Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಮುಡಿಪು ಸಾಂಬಾರತೋಟ ಬಾವಿಗಳಲ್ಲಿ ತೈಲಾಂಶ ಪತ್ತೆ ಪ್ರಕರಣ ಇನ್ನೂ ಸಿಗದ ಪರಿಹಾರ, ಗ್ರಾಮಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ

UllalaVaniBy UllalaVaniJanuary 6, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ : ಬಾವಿ ನೀರಿನಲ್ಲಿ ಪೆಟ್ರೋಲ್ ಅಂಶ ಪತ್ತರ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ಪಜೀರು ಗ್ರಾಮ ಪಂಚಾಯಿತಿ ಮೂಲಕ ಇಂಡಿಯನ್ ಆಯಿಲ್ ಸಂಸ್ಥೆಯ ಮುಖ್ಯ ಪ್ರಬಂಧಕರಿಗೆ ನೋಟೀಸು ನೀಡಿ ವಿವರಣೆ ಕೇಳಿದರೂ ಈವರೆಗೆ ನೀಡದೇ ಇರುವುದರಿಂದ, ಗ್ರಾಮಸ್ಥರಿಗೆ ಬಾವಿಯಲ್ಲಿನ ನೀರು ಕುಡಿಯದೇ, ಪೈಪ್ ಲೈನ್ ಇಲ್ಲದ ಮನೆಮಂದಿ ನೀರಿನ ಬವಣೆಯಿಂದ ಬಳಲುತ್ತಿದ್ದಾರೆ. ಅತಿಶೀಘ್ರ ಪರಿಹಾರ ಸಿಗದೇ ಇದ್ದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿಯುವ ಎಚ್ಚರಿಕೆಯನ್ನು ನೀಡಿದ್ದಾರೆ.
ಉಳ್ಳಾಲ ತಾಲೂಕು ಪಜೀರು ಗ್ರಾಮದ ಸಾಂಬಾರತೋಟ ಪರಿಸರದ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆ ಒಂದು ಕಡೆಯಾದರೆ, ಸುಮಾರು ಏಳೆಂಟು ತಿಂಗಳುಗಳಿಂದ ಇಲ್ಲಿರುವ ನೀರಿನಲ್ಲಿ ತೈಲ ಅಂಶ ಮಿಶ್ರಣವಿರುವುದು ಇನ್ನೊಂದು ಸಮಸ್ಯೆಯಾಗಿದೆ. ಈ ಪರಿಸರದಲ್ಲಿ ನೂರಾರು ಮನೆಗಳಿದ್ದು ಏಳು ತಿಂಗಳುಗಳಿಂದ ಹತ್ತು ಕೊಳವೆ ಬಾವಿ ಹಾಗೂ 5 ಬಾವಿಗಳ ನೀರಿನಲ್ಲಿ ಕಳೆದ ಮೂರು ತಿಂಗಳುಗಳಿಂದ ಇಂಧನದ ದುರ್ವಾಸನೆ ಬರುತ್ತಿದೆ.  ಇದರಿಂದ ಸ್ಥಳೀಯ ನಾಗರಿಕರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು, ಕ್ಷೇತ್ರದ ಶಾಸಕರಿಗೂ ದೂರು ನೀಡಿರುವುದರಿಂದ ಶಾಸಕರ ನಿರ್ದೇಶನದಂತೆ ಉಳ್ಳಾಲ ತಾಲೂಕು ತಹಶೀಲ್ದಾರರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮದ ಆರೋಗ್ಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಳವೆ ಬಾವಿಗಳ ನೀರನ್ನು ಈಗಾಗಲೇ ಗುಣಮಟ್ಟ ಪರೀಕ್ಷೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿ ಕೊಟ್ಟಿದ್ದರು. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಕೊಳವೆಬಾವಿ ಮತ್ತು ಬಾವಿ ನೀರಿನಲ್ಲಿ ಇಂಧನ ಮಿಶ್ರಣ ಇರುವುದರಿಂದ ಪಂಚಾಯತ್ ಪೈಪ್ ಲೈನ್ ನೀರನ್ನು ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿತ್ತು. ಆದರೆ ಹಲವಾರು ಮನೆಯಲ್ಲಿ ಪೈಪ್ ಲೈನ್ ಸಂಪರ್ಕವಿಲ್ಲದಿರುವುದರಿಂದ ಜನರು ನೀರಿನ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಲ್ಯಾಬ್‌ನಿಂದ ನೀರಿನ ಗುಣಮಟ್ಟ ಪರೀಕ್ಷೆಯ ವರದಿ ಬಂದಿದ್ದು ಅದರಂತೆ ನೀರಿನಲ್ಲಿ ಟರ್ಬಿಡಿಟಿ ಕೆಮಿಕಲ್ ಹಾಗೂ ಆಕ್ಸಿಜನ್ ಡಿಮಾಂಡ್ ಪ್ರಮಾಣಕ್ಕಿಂತ ಹೆಚ್ಚಿದ್ದು ಪ್ರಸ್ತುತ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿಯಿಂದ ತಿಳಿದು ಬಂದಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇಲ್ಲಿನ ನಾಗರಿಕರಿಂದ ಬಂದ ದೂರನ್ನು ಪರಿಗಣಿಸಿ ಲ್ಯಾಬ್‌ನ ವರದಿಯನ್ನು ಆಧರಿಸಿ ಗ್ರಾಮ ಪಂಚಾಯಿತಿಗೆ ನೋಟಿಸ್ ನೀಡಿದ್ದು ಪರಿಸರದ ನಾಗರಿಕರು ಇಂಧನ ಮಿಶ್ರಣ ನೀರನ್ನು ಬಳಸದಂತೆ ಸೂಚಿಸಿದ್ದರು ಹಾಗೂ ಮಂಗಳೂರಿನ ಇಂಡಿಯನ್ ಆಯಿಲ್ ಜನರಲ್ ಮ್ಯಾನೇಜರ್ ಅವರಿಗೆ ನೋಟಿಸು ನೀಡಿದ್ದಾರೆ. ತೈಲಾಂಶ ಕಂಡು ಬಂದಿರುವ ಬಾವಿ, ಕೊಳವೆ ಬಾವಿಗಳ ಸಮೀಪ ಇರುವ ಪೆಟ್ರೋಲ್ ಪಂಪಿನ ತೈಲ ಸೋರಿಕೆಯ ಸಾಧ್ಯತೆ ಹಾಗೂ ಪೆಟ್ರೋಲ್ ಸಂಗ್ರಹದ ಟ್ಯಾಂಕಿನ ಸಮಗ್ರತೆಯ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕಾರಣದೊಂದಿಗೆ ಉತ್ತರಿಸುವಂತೆ ತಿಳಿಸಿದ್ದರು. ತೈಲ ಕಂಪನಿಯು ಈವರೆಗೂ ಅದರ ವಿವರಣೆಯನ್ನು ನೀಡದೆ ದಿನ ದೂಡುತ್ತಿದೆ. ಈ ಸಮಸ್ಯೆಗೆ ಮುಖ್ಯ ಕಾರಣ ಇಲ್ಲಿರುವ ಸಮೀಪದ ಪೆಟ್ರೋಲ್ ಬಂಕ್ ಆಗಿರಬಹುದು. ಈ ಹಿಂದೆ ಇಂತದೇ ಸಮಸ್ಯೆ ದೇರಳಕಟ್ಟೆ ಪರಿಸರದಲ್ಲಿ ಎದುರಾಗಿದ್ದಾಗ ಅಲ್ಲಿನ ಸಮೀಪದ ಪೆಟ್ರೋಲ್ ಬಂಕಿನ ಟ್ಯಾಂಕನ್ನು ಬದಲಾಯಿಸಿ ಸಮಸ್ಯೆಯನ್ನು ಪರಿಹರಿಸಿದ್ದರು. ಅದೇ ರೀತಿ ಸಾಂಬಾರ ತೋಟದಲ್ಲಿಯೂ ಇಲ್ಲಿರುವ ಪೆಟ್ರೋಲ್ ಪಂಪಿನಿಂದಾಗಿ ಅಲ್ಲಿನ ಸ್ಥಳೀಯ ನಾಗರಿಕರು ಸಮಸ್ಯೆಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಕೊಡಬೇಕಾಗಿದೆ. ಇಲ್ಲದೇ ಹೋದಲ್ಲಿ ಗ್ರಾಮಸ್ಥರು ಒಂದಾಗಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಹಾಕಿದ್ದಾರೆ. 

ReplyForwardAdd reaction

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 15ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

August 1, 2025

ಬಂಟ್ವಾಳ : ಅಡಿಕೆ ಕಳವು ಪ್ರಕರಣ ಪೈಚಾರು ನಿವಾಸಿ ಸತೀಶ್ ಬಂಧನ

August 1, 2025

ಮಂಗಳೂರಿನಲ್ಲಿ ಶಾಶ್ವತ ಎನ್‌ಐಎ ಕಚೇರಿ ಸ್ಥಾಪನೆಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಬ್ರಿಜೇಶ್ ಚೌಟ ಮನವಿ

August 1, 2025

Comments are closed.

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 15ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

By UllalaVaniAugust 1, 20250

ಮಂಗಳೂರು : ಉತ್ತಮ ಶಿಕ್ಷಣ, ಉದ್ಯೋಗ ಹೊಂದಿರುವ ಮಾನವ ಸಂಪನ್ಮೂಲ ದೇಶದ ಸಂಪತ್ತು. ಶಿಕ್ಷಣ ವ್ಯಕ್ತಿಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಬಂಟ್ವಾಳ : ಅಡಿಕೆ ಕಳವು ಪ್ರಕರಣ ಪೈಚಾರು ನಿವಾಸಿ ಸತೀಶ್ ಬಂಧನ

August 1, 2025

ಮಂಗಳೂರಿನಲ್ಲಿ ಶಾಶ್ವತ ಎನ್‌ಐಎ ಕಚೇರಿ ಸ್ಥಾಪನೆಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಬ್ರಿಜೇಶ್ ಚೌಟ ಮನವಿ

August 1, 2025

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕರ್ನಾಟಕ ಸಮಾಜಘಾತುಕ ಶಕ್ತಿಗಳ ಸುರಕ್ಷಿತ ತಾಣವಾಗಿದೆ : ಸಂಸದ ಬ್ರಿಜೇಶ್ ಚೌಟ

August 1, 2025
1 2 3 … 1,548 Next
Automatic YouTube Gallery

ಆ.3 ಕಣಚೂರು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ

ಆ.3 ಕಣಚೂರು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ
#Ullalavani #KanachuruHospital
ಆ.3 ಕಣಚೂರು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ
Now Playing
ಆ.3 ಕಣಚೂರು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ
ಆ.3 ಕಣಚೂರು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ #Ullalavani ...
ಆ.3 ಕಣಚೂರು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ
#Ullalavani #KanachuruHospital
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
Now Playing
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ ...
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ
ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
#ullalavani #news #ullala #mangalore #kannadanews #ullalnews
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications