Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಅ.6 ರಿಂದ12ರ ವರೆಗೆ ಕೊಲ್ಯದಲ್ಲಿ 43 ನೇ ವರ್ಷದ ಶಾರದಾ ಮಹೋತ್ಸವ.ಅ.7 ರಂದು ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರದಾ ಮಂದಿರ ಲೋಕಾರ್ಪಣೆ

UllalaVaniBy UllalaVaniOctober 2, 2024No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ: ಅ.6 ರಿಂದ 12ರ ವರೆಗೆ ಕೊಲ್ಯದ ಶ್ರೀ ಶಾರದಾ ಸೇವಾ ಟ್ರಸ್ಟ್ ,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ,ಶ್ರೀ ಶಾರದಾ ಮಂದಿರ ನಿರ್ಮಾಣ ಸಮಿತಿ ವತಿಯಿಂದ 43 ನೇ ವರ್ಷದ ಶಾರದಾ ಮಹೋತ್ಸವು ವಿಜೃಂಭಣೆಯಿಂದ ನಡೆಯಲಿದ್ದು, ಅ.7 ರಂದು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಾರದಾ ಮಂದಿರದ ಲೋಕಾರ್ಪಣೆ ನಡೆಯಲಿದೆ ಎಂದು ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಪ್ರದಾನ ಸಂಚಾಲಕರಾದ ಪ್ರವೀಣ್ ಎಸ್. ಕುಂಪಲ ತಿಳಿಸಿದರು.
ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಕೊಲ್ಯದಲ್ಲಿನ ಶಾರದಾ ಕಟ್ಟೆಯಲ್ಲಿ ಶಾರದಾ ಮಾತೆಯ ಉತ್ಸವವನ್ನು ನಡೆಸಲಾಗುತ್ತಿತ್ತು.ಬಳಿಕ ಶಾರದಾ ಕಟ್ಟೆಯು ಶಾರದಾ ಸಭಾ ಭವನವಾಗಿತ್ತು.ಹೆದ್ದಾರಿ ಅಗಲೀಕರಣಕ್ಕೆ ಶಾರದಾ ಸಭಾ ಭವನವನ್ನು ಬಿಟ್ಟು ಕೊಟ್ಟಿದ್ದು, ಹಿಂದಿನ ಕಟ್ಟಡದ ಪೂರ್ವ ಭಾಗದಲ್ಲಿ ಹನ್ನೆರಡು ಸೆಂಟ್ಸ್ ಜಾಗ ಖರೀದಿಸಿ ಮೂರು ಸಮಿತಿಗಳು ಜಂಟಿಯಾಗಿ ಸಹೃದಯಿ ದಾನಿಗಳ ಸಹಕಾರದಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಶಾರದಾ ಮಂದಿರವನ್ನು ನಿರ್ಮಿಸಲಾಗಿದೆ.
ಅ.6 ರಂದು ಶಾರದೋತ್ಸವ ಕಾರ್ಯಕ್ರಮ ಆರಂಭವಾಗಿ ಬೆಳಿಗ್ಗೆ ಉಗ್ರಾಣ ಮುಹೂರ್ತಕ್ಕೆ ಕಾಪಿಕಾಡು ಉಮಾ ಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಅವರು ದೀಪ ಪ್ರಜ್ವಲಿಸಲಿರುವರು.ಆ ದಿನ ಸಂಜೆ ನಾಲ್ಕು ಗಂಟೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಶಾರದಾ ಮಾತೆಯ ನೂತನ ಬೆಳ್ಳಿಯ ಬಿಂಬದೊಂದಿಗೆ ನಡೆಯಲಿರುವ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಗೆ ಚೀರುಂಭ ಭಗವತೀ ಕ್ಷೇತ್ರದ ಪ್ರದಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದಾರೆ.ಸಂಜೆ 7.30 ಕ್ಕೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಜೀರು ನೃತ್ಯ ಲಹರಿ ನಾಟ್ಯಾಲಯದ ವಿದೂಷಿ ರೇಷ್ಮ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಅ.7 ರ ಸೋಮವಾರದಂದು ಬೆಳಿಗ್ಗೆ ಸೋಮೇಶ್ವರ ಸೋಮನಾಥ ದೇವಸ್ಥಾನದ ಅರ್ಚಕರಾದ ಮಧ್ವೇಶ್ ಭಟ್ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ನೂತನ ಬೆಳ್ಳಿಯ ಬಿಂಬ ಪ್ರತಿಷ್ಠೆ ನಡೆಯಲಿದೆ.ಬೆಳಿಗ್ಗೆ 10.30 ಕ್ಕೆ ನೂತನ ಶಾರದಾ ಮಂದಿರವನ್ನು ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ನ ಮಾಲಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಲೋಕಾರ್ಪಣೆ ನಡೆಸಲಿದ್ದಾರೆ.ಗುರುಪುರ ವಜ್ರದೇಹಿ ಸಂಸ್ಥಾನದ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.ಸಂಜೆಯ ಧಾರ್ಮಿಕ ಸಭೆಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಮೋಹನ್ ಆಳ್ವ ಉದ್ಘಾಟಿಸಲಿರುವರು.ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ತಂಡರ್ ಗೈಸ್ ಡ್ಯಾನ್ಸ್ ಫೌಂಡೇಷನ್ ಬಜ್ಪೆ ಇವರಿಂದ ಕ್ಷೇತ್ರ-ಪುರಾಣ-ಮಂಜರಿ ಕಾರ್ಯಕ್ರಮ ನಡೆಯಲಿದೆ.
ಅ.8ರ ಮಂಗಳವಾರದಂದು ಬೆಳಿಗ್ಗೆ ಏಕಾಹ ಭಜನೆ ಪ್ರಾರಂಭಗೊಳ್ಳಲಿದ್ದು ಅತಿಥಿಗಳು ನಂದಾದೀಪ ಪ್ರಜ್ವಲಿಸಲಿದ್ದಾರೆ.ಸಂಜೆ 5.30 ಕ್ಕೆ ಶಾರದಾ ಮಾತೆಯ ವಿಗ್ರಹವು ಮೆರವಣಿಗೆಯೊಂದಿಗೆ ಮಂದಿರಕ್ಕೆ ಪ್ರವೇಶಿಸಲಿದೆ.
ಅ.9ರ ಬುಧವಾರ ಬೆಳಿಗ್ಗೆ 8.20ಕ್ಕೆ ಅರ್ಚಕರಾದ ಮಧ್ವೇಶ್ ಭಟ್ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ವಿಗ್ರಹದ ಪ್ರತಿಷ್ಠೆ ನಡೆಯಲಿದೆ.ಬೆಳಿಗ್ಗೆ 11 ಗಂಟೆಗೆ ಶಾರದಾ ಮಹಿಳಾ ಮಂಡಳಿ ಸದಸ್ಯರಿಂದ ಲಲಿತ ಸಹಸ್ರನಾಮ ,ಮಕ್ಕಳಿಗೆ ವಿದ್ಯಾರಂಭ ಪೂಜೆ ನಡೆಯಲಿದೆ.
ರಾತ್ರಿ 9 ಗಂಟೆಗೆ ವಿಧಾತ್ರಿ ಕಲಾವಿದೆರ್ ಕುಡ್ಲದ ಕಲಾವಿದರಿಂದ “ದೈವರಾಜೆ ಶ್ರೀ ಬಬ್ಬು ಸ್ವಾಮಿ”ಭಕ್ತಿ ಪ್ರದಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಅ.10 ರ ಗುರುವಾರ ಸಂಜೆ 6.30ಕ್ಕೆ ಮಾತೃ ಸಂಗಮ ನಡೆಯಲಿದ್ದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಊರ್ಮಿಳ ರಮೇಶ್ ಕುಮಾರ್ ಸಭೆಯನ್ನು ಉದ್ಘಾಟಿಸಲಿದ್ದಾರೆ.ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಸಾದ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡಲಿದ್ದು,ಅತಿಥಿ ಗಣ್ಯರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.ರಾತ್ರಿ 8.30 ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಲಿದೆ.
ಅ.11 ರ ಶುಕ್ರವಾರದಂದು ಬೆಳಿಗ್ಗೆ 10.30 ಕ್ಕೆ ಧಾರ್ಮಿಕ ಸಭಾ ಸಮಾರೋಪ ಕಾರ್ಯಕ್ರಮ‌ ನಡೆಯಲಿದ್ದು ಮಸ್ಕತ್ ನ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನ ಮನೆ ದೀಪ ಪ್ರಜ್ವಲಿಸಲಿದ್ದಾರೆ.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದು,ಸಭೆಯಲ್ಲಿ ಇನ್ನಿತರ ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸಂಜೆ 7 ಗಂಟೆಗೆ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ನಿರ್ದೇಶನದಲ್ಲಿ ” ಭಕ್ತಿ-ಭಾವ ಸಂಗೀತ-ಚಿತ್ರ ವೈಭವ” ನಡೆಯಲಿದೆ.ರಾತ್ರಿ 8 ಗಂಟೆಗೆ ರಂಗ ಪೂಜೆ ನಡೆದು ಮಹಾಪೂಜೆ ನೆರವೇರಲಿದೆ.
ಅ.12ರ ಶನಿವಾರ ಸಂಜೆ 6.30 ಕ್ಕೆ ಶ್ರೀ ಶಾರದಾ ಮಾತೆಗೆ ವಿಸರ್ಜನಾ ಮಹಾಪೂಜೆ ನಡೆದು ಕೊಲ್ಯದಿಂದ ಕೋಟೆಕಾರು ಮಾರ್ಗವಾಗಿ ಶೋಭಾಯಾತ್ರೆ‌ ನಡೆದು ಸೋಮೇಶ್ವರ,ಸೋಮನಾಥ ದೇವಸ್ಥಾನದ ಕಡಲ ಕಿನಾರೆಯಲ್ಲಿ ಶಾರದಾ ಮಾತೆಯ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು.
ಶಾರದಾ ಮಹೋತ್ಸವದ ಏಳು ದಿನಗಳ ಅವಧಿಯಲ್ಲಿ ನಿತ್ಯವೂ ಮದ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯಲಿದ್ದು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾರದಾ ಮಾತೆಯ ಕೃಪಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪ್ರವೀಣ್ ಕುಂಪಲ ವಿನಂತಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಶಾರದಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್.ಹೆಚ್ ,ಶಾರದಾ ಉತ್ಸವ ಸಮಿತಿ ಅಧ್ಯಕ್ಷರಾದ ಗಣೇಶ್ ಕೊಲ್ಯ ,ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ.ಎಸ್,ಶಾರದಾ ಮಂದಿರ ನಿರ್ಮಾಣ ಸಮಿತಿಯ ಪ್ರದಾನ ಕಾರ್ಯದರ್ಶಿ ತೋನ್ಸೆ ಪುಷ್ಕಲ್ ಕುಮಾರ್ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ತಿಂದ  ಹರೇಕಳ ನಿವಾಸಿ ಪೊಲೀಸ್‌ ಪೇದೆ ಚಿಕಿತ್ಸೆ ಫಲಕಾರಿಯಾಗದೆ ಸಾವು

July 28, 2025

ಎಂಸಿಸಿ ಬ್ಯಾಂಕ್ ‘ಐಡಿಯಾ ಸಮ್ಮಿತ್ 2025’ ಆಯೋಜನೆ

July 28, 2025

ಸೈಂಟ್ ಜೋಸೆಫ್ ವಿವಿ, ಬೆಂಗಳೂರು ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗ – ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ

July 28, 2025

Comments are closed.

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ತಿಂದ  ಹರೇಕಳ ನಿವಾಸಿ ಪೊಲೀಸ್‌ ಪೇದೆ ಚಿಕಿತ್ಸೆ ಫಲಕಾರಿಯಾಗದೆ ಸಾವು

By UllalaVaniJuly 28, 20250

ಹರೇಕಳ :  ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸ್‌…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಎಂಸಿಸಿ ಬ್ಯಾಂಕ್ ‘ಐಡಿಯಾ ಸಮ್ಮಿತ್ 2025’ ಆಯೋಜನೆ

July 28, 2025

ಸೈಂಟ್ ಜೋಸೆಫ್ ವಿವಿ, ಬೆಂಗಳೂರು ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗ – ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ

July 28, 2025

ಮೈಕಲ್ ಡಿ ಸೊಜಾ – ಸಿಒಡಿಪಿ ಎಡ್ಯುಕೇರ್ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನ ವಿತರಣೆ

July 28, 2025
1 2 3 … 1,541 Next
Automatic YouTube Gallery

ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು

ತೊಕ್ಕೊಟ್ಟು: ಹಿರಿಯ ಬಿಜೆಪಿ
ಮುಖಂಡೆ ಅಂಗಡಿಯಿಂದ ಕಳವು
#ullalavani #news #ullala #kannadanews #mangalore #breakingnews #thokkottu
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು
Now Playing
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು
ತೊಕ್ಕೊಟ್ಟು: ಹಿರಿಯ ಬಿಜೆಪಿ ಮುಖಂಡೆ ಅಂಗಡಿಯಿಂದ ಕಳವು #ullalavani #news ...
ತೊಕ್ಕೊಟ್ಟು: ಹಿರಿಯ ಬಿಜೆಪಿ
ಮುಖಂಡೆ ಅಂಗಡಿಯಿಂದ ಕಳವು
#ullalavani #news #ullala #kannadanews #mangalore #breakingnews #thokkottu
ಕೊಯನಾಡು ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ - ನಾಲ್ವರು ದುರ್ಮರಣ
Now Playing
ಕೊಯನಾಡು ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ - ನಾಲ್ವರು ದುರ್ಮರಣ
ಕೊಯನಾಡು ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ - ನಾಲ್ವರು ದುರ್ಮರಣ ...
ಕೊಯನಾಡು ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ - ನಾಲ್ವರು ದುರ್ಮರಣ
#ullalavani #news #ullala #kannadanews #breakingnews
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications