈಲ್ ಮನೆಮಂದಿ..!
Now Playing
| Ullalavani| ಕೆರೆಬೈಲ್‌ : ಖಾಸಗಿ ತಡೆಗೋಡೆಗಾಗಿ ಊರನ್ನೇ ತೊರೆಯುವ ಸ್ಥಿತಿಯಲ್ಲಿ ಕೆರೆಬೈಲ್ ಮನೆಮಂದಿ..!
ಮನೆ ಮೇಲೆ ಬಿದ್ದ ಖಾಸಗಿ ಜಾಗದಲ್ಲಿ ನಿರ್ಮಿಸಲಾದ ತಡೆಗೋಡೆ ;ಚೆಂಬುಗುಡ್ಡೆ ಕೆರೆಬೈಲ್ ...
ಮನೆ ಮೇಲೆ ಬಿದ್ದ ಖಾಸಗಿ ಜಾಗದಲ್ಲಿ ನಿರ್ಮಿಸಲಾದ ತಡೆಗೋಡೆ ;ಚೆಂಬುಗುಡ್ಡೆ ಕೆರೆಬೈಲ್ ನಲ್ಲಿ ನಡೆದ ಘಟನೆ

4 ದಿನಗಳ ಹಿಂದೆಯಷ್ಟೇ ಸ್ಥಳಾಂತರಗೊಂಡಿದ್ದ ಮನೆಮಂದಿ..?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani|| ಮಳೆಗೆ ಭೂ ಕುಸಿತ.. ಮೂವರ ಬ#ಲಿ**..! ಕಂಕನಾಡಿ ಬಳಿಯ ನಾಗುರಿಯಲ್ಲಿ ಘಟನೆ
Now Playing
| Ullalavani|| ಮಳೆಗೆ ಭೂ ಕುಸಿತ.. ಮೂವರ ಬ#ಲಿ**..! ಕಂಕನಾಡಿ ಬಳಿಯ ನಾಗುರಿಯಲ್ಲಿ ಘಟನೆ
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ ;ಮಣ್ಣಿನಡಿ ಸಿಲುಕಿದ ಮೂವರ ರಕ್ಷಣೆ 📍 ...
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ ;ಮಣ್ಣಿನಡಿ ಸಿಲುಕಿದ ಮೂವರ ರಕ್ಷಣೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version