ಉಳ್ಳಾಲ ನ್ಯೂಸ್ ನೆಟ್ವರ್ಕ್
ಮುಡಿಪು: ಕನಕದಾಸರ ಕೀರ್ತನೆ ಅಥವಾ ಅವರ ಕಾವ್ಯಗಳು ಬರಿ ಸಾಹಿತ್ಯ ಕೃತಿಗಳಾಗದೆ, ಅವು ಒಂದು ಸಾಂಸ್ಕøತಿಕ ಪಠ್ಯವಾಗಿವೆ. ಕೀರ್ತನೆಗಳನ್ನು ಸಾಹಿತ್ಯದ ನೆಲೆಗಳಾದ ಉಪಮೆ, ರೂಪಕದ ಭಾಷೆಯಾಗಿ ಮಾತ್ರ ನೋಡದೆ ಅದರ ಸಾಮಾಜಿಕ ಎಚ್ಚರದ ಬಗ್ಗೆ ಅಧ್ಯಯನವಾಗಬೇಕಾದ ಅಗತ್ಯತೆ ಇದೆ. ಆದರೆ ಅವಜ್ಞೆಯಲ್ಲಿದ್ದ ದಾಸ ಸಾಹಿತ್ಯಕ್ಕೆ ಇತ್ತೀಚಿನ ದಶಕಗಳಲ್ಲಿ ಕನಕದಾಸರ ಅಧ್ಯಯನ ಮೂಲಕ ಹೊಸ ನೆಲೆ ಬೆಲೆ ಅದರ ಪುನರ್ ಪರಿಶೀಲನೆಗೆ ಅವಕಾಶ ಸಿಕ್ಕಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಖ್ಯಾತ ಸಾಹಿತಿ ಪ್ರೊ.ಎ.ವಿ.ನಾವಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಗುರುವಾರ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ `ಕನಕ ಸ್ಮøತಿ’ ಕಾರ್ಯಕ್ರಮದಲ್ಲಿ `ಕನಕ ಪ್ರಸರಣ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನಕದಾಸರ ಬಗ್ಗೆ ಹೊಸ ಎಚ್ಚರ, ಹೊಸ ಆಲೋಚನೆಗಳು ಹುಟ್ಟಿಕೊಳ್ಳುವ ಮೂಲಕ ಕರ್ನಾಟಕ ಸಾಂಸ್ಕøತಿಕ ಲೋಕದಲ್ಲಿ ಒಂದು ತಿರುವು ಕಾಣಿಸಿಕೊಂಡಿದೆ. ಕೆಳವರ್ಗದ ಒಬ್ಬ ಸಂತ ಮಹೋನ್ನತ್ತವಾದ ಸಾಧನೆ, ಹೊಸ ವಿಚಾರಧಾರೆಯು ಹರಿಯಬಿಟ್ಟಿದ್ದಾನೆ ಎನ್ನುವ ವಿಚಾರ ಸಾಂಸ್ಕøತಿಕ, ಸಾಹಿತ್ಯಿಕ, ಸಾಮಾಜಿಕ ವಲಯದಲ್ಲಿ ಸಾಧ್ಯವಾಯಿತು. ಆಧುನಿಕ ಕಾಲದಲ್ಲಿ ನಡೆದ ಮತ್ತು ನಡೆಯುತ್ತಿರುವ ಕನಕದಾಸರ ಅಧ್ಯಯನ ಫಲವಾಗಿ ಮಧ್ಯಕಾಲೀನ ಕನ್ನಡ ಸಾಂಸ್ಕøತಿಕ ಲೋಕದ ಪುನರ್ ಪರಿಶೀಲನೆ ಸಾಧ್ಯವಾಯಿತು ಎಂದರು. ಇಪ್ಪತ್ತೊಂದನೆಯ ಶತಮಾನದ ಬದುಕಿನ ತಲ್ಲಣಗಳಿಗೆ, ಆತಂಕಗಳಿಗೆ ನಮಗೆ ನೀರು, ಆಹಾರ, ಬೆಳಕು ಪಡೆಯುವ ಸಾಧ್ಯತೆಗಳು ಇವೆಯೇ? ಎನ್ನುವ ರೀತಿಯಲ್ಲಿ ನಮ್ಮ ವಿದ್ವಾಂಸರು ಕೆಲಸ ಮಾಡಿದರು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಅವರು ವಹಿಸಿದ್ದರು.
ಕೇಂದ್ರದ ಸಂಯೋಜಕರಾದ ಡಾ. ಬಿ. ಶಿವರಾಮ ಶೆಟ್ಟಿಯವರು ಪ್ರಸ್ತಾವಿಕ ನುಡಿಯಲ್ಲಿ ಕನಕದಾಸ ಸಂಶೋಧನ ಕೇಂದ್ರವು ಅತ್ಯಂತ ನಿಷ್ಠೆ, ಬದ್ಧತೆ, ಪ್ರ್ರಾಮಾಣಿಕತೆಯಿಂದ ಕೇಂದ್ರದ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದರು.
‘ಕನಕ ಕೀರ್ತನ’ ಹಾಗೂ ‘ಕನಕ ಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಒಟ್ಟು 69 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕನಕ ಪುರಸ್ಕಾರ, ಕನಕ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿ, ಕೀರ್ತನ ಪ್ರಸ್ತುತಿ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸಂಶೋಧನ ಸಹಾಯಕರಾದ ಆನಂದ ಎಂ. ನಿರೂಪಿಸಿ, ಕನ್ನಡ ಅಧ್ಯಯನ ಸಂಸ್ಥೆಯ ಜನಾರ್ದನ ವಂದಿಸಿದರು.



