ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆಯುವ 29 ನೇ ವರ್ಷದ ಕುಂಪಲಾಷ್ಟಮಿ ಉತ್ಸವಕ್ಕೆ ವಾಸುಕಿ ಫ್ರೆಂಡ್ಸ್ (ರಿ) ಚಿತ್ರಾಂಜಲಿ ನಗರ ಇದರ ದೃಶ್ಯರೂಪಕದ ಆಮಂತ್ರಣ ಪತ್ರಿಕೆಯನ್ನು ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧಕ್ಷ್ಯರಾದ ಸತೀಶ್ ಕುಂಪಲ ಇವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ವಾಸುಕೀ ಫ್ರೆಂಡ್ಸ್ ಎಂಬ ಸಂಸ್ಥೆ ಯು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಗೂ ವಾಸುಕೀ ನಿರೆಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ , ಬಡವರ ಪಾಲಿಗೆ, ಅಶಕ್ತ ಕುಟುಂಬಗಳಿಗೆ ಆಶಾಕಿರಣವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ.. ಕಾರ್ಯಕ್ರಮ ನಿರೂಪಣೆಯನ್ನು ಪ್ರವೀಣ್ ಎಸ್ ಕುಂಪಲ , ವಾಸುಕೀ ಫ್ರೆಂಡ್ಸ್ ತಂಡದ ಅಧ್ಯಕ್ಷರಾದ ಕಿರಣ್, ಉಪಾಧ್ಯಕ್ಷರಾದ ಅನಿಲ್ ಮತ್ತು ವಾಸುಕೀ ತಂಡದ ಸದ್ಯಸರು ಹಾಗೂ ಸ್ಥಳೀಯ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನೆರವೇರಿತು.


