Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಯೋಗ ಮತ್ತು ಧ್ಯಾನದಿಂದ ಮನಸ್ಸಿಗೆ ವಿಶ್ರಾಂತಿ :ಕೆ.ಎಸ್.ಹೆಗ್ಡೆ ಮಾನಸಿಕ ವಿಭಾಗಗಳ ಸಾಮಾಜಿಕ ಕಾರ‍್ಯಕರ್ತೆ ದೀಪ್ತಿ

UllalaVaniBy UllalaVaniJanuary 6, 2025Updated:January 6, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp


ನರಿಂಗಾನ: ಮಾನಸಿಕ ಅಸಮತೋಲನ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಸಮಾನವಾದ ನಡವಳಿಕೆಗೆ ಅಡಚಣೆಯಾಗಬಹುದು. ಪ್ರತಿದಿನ ಕೇವಲ 20 ನಿಮಿಷ ವ್ಯಾಯಾಮ ಮಾಡಿದರೂ, ದೇಹದ ಜೊತೆಗೆ ಮನಸ್ಸಿಗೂ ಶ್ರೇಷ್ಠವಾದ ಶಾಂತಿ ದೊರೆಯುತ್ತದೆ. ಯೋಗ ಮತ್ತು ಧ್ಯಾನ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮಾನಸಿಕ ವಿಭಾಗಗಳ ಸಾಮಾಜಿಕ ಕಾರ‍್ಯಕರ್ತೆ ದೀಪ್ತಿ ಅಭಿಪ್ರಾಯಪಟ್ಟರು.
ಅವರು ನರಿಂಗಾನ ಗ್ರಾಮದ ಕಲ್ಲರಕೋಡಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಲೈಫ್ ನೆಸ್ಟ್ ಟ್ರಸ್ಟ್ , ಉಳ್ಳಾಲವಾಣಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಹೆಲ್ದೀ ಹ್ಯಾಬಿಟ್ಸ್ ಆಂಡ್ ನಿಶಬ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಏಕಾಂತ ಬಯಸುವುದು, ನಿದ್ರೆ ಸಮಸ್ಯೆ, ಏಕಾಗ್ರತೆಯ ಕೊರತೆ, ಆಸಕ್ತಿಯ ಕೊರತೆಯು ಒತ್ತಡಗಳಿಂದ ಹೆಚ್ಚಾಗಬಹುದು. ಓದು ಮತ್ತು ಆಟಕ್ಕೆ ಸಮಾನ ಪ್ರಮಾಣದಲ್ಲಿ ಸಮಯ ಕಾದಿರಿಸಿ. ವಿಶ್ರಾಂತಿ ಕೂಡ ಮುಖ್ಯವೆಂದು ಪರಿಗಣಿಸಿಕೊಂಡು ಕಲಿಕೆ ಮುಂದುವರಿಸಬೇಕಿದೆ ಎಂದರು.
ಪ್ರಸೂತಿ ಹಾಗೂ ಗರ್ಭಿಣಿಯರ ವಿಭಾಗದ ಡಾ. ನಿಶಾ ಎಂ. ಮಾತನಾಡಿ, ಪ್ರಾಯೋದ್ಭವ ಹಂತದಲ್ಲಿ ದೇಹದ ಬೆಳವಣಿಗೆ ನಡೆಯುವುದರಿಂದ ಪೌಷ್ಠಿಕಾಂಶ ತುಂಬಿರುವ ಆಹಾರ ಸೇವಿಸುವುದು ಅತೀ ಮುಖ್ಯ. ಹಣ್ಣು, ತರಕಾರಿಗಳು, ಪ್ರೋಟೀನ್ ಹಾಗೂ ಕಬ್ಬಿಣವನ್ನು ಒಳಗೊಂಡ ಆಹಾರವನ್ನೂ ಕೂಡ ಸೇರಿಸಿಕೊಳ್ಳಬೇಕಿದೆ. ಆರೋಗ್ಯದ ಮೇಲೆ ಒತ್ತಡವನ್ನು ನಿವಾರಿಸುವಲ್ಲಿ ಶಾರೀರಿಕ ಚಟುವಟಿಕೆ ಬಹಳ ಮುಖ್ಯ ಎಂದರು.
ದೈನಂದಿನ ಜೀವನದಲ್ಲಿ ಶೌಚಾಲಯದ ಸ್ವಚ್ಛತೆ, ಶುದ್ಧ ನೀರಿನ ಬಳಕೆ ಮತ್ತು ಸ್ನಾನ ಮುಂತಾದದ್ದು ಹೆಚ್ಚು ಮುಖ್ಯ. ಈ ಮೂಲಕ ಸೋಂಕುಗಳಿಂದ ದೂರ ಇರಬಹುದು. ಪ್ರಾಯೋದ್ಭವದ ಹಂತದಲ್ಲಿ ಮಾಸಿಕ ಚಕ್ರ ಆರಂಭವಾಗುವುದು ಸಹಜ. ಇದನ್ನು ಎಲ್ಲ ವಿದ್ಯಾರ್ಥಿನಿಯರು ಸಹಜವಾಗಿ ಒಪ್ಪಿಕೊಂಡು ವೈಜ್ಞಾನಿಕ ದೃಷ್ಟಿಕೋನ ಹೊಂದಬೇಕು. ಈ ಸಮಯದಲ್ಲಿ ಸುರಕ್ಷಿತ ಶೌಚನೀತಿ ಹಾಗೂ ಶೌಚಾಲಯದ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಅಗತ್ಯ ಎಂದರು.
ಈ ಸಂದರ್ಭ ಕಿವಿ,ಮೂಗು , ಕಣ್ಣು ವಿಭಾಗದ ಸಹಾಯಕ ಪ್ರೊ. ಡಾ. ಗೌತಮ್ ಎಂ.ಕೆ, ಕಲ್ಲರಕೋಡಿ ದ.ಕ.ಜಿ.ಪಂ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಜಾತಾ ಉಪಸ್ಥಿತರಿದ್ದರು. ಶಿಕ್ಷಕಿ ಸೀಮ ಮರಿಯಾ ಡಿಸೋಜ ಸ್ವಾಗತಿಸಿದರು. ವಿನಿತಾ ನಿರೂಪಿಸಿದರು. ಜಯಲಕ್ಷ್ಮೀ ಜಿ. ವಂದಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಡುಪಿ : ಮೂವರು ಸ್ನೇಹಿತರಿಂದ ವ್ಯಕ್ತಿಯೋರ್ವ ಹತ್ಯೆ

August 13, 2025

ಉಡುಪಿ : ನಿರ್ಮಾಣ ಹಂತದ ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ತಾಮ್ರದ ಪೈಪ್ ಕಳವು – ಇಬ್ಬರು ಬಂಧನ

August 13, 2025

ಮಂಗಳೂರು : ಆಗಸ್ಟ್ 18 ಮತ್ತು 19ರಂದು ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ

August 13, 2025

Comments are closed.

Advertise
ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025

ಉಡುಪಿ : ಮೂವರು ಸ್ನೇಹಿತರಿಂದ ವ್ಯಕ್ತಿಯೋರ್ವ ಹತ್ಯೆ

By UllalaVaniAugust 13, 20250

ಉಡುಪಿ : ವ್ಯಕ್ತಿಯೋರ್ವನನ್ನು ಮೂವರು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉಡುಪಿಯ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ಆಗಸ್ಟ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಡುಪಿ : ನಿರ್ಮಾಣ ಹಂತದ ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ತಾಮ್ರದ ಪೈಪ್ ಕಳವು – ಇಬ್ಬರು ಬಂಧನ

August 13, 2025

ಮಂಗಳೂರು : ಆಗಸ್ಟ್ 18 ಮತ್ತು 19ರಂದು ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ

August 13, 2025

ವಿಟ್ಲ : ಯಕ್ಷಗಾನ ಕಲಾವಿದ ರವಿ ಜೋಶಿ ಆತ್ಮಹತ್ಯೆ

August 13, 2025
1 2 3 … 1,563 Next
Automatic YouTube Gallery

ಉಳ್ಳಾಲಬೈಲಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಜಿಲ್ಲಾ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮತ್ತು ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯಿತು
ಉಳ್ಳಾಲಬೈಲಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಜಿಲ್ಲಾ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ
Now Playing
ಉಳ್ಳಾಲಬೈಲಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಜಿಲ್ಲಾ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮತ್ತು ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ...
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮತ್ತು ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯಿತು
ಇನೋವಾ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಜಾನುವಾರು ಸಾಗಾಟ ಪೊಲೀಸರನ್ನು ದೂಡಿ ಇಬ್ಬರು ಪರಾರಿ, ಮೂವರು ವಶಕ್ಕೆ
Now Playing
ಇನೋವಾ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಜಾನುವಾರು ಸಾಗಾಟ ಪೊಲೀಸರನ್ನು ದೂಡಿ ಇಬ್ಬರು ಪರಾರಿ, ಮೂವರು ವಶಕ್ಕೆ
ಇನೋವಾ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಜಾನುವಾರು ಸಾಗಾಟ ಪೊಲೀಸರನ್ನು ...
ಇನೋವಾ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಜಾನುವಾರು ಸಾಗಾಟ
ಪೊಲೀಸರನ್ನು ದೂಡಿ ಇಬ್ಬರು ಪರಾರಿ, ಮೂವರು ವಶಕ್ಕೆ
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications