Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ನಾಡದೋಣಿ ಮೀನುಗಾರರಿಗೆ ಕಂಟಕವಾದ ಬುಲ್ ಟ್ರಾಲ್

UllalaVaniBy UllalaVaniDecember 11, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಸಮುದ್ರ ತೀರದಲ್ಲಿ ನಾಡದೋಣಿಯವರು ಮೀನುಗಾರಿಕೆ ಮಾಡುವ ಪ್ರದೇಶದಲ್ಲಿ ದೊಡ್ಡ ಬೋಟಿನ `ಬುಲ್ ಟ್ರಾಲ್’ ಬಲೆ ಹಾಕಿ ಮೀನಿನ ಸಂತತಿಯನ್ನು ನಾಶ ಮಾಡಿ ಉಳ್ಳಾಲ ಪ್ರದೇಶದ ಮೀನುಗಾರರಿಗೆ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಉಳ್ಳಾಲ ಮೊಗವೀರಪಟ್ನದ ನಾಡದೋಣಿ ಮೀನುಗಾರಿಕಾ ಒಕ್ಕೂಟದ ಮಾಲಕರು ಮತ್ತು ಕಾರ್ಮಿಕರು ಬುಲ್ ಟ್ರಾಲ್ ಅನ್ನು ನಿಷೇಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

DSC_0866

DSC_0867

DSC_0872

DSC_0880

DSC_0893

DSC_0907

DSC_0919

DSC_0928

DSC_0939

DSC_0958

DSC_1004

DSC_1007

DSC_1014

DSC_1017

DSC_1024ಮೀನುಗಾರರು ಹಿರಿಯರು ಕಲಿಸಿಕೊಟ್ಟಂತಹ ಪರಿಸರಕ್ಕೆ ಪೂರಕವಾದ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಹಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಸಮುದ್ರ ದಡದಿಂದ ಸುಮಾರು ಐದು ಮಾರು ದೂರದವರೆಗೆ ಹುಟ್ಟು (ದಂಡ್ ) ನ ಸಹಾಯದಿಂದ ದೋಣಿಯಲ್ಲಿ ನೀರನ್ನು ತಳ್ಳುತ್ತಾ ಮೀನಿಗೆ ತಕ್ಕಂತೆ ಬಲೆಯನ್ನು ಹಾಕಿ ಕಷ್ಟದಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ. ಆದರೆ ಕಳದ ಮೂರು ವರ್ಷದಿಂದ ಉಳ್ಳಾಲ ಮತ್ತು ಬೆಂಗರೆಯ ಸುಮಾರು ಹತ್ತು ಜೋಡಿ ಬೋಟಿನವರು ಬುಲ್ ಟ್ರಾಲ್ ನಲ್ಲಿ ಒಂದು ದೊಡ್ಡ ಬಲೆಯನ್ನು 100 ಮೀಟರ್ ಅಂತರದಲ್ಲಿ ಎರಡು ಬೋಟಿನವರು ಎಳೆದುಕೊಂಡು ದಡದಿಂದ ಸುಮಾರು ಐದು ಮಾರು ದೂರದವರೆಗೆ ನಾಡದೋಣಿಯವರು ಮೀನುಗಾರಿಕೆ ಮಾಡುವ ಪ್ರದೇಶದಲ್ಲಿ ಸೂರ್ಯಾಸ್ತದಿಂದ ಬೆಳಿಗ್ಗೆ ಸೂರ್ಯೋದಯದವರೆಗೆ ಸೋಮೇಶ್ವರ ಉಚ್ಚಿಲದಿಂದ ಹೆಜಮಾಡಿಯವರಿಗೆ ಟ್ರಾಲಿಂಗ್ ಮಾಡುತ್ತಾ ಹೋಗುತ್ತಾರೆ. ಇದರಿಂದ ಎಲ್ಲಾ ಜಾತಿಯ ಮೀನಿನ ಸಂತತಿಯು ಸಂಪೂರ್ಣ ನಾಶವಾಗುತ್ತದೆ.

ಇದರಿಂದ ನಾಡದೋಣಿ ಮೀನುಗಾರಿಕೆಯು ಸಂಪೂರ್ಣ ನಶಿಸಿಹೋಗುವ ಪರಿಸ್ಥಿತಿ ಎದುರಾಗಿದೆ. ನಾಡದೋಣಿಯವರು ಬಲೆ ಹಾಕಿದ ಸ್ಥಳದಲ್ಲಿ ಯಾವುದೇ ಮೀನು ಸಿಗದೆ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾಡದೋಣಿಯವರು ಮೀನುಗಾರಿಕೆಗೆ ಉಪಯೋಗಿಸುವ ಬಲೆಯನ್ನು ದೊಟ್ಟ ಬೋಟಿನ ಬೋರ್ಡಿಗೆ ಹಾಕಿ ಎಳೆದುಕೊಂಡು ಹೋಗಿ ಮೀನುಗಾರಿಕೆಗೆ ಬಲೆ ಇಲ್ಲದ ಹಾಗೆ ಮಾಡುತ್ತಿದ್ದಾರೆ. ದೊಡ್ಡ ಬೋಟಿನವರಿಗೆ ಆ ಬಲೆ ಸಿಕ್ಕಿದಲ್ಲಿ ಅದನ್ನು ನೀರಿಗೆ ಎಸೆದು ಕಿಡಿಗೇಡಿ ಕೃತ್ಯ ಎಸಗುತ್ತಿದ್ದಾರೆ. ಇದರಿಂದ ಒಂದು ಕಡೆ ಮೀನುಗಾರಿಕೆ ಇಲ್ಲದೆ ಇನ್ನೊಂದು ಕಡೆ ಉಪಯೋಗಿಸುವ ಬಲೆಯನ್ನು ಕಳೆದುಕೊಂಡು ನಷ್ಟ ಅನುಭವಿಸಬೇಕಾಗಿದೆ.

ಉಳ್ಳಾಲ ಮೊಗವೀರಪಟ್ನದಲ್ಲಿ 12 ನಾದೋಣಿಗಳಿದ್ದು, ಅದನ್ನು ಅವಲಂಬಿತ ಕುಟುಂಬಗಳು ಮೀನು ಸಿಗದೆ ಅನ್ನಕ್ಕಾಗಿ ಪರದಾಡಬೇಕಾದ ಅನಿವಾರ್ಯತೆಯೂ ಮುಂದೆ ಎದುರಾಗಬಹುದು. ಬುಲ್ ಟ್ರಾಲ್ ನ ಹತ್ತು ಜೋಡಿ ಬೋಟಿನವರಲ್ಲಿ ಎಷ್ಟು ವಿನಂತಿಸಿದರೂ ಜಗಳ ಮಾಡಿ ಹಠ ಸಾಧಿಸಿ ಅವೈಜ್ಞಾನಿಕವಾಗಿ ಮೀನುಗಾರಿಕೆಯನ್ನು ಮುಂದುವರಿಸಿತ್ತಿದ್ದಾರೆ ಎಂಬ ಆರೋಪ ನಾಡದೋಣಿಯವರದ್ದಾಗಿದೆ.

ಇವರಿಂದಾಗಿ ಉಚ್ಚಿಲ ಸೋಮೇಶ್ವರದಿಂದ ಹೆಜಮಾಡಿಯವರೆಗೆ ಸುಮಾರು 1000 ನಾದೋಣಿಗಳು, 150 ಪರ್ಸಿನ್ ಬೋಟುಗಳು, 10 ಕೈರಂಪೂಣಿ ದೋಣಿಗಳು, 500 ಸಿಂಗಲ್ ಟ್ರಾಲ್ ಬೋಟುಗಳಲ್ಲಿ ದುಡಿಯುವ ಸುಮಾರು 10,000 ಮೀನುಗಾರರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ.
ಬುಲ್ ಟ್ರಾಲ್ ಮೀನುಗಾರಿಕೆಗೆ ನಿರ್ಬಂಧವಿದ್ದರೂ ಅದನ್ನು ಲೆಕ್ಕಿಸದೆ ಮೀನುಗಾರಿಕೆ ಮಾಡುತ್ತಿದ್ದಾರೆ. ಮಲ್ಪೆ ಮತ್ತು ಕೇರಳದ ಗಡಿಪ್ರದೇಶದಲ್ಲಿ ಇದಕ್ಕೆ ಸಂಪೂರ್ಣ ನಿಷೇಧವಿದೆ, ಆದರೆಮಂಗಳೂರಿನಲ್ಲಿ ಮಾತ್ರ ಮೀನುಗಾರಿಕೆಯನ್ನು ನಡೆಸುತ್ತಲೇ ಇದ್ದಾರೆ. 2014 ರಲ್ಲಿ ಇವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಇಂತಹ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಬೇಕೆಂಬ ಒತ್ತಾಯ ಒಕ್ಕೂಟದಿಂದ ಕೇಳಿಬಂದಿದೆ.

ಬುಲ್ ಟ್ರಾಲ್ ನಿಂದ ಆಗುವ ದುಷ್ಪರಿಣಾಮಗಳು
ಟ್ರಾಲಿಂಗ್ ನಿಂದ ಮೀನಿನ ಮೊಟ್ಟೆ, ಮೀನಿನ ಮರಿ ಸಂಪೂರ್ಣ ನಾಶ, ಸಮುದ್ರದಲ್ಲಿರುವ ಇತರ ಜಲಚರಗಳಾದ ಆಮೆ, ಕಡಲಹಂದಿ, ಡಾಲ್ಫಿನ್ ಗಳು ನಾಶ, ಮೀನುಗಾರಿಕೆಗೆ ಹೆದರಿ ಮೀನುಗಳು ದೂರದ ಸಮುದ್ರಕ್ಕೆ ಓಡುವುದರಿಂದ ಮೀನಿನ ಸಮೂಹ ತೆಪ್ಪವಾಗದೆ ಪರ್ಸಿನ್ ಮೀನುಗಾರರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಸಮುದ್ರದ ತಳಭಾಗದಿಂದ ಹಿಡಿದು ಮೇಲ್ಭಾಗದವರೆಗೆ ಬಲೆ ಹೋಗುವುದರಿಂದ ಮತ್ತು ಬುಲ್ ಟ್ರಾಲ್ ಬೋಟಿನವರು ಸಂಜೆಯಿಂದ ಸೂರ್ಯೋದಯದವರೆಗೆ ಟ್ರಾಲಿಂಗ್ ಮಡುವುದರಿಂದ ಬೆಳಿಗ್ಗೆಮೀನುಗಾರಿಕೆಗೆ ಬರುವ ನಾಡದೋಣಿ ಮತ್ತು ಸಿಂಗಲ್ ಟ್ರಾಲ್ ಬೋಟಿನವರಿಗೆ ಮೀನು ಸಿಗದೆ ನಷ್ಟ ಅನುಭವಿಸುವಂತಾಗಿದೆ,

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸೆ.5: ಅಲ್ ಮಿಸ್ಕ್ ಮಿಲಾದ್ ಫೆಸ್ಟ್

September 1, 2026

ಭಜನಾ ಮಂದಿರಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

August 31, 2026

ಮಂಗಳೂರಿನಲ್ಲಿ ‘ಹಲ್ಕಾ ಡಾನ್’ ಚಿತ್ರೀಕರಣ ಬಹುತೇಕ ಪೂರ್ಣ; ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಚಿತ್ರತಂಡ ಭೇಟಿ; ತುಳು ಭಾಷೆಯಲ್ಲೂ ಚಿತ್ರ ಬಿಡುಗಡೆಗೆ ನಿರ್ಧಾರ

August 31, 2026
Leave A Reply

Advertise
ಸಂಪರ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತ್‌ 80 ನೇ ಸ್ವಾತಂತ್ರೋತ್ಸವ

August 16, 2026

ಮಾಡೂರು ಶಾಲೆಯಲ್ಲಿ ವಿಭಿನ್ನವಾಗಿ ಜರಗಿದ 80 ರ ಸ್ವಾತಂತ್ರ್ಯ

August 16, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026
suddi

ಸುಲ್ತಾನುಲ್ ಉಲಮಾ ವಿರುದ್ಧ ಹೇಳಿಕೆ: ಸುರಯ್ಯ ಅಂಜುಮ್ ಸೇರಿದಂತೆ ನಕಲಿ ಮಹಿಳಾಪರರಿಗೆ ಎಂ. ಸಿರಾಜ್ ಅಡ್ಕರೆ ಎಚ್ಚರಿಕೆ

By UllalaVaniSeptember 2, 20260

ಮಂಗಳೂರು: ಸುಲ್ತಾನುಲ್ ಉಲಮಾ ಎ.ಪಿ. ಕಾಂತಪುರಂ ಉಸ್ತಾದರ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರನ್ನು ಹಾಗೂ ಇಸ್ಲಾಂ ಧರ್ಮವನ್ನು ಮಹಿಳಾ ವಿರೋಧಿ ಎಂದು…

ಮಿಹ್ರಾಜುಲ್ ಹುದಾ ಹಳೇ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

September 1, 2026

ಕುಂದಾಪುರ : ಸಮುದ್ರದಲ್ಲಿ ಮುಳುಗಿದ್ದ 30 ಲಕ್ಷದ ಮೀನುಗಾರಿಕಾ ಬಲೆ- ಹೊರತೆಗದ ಮೀನುಗಾರ ತಂಡ

September 1, 2026

ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ರಕ್ಷಾಬಂಧನ ಆಚರಿಸಿದ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಮಾದರಿ ನಡೆ…..!

September 1, 2026
1 2 3 … 2,084 Next
Automatic YouTube Gallery
Error 403 The request cannot be completed because you have exceeded your quota. : quotaExceeded
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version