Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಬಾಂಗ್ಲ ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ಪ್ರತಿಭಟನಾ ಜಾಥಾಕ್ಕೆ ಮಂಗಳೂರು ಕ್ಷೇತ್ರದಿಂದ 2,500 ಮಂದಿ ಭಾಗಿ

UllalaVaniBy UllalaVaniDecember 2, 2024Updated:December 2, 2024No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ : ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಡಿ. 4 ರಂದು ಜ್ಯೋತಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಸಂಘಪರಿವಾರ ಮತ್ತು ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದಿಂದಲೂ 2500 ಮಂದಿಯನ್ನು ನಿರೀಕ್ಷಿಸಲಾಗಿದೆ. ದೈವಸ್ಥಾನ, ದೇವಸ್ಥಾನ ಹಾಗೂ ಮಂದಿರಗಳಿಂದ ಸರ್ವ ಹಿಂದೂ ಬಾಂಧವರು ಭಾಗವಹಿಸುವಂತೆ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಕರೆ ನೀಡಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ವ್ಯಾಪಕ ಹಲ್ಲೆ ದಾಳಿಗಳಾಗುತ್ತಿವೆ. ಬೇರೆಡೆ ಅಲ್ಪಸಂಖ್ಯಾತರ ಮೇಲೆ ದಾಳಿಗಾಗಳಾಗುವಾಗ ಮಾತನಾಡಬೇಕಾದ ಸಂಸ್ಥೆಗಳು ಮೌನವಾಗಿದೆ. ಇದನ್ನು ಖಂಡಿಸಿ ಇಸ್ಕಾನ್ ಸಂಸ್ಥೆಯ ಸನ್ಯಾಸಿ ಚಿನ್ಮಯೀ ಕೃಷ್ಣದಾಸ್ ಪ್ರಭು ಕೇಸರಿ ಪತಾಕೆ ಹಿಡಿದು ಪ್ರತಿಭಟಿಸಿದಾಗ, ಅವರ ಮೇಲೆಯೂ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹಿಂದೂ ನಾಯಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಬಾಂಗ್ಲಾದಲ್ಲಿ ನಡೆಯುತ್ತಿರುವ ವ್ಯಾಪಕ ಅನಾಚಾರದ ವಿರುದ್ದ, ಅಲ್ಪಸಂಖ್ಯಾತ ಹಿಂದುಗಳ ಮತ್ತು ಹಿಂದೂ ಶ್ರದ್ದಾ ಕೇಂದ್ರಗಳ ರಕ್ಷಣೆಗೆ ಬೃಹತ್ ಜನಾಂದೋಲನ ಕಾರ್ಯಕ್ರಮ ಹಿಂದು ಹಿತರಕ್ಷಣಾ ಸಮಿತಿ ಮಂಗಳೂರು ಇದರ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ಮತ್ತು ಸಭೆಯು ಡಿ. 4 ರಂದು ಜ್ಯೋತಿ ಬಳಿಯ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿಯಿಂದ ಬೆ. 10 ಗಂಟೆಗೆ ಬೃಹತ್ ಮೆರವಣಿಗೆ ಮೂಲಕ ಹಾದುಹೋಗಿ ಮಿನಿ ವಿಧಾನಸೌಧದ ಬಳಿ ಪ್ರತಿಭಟನಾ ಸಭೆ ನಡೆಯಲಿದೆ.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ವಕ್ತಾರರಾದ ಮೋಹನ್ ರಾಜ್ ಕೆ.ಆರ್, ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಯುವಮೋರ್ಚಾ ಮಂಡಲ ಅಧ್ಯಕ್ಷ ಮುರಳಿ ಕೊಣಾಜೆ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಜೆಪ್ಪು ಭಗಿನಿ ಸಮಾಜದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ರಕ್ಷಾ ಬಂಧನ ಆಚರಣೆ

August 11, 2025

`ನಮ್ಮ ಗ್ರಾಹಕರೇ ನಮ್ಮ ಬ್ರಾಂಡ್ ರಾಯಭಾರಿಗಳುʼ : ಸಹಕಾರ ರತ್ನ ಅನಿಲ್ ಲೋಬೊ ಎಂಸಿಸಿ ಬ್ಯಾಂಕ್‌ 10ನೇ ಎಟಿಎಂ ಸುರತ್ಕಲ್‌ ಶಾಖೆಯಲ್ಲಿ ಉದ್ಘಾಟನೆ

August 11, 2025

ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದ ಈಜುಪಟು ಕೆ. ಚಂದ್ರಶೇಖರ ರೈ ಈಜುಕೊಳದಲ್ಲಿ ಮುಳುಗಿ ಸಾವು

August 11, 2025

Comments are closed.

Advertise
ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಜೆಪ್ಪು ಭಗಿನಿ ಸಮಾಜದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ರಕ್ಷಾ ಬಂಧನ ಆಚರಣೆ

By UllalaVaniAugust 11, 20250

ಮಂಗಳೂರು : ಇಂದಿನ ಕಾಲದಲ್ಲಿ ರಕ್ಷಾ ಬಂಧನದ ಅರ್ಥ ಇನ್ನೂ ವಿಸ್ತಾರವಾಗಿದೆ. ಕೆಲವರು ತಮ್ಮ ಆಪ್ತ ಸ್ನೇಹಿತರಿಗೆ, ಗುರುಗಳಿಗೆ, ಅಥವಾ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

`ನಮ್ಮ ಗ್ರಾಹಕರೇ ನಮ್ಮ ಬ್ರಾಂಡ್ ರಾಯಭಾರಿಗಳುʼ : ಸಹಕಾರ ರತ್ನ ಅನಿಲ್ ಲೋಬೊ ಎಂಸಿಸಿ ಬ್ಯಾಂಕ್‌ 10ನೇ ಎಟಿಎಂ ಸುರತ್ಕಲ್‌ ಶಾಖೆಯಲ್ಲಿ ಉದ್ಘಾಟನೆ

August 11, 2025

ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದ ಈಜುಪಟು ಕೆ. ಚಂದ್ರಶೇಖರ ರೈ ಈಜುಕೊಳದಲ್ಲಿ ಮುಳುಗಿ ಸಾವು

August 11, 2025

ಕುಡ್ತಮುಗೇರು: ಕಾರು ಡಿಕ್ಕಿ – ಪ್ರಗತಿ ಸ್ವೀಟ್ಸ್ ನ ಮಾಲಿಕ ಜಗನ್ನಾಥ ಶೆಟ್ಟಿಗಾರ್ ಗಂಭೀರ

August 8, 2025
1 2 3 … 1,559 Next
Automatic YouTube Gallery

ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ

ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
Now Playing
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
ಅಬ್ದುಲ್ ರಹಿಮಾನ್ ಹತ್ಯೆ: ಮತ್ತೊಬ್ಬನ ಬಂಧನ
ಈಜುಕೊಳದಲ್ಲಿ ಮುಳುಗಿ ಈಜುಪಟು ಸಾವು
Now Playing
ಈಜುಕೊಳದಲ್ಲಿ ಮುಳುಗಿ ಈಜುಪಟು ಸಾವು
ಈಜುಕೊಳದಲ್ಲಿ ಮುಳುಗಿ ಈಜುಪಟು ಸಾವು
ಈಜುಕೊಳದಲ್ಲಿ ಮುಳುಗಿ ಈಜುಪಟು ಸಾವು
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications