ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲ ಮೊಗವೀರಪಟ್ಣ ಶ್ರೀ ವಿಠೋಭ ರುಕ್ಮಯಿ ಭಜನಾ ಮಂದಿರದ 47ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಯುವ ಉದ್ಯಮಿ ಸಂದೀಪ್ ಪುತ್ರನ್ ಉಳ್ಳಾಲ ಮತ್ತು ಅಕ್ಷತಾ ಸಂದೀಪ್ ಪುತ್ರನ್ ಚಾಲನೆ ನೀಡಿದರು.
ಈ ಸಂದರ್ಭ ಮಂಡಳಿಯ ಅಧ್ಯಕ್ಷ ಗೋವರ್ಧನ ಸಾಲ್ಯಾನ್, ಗೌರವಾಧ್ಯಕ್ಷ ಸುಂದರ ಗುರಿಕಾರ, ಉಪಾಧ್ಯಕ್ಷ ಶಾಂತರಾಮ್ ಚಂದನ್, ಕಾರ್ಯದರ್ಶಿ ವಿನೋದ್ ಬಂಗೇರ, ಜೊತೆ ಕಾರ್ಯದರ್ಶಿ ರಘುವೀರ್ ಸಾಲ್ಯಾನ್, ಕೋಶಾಧಿಕಾರಿ ಲೋಕನಾಥ ಪುತ್ರನ್, ಪ್ರಧಾನ ಅರ್ಚಕ ಯಾದವ ಬಂಗೇರ, ತಾರಾನಾಥ ಸುವರ್ಣ ಹಾಗೂ ಮಂದಿರದ ಸದಸ್ಯರು ಉಪಸ್ಥಿತರಿದ್ದರು.


