UN Network
ಮೊಗವೀರಪಟ್ನ: ಉತ್ತರಭಾರತದಲ್ಲಿ ಆಚರಿಸಲಾಗುತ್ತಿದ್ದ ವರಮಹಾಲಕ್ಷ್ಮಿ ಆಚರಣೆ ವಿಳಂಬವಾಗಿಯಾದರೂ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತಿದೆ. ಪೂಜೆಯ ಆಚರಣೆಯಿಂದ ವೃದ್ಧಿ ಸಾಧ್ಯ ಎಂದು ಉದ್ಯಮಿ ಪಾಲ್ಕೆ ಧನಂಜಯ ಆಚಾರ್ ಅಭಿಪ್ರಾಯ ಪಟ್ಟರು.


ಅವರು ಉಳ್ಳಾಲ ಮೊಗವೀರಪಟ್ನದ ಧರ್ಮ ರಕ್ಷಣಾ ಮೊಗವೀರ ವೇದಿಕೆ ಇದರ ನಾಲ್ಕನೇ ವಾರ್ಷಿಕ ಸಮಾರಂಭ ಪ್ರ ಯುಕ್ತ ಫಲಾನುಭವಿಗಳಿಗೆ ದಿನಬಳಕೆ ವಸ್ತುಗಳ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅಭಿನಂದನಾ ಸಮಾರಂಭ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಗೆ ಮೊಗವೀರಪಟ್ನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿದರು.
ದ್ವಾಪರಯುಗದಲ್ಲಿ ಚಾರುಮತಿ ಎಂಬ ಮಹಿಳೆ 14,000 ಶ್ಲೋಕವನ್ನು ವೈದಿಕರಿಂದ ಪಠಿಸಿ ಆರಂಭಿಸಿದ ಪೂಜೆ, ಉತ್ತರಭಾರತದಲ್ಲಿ ಮಾತ್ರವಲ್ಲದೆ ಇದೀಗ ದಕ್ಷಿಣಭಾರತದಲ್ಲೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪೂಜೆಯ ಜತೆಗೆ ಹಲವು ಮೀನುಗಾರರ ಕುಟುಂಬಕ್ಕೆ ದಿನಬಳಕೆ ವಸ್ತುಗಳ ವಿತರಣೆ ಜತೆಗೆ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವ ಕಾರ್ಯ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುವ ಕಾರ್ಯವಾಗಿದೆ ಎಂದರು.
ಈ ಸಂದರ್ಭ ಮೊಗವೀರ ಸಮಾಜದ ಹಿರಿಯ ಮಹಿಳೆ ಹಾಗೂ ಅಬ್ಬಕ್ಕ ಪ್ರಶಸ್ತಿ ವಿಜೇತ ಸರಳಾ. ಬಿ.ಕಾಂಚನ್ ಇವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರುಮೀನುಗಾರಿಕೆಯಲ್ಲಿ ಮಾತ್ರವಲ್ಲ ಮೀನುಗಾರಿಕೆ ಇಲಾಖೆಯಲ್ಲಿ ವೃತ್ತಿ ಪಡೆಯುವಷ್ಟು ಮೊಗವೀರ ರು ಮುಂದಾಗಬೇಕು, ಬೆರಳೆಣಿಕೆಯಷ್ಟು ಇರುವ ಸಮಾಜದ ಐಎಎಸ್ ಅಧಿಕಾರಿಗಳ ಸಂಖ್ಯೆ ದ್ವಿಗುಣ ಆಗಬೇಕಿದೆ. ಉನ್ನತ ಹುದ್ದೆಗಳನ್ನು ಪಡೆಯಲು ಹೆಚ್ಚು ಶಿಕ್ಷಣವನ್ನು ಪಡೆಯುವವರಂತಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು.
ಕರ್ನಾಟಕ ಪರ್ಸಿಯನ್ ಬೋಟ್ ಮಾಲೀಕರ ಸಂಘ ಹಾಗೂ ಬೆಂಗ್ರೆ ಮಹಾಸಭಾದ ಅದ್ಯಕ್ಷ ಮೋಹನ್ ಪುತ್ರನ್ ಬೆಂಗ್ರೆ, ಮೊಗವೀರಪಟ್ನದ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಮಧ್ಯಸ್ಥರು ಗಂಗಾಧರ ಸುವರ್ಣ, ಉಪ್ಪಳ ಮೊಗವೀರ ಸಮಾಜದ ಅಶೋಕ್ ಗುರಿಕಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಳ್ಳಾಲ ವಲಯ ಮೇಲ್ವಿಚಾರಕಿ ಲತಾ, ಉಳ್ಳಾಲ ನಗರಸಭೆ ಸದಸ್ಯೆ ಮೀನಾಕ್ಷಿ ದಾಮೋದರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಜಯ.ಸಿ ಕೋಟ್ಯಾನ್, ಲೋಕೇಶ್ ಉಳ್ಳಾಲ್, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಠಲ ಸುವರ್ಣ ಗುರಿಕಾರ, ಮೊಗವೀರಪಟ್ನದ ಪ್ರಾಥಮಿಕ ಶಾಲೆ ಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಗಂಧಿ ಪುತ್ರನ್ ಮುಖ್ಯ ಅತಿಥಿಗಳಾಗಿದ್ದರು.
ಧರ್ಮ ರಕ್ಷಣ ಮೊಗವೀರ ವೇದಿಕೆ ಅಧ್ಯಕ್ಷ ಮನೋಜ್ ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಬಿತಾ ಲೋಕೇಶ್ ಸ್ವಾಗತಿಸಿದರು. ವಾಸುದೇವ ರಾವ್ ನಿರ್ವಹಿಸಿದರು.





















