Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ದೇವರು ಕಾಣಲು ಶುಕ್ರವಾರ-ಭಾನುವಾರ ಬೇಕಿಲ್ಲ ನಿತ್ಯವೂ ಹಿಂದೂಗಳಿಗೆ ದೇವರನ್ನು ಕಾಣಬಹುದು : ಡಾ. ಕಲ್ಲಡ್ಕ ಭಟ್

UllalaVaniBy UllalaVaniApril 16, 2021Updated:April 16, 2021No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ: ಮಣ್ಣು, ಕಲ್ಲು, ಮರ, ಪ್ರಾಣಿಪಕ್ಷಿಗಳಲ್ಲಿ ದೇವರನ್ನು ಕಾಣುವವರು ಹಿಂದೂಗಳು. ಇಲ್ಲಿ ದೈವೀ ಶಕ್ತಿಯೆದುರು ಅನ್ಯಾಯವೆಸಗಿ ಬದುಕಲು ಸಾಧ್ಯವೇ ಇಲ್ಲ. ಕೆಲವರಿಗೆ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಮಾಡಿದರೆ , ಇನ್ನು ಕೆಲವರಿಗೆ ಭಾನುವಾರ ಪ್ರಾರ್ಥನೆ ಮಾಡಿದಲ್ಲಿ ಮಾತ್ರ ದೇವರು ಸಿಗುತ್ತಾನೆ. ಆದರೆ ಹಿಂದೂ ಧರ್ಮಕ್ಕೆ ಪ್ರತಿನಿತ್ಯವೂ ಪ್ರಾರ್ಥನೆ ಮಾಡಿದಲ್ಲಿ ದೇವರು ಕಾಣುತ್ತಾನೆ ಎಂದು ಆರ್ ಎಸ್ ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿ ಸಮಿತಿ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಕೊರಗತನಿಯ ಸೇವಾ ಸಮಿತಿ (ಕೆಟಿಎಸ್ ಎಸ್ ಬಾಯ್ಸ್ ) ಪಿಲಾರು ಪ್ರಕಾಶನಗರ ದ 10 ನೇ ವಾರ್ಷಿಕೋತ್ಸವ ಹಾಗೂ ಬಿಸು ಪರ್ಬ-2021 ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿ ಮಾತನಾಡಿದರು.

ಹಿಂದೂಗಳ ದೇವರ ಆರಾಧನೆಗೆ ನಿಗದಿತ ಸಮಯವಿಲ್ಲ, ದಿನವಿಲ್ಲ, ಧಿಕ್ಕುಗಳಿಲ್ಲ. ಆದರೆ ಕೆಲವರಿಗೆ ಶುಕ್ರವಾರ ನಮಾಜ್ ಮಾಡಿದರೆ ಮಾತ್ರ ದೇವರು ಕಾಣುತ್ತಾನೆ. ಇನ್ನು ಕೆಲವರಿಗೆ ಭಾನುವಾರ ಪ್ರಾರ್ಥನೆ ಮಾಡಿದಲ್ಲಿ ಮಾತ್ರ ದೇವರು ಒಲಿಯುತ್ತಾನೆ ಎಂದ ಅವರು ಅರ್ಥವಿಲ್ಲದ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಿದ್ದೇವೆ, ಯಾವುದೇ ಆಧಾರವಿಲ್ಲದೆ ಆಂಗ್ಲರು ತೋರಿಸಿದ ದಿನವನ್ನು ಹೊಸವರ್ಷವೆಂದು ಆಚರಿಸುತ್ತಿದ್ದೇವೆ. ಆದರೆ ಪರಿಸರವನ್ನೇ ಆಧಾರವಾಗಿಟ್ಟುಕೊಂಡು ಪ್ರಕೃತಿಯನ್ನು ಆರಾಧಿಸುವ ಹಿಂದೂ ಸಮಾಜ , ಪ್ರಾಕೃತಿಕವಾಗಿ ಅರಳುವ, ಚಿಗುರುವ ಸಮಯವನ್ನು ಆಧಾರವಾಗಿಟ್ಟುಕೊಂಡು ಹೊಸವರ್ಷದ ಆರಂಭವನ್ನು ಮಾಡುತ್ತಿದ್ದೇವೆ. ಜಗತ್ತಿನ ಯಾವುದೇ ಮೂಲೆಗೂ ತೆರಳಿದರೂ ನಮ್ಮ ಸಂಸ್ಕøತಿಯ ಭಾಗ ಅಲ್ಲಿರುತ್ತವೆ . ಸರಿದಾರಿಯಲ್ಲಿ ಹೋಗಲು ಇರುವ ಚಿಂತನೆ ಹಿಂದೂಗಳಲ್ಲಿ ಬೆಳೆಯಬೇಕಿದೆ. ಉಳ್ಳಾಲದಲ್ಲಿಯೂ ನಾವು ನಾವೇ ಗಲಾಟೆ ಮಾಡುವುದರಿಂದ ಒಗ್ಗಟ್ಟಿಲ್ಲದೆ ಒಡಕು ಕಾಣುತ್ತಿದೆ. ಎಲ್ಲರಿಗೂ ಒಳಿತು ಬಯಸುವ ಸಮಾಜ ಹಿಂದೂ ಸಮಾಜ. ಎಲ್ಲಾ ಧರ್ಮೀಯರನ್ನು ಜತೆಯಾಗಿ ಬಾಳಲು ಅವಕಾಶ ಮಾಡಿಕೊಟ್ಟಂತಹ ಸಮಾಜ ಇದು. ಕೊರಗಜ್ಜನನ್ನು ಎಲ್ಲಾ ಧರ್ಮೀಯರು ಆರಾಧಿಸುತ್ತಾರೆ. ಅಂತಹ ದೈವೀ ಕಲೆಗೆ ಅಪಚಾರ ಎಸಗಿದರೆ ಅದು ಬಿಡುವುದಿಲ್ಲ. ಇದಕ್ಕೆ ಇತ್ತೀಚೆಗೆ ಓರ್ವ ಸತ್ತು, ಇನ್ನೋರ್ವನಿಗೆ ಹುಚ್ಚು ಹಿಡಿದಿರುವುದು ಸಾಕ್ಷಿ. ಹಿಂದೆ ಧರ್ಮ ಮತ್ತು ಸಂಸ್ಕøತಿ ಮನೆಯೊಳಗೆ ಇತ್ತು. ತಾಯಂದಿರೇ ಸಂಸ್ಕøತಿಯನ್ನು ಉಳಿಸಿದವರು. ಆದರೆ ಈಗ ತಾಯಿ ಅನ್ನುವುದು ಪ್ರದರ್ಶನಕ್ಕೆ ಇಟ್ಟ ವಸ್ತಿನಂತೆ ವರ್ತಿಸಲಾಗುತ್ತಿದೆ. ನಮ್ಮ ವಿಚಾರಗಳನ್ನು ಉಳಿಸಿ ಹೊರಗಿನ ಉತ್ತಮ ವಿಚಾರಗಳನ್ನು ಮಾತ್ರ ಸ್ವೀಕರಿಸಬೇಕಿದೆ. ಈ ಮೂಲಕ ಸಂಸ್ಕøತಿಯ ಪಾಠ ತಾಯಂದಿರಿಂದ ಆಗಬೇಕು ಎಂದರು.
ಉದ್ಯಮಿ ಅನಿಲ್ ದಾಸ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಂ.ಜಾ.ವೇ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಕುಂಪಲ, ಹಿಂದೂಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಆರ್ ಶೆಟ್ಟಿ ಅಡ್ಯಾರುಪದವು ,ಬಿಜೆಪಿ ಜಿಲ್ಲಾ ಯುವಮೋರ್ಚ ಕಾರ್ಯದರ್ಶಿ ಸುಜಿತ್ ಶೆಟ್ಟಿ ಕಂಬ್ಲಪದವು, ಉದ್ಯಮಿ ಶಿವಪ್ಪ ಆಚಾರ್ಯ, ಕೊರಗ ತನಿಯ ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ಪೂಜಾರಿ, ಕೊರಗ ತನಿಯ ಸೇವಾ ಸಮಿತಿ ಮಹಿಳಾ ಮಂಡಳಿ ಅಧ್ಯಕ್ಷೆ ವೈಷಾಲಿ ರಾಜೇಶ್ ಪೂಜಾರಿ , ಕೆಟಿಎಸ್ ಎಸ್ ಬಾಯ್ಸ್ ಇದರ ಅಧ್ಯಕ್ಷ ನಿಶಾಂತ್ ಪ್ರಕಾಶನಗರ ಉಪಸ್ಥಿತರಿದ್ದರು.

ಸಿಂಧು ಶೆಟ್ಟಿ ಸ್ವಾಗತಿಸಿದರು. ಪ್ರವೀಣ್ ಎಸ್.ಕುಂಪಲ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

August 11, 2025

ಪಜೀರಿನಲ್ಲಿ ಧಾರ್ಮಿಕ ಸಭೆ ಉದ್ಘಾಟನೆ ; ಧರ್ಮಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ : ರವೀಂದ್ರ ರೈ ಕಲ್ಲಿಮಾರ್

August 11, 2025

ಜೆಪ್ಪು ಭಗಿನಿ ಸಮಾಜದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ರಕ್ಷಾ ಬಂಧನ ಆಚರಣೆ

August 11, 2025
Leave A Reply

Advertise
ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

By UllalaVaniAugust 11, 20250

ಉಳ್ಳಾಲ: ಇಲ್ಲಿನ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಉಳ್ಳಾಲ ವಲಯ ಜಂಟಿಯಾಗಿ ಉಳ್ಳಾಲದ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಪಜೀರಿನಲ್ಲಿ ಧಾರ್ಮಿಕ ಸಭೆ ಉದ್ಘಾಟನೆ ; ಧರ್ಮಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ : ರವೀಂದ್ರ ರೈ ಕಲ್ಲಿಮಾರ್

August 11, 2025

ಜೆಪ್ಪು ಭಗಿನಿ ಸಮಾಜದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ರಕ್ಷಾ ಬಂಧನ ಆಚರಣೆ

August 11, 2025

`ನಮ್ಮ ಗ್ರಾಹಕರೇ ನಮ್ಮ ಬ್ರಾಂಡ್ ರಾಯಭಾರಿಗಳುʼ : ಸಹಕಾರ ರತ್ನ ಅನಿಲ್ ಲೋಬೊ ಎಂಸಿಸಿ ಬ್ಯಾಂಕ್‌ 10ನೇ ಎಟಿಎಂ ಸುರತ್ಕಲ್‌ ಶಾಖೆಯಲ್ಲಿ ಉದ್ಘಾಟನೆ

August 11, 2025
1 2 3 … 1,559 Next
Automatic YouTube Gallery

ಹೆಣ್ಮಕ್ಕಳು ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು : ಇಫ್ತಿಕಾರ್ ಅಲಿ

ಎನ್ಎಸ್ ಯುಐ ನಾಯಕನ ಸ್ಮರಣಾರ್ಥ "ಓಂಶ್ರೀ ಪ್ರಶಸ್ತಿ"ಪ್ರಧಾನ,ಸನ್ಮಾನ ಕಾರ್ಯಕ್ರಮ.
ಹೆಣ್ಮಕ್ಕಳು ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು : ಇಫ್ತಿಕಾರ್ ಅಲಿ
Now Playing
ಹೆಣ್ಮಕ್ಕಳು ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು : ಇಫ್ತಿಕಾರ್ ಅಲಿ
ಎನ್ಎಸ್ ಯುಐ ನಾಯಕನ ಸ್ಮರಣಾರ್ಥ "ಓಂಶ್ರೀ ಪ್ರಶಸ್ತಿ"ಪ್ರಧಾನ,ಸನ್ಮಾನ ಕಾರ್ಯಕ್ರಮ.
ಎನ್ಎಸ್ ಯುಐ ನಾಯಕನ ಸ್ಮರಣಾರ್ಥ "ಓಂಶ್ರೀ ಪ್ರಶಸ್ತಿ"ಪ್ರಧಾನ,ಸನ್ಮಾನ ಕಾರ್ಯಕ್ರಮ.
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
Now Playing
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications