ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹಿರಾ : ಗಣರಾಜ್ಯೋತ್ಸವದ ಅಂಗವಾಗಿ ಬಬ್ಬುಕಟ್ಟೆಯ ಹಿರಾ ಶಿಕ್ಷಣ ಸಂಸ್ಥೆಯಲ್ಲಿ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಸದಸ್ಯ ಮಹಮ್ಮದ್ ಅನ್ವರ್ ಧ್ವಜಾರೋಹಣಗೈದರು.
ಶಾಂತಿ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ರಹೆಮಾನ್, ಸಂಚಾಲಕ ರಹಮತುಲ್ಲ, ಸದಸ್ಯರಾದ ಉಮ್ಮರ್ ಬಾವ, ಅಬ್ದುಲ್ ಖಾದರ್, ಅಬ್ದುಲ್ ಕರೀಂ, ಹಸನ್ ಪಿಲಾರ್, ಮಹಮ್ಮದ್ ಸಮೀರ್, ಹಿರಾ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಝೀರ್ ಉಳ್ಳಾಲ್, ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಇಲಿಯಾಸ್, ಹಿರಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎ.ಕೆ. ಕುಕ್ಕಿಲ ಗಣರಾಜ್ಯೋತ್ಸವದ ಮಹತ್ವ ತಿಳಿಸಿದರು.


